ಪ್ರಚಲಿತ

ಬ್ರೇಕಿಂಗ್: ಹಿಂದೂ ಕಾರ್ಯಕರ್ತರ ಕೊಲೆ ನಡೆದೇ ಇಲ್ಲ ! ಪಕ್ಷದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯನವರಿಂದ ವಿವಾದಾತ್ಮಕ ಹೇಳಿಕೆ..!

ಅಧಿಕಾರ ಒಂದಿದ್ದರೆ ಸುಳ್ಳನ್ನು ಸತ್ಯ ಮಾಡಲೂ ಗೊತ್ತು, ಸತ್ಯವನ್ನು ಸುಳ್ಳು ಮಾಡಲೂ ಗೊತ್ತು ಎಂಬೂದು ಸದ್ಯ ಈ ರಾಜ್ಯ ಕಾಂಗ್ರೆಸ್ ಸರಕಾರದಿಂದ ತಿಳಿಯುವಂತಾಯಿತು. ಯಾಕೆಂದರೆ ಒಂದು ಘಟನೆ ನಡೆದ ಕೂಡಲೇ ಅದರ ಬಗ್ಗೆ ತನಿಖೆ ನಡೆಯುವ ಮುನ್ನವೇ ಸರಕಾರದ ವತಿಯಿಂದ ಒಂದು ವರದಿ ಬಿಡುಗಡೆ ಮಾಡಿ ಬಿಡುತ್ತದೆ. ಪೊಲೀಸರು ಸ್ಥಳಕ್ಕೆ ಆಗಮಿಸುವ ಮೊದಲೇ ರಾಜ್ಯ ಸರಕಾರ ಯಾರಾದರೂ ಒಬ್ಬ ಅಧಿಕಾರಿ ಅಥವಾ ಸಚಿವರಿಂದ ಒಂದು ಹೇಳಿಕೆ ಬಂದಾಗಿರುತ್ತದೆ. ರಾಜ್ಯದಲ್ಲಿ ಸಾಲು ಸಾಲು ಹಿಂದೂ ಕಾರ್ಯಕರ್ತರ ಕೊಲೆ , ಹಲ್ಲೆ ನಡೆದಾಗಲೂ ಆದದ್ದು ಇಷ್ಟೇ. ಅದೇ ನಮ್ಮ ರಾಜ್ಯದ ದೌರ್ಬಾಗ್ಯ ಎಂಬುದು ಸದ್ಯ ಎಲ್ಲರಿಗೂ ತಿಳಿದಿರುವ ವಿಚಾರ.

ರಾಜ್ಯದಲ್ಲಿ ಸುಮಾರು ೨೩ಕ್ಕೂ ಅಧಿಕ ಹಿಂದೂ ಪರ ಸಂಘಟೆಗಳ ಕಾರ್ಯಕರ್ತರ ಹತ್ಯೆ ಆಗಿದೆ. ಕೊಲೆ ನಡೆಸಿದ ಆರೋಪಿಗಳೂ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ, ಆದರೆ ಸರಕಾರದ ದೃಷ್ಟಿಯಿಂದ ಈ ಎಲ್ಲಾ ಕೊಲೆಗಳು ಸಹಜ ಸಾವು ಎಂಬ ಸ್ಫೋಟಕ ಮಾಹಿತಿ ಇದೀಗ ಲಭ್ಯವಾಗಿದೆ. ರಾಜಕೀಯ ಲಾಭವನ್ನು ಪಡೆಯಲು ಹಿಂದೂ ಕಾರ್ಯಕರ್ತರನ್ನು ಬಲಿ ಪಡೆಯುತ್ತಿರುವ ಕಾಂಗ್ರೆಸ್ ಗೆ ತಾನು ಮಾಡಿರುವ ತಪ್ಪಿನ ಅರಿವಿದ್ದರೂ ಇದೀಗ ಹೊಸ ನಾಟಕ ಆರಂಭಿಸಿದೆ ಎಂದರೆ ನಂಬಲು ಕಷ್ಟವಾದರೂ ಬೇರೆ ದಾರಿಯೇ ಇಲ್ಲದಾಗಿದೆ.!

ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಕೊಲೆ ನಡೆದೇ ಇಲ್ಲ..!

ಇಡೀ ರಾಜ್ಯವನ್ನು ನರಕದ ಕೂಪವನ್ನಾಗಿಸಿರುವ ರಾಜ್ಯ ಸರಕಾರ ಹಿಂದೂ ವಿರೋಧಿ ನೀತಿಯಿಂದಲೇ ಆಳ್ವಿಕೆ ನಡೆಸುತ್ತಿದೆ. ಈ ವಿಚಾರ ರಾಜ್ಯದ ಜನತೆಗೆ ಮಾತ್ರವಲ್ಲದೆ ಇಡೀ ದೇಶಕ್ಕೆ ತಿಳಿದಿರುವ ವಿಷಯ. ಆದರೂ ಕಾಂಗ್ರೆಸ್ ತನಗೂ ಈ ಕೊಲೆಗಳಿಗೂ ಯಾವುದೇ ಸಂಬಂಧ ಇಲ್ಲದಂತೆ ವರ್ತಿಸುತ್ತಿದ್ದು, ಸದ್ಯ ಈವರೆಗೆ ನಡೆದ ಕೊಲೆಗಳು ಸಹಜ ಸಾವು ಎಂದು ಬಿಂಬಿಸಲು ತಯಾರಿ ನಡೆಸಿದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಹಿಂದೂ ವಿರೋಧಿ ನೀತಿಯೇ ಉರುಳಾಗಿ ಪರಿಣಮಿಸಲಿದ್ದು, ಅದಕ್ಕಾಗಿ ಇದೀಗ ಹೊಸ ತಂತ್ರವೊಂದನ್ನು ರಾಜ್ಯ ಕಾಂಗ್ರೆಸ್ ಸರಕಾರ ಹೂಡಿದೆ. ಎಲ್ಲಾ ಕೊಲೆಗಳ ಹಿಂದೆ ಸರಕಾರದ ಕೈವಾಡ ಇರುವುದು ಈಗಾಗಲೇ ಕಂಡುಬಂದಿದೆ. ಆದರೆ ಸರಕಾರದ ಪ್ರಕಾರ ರಾಜ್ಯದಲ್ಲಿ ಯಾವುದೇ ಹಿಂದೂ ಕಾರ್ಯಕರ್ತರ ಕೊಲೆ ನಡೆದೇ ಇಲ್ಲವಂತೆ..!


ಅರೆ ಏನ್ ನಡೆಯುತ್ತಿದೆ ಕರ್ನಾಟಕದಲ್ಲಿ ಎಂದು ಟೌನ್ ಹಾಲ್ ಮುಂದೆ ಪರಚಾಡಿಕೊಂಡವರೆಲ್ಲಾ ಇದೀಗ ಎಲ್ಲಿ ನಾಪತ್ತೆಯಾಗಿದ್ದಾರೆ ಎಂಬೂದು ತಿಳಿಯುತ್ತಿಲ್ಲ.‌ ಯಾಕೆಂದರೆ ಇಲ್ಲಿ ತೊಂದರೆ ಅನುಭವಿಸುತ್ತಿರುವವರು ಹಿಂದೂಗಳಲ್ಲವೇ.! ಆದ್ದರಿಂದ ಬುದ್ದಜೀವಿ ಎನಿಸಿಕೊಂಡವರು ತುಟಿ ಬಿಚ್ಚುತ್ತಿಲ್ಲ. ಬರ್ಬರವಾಗಿ ಕೊಲೆಗೀಡಾದ ಹಿಂದೂ ಕಾರ್ಯಕರ್ತರ ಹೆಣದ ಮೇಲೆ ರಾಜಕಾರಣ ಮಾಡಿದ ಈ ಕಾಂಗ್ರೆಸ್ ನಿಂದ ಹೆಚ್ಚೇನೂ ನಿರೀಕ್ಷಿಸಲು ಸಾಧ್ಯವೇ.? ಆದರೆ ಇಲ್ಲಿ ಗಮನಿಸಬೇಕಾದ ಅಂಶ ಏನೆಂದರೆ ಕೊಲೆ ಮಾಡಿದ ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ, ಆದರೆ ಸಿದ್ದರಾಮಯ್ಯ ಸರಕಾರ ಈ ಎಲ್ಲಾ ಕೊಲೆಗಳು ಸಹಜ ಸಾವು ಎಂದು ಬಿಂಬುಸಲು ಎಲ್ಲಾ ತಯಾರಿ ನಡೆಸಿದೆ ಎಂದರೆ ಈ ರಾಜ್ಯದ ಸ್ಥಿತಿ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಅರಿವಾಗುತ್ತದೆ.

ಅಸಹಜ ವಿಷಯಗಳು ಸಹಜವಾಗಿಯೇ ಇರುತ್ತದಯೇ..?!

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದ್ದು , ರಾಜ್ಯ ಸರಕಾರದ ವೈಫಲ್ಯಕ್ಕೆ ಕನ್ನಡಿಯಾಗಿದೆ. ಕಾಂಗ್ರೆಸ್ ಸರಕಾರದ ಈ ಆಡಳಿತದಲ್ಲಿ ರಾಜ್ಯದ ಜನತೆ ಅಶಾಂತಿಯಿಂದಲೇ ಜೀವನ ನಡೆಸುವಂತಾಗಿದೆ. ಆದರೂ ಯಾವುದೇ ಉಪಾಯವಿಲ್ಲದೆ ಕಷ್ಟದ ಜೀವನವನ್ನೇ ಮುಂದುವರಿಸಬೇಕಾದ ಅನಿವಾರ್ಯತೆ ಇರುವುದರಿಂದ ಮೌನಕ್ಕೆ ಶರಣಾಗಿದ್ದಾರೆ. ಅಹಿತಕರ ಘಟನೆಗಳು ನಡೆಯುತ್ತಲೇ ಇದ್ದು, ಇವೆಲ್ಲವನ್ನೂ ತಡೆಗಟ್ಟುವಲ್ಲಿ ಸರಕಾರ ವಿಫಲವಾಗಿರುವುದು ಸ್ಪಷ್ಟ. ಆದರೆ ಅಸಹಜವಾಗಿ ನಡೆದಿರುವ ಘಟನೆಗಳಿಗೆ ಇದೀಗ ಸಹಜ ಎಂಬ ಲೇಪ ಹಾಕಿ ಸದ್ದಿಲ್ಲದೆ ಎಲ್ಲಾ ಆರೋಪಗಳನ್ನು ಮುಚ್ಚಿಹಾಕಲು ಕಾಂಗ್ರೆಸ್ ಸರಕಾರ ಉಪಾಯ ಹೂಡಿದೆ ಎಂದರೆ ಇನ್ನಷ್ಟು ಹಿಂದೂಗಳ ಕೊಲೆ ನಡೆದರೂ ಇದೇ ರೀತಿ ತೆರೆಮರೆಯಲ್ಲಿ ತಂತ್ರ ರೂಪಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

*ಮಂಗಳೂರಿನ ಮೂಡಬಿದ್ರೆ ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಕೊಲೆಯಾಗಿ ಆರೋಪಿಗಳು ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಆದರೆ ಈ ಕೊಲೆ ಕಾಂಗ್ರೆಸ್ ದೃಷ್ಟಿಯಲ್ಲಿ ಸಹಜ ಸಾವು ಅಷ್ಟೇ.!

*ಯಾರೂ ಊಹಿಸಲು ಸಾಧ್ಯವಾಗದ ರೀತಿಯಲ್ಲಿ ಬರ್ಬರವಾಗಿ , ಬಿಸಿ ಎಣ್ಣಿ ಹಾಕಿ ಸುಟ್ಟು , ಕಣ್ಣುಗಳನ್ನು ಕಿತ್ತುತೆಗೆದು ಪರೇಶ್ ಮೇಸ್ತಾ ಕೊಲೆ ನಡೆಯಿತು. ಆರೋಪಿಗಳು ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಆದರೆ ಈ ಕೊಲೆ ಕಾಂಗ್ರೆಸ್ ದೃಷ್ಟಿಯಲ್ಲಿ ಸಹಜ ಸಾವು ಅಷ್ಟೇ.!

*ಮಂಗಳೂರಿನ ಸುರತ್ಕಲ್ ನಲ್ಲಿ ಹಿಂದೂ ಕಾರ್ಯಕರ್ತ ದೀಪಕ್ ರಾವ್ ನನ್ನು ರಸ್ತೆ ಬದಿಯಲ್ಲೇ ಜಿಹಾದಿಗಳು ಕೊಚ್ಚಿ ಕೊಲೆ ಮಾಡಿದರು. ಆದರೆ ಈ ಕೊಲೆ ಕಾಂಗ್ರೆಸ್ ದೃಷ್ಟಿಯಲ್ಲಿ ಸಹಜ ಸಾವು ಅಷ್ಟೇ.!

*ಇಷ್ಟೇ ಅಲ್ಲ , ರಾಜ್ಯದಲ್ಲಿ ನಡೆದ ಎಲ್ಲಾ ಹಿಂದೂಗಳ ಕೊಲೆಗಳು ರಾಜ್ಯ ಕಾಂಗ್ರೆಸ್ ಸರಕಾರದ ದೃಷ್ಟಿಯಲ್ಲಿ ಕೇವಲ ಸಹಜ ಸಾವು ಅಷ್ಟೇ. ಇದೇ ರೀತಿ ಮುಂದುವರಿದರೆ ಕರ್ನಾಟಕ ಹಿಂದೂಗಳ ಪಾಲಿಗೆ ನರಕವಾಗುವುದು ಖಂಡಿತ.

ಕತ್ತಿಯ ಏಟಿಗಿಂತ ಪೆನ್ನಿನ ಏಟು ಹೇಗಿರುತ್ತದೆ ಎಂಬುದು ಅರಿವಾಗಿರಬಹುದು.!

ಶಕ್ತಿಗಿಂತ ಯುಕ್ತಿ ಮೇಲು ಎಂಬುದು ಗಾದೆ ಮಾತು ಮಾತ್ರವಲ್ಲ, ಇದು ನಿಜ ಕೂಡಾ. ಯಾಕೆಂದರೆ ಗೌರಿ ಲಂಕೇಶ್ ಹತ್ಯೆಯಾದಾಗ ಅದನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ತಲೆಗೆ ಕಟ್ಟಲು ಪ್ರಯತ್ನಿಸಿ ಸೋತಿದ್ದು ಇದೇ ಕಾಂಗ್ರೆಸ್. ಇದೀಗ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡುವ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯನವರು ರಾಜ್ಯದಲ್ಲಿ ಈವರೆಗೆ ಯಾವುದೇ ಕೊಲೆ ಧರ್ಮದ ಆಧಾರವಾಗಿ ನಡೆದಿಲ್ಲ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕೊಲೆಗಾರರೇ ಸ್ವತಃ ಒಪ್ಪಿಕೊಂಡಿರುವಾಗ ಮುಖ್ಯಮಂತ್ರಿಗಳು ಈ ರೀತಿ ಹೇಳಿಕೆ ನೀಡುತ್ತಿರುವುದು ವಿಪರ್ಯಾಸವೇ ಸರಿ..!

source: suvarna news

–ಅರ್ಜುನ್

Tags

Related Articles

Close