ಪ್ರಚಲಿತ

ಹೆಸರಾಂತ ಹಿಂದೂ ದೇವಾಲಯಗಳ ವಶಕ್ಕೆ ಮುಂದಾದ ಕ್ರೈಸ್ತ ಪಾದ್ರಿಗಳು!! ಮಧುರೈ ನ ಮೀನಾಕ್ಷಿ ದೇವಸ್ಥಾನಕ್ಕಾಯಿತೇ ಅಗ್ನಿ ಸ್ಪರ್ಶ?!

ಬಹುಷಃ ಕ್ರೈಸ್ತರಿಗೆ ಬಹಳ ಸುಲಭವಾಗಿ ದಕ್ಕಿಬಿಡುವಂತಹ ಸ್ವರ್ಗವೆಂದರೆ ಅದು ದಕ್ಷಿಣ ಭಾರತ! ಅದರಲ್ಲಿಯೂ, ಕೇರಳ ಮತ್ತು ತಮಿಳುನಾಡು! ತಲೆ ಮೇಲೆ ಎರಡು ತಂಬಿಗೆ ನೀರು ಸುರಿದು, “ನೀ ಇಪ್ಪ ಕ್ರಿಶ್ಚಿಯನ್! ಸ್ತೋತ್ರಮ್” ಎಂದರೆ ಅಲ್ಲಿಗೆ ಮುಗಿಯಿತು! ಆತ ಭಗವದ್ಗೀತೆಯನ್ನು ಬೀಸಿ ಒಗೆದು, ಬೈಬಲ್ ಹಿಡಿದು ನಿಂತಿರುತ್ತಾನೆ!ಹಿಂದುತ್ವವನ್ನು ಶಿಲುಬೆಗೇರಿಸಿ! ಹಾಗೆಯೇ, ಮತಾಂತರಕ್ಕಿಳಿಸಿದ ಕ್ರೈಸ್ತ ಪಾದ್ರಿಗಳು, ನಿನ್ನ ನೆರೆಹೊರೆಯನ್ನೂ ಕ್ರಿಸ್ತನ ಮಕ್ಕಳನ್ನಾಗಿಸು ಎಂದರೆ ಮುಗಿದೇ ಹೋಯಿತು! ಮತಾಂತರಗೊಂಡವನೊಬ್ಬ ಕ್ರೈಸ್ತ ಮತಕ್ಕೆ ಸಿಕ್ಕ ಬಿಟ್ಟಿ ಪ್ರಚಾರಕನಾಗಿ ಹೋಗುತ್ತೇನೆ!

ಕೇವಲ ಅನಕ್ಷರಸ್ಥರು ಮಾತ್ರವೆಂತಲ್ಲ! ತಮಿಳುನಾಡಿನ ಬಹುತೇಕ ಜನ “ಎಲ್ಲಾ ಧರ್ಮವೂ ಒಂದೇ” ಎಂದು ಒಪ್ಪಿಕೊಂಡು, ಯಾವ ಧರ್ಮಕ್ಕೆ ಬೇಕಾದರೂ ಮತಾಂತರವಾಗಿಬಿಡುವಷ್ಟು ಎಡುಕೇಟೆಡ್ ಮೂರ್ಖರೆಂಬುದು ಸರಿಯೇ! ಹಾಸ್ಯಾಸ್ಪದವೆಂದರೆ ಅದೇ! ಮತಾಂತರವಾದ ಹಿಂದೂಗಳು ಕ್ರಿಸ್ತನ ಅದೆಷ್ಟು ಮಟ್ಟದ ಅನುಯಾಯಿಯಾಗಿ ಬಿಡುತ್ತಾರೆಂದರೆ, ನೀವು ಒಬ್ಬ ಕ್ಯಾಥೋಲಿಕ್ ನ ಹತ್ತಿರ ಕ್ರೈಸ್ತ ಮತವನ್ನು ಬೈದರೆ ಆತ ಸುಮ್ಮನಾಗಬಹದು, ಆದರೆ ಮತಾಂತರಗೊಂಡವರಲ್ಲ!! ಅಷ್ಟರ ಮಟ್ಟಿಗೆ ತಮಿಳು ನಾಡಿನ ಕಂಡೂ ಕಾಣದ ನೆರಳೊಂದು ಹಿಂದುತ್ವವನ್ನಾವರಿಸುತ್ತ ಬರುತ್ತದೆ!

Image result for christian missionaries converting tamils in tamilnadu

ಇದನ್ನೆಲ್ಲ ಯಾಕೆ ಹೇಳುತ್ತಿದ್ದೀನಿ ಗೊತ್ತಾ!? ಇವತ್ತು ಅದೇ ಮತಾಂತರ ಹೆಚ್ಚಿದ ಪರಿಣಾಮ, ಅದೇ ಮತಾಂತರಗೊಂಡ ಕ್ರೈಸ್ತರನ್ನು
ಇಟ್ಟುಕೊಂಡ ಕ್ರೈಸ್ತ ಪಾದ್ರಿಗಳು ನಡೆಸುತ್ತಿರುವ ಅನಾಹುತಗಳು ಒಂದೆರಡಲ್ಲ! ಹಿಂದೂಗಳ ಜಾಗವನ್ನೂ ಸಲೀಸಾಗಿ ತಮ್ಮದೆಂದು ಹೇಳಿ ವಶಪಡಿಸಿಕೊಳ್ಳುವಷ್ಟರ ಮಟ್ಟಿಗೆ ಅಲ್ಲಿನ ಕ್ರೈಸ್ತ ಪಾದ್ರಿಗಳು ಮುಂದುವರೆದಿದ್ದಾರೆಂದರೆ ತಮಾಷೆಯ ವಿಷಯವಲ್ಲ! ಇವತ್ತು ಹಿಂದೂವಿನ ಮನೆಗಳಲ್ಲಿ ಕ್ರಿಸ್ತನ ಪಟ ಹಾಕುವ ಪಾದ್ರಿಗಳು, ಮುಂದೊಂದು ದಿನ ದೇವಸ್ಥಾನಗಳಲ್ಲಿರುವ ಹಿಂದೂ ದೇವ ದೇವತೆಗಳ ಮೂರ್ತಿಯನ್ನು ಕಿತ್ತು, ಕ್ರಿಸ್ತನ ಮೂರ್ತಿಯನ್ನೋ, ಮೇರಿಯ ಮೂರ್ತಿಯನ್ನೋ ತಂದಿಡೋಲ್ಲವೆಂಬುದನ್ನು ನಂಬುವುದಾದರೂ ಹೇಗೆ?!

ದುರಾದೃಷ್ಟ ಅದೇ! ತಮಿಳುನಾಡಿನ ಸುಪ್ರಸಿದ್ದ ದೇಗುಲಗಳನ್ನಾಕ್ರಮಿಸಿದ ಕ್ರೈಸ್ತರು!

Image result for kalaiyar kovil
kalaiyar kovil

ಮೊನ್ನೆ ಮೊನ್ನೆಯಷ್ಟೇ ತಮಿಳು ನಾಡಿನ ಸುಪ್ರಸಿದ್ಧ ಹಿಂದೂ ದೇವಾಲಯಗಳಾದ ಕಲಯರ್ ಕೊಯಿಲ್ ಮತ್ತು ಶಿವಗಂಗಾಯ್ ದೇವಸ್ಥಾನವನ್ನು ಆಕ್ರಮಿಸಿದ ಕ್ರೈಸ್ತ ಪಾದ್ರಿಗಳು ಮತ್ತು ಅನುಯಾಯಿಗಳು, ಈ ದೇವಾಲಯದ ಆವರಣ ಕ್ರೈಸ್ತರಿಗೆ ಸೇರಿದ್ದ ಎಂಬುದಾಗಿ ಘೋಷಿಸಿದ್ದಾರೆ!! ಪ್ರಾತಃ ಕಾಲದಲ್ಲಿ ದೇವಸ್ಥಾನಕ್ಕೆ ಬಂದಿದ್ದ ಪ್ರದೇಶದ ನಿವಾಸಿಗಳು ದೇವಸ್ಥಾನದ ಆವರಣದಲ್ಲಿ ಜೀಸಸ್ ಗೆ ಪ್ರಾರ್ಥನೆ ಸಲ್ಲಿಸುತ್ತಿದ್ದ ಕ್ರಿಶ್ಚಿಯನ್ ಗುಂಪುಗಳನ್ನು ತಡೆಯಲು ಹೋದಾಗ, ದೇವಸ್ಥಾನದೊಳಗೆ ಹಿಂದುಗಳಿಗೆ ಪ್ರವೇಶವಿಲ್ಲ ಎಂಬುದಾಗಿ ತಡೆಯೊಡ್ಡಿ ನಿಂತಿದ್ದಾರೆ! ಹಿಂದೂಗಳಿಗೇ ಹಿಂದೂ ದೇವಸ್ಥಾನಗಳಲ್ಲಿ ಪ್ರವೇಶವಿಲ್ಲದ ಪರಿಸ್ಥಿತಿ ಉದ್ಭವವಾದಾಗ, ಪೋಲಿಸರಿಗೆ ಮತ್ತು ಹಿಂದೂ ಧರ್ಮದ ರಕ್ಷಕ ಸಂಘಟನೆಯಾಗಿರುವ ” ಹಿಂದೂ ಮಕ್ಕಳ್ ಕಟ್ಚಿ” ಗೆ ವಿಷಯ ತಿಳಿಸಿದ್ದಾರೆ! ತಕ್ಷಣವೇ ದೇವಾಲಯಕ್ಕೆ ಆಗಮಿಸಿದ ಹಿಂದೂ ಮಕ್ಕಳ್ ಸಂಘಟನೆಯ ಕಾರ್ಯಕರ್ತರು, ಕ್ರೈಸ್ತ ಪಾದ್ರಿಗಳನ್ನು ತರಾಟೆಗೆ ತೆಗೆದುಕೊಂಡು, ದೇವಸ್ಥಾನದ ಆವರಣ ಬಿಟ್ಟು ನಡೆಯುವಂತೆ ಆಗ್ರಹಿಸಿದ್ದಾರೆ!

Related image
Sivagangai temple

ಇಷ್ಟಕ್ಕೆ ಮುಗಿಯಲಿಲ್ಲ! ಯಾವಾಗ ಎರಡೂ ಗುಂಪುಗಳ ಮಧ್ಯೆ ಘರ್ಷಣೆ ಆರಂಭವಾಯಿತೋ, ದೇವಸ್ಥಾನವನ್ನು ಬಿಟ್ಟುಕೊಡದಿದ್ದರೆ ಸಂಘಟನರಯ ಮೇಲೆ ಹತ್ಯೆಗೆ ಪ್ರಯತ್ನ ಮಾಡಿದರೆಂಬ ಮೊಕದ್ದಮೆಯನ್ನು ಹೂಡುತ್ತೇವೆಂದು ಬೆದರಿಕೆ ಒಡ್ಡಿ ಪೋಲಿಸರನ್ನು ಸ್ಥಳಕ್ಕೆ ಕರೆಸಿದ್ದಾರೆ! ಪೋಲಿಸರು, ಕ್ರೈಸ್ತರಿಗೆ ಎಚ್ಚರಿಕೆ ನೀಡುವುದನ್ನು ಬಿಟ್ಟು, ಹಿಂದೂ ಸಂಘಟನೆಯ ೧೧ ಕಾರ್ಯಕರ್ತರನ್ನು ತಕ್ಷಣವೇ ಬಂಧಿಸಿ, ಮೊಕದ್ದಮೆ ದಾಖಲಿಸಿದ್ದಾರೆ! ಪೋಲಿಸರು ಹಿಂದೂ ಕಾರ್ಯಕರ್ತರನ್ನು ಥಳಿಸಿದ್ದಲ್ಲದೆ, ಯಾರೊಂದಿಗೂ ಮಾತನಾಡಲೂ ಅವಕಾಶ ಕೊಡುತ್ತಿಲ್ಲ ವೆಂದು ಅಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ!

ವ್ಹಾ!! ಎಂತಹ ನ್ಯಾಯಾಂಗ ವ್ಯವಸ್ಥೆ! ದೇವಸ್ಥಾನವನ್ನು ಅಕ್ರಮವಾಗಿ ವಶಪಡಿಸಿಕೊಳ್ಳಲು ಹೋದ ಕ್ರೈಸ್ತ ಪಾದ್ರಿಯರಿಗೆ ಯಾವ ತಡೆಯೂ ಇಲ್ಲ! ಬದಲಾಗಿ, ತಮ್ಮ ಧಾರ್ಮಿಕ ಹಕ್ಕುಗಳಿಗೆ ಹೋರಾಡಿದವರ ಮೇಲೆ ಸಾಲು ಸಾಲು ಮೊಕದ್ದಮೆಗಳು! ಹಿಂದೂ ಮಕ್ಕಳ್ ಸಂಘಟನೆಯವರು ಹೇಳುವ ಪ್ರಕಾರ, ಕ್ರೈಸ್ತರು ಒಂದೇ ದಿನ ಎರಡೆರಡು ದೇವಸ್ಥಾನಗಳಿಗೆ ನುಗ್ಗಿ ದೇವಸ್ಥಾನದ ಜಾಗ ನಮ್ಮದೆಂದು ಆಕ್ರಮಿಸಲು ನೋಡಿದ್ದಾರೆಂದರೆ, ಇದರ ಹಿಂದೆ ನಿಶ್ಚಿತವಾಗಿ ಮಧುರೈನ ದೇವಸ್ಥಾನಗಳನ್ನು ವಶ ಪಡೆಸಿಕೊಳ್ಳುವ ಹುನ್ನಾರವಡಗಿದೆ!!

ಇವೆಲ್ಲವನ್ನೂ ಬಿಡಿ! ಇದಕ್ಕಿಂತ ಆಘಾತಕರವೆಂದರೆ, ಯಾವ ಮಾಧ್ಯಮಗಳೂ, ಯಾವ ಪತ್ರಿಕೆಯೂ ಕ್ರೈಸ್ತ ಪಾದ್ರಿಗಳ ಈ ಕುತಂತ್ರದ ಬಗ್ಗೆ ತುಟಿಪಿಟಿಕ್ ಎಂದಿಲ್ಲ! ಪ್ರಕರಣದ ಬಗ್ಗೆ ಸುದ್ದಿ ಮಾಡಿಲ್ಲ! ಅದಾವುದೋ ಹಿಂದೂವೊಬ್ಬನೇನಾದರೂ, ಸುಮ್ಮನೇ ಕೇಸರಿ ಧ್ವಜ ಹಿಡಿದು ಚರ್ಚಿನ ಮುಂದೆ ಕುಳಿತಾಕ್ಷಣ ‘ಕೋಮುವಾದ’_ ಕೇಸರೀ ಧ್ವಜ ಹಿಡಿದು ಬೆದರಿಕೆ ಎಂದೆಲ್ಲ ಕಥೆ ಕಟ್ಟಿ, ಲೈವ್ ಆಗಿ ತೋರಿಸುವ ಮಾಧ್ಯಮಗಳು ಇವ್ಯಾವುಯದರ ಬಗ್ಗೆಯೂ ಚರ್ಚಿಸಿಯೇಬ ಇಲ್ಲ ಎಂಬುದೊಂದಿದೆಯಲ್ಲವಾ?! ಮಾಧ್ಯಮಗಳೂ ಸಹ ತಮ್ಮನ್ನು ಜಾತ್ಯಾತೀತತೆ ಎಂಬ ಸೋಗಲಾಡಿ ತುಷ್ಟೀಕರಣದ ಸಿದ್ಧಾಂತಕ್ಕೆ ಮಾರಿಕೊಂಡಿವೆಯೆಂಬರ್ಥ!! ಮಧುರೈನ ನಿವಾಸಿಗಳ ಆರೋಪವದೇ! ಈ ಎರಡೂ ದೇವಸ್ಥಾನಗಳನ್ನು ವಶಪಡಿಸಿಕೊಂಡು, ತದನಂತರ ಚರ್ಚುಗಳನ್ನಾಗಿ ಪರಿವರ್ತಿಸುವ ಹುನ್ನಾರವಡಗಿದೆ! ಬಡಜನರಿಗೆ ದುಡ್ಡನ್ನು ನೀಡಿ ಆಮಿಷವನ್ನೊಡ್ಡುವ ಮೂಲಕ ಮತಾಂತರ ಮಾಡಲಾಗುತ್ತಿದೆ! ಬಲಪ್ರಯೋಗದಿಂದಲೂ ಸಹ ಕೆಲವು ಕಡೆ ಮತಾಂತರಕ್ಕೊಳಪಡಿಸುತ್ತಿದ್ದಾರೆ! ಆದರೂ ಸಹ ಯಾವ ನ್ಯಾಯಾಂಗ ವ್ಯವಸ್ಥೆಯೂ ಇದರ ಬಗ್ಗೆ ಕ್ರಮ ತೆಗೆದುಕೊಳ್ಳುವುದಿಲ್ಲ! ದಿನ ಬೆಳಗಾದರೆ ಇಂತಹುದೇ ಘಟನೆಗಳು ನಡೆಯುತ್ತಿರುತ್ತವೆ! ಹೀಗೇ ಆದರೆ, ಮುಂದೊಂದು ದಿನ ,ಇಡೀ ಮಧುರೈ ನ
ದೇವಾಲಯಗಳು ಚರ್ಚುಗಳಾಗಿ ಪೊರಿವರ್ತನೆ ಹೊಂದುವ ಎಲ್ಲಾ ಲಕ್ಷಣಗಳಿವೆ!!

ಆದರೂ, ಸಹ ಯಾವೊಬ್ಬ ಪೋಲಿಸನೂ ಮಾತನಾಡುವುದಿಲ್ಲ! ಯಾವ ಮಾಧ್ಯಮವೂ ಹ್ಯಾಷ್ ಟ್ಯಾಗ್ ಹಾಕಿ ನ್ಯಾಯ ಕೇಳುವುದಿಲ್ಲ! ಯಾವೊಬ್ಬ ಸ್ವಾಭಿಮಾನಿ ತಮಿಳನೂ ಸಹ, ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ! ಇನ್ನೊಂದು ಅಚ್ಚರಿಯ ವಿಷಯವೇನೆಂದರೆ, ಈ ಎರಡು ದೇವಾಲಯಗಳನ್ನು ವಶಪಡಿಸಿಕೊಳ್ಳುವ ಎರಡು ದಿನಗಳ ಮುಂಚೆ, ಮಧುರೈನ ಸುಪ್ರಸಿದ್ಧ ಮೀನಾಕ್ಷಿ ದೇವಾಲಯಕ್ಕೆ ಅಗ್ನಿಸ್ಪರ್ಶವಾಗಿದೆ! ಅಗ್ನಿಸ್ಪರ್ಶದಿಂದ ದೇವಾಲಯಕ್ಕೆ ಸಾಕಷ್ಟು ಹಾನಿಯಾಗಿದ್ದು, ಪೂರ್ವ ದ್ವಾರವನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ! ಮಧುರೈನ ೧೦೦೦ ಕಂಬಗಳಿರುವ ಆಲಯ ಕ್ಕೂ ಕೂಡ ಸಾಕಷ್ಟು ಹಾನಿಯಾಗಿದ್ದು, ಭಕ್ತಾದಿಗಳಿಗೆ ಪ್ರವೇಶವನ್ನು ತಡೆಹಿಡಿಯಲಾಗಿದೆ! ಮಧುರೈ ದೇವಸ್ಥಾನವೊಂದು ಅದೆಷ್ಟೋ ಸಾವಿರ ವರ್ಷಗಳಿಂದ ನೆಲೆ ನಿಂತಿದೆ! ಚೋಳರ ಕಾಲದಲ್ಲಿ ಕಟ್ಟಿಸಿದ್ದ ದೇವಸ್ಥಾನದಲ್ಲಿ ಪ್ರಾಚೀನ ಶಾಸನಗಳಿದ್ದು, ಅದಕ್ಕೂ ಕೂಡ ಸಾಕಷ್ಟು ಹಾನಿಗಳಾಗಿದೆ!

ಮಧುರೈ ಮೀನಾಕ್ಷಿ ದೇವಾಲಯದಲ್ಲಿ ಅಗ್ನಿ ಕಾಣಿಸಿಕೊಂಡಿದ್ದು ಫೆಬ್ರುವರಿ ೩ ರಂದು! ಅಷ್ಟಾದರೂ ಕೂಡ, ಅಗ್ನಿಯನ್ನು ನಂದಿಸಲು ಯಾವುದೇ ಕ್ರಮವನ್ನೂ ತಕ್ಷಣಕ್ಕೆ ಸರಕಾರ ತೆಗೆದುಕೊಂಡಿಲ್ಲ! ಅದಲ್ಲದೇ, ಸರಕಾರಿ ಅಧಿಕಾರಿಗಳು ಆರೋಪಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆಂದು ಆರೋಪಿಸಲಾಗಿದೆ! ಇವತ್ತಿನವರೆಗೂ, ಅಗ್ನಿಸ್ಪರ್ಶಕ್ಕೆ ಕಾರಣವೇನು ಎಂದು ಪೋಲಿಸರಿಗೆ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ! ಅದರಲ್ಲೂ, ಪ್ರಕರಣದ ಬಗ್ಗೆ ಯಾವ ಮಾಹಿತಿಯನ್ನೂ ನೀಡದೇ ಬಾಯಿಗೆ ಬೀಗ ಜಡಿದು ಕೂತಿರುವ ಪೋಲಿಸರ ಮೌನಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ! ಯಾವುದೇ ಎಮ್ ಎಲ್ ಎ ಆಗಲಿ, ರಾಜಕಾರಣಿಗಳಾಗಲಿ, ಮುಖ್ಯಮಂತ್ರಿಯಾಗಲಿ, ಸ್ಥಳಕ್ಕಾಗಮಿಸುವುದು ಹೋಗಲಿ! ಮಧುರೈ ಮೀನಾಕ್ಷಿ ದೇವಸ್ಥಾನದ ಅಗ್ನಿಸ್ಪರ್ಶದ ಬಗ್ಗೆ ಒಂದೇ ಒಂದು ಮಾತನಾಡಿಲ್ಲ!

Related image

 

ದೇವಸ್ಥಾನದ ಆವರಣದಲ್ಲಿರುವ ಶಾಸನಗಳು ಅಗ್ನಿಸ್ಪರ್ಶಕ್ಕೊಳಗಾಗಿ ಹಾನಿಗೀಡಾಗಿವೆ! ಚೋಳರ ಕಾಲದಲ್ಲಿದ್ದ ಶಿಲಾಶಾಸನಗಳೂ ಕೂಡ ಅಗ್ನಿಗಾಹುತಿಯಾಗಿದೆ! ಜೊತೆ ಜೊತೆಗೆ, ಚೋಳರ ಕಾಲದ ಕಲಾಕೃತಿಗಳು ಸಂಪೂರ್ಣ ದಹನವಾಗಿದೆ! ಅಷ್ಟಾದರೂ ಸಹ ತಮಿಳು ನಾಡಿನ ಸರಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ!! ಅದೇ, ಯಾವುದೇ ಚರ್ಚುಗಳ ಮೇಲೆ ಏನಾದರೂ ಹಲ್ಲೆಯಾಗಿ ಹೋದರೆ, ತಕ್ಷಣವೇ ಸ್ಥಳಕ್ಕಾಗಮಿಸಿ ಪರಿಹಾರವನ್ನೂ ನೀಡುವ ಸರಕಾರ, ಮಧುರೈನ ದೇವಸ್ಥಾನದ ಬಗ್ಗೆ ತಲೆ ಕೆಡಿಸಿಕೊಳ್ಳದೇ ಇರುವುದು ನಿಜಕ್ಕೂ ಅಚ್ಚರಿಯ ಸಂಗತಿ!

Related image

ಎರಡು ಮೂರು ದಿನಗಳೊಳಗೆ ನಡೆದ ಈ ಅನಾಹುತಗಳಿಂದ ಮಧುರೈನ ಹಿಂದೂಗಳು ಆತಂಕಕ್ಕೀಡಾಗಿದ್ದಾರೆ! ಇನ್ನು ಯಾವ ದೇವಸ್ಥಾನವನ್ನು
ಅಗ್ನಿಸ್ಪರ್ಶಕ್ಕೀಡು ಮಾಡುತ್ತಾರೋ ಇನ್ನೇನು ಅನಾಹುತ ಸಂಭವಿಸುತ್ತದೆಯೋ ಎಂದು ಕ್ರೈಸ್ತ ಮಿಷನರಿಗಳ ಬಗ್ಗೆ ಹಗಲು ರಾತ್ರಿ ಯೋಚಿಸುವಂತಾದರೂ ಸಹ… ಧ್ವನಿ ಎತ್ತುತ್ತಿರುವುದು ಹಿಂದು ಮಕ್ಕಳ್ ಸಂಘಟನೆಯ ಕಾರ್ಯಕರ್ತರೇ ವಿನಃ ಬೇರೆಯವರಲ್ಲ! ಅದೆಷ್ಟೋ ವರ್ಷಗಳಿಂದಲೂ ಸಹ ವ್ಯಾಟಿಕನ್ ಸಿಟಿಯ ಕೃಪಾದೃಷ್ಟಿಯಿಂದ ಹಲವಾರು ಏಜೆನ್ಸಿಗಳು ಭಾರತವನ್ನು ಮತಾಂತರಿಸಲು ಮುನ್ನಡಿಯಿಟ್ಟಿವೆ! ವಿದೇಶಗಳಿಂದ ಹರಿದು ಬರುವ ಹಣದಿಂದ ಭಾರತವನ್ನಾಳಲು ಪ್ರಾರಂಭಿಸಿರುವ ಕ್ರೈಸ್ತ ಪಾದ್ರಿಗಳ ಬಗ್ಗೆ ಯಾವ ರಾಜಕಾರಣಿಯೂ ಧ್ವನಿ ಎತ್ತುತ್ತಿಲ್ಲ! ಯಾವ ವ್ಯವಸ್ಥೆಯೂ ಪ್ರತಿಭಟಿಸುತ್ತಿಲ್ಲ! ಅದೇ, ದೇವಸ್ಥಾನದ ಅರ್ಚಕರು ಚರ್ಚುಗಳ ಮುಂದೆ ಘಂಟೆ ಜಾಗಟೆ ಬಾರಿಸಿದ್ದರೆ ಅದೇ ದೊಡ್ಡ ಸುದ್ದಿಯನ್ನಾಗಿ ಬಿತ್ತರಿಸುತ್ತಿದ್ದ ಮಾಧ್ಯಮಕ್ಕೆ ಇವತ್ತು ಏನಾಗಿದೆ!? ಇದ್ಯಾವುದರ ಬಗ್ಗೆಯೂ ತುಟಿಪಿಟಿಕ್ ಎನ್ನದ ಬೇಜವಾಬ್ದಾರಿಗಳಿಗೆ ಏನೆನ್ನಬೇಕೋ ಗೊತ್ತಿಲ್ಲ..!

ಯಾರನ್ನು ಹೊಣೆಗಾರರನ್ನಾಗಿ ಮಾಡಬಹುದಾಗಿದೆ?!

ಮತ್ಯಾರನ್ನೂ ಅಲ್ಲ! ತಮ್ಮ ಧರ್ಮದ ಅಳವನ್ನರಿಯದ ತಮಿಳರಿಂದಲೇ! ನೀವು ಬೇಕಾದರೆ ಗಮನಿಸಿ! ಕ್ರೈಸ್ತ ಮಿಷನರಿಗಳು ತಮಿಳುನಾಡಿನಲ್ಲಿ ಮತಾಂತರ ಮಾಡಿದಷ್ಟು ಬೇರೆ ಯಾವ ರಾಜ್ಯದಲ್ಲಿಯೂ ಮತಾಂತರಕ್ಕಿಳಿದಿಲ್ಲ! ಅದೇ ರೀತಿ, ಬೇರೆ ಯಾವ ರಾಜ್ಯದವರೂ ಕೂಡ, ತಮಿಳರ ಹಾಗೆ ಎಲ್ಲಾ ಧರ್ಮವೂ ಒಂದೇ ಎನ್ನುವುದಿಲ್ಲ! ಇದು, ಹಿಂದುತ್ವದ ದುರಾದೃಷ್ಟವೋ ಅಥವಾ, ಇನ್ನೇನೋ?! ಪ್ರಶ್ನೆಯೇಳುತ್ತದೆ!

ಇನ್ನೂ ತಮಿಳರು ಎಚ್ಚರಾಗದೇ ಹೋದರೆ, ಇಡೀ ತಮಿಳುನಾಡಿನಲ್ಲಿ ಒಂದೇ ಒಂದು ದೇವಸ್ಥಾನಗಳು ಉಳಿಯುವುದೂ ಅನುಮಾನವೇ
ಆಗಿಹೋಗುತ್ತದೆ!

– ನಿಹಾರಿಕಾ ಶರ್ಮಾ

Tags

Related Articles

Close