ಅಂಕಣಪ್ರಚಲಿತ

ಸರ್ವೋಚ್ಛ ನ್ಯಾಯಾಲಯ ಸೋನಿಯಾ ಗಾಂಧಿಯನ್ನು ಬಂಧಿಸಬೇಕಿದೆ! ಚುನಾವಣಾ ಆಯೋಗ ಇನ್ನಾದರೂ ಪಕ್ಷವನ್ನು ನಿಷೇಧಿಸಬೇಕಿದೆ! ಭಾರತೀಯರು ಇನ್ನೂ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕೇ?!

ವಿಷಯ ಇಷ್ಟೇ!! ನೀವು ಒಪ್ಪುತ್ತೀರೋ ಅಥವಾ ಬಿಡುತ್ತೀರೋ! ಅದು ನಿಮ್ಮಿಷ್ಟ! ಅಥವಾ, ನಾವೇ ಬುದ್ದಿವಂತರು ಎನ್ನುತ್ತೀರೋ?! ಅದೂ ಸಹ ನಿಮಗೇ ಬಿಟ್ಟಿದ್ದು!! ಯಾಕೆಂದರೆ, ಈ ಕಾಂಗ್ರೆಸ್ ಪಕ್ಷವೊಂದನ್ನು ಸ್ವಾತಂತ್ರ್ಯ ಪೂರ್ವದಲ್ಲೇನೋ ಗತಿಯಿಲ್ಲದೇ ಒಪ್ಪಿ ತಪ್ಪು ಮಾಡಿದೆವು! ತದನಂತರ, ಭಾರತ ಕಂಡ ಅಪ್ರತಿಮ ದೇಶ ಭಕ್ತ ಸಾವರ್ಕರ್ ಅವರ ಹಿಂದೂಸ್ಥಾನದ ನಿರ್ಮಾಣಕ್ಕೆ ಕಂಕಣ ತೊಟ್ಟಿದ್ದ ಹಿಂದೂ ಮಹಾಸಭಾ ಪಕ್ಷವೊಂದನ್ನು ಸೋಲಿಸಿ ತಪ್ಪು ಮಾಡಿದೆವು! ಕಾಂಗ್ರೆಸ್ ಅನ್ನು ಗೆಲ್ಲಿಸಿದ್ದೂ ಅಲ್ಲದೇ, ಈ ದೇಶಕ್ಕೆ ನೆಹರೂವಿನಂತಹ ಪ್ರಧಾನಿಯನ್ನು ನೀಡಿ ಮಹಾಪರಾಧ ಮಾಡಿದ್ದೂ ಅಲ್ಲದೇ, ಸತತ ಎಪ್ಪತ್ತು ವರ್ಷಗಳ ಕಾಲ ಹುಚ್ಚು ಕುದುರೆಯ ಹಾಗೆ, ಯಾವುದೇ ಲಂಗು ಲಗಾಮಿಲ್ಲದೇ ಮತ್ತಿದೇ ಕಾಂಗ್ರೆಸ್ ಗೆ ಮತ ನೀಡು ಗೆಲ್ಲಿಸುತ್ತಲೇ ಹೋದೆವು! ಅತ್ತ, ಗದ್ದುಗೆ ಏರಿ ಕುಳಿತವರು, ಅತ್ತ, ಗದ್ದುಗೆ ಏರಿ ಕುಳಿತವರು ಅಷ್ಟೇ ಚೆನ್ನಾಗಿ ಹಿಂದೂಗಳ ಸಾವಿಗೆ ಕುಮ್ಮಕ್ಕು ನೀಡುತ್ತಾ ಬಂದರು!! ಉಹೂಂ! ಕೊನೆ ಕೊನೆಗೆ, ಹೊರ ದೇಶದಿಂದ ಬಂದ ಇಟಲಿಯವಳನ್ನೂ ಸಹ ನಾವು ಒಪ್ಪಿಕೊಂಡೆವು!! ಬರೋಬ್ಬರಿ ಅತಿಥಿ ಸತ್ಕಾರ ನಡೆಯಿತು!! ವಧು ದಕ್ಷಿಣೆಯ ರೂಪದಲ್ಲಿ, ಹತ್ತು ವರ್ಷಗಳ ಕಾಲ ಮತ್ತೆ ಭಾರತವನ್ನು ಆಕೆಯ ಮಡಿಲಿಗೆ ಹಾಕಿದೆವು!! ಆಕೆ ಮಾತ್ರ ವ್ಹಾ!! ದೇಶದ ಬೊಕ್ಕಸಕ್ಕೆ ಕೈ ಯ್ಯಿಟ್ಟಳು!! ಹಾ!! ಅದಕ್ಕಿಂತ ದೊಡ್ಡದಾದ ಹಗರಣವೊಂದನ್ನೂ ಸಹ ಆಕೆ ಮಾಡತೊಡಗಿದಾಗ, ಸಹಿಸಿ ಸತ್ತದ್ದು ಮತ್ತದೇ ಹಿಂದೂಗಳೇ!! ಇಡೀ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡದಾದ ಅಮಾನವೀಯ ಹಗರಣವದು!! ಅದು ಇಲ್ಲಿಯ ತನಕ, ಸತತ 70 ವರುಷಗಳ ಕಾಲ ಮಾಡಿದ ಹಗರಣಗಳಿಗಿಂತ ದೊಡ್ಡದು! ಹಗರಣಗಳ ಪಿತಾಮಹ ಎಂದುಬಿಟ್ಟರೆ ಬಹುಷಃ ಸರಿಯಾದೀತು! ಆ ಹಗರಣದ ಹೆಸರು ‘ಕೇಸರೀ ಭಯೋತ್ಪಾದನೆ!’!! ಪ್ರತಿ ರಾಷ್ಟ್ರದ ಸರಕಾರವೂ ಕೂಡ ತನ್ನ ಪ್ರಜೆಗಳನ್ನು ರಕ್ಷಿಸಲು ವಚನವಿತ್ತಿರುತ್ತದೆ! ಪ್ರತಿಯೊಬ್ಬ ನಿರಪರಾಧಿಯನ್ನು ರಕ್ಷಿಸುವ ಹೊಣೆ ಹೊತ್ತಿರುತ್ತದೆ! ಆದರೆ, ಸ್ವಾತಂತ್ರ್ಯಾನಂತರ ಭಾರತವನ್ನಾಳಿದ ಮೊದಲ ಪಕ್ಷವಾದ ಕಾಂಗ್ರೆಸ್ ಮಾತ್ರ ತನ್ನದೇ ಪ್ರಜೆಗಳ ಬದುಕನ್ನು ಅಡವಿಟ್ಟಿತ್ತು!!

ನಿಮಗೆ ನೆನಪಿರಬಹುದು! ಇದೇ ಹತ್ತು ವರ್ಷಗಳ ಹಿಂದೆ ನಿರಂತರವಾಗಿ ಭಾರತದಲ್ಲಿ ನಾಲ್ಕು ಸ್ಫೋಟಕಗಳಾದವು! ಸಂಝೋತಾ ಹಾಗೂ ಮಾಲೇಗಾಂವ್ ಸ್ಫೋಟವಂತೂ ಭಾರತವನ್ನು ಅಕ್ಷರಶಃ ಬೆಚ್ಚಿ ಬೀಳಿಸಿತ್ತು!! ಸಾಕಷ್ಟು ತನಿಖೆ ನಡೆಯಿತು! ದೇಶದುದ್ದಗಲಕ್ಕೂ ವಿಶೇಷ ತನಿಖಾ ತಂಡ ಅಲೆದಾಡಿ, ಕೊನೆಗೂ ಪಾಕಿಸ್ಥಾನದ ಉಗ್ರರ ನಂಟಿರುವುದರ ದಾಖಲೆ ಸಿಕ್ಕ ನಂತರ ತನಿಖೆಯ ವರದಿಗಳೆಲ್ಲ ಗೃಹ ಸಚಿವರ ಟೇಬಲ್ಲಿನ ಮೇಲೆ ಕುಳಿತಿತು! ಕಾಂಗ್ರೆಸ್ ಕೈವಾಡವಿದ್ದದ್ದನ್ನು ಬೊಟ್ಟು ಮಾಡಿ ತೋರುವಂತಿದ್ದ ದಾಖಲೆಗಳು ನಾಯಕರನ್ನು ಬೆಚ್ಚಿ ಬೀಳಿಸಿತು! ಬೇಡ! ಅಸೀಮಾನಂದರನ್ನು ಸಿಕ್ಕಿಸಿ, ಘಟಾನುಘಟಿ ಹಿಂದೂಗಳನ್ನು ತಗಲು ಹಾಕಿ ಎಂದಿತು ಸರಕಾರ! ಅಷ್ಟೇ!! ಜೊತೆ ಜೊತೆಗೆ ಚಾರ್ಜ್ ಶೀಟುಗಳು ತಯಾರಾದವು!! ಕಂಡ ಕಂಡ ಪ್ರಭಾವೀ ಹಿಂದೂ ಸತರನ್ನು ಕಲೆ ಹಾಕಿ ಚಾರ್ಜ್ ಶೀಟು ಸಿದ್ಧಪಡಿಸಿ ಬಿಟ್ಟಿತು ತನಿಖಾ ಆಯೋಗ!

ಹಾಸ್ಯಾಸ್ಪಸವೆಂದರೆ, ಎರಡು ವರ್ಷದ ಹಿಂದಿನ ದಾಖಲೆಗಳನ್ನು ಕಲೆ ಹಾಕಿ, ಸಾಧ್ವಿಯೆಂಬ ಕಾರಣಕ್ಕೆ ಸಿಕ್ಕಿದ್ದೇ ಸಾಕು ಎಂದು ಪ್ರಗ್ಯಾ ಸಿಂಗ್ ಳನ್ನು ಬಂಧಿಸಲಾಯಿತು! ಆಕೆಯ ಹಳೆಯ ಬೈಕೊಂದು ಸಿಕ್ಕಿದ್ದೇ ಪೋಲಿಸರಿಗೆ ಸಾಕಾಗಿ ಹೋಯಿತು!! ದುರಾದೃಷ್ಟವಶಾತ್, ಆಕೆ ಆ ಬೈಕನ್ನು ಮಾರಿ ಅದೆಷ್ಟೋ ವರ್ಷಗಳಾಗಿ ಹೋಗಿತ್ತು! ಆಕೆಗೂ, ಆ ಸ್ಫೋಟಕ್ಕೂ ಸಂಬಂಧವಿರದೇ ಇದ್ದರೂ, ವಿಚಾರಣೆ ನೆಪದಲ್ಲಿ ದರದರ ಎಳೆದು ಜೈಲಿಗೆ ತಂದು ಕೂರಿಸಿಬಿಟ್ಟರು!! ಜೊತೆಗೆ ಕಾಂಗ್ರೆಸ್ ನ ಕುಮ್ಮಕ್ಕು ಗೊತ್ತಿದ್ದ ಲೆಫ್ಟಿನೆಂಟ್ ಪುರೋಹಿತ್ ನನ್ನೂ ಬಿಡಲಿಲ್ಲ ಕಾಂಗ್ರೆಸ್! ಒಂಭತ್ತು ಹಿಂದೂಗಳ ಮೇಲೆ ಆರೋಪ ಹೊರಿಸಿ ಜೈಲಿಗಟ್ಟಿದ ಕಾಂಗ್ರೆಸ್, ಪಾಕಿಸ್ಥಾನಿ ಉಗ್ರರನ್ನು ಸ್ವಚ್ಛಂದವಾಗಿ ತಿರುಗಲು ಅವಕಾಶ ಮಾಡಿಕೊಟ್ಟಿತು! ಆಗಲೊಂದು ಸೃಷ್ಟಿಯಾಯಿತು ನೋಡಿ! ‘ಕೇಸರೀ ಭಯೋತ್ಪಾದನೆ’ ಎಂಬ ಮಿಥ್ಯೆ! ತನ್ಮೂಲಕ, ಭಯೋತ್ಪಾದಕರ ಪೋಷಣೆಗೆ ನೀರೆರೆಯತೊಡಗಿತು ಕಾಂಗ್ರೆಸ್! ಅದೆಷ್ಟರ ಮಟ್ಟಿಗೆ ಎಂದರೆ, ಪಾಕಿಸ್ಥಾನಿ ಭಯೋತ್ಪಾದಕರ ಕೈ ಗೆ ಕೇಸರೀ ದಾರ ಕಟ್ಟಿ ಸಾಕ್ಷಿ ಸೃಷ್ಟಿಸುವಷ್ಟರ ಮಟ್ಟಿಗೆ!!

ಆದರೇನು ಹೇಳಿ!! ಕಾಂಗ್ರೆಸ್ ನ ಅದೃಷ್ಟ ಕೈ ಕೊಟ್ಟಿತ್ತು!! ಅದೆಷ್ಟೋ ದಿನಗಳ ಕಾಲ ಮುಚ್ಚಿಟ್ಟಿದ್ದ ದಾಖಲೆಗಳನ್ನು ‘ Times Now’ ಎಂಬ ಸುದ್ದಿ ವಾಹಿನಿ
ಬಿಡುಗಡೆಗೊಳಿಸಿದ ನಾರ್ಕೊ ಅನಾಲಿಸಿಸ್ ಸಾಕ್ಷಿಯೊಂದು ಕಾಂಗ್ರೆಸ್ ನನ್ನು ಬೀದಿಗೆ ತಂದು ನಿಲ್ಲಿಸಿತು! ಉಗ್ರತ್ವದ ಹೆಸರಿನಲ್ಲಿ ಹಿಂದೂ ನಾಯಕರನ್ನು ಗುರಿ ಮಾಡಿದ ಅದ್ಭುತ ಚಾಣಾಕ್ಷತನವೊಂದು ಗೊತ್ತಾಗಿ ಹೋಯಿತು. ಮಾಲೇಗಾವ್ ಸ್ಫೋಟದ ಹೆಸರಿನಲ್ಲಿ ಮತ್ತದೇ ಉಗ್ರರನ್ನು ಕೈ ಬಿಟ್ಟು ಸಾಧ್ವಿ ಪ್ರಜ್ಞಾ ಸಿಂಗ್ ನನ್ನು ಒಳಗಟ್ಟಿತು ಕಾಂಗ್ರೆಸ್! ಆಕೆ ಬೆಂಕಿಯ ಚೆಂಡು! ವಿಚಾರಣೆಯ ನೆಪದಲ್ಲಿ ಆಕೆಯನ್ನದೆಷ್ಟು ಹಿಂಸಿಸಿತೆಂದರೆ ಕೊನೆಗೆ ಆಕೆಗೆ ಸ್ವಂತ ಕಾಲಿನ ಮೇಲೂ ನಿಲ್ಲಲಾಗಲಿಲ್ಲ! ಆಕೆಯನ್ನು ಆಹಾರ ನೀರು ಕೊಡದೇ 24 ದಿನ ಕೊಳೆ ಹಾಕಿದ್ದರು! ಚರ್ಮದ ಬೆಲ್ಟಿನಿಂದ ಬಡಿಯಲಾಗಿತ್ತು! ಆಕೆ ಸಾಧ್ವಿ! ಅಶ್ಲೀಲ ಭಾಷೆಗಳಿಂದ ಮಾನಸಿಕವಾಗಿಯೂ ಕುಗ್ಗಿಸಿದರು. ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಆಕೆಗೆ ಸರಿಯಾದ ವೈದ್ಯಕೀಯ ತಪಾಸಣೆಯೂ ಆಗಲಿಲ್ಲ! ಚಾರ್ಜ್ ಶೀಟ್ ಇಲ್ಲದೆಯೇ ಆಕೆಯನ್ನ ಒಂಭತ್ತು ವರ್ಷ ಕೂಡಿ ಹಾಕಿದ ಕಾಂಗ್ರೆಸ್ ಗೆ ‘ಇಶ್ರತ್ ಜಹಾನ್’ ಎಂಬ ಆತ್ಮಾಹುತಿ ಬಾಂಬ್ ರ್ ಳನ್ನು ಮಾತ್ರ ‘ಸಹೋದರಿ’ ಎಂದು ಕರೆದು ಸತ್ಕರಿಸಿದ್ದಲ್ಲದೇ, ಆಕೆಯ ಪರವಾಗಿ ನ್ಯಾಯಾಲಯದಲ್ಲೂ ವಾದಿಸಿದ ಇದೇ ಕಾಂಗ್ರೆಸ್, ತಮ್ಮದೇ ದೇಶದ ಮಗಳಾದ ಸಾಧ್ವಿಯನ್ನು ಮಾತ್ರ ಅತ್ಯಂತ ಹೀನಾಯವಾಗಿ ನಡೆಸಿಕೊಂಡು ಬಿಟ್ಟಿತು!!

ನಿಮಗೊಂದು ವಿಷಯ ಗೊತ್ತಾ?! ಕಾಲೋನೆಲ್ ಶ್ರೀಕಾಂತ್ ಪುರೋಹಿತ್ ಅಪ್ಪಟ ದೇಶಭಕ್ತ! ಎಲ್ಲಿ ತನ್ನ ಕುತಂತ್ರವೊಂದು ಸಮಾಜಕ್ಕೆ ಗೊತ್ತಾಗುವುದೋ ಎಂಬ ಭಯದಿಂದ ಕಾಂಗ್ರೆಸ್ ಅವರನ್ನೂ ‘ಉಗ್ರ’ನೆಂಬ ಪಟ್ಟಕಟ್ಟಿ ಜೈಲಿಗೆ ಕಳುಹಿಸಿತು. ಬಿಡಿ! ಪಾಕಿಸ್ಥಾನದ ಮಾನ ಮರ್ಯಾದೆಯ ಗುತ್ತಿಗೆಯನ್ನೂ ಕಾಂಗ್ರೆಸ್ ತೆಗೆದುಕೊಂಡಂತೆ ವರ್ತಿಸಿತು. ತನ್ನದೇ ಸೇನೆಯ ತಂಡದವನೊಬ್ಬ ‘ಉಗ್ರ’ ಎಂಬ ಹಣೆಪಟ್ಟಿ ಹೊತ್ತಾಗ ಉಳಿದ ಸೈನಿಕರ ಮನಃಸ್ಥಿತಿ ಹೇಗಾಗಿರಬೇಡ?! ಪತ್ನಿಯೊಬ್ಬಳು ಸಮಾಜದೆದುರಿಗೆ ಅದೆಷ್ಟು ಬೆಂದಳು ಗೊತ್ತೇನು?! ಕಾಂಗ್ರೆಸ್ ಈ ಎಲ್ಲ ಕಳೆದು ಹೋದ ಮಾನಗಳನ್ನು ಮರ್ಯಾದೆಗಳನ್ನು ತಿರುಗಿ ಕೊಡಲು ಸಾಧ್ಯವಿದೆಯೇ?! ಮಾನಸಿಕವಾಗಿ ಕುಗ್ಗಿಸಿದ ಅವರೆಲ್ಲರ ದಿನಗಳನ್ನೂ ಮರಳಿ ಕೊಡಲು ಸಾಧ್ಯವಾಗದ ಕಾಂಗ್ರೆಸ್ ‘ಪಾಕಿಸ್ಥಾನೀ ಉಗ್ರ’ ರ ಶಿಕ್ಷೆಯನ್ನು ಕಡಿಮೆ ಮಾಡುವಂತೆ ಆಗ್ರಹಿಸಿತು!!!

https://twitter.com/lazzycow/status/893033345780731904

ವಾಸ್ತವವಾಗಿ, ಕಾಂಗ್ರೆಸ್ ಪಕ್ಷವನ್ನೇ ನಿಷೇಧಿಸಬೇಕಿತ್ತು ಚುನಾವಣೆ ಆಯೋಗ! ಆದರೆ, ಚುನಾವಣಾ ಆಯೋಗಕ್ಕೆ ಒಂದು ಪಕ್ಷವನ್ನು ನಿಷೇಧಿಸುವ ಹಕ್ಕಿದ್ದರೂ ಏನೂ ಮಾಡಲಾಗದೇ ಕುಳಿತುಕೊಂಡಿತು. ತನ್ನ ಕುತಂತ್ರವನ್ನಡಗಿಸುವ ಸಲುವಾಗ ‘ಇಟಲಿ’ ತಲೆಯೊಂದು ಕೇಸರೀ ಭಯೋತ್ಪಾದನೆಯ ಹೆಸರಿನಲ್ಲಿ ಹಿಂದೂಗಳನ್ನು ಮಾನಸಿಕವಾಗಿ ಕೊಲೆಗೈದ ಪಾಪಕ್ಕೂ ಅದಕ್ಕೆ ಶಿಕ್ಷೆಯಾಗಲೇ ಇಲ್ಲ! ಒಬ್ಬ ಗೌರವಾನ್ವಿತ ಸೇನೆಯ ಅಧಿಕಾರಿಯನ್ನೂ ‘ಉಗ್ರ’ನೆಂದು ಪಟ್ಟ ಕಟ್ಟಿದ ಕಾಂಗ್ರೆಸ್ ನನ್ನು ಆಯೋಗ ಸುಮ್ಮನೆ ನೋಡುತ್ತಾ ಕುಳಿತಿತೇ ವಿನಃ ನಿಷೇಧಿಸುವ ಧೈರ್ಯವನ್ನೂ ತೋರಲಿಲ್ಲ. ಇದು ಈ ದೇಶದ ದುರಂತ!! ಒಂದು ಪಕ್ಷವನ್ನೇ, ನಿಷೇಧಿಸುವಷ್ಟು ಅಧಿಕಾರವಿರುವ ಚುನಾವಣಾ ಆಯೋಗ, ಕೈ ಕಟ್ಟಿ ಮಂಡಿಯೂರಿ ಕುಳಿತಿತಲ್ಲ?! ಮತ್ತದೇ, ಇಟಲಿಯ ಪ್ರಜೆಯೆದರು?! ಮತ್ತದೇ, ಕೊಲೆಗಾರಳಾದವಳ ಎದುರು?! ಮತ್ತದೇ ಗುಲಾಮಗಿರಿ ನಮ್ಮ ರಾಜಕೀಯದಲ್ಲಿ ಮೈದಳೆದಿದ್ದು ಸಾಬೀತಾಗಿತ್ತು!

ಅದೂ ಹೋಗಲಿ, ಸುಪ್ರೀಮ್ ಕೋರ್ಟೂ ಕೂಡ ಈ ಕಾಂಗ್ರೆಸ್ ನಾಯಕರನ್ನು ಬಂಧಿಸುವ ಪ್ರಯತ್ನ ಮಾಡಲಿಲ್ಲ. ‘ಯುವ ನಾಯಕ’ ಎಂದು ಬಿಂಬಿಸಿಕೊಂಡವನೂ ಕೂಡ ‘ನಾಯಕ’ನಾಗಿಯೇ ಉಳಿದು ಹೋಗುವ ದುರಂತಕ್ಕೆ ಇನ್ನ್ಯಾವ ಬೇರೆ ಹಾದಿಯಿರಬಹುದು?! ಇನ್ನೇನೂ ಕೇಳುವುದಿಲ್ಲ ನಾವು
ಸ್ವಾಮಿ!! ಸಾಧ್ವಿಯ ತರಹ ಸೋನಿಯಾ ಗಾಂಧಿ ಕಳೆಯಬಹುದೇ ಜೈಲಿನಲ್ಲಿ ತನ್ನ ಬದುಕನ್ನು?! ಇಷ್ಟೇ ಕೇಳುವುದು!! ಇದಕ್ಕೆ, ಉತ್ತರ ವಿದೆಯಾ?! ಬದುಕನ್ನು, ಹೋದ ಮರ್ಯಾದೆಯನ್ನು, ಗೌರವವನ್ನು ವಾಪಾಸು ತಂದುಕೊಡಬಲ್ಲ ಶಕ್ತಿ ಅಥವಾ ತಾಕತ್ತಿದೆಯೇ?!

ಸತ್ಯ ಹೇಳಬೇಕಾ?! ಕಳೆದ ಬದುಕನ್ನು ಮತ್ತೆ ತರು ಸಾಧ್ಯವೇ ಇಲ್ಲ!!! ತನ್ನದೇ ಮಗಳಾದ ಪ್ರಿಯಾಂಕಾ ಗಾಂಧಿ ಹಾಗೂ ಆಕೆಯ ಪತಿರಾಯನನ್ನೂ ಬಂಧಿಸದೇ ಕೈ ಕಟ್ಟಿ ಕೂತ ನ್ಯಾಯಾಲಯವೊಂದು, ಕೋಟಿ ಗಟ್ಟಲೇ ಹಗರಣಗಳ ಧಣಿಯಾದ ಅವರಿಬ್ಬರನ್ನೂ ‘ತಿರುಗಲಿಕ್ಕೆ’ ಅವಕಾಶ ಮಾಡಿಕೊಟ್ಟಿದೆ! ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತೇವೆಂದ ಕಾಂಗ್ರೆಸ್ ಕುಳಗಳೇ ಭ್ರಷ್ಟರಾಗಿರುವಾಗ ಇನ್ನೆಲ್ಲಿಯ ಅವಕಾಶ ಹೇಳಿ!! ಅದೂ ಬಿಡಿ!! ಕಾಂಗ್ರೆಸ್ ನಾಯಕರ ಹೇಳಿಕೆಯನ್ನು ಬೆಂಬಲಿಸಿ ಶಿಕ್ಷೆ ಕೊಟ್ಟಿದ್ದ ಸುಪ್ರೀಮ್ ಕೋರ್ಟೆಂಬ ಮಹಾ ನ್ಯಾಯಾಲಯವೊಂದು ಕಾಂಗ್ರೆಸ್ ನಾಯಕರನ್ನು ಸಾಕ್ಷ್ಯಾಧಾರವಿದ್ದರೂ ಬಂಧಿಸದಿರುವಷ್ಟು ದುರ್ಬಲವಾಗಿ ಹೋಗಿತ್ತೆನ್ನುವುದು ಅದೆಷ್ಟೋ ಪ್ರಕರಣಗಳಲ್ಲಿ ಸಾಬೀತಾಗಿದೆ! ಇಲ್ಲದಿದ್ದರೆ, ಸ್ವತಃ ಸರ್ವೋಚ್ಛ ನ್ಯಾಯಾಲಯವೇ ಕಾಂಗ್ರೆಸ್ ಪಕ್ಷವನ್ನು ನಿಷೇಧಿಸಲು ಒತ್ತಡ ಹೇರುತ್ತಿತ್ತು! ಸರ್ವೋಚ್ಛ ನ್ಯಾಯಾಲಯವೊಂದು ಸರ್ವೋಚ್ಛ ಅಪರಾಧವನ್ನು ಮಾಡಿತ್ತು!

ಆದರೆ, ಸಾಧ್ವಿ ಮಾತ್ರ ಬಗ್ಗುವ ಹೆಣ್ಣಾಗಿರಲೇ ಇಲ್ಲ!! ಆಕೆ ಅಷ್ಟೆಲ್ಲ ಸಹಿಸಿಯಾದ ಮೇಲೂ ಸಹ ಹೇಳಿದ್ದಿಷ್ಟೇ!! ‘ನಾನೊಬ್ಬಳು ಸನ್ಯಾಸಿ! ನನ್ನಲ್ಲಿರುವ ಮಹಾಭಾರತ ರಾಮಾಯಣಗಳ ಗ್ರಂಥಗಳನ್ನು ಬೆಂಕಿಗೆಸೆದರು! ಲೈಂಗಿಕ ಪ್ರಚೋದನೆಗಳುಳ್ಳ ನೀಲಿ ಚಿತ್ರಗಳನ್ನು ನೋಡುವಂತೆ ಒತ್ತಡ ಹೇರಲಾಗಿತ್ತು. ನನ್ನ ತಾಯಿಯನ್ನೂ ನನಗೆ ಭೇಟಿ ಮಾಡಲು ಅವಕಾಶ ನೀಡಿರಲಿಲ್ಲ.! ” ಎಂದಾಗ, ಅಕ್ಷರಶಃ ಪ್ರತಿಯೊಬ್ಬ ಹಿಂದೂವಾದವನಿಗೂ ರಕ್ತ ಕುದಿಯತೊಡಗಿತ್ತು! ಆದರೇನು?! ಏನಾದರೂ ಮಾಡಬಲ್ಲನಾಗಿದ್ದನೇ?! ಇಲ್ಲ! ಆಕೆಗದೆಷ್ಟೇ ಹಿಂಸೆ ನೀಡಿ ‘ಕೇಸರೀ ಭಯೋತ್ಪಾದನೆ’ ಎಂಬುದನ್ನು ಒಪ್ಪಿಕೋ ಎಂದರೂ ಆಕೆ ಬಗ್ಗಲೇ ಇಲ್ಲ! ಆಕೆ ಪಾರ್ಶ್ವ ಪೀಡಿತವಾದರೂ ಮೊನ್ನೆ ಮೊನ್ನೆಯಷ್ಟೇ ಜಾಮೀನು ದಕ್ಕಿಸಿಕೊಂಡು ಹೊರಬಂದ ಸಾಧ್ವಿ ಮಾತ್ರ ಪದೇ ಪದೇ ಹಿಂದುತ್ವವೊಂದನ್ನು ಜಪಿಸುತ್ತ ಕೂತಿದ್ದಳು!!

‘ಪ್ರತಿಕ್ಷಣದ ನರಕದಲ್ಲಿ ನನಗೆ ಹಿಂದುತ್ವ ವೆಂಬುದು ಜ್ವಾಲೆಯಾಗಿ ಹೊರಹೊಮ್ಮುತ್ತಿತ್ತು! ಬದುಕಿನುದ್ದಕ್ಕೂ ಹಿಂದುತ್ವದ ಪರ ಕಾರ್ಯ ಮಾಡುತ್ತೇನೆ ಎನ್ನುವ ಅದಮ್ಯ ವಿಶ್ವಾಸ ಹಾಗೂ ಹೆಮ್ಮೆ ನನ್ನಲ್ಲಿ ಪುಟಿದೇಳುತ್ತಿತ್ತು!!” ವ್ಹಾ!!

ಅದನ್ನು ಬಿಡಿ!! ಪುರೋಹಿತ್ ಗೆ ಅದೆಷ್ಟೇ ಹಿಂಸೆ ಮಾಡಿ, ಕೇಸರೀ ಭಯೋತ್ಪಾದನೆ ಎಂದು ಬಿಂಬಿಸುವುದಕ್ಕೆ ಸಹಕರಿಸು ಎಂದಾಗಲೂ ಜಗ್ಗಲೇ ಇಲ್ಲ ಆಸಾಮಿ!! ಸಾಯುತ್ತೇನೆಯೇ ಹೊರತು ಸುಳ್ಳು ಹೇಳಲು ಸಾಧ್ಯವೇ ಇಲ್ಲ ಎಂದು ಕಾಲೊನೆಲ್ ಪುರೋಹಿತ್ ಕೂಡ ಕಾಂಗ್ರೆಸ್ ಪರ ಹೇಳಿಕೆ ನೀಡಲು ತಿರಸ್ಕರಿಸಿಬಿಟ್ಟರು! ಅಕಸ್ಮಾತ್, ಕೇಸರೀ ಭಯೋತ್ಪಾದನೆಯೆಂಬುದು ಒಪ್ಪಿಬಿಟ್ಟಿದ್ದರೆ, ಇವತ್ತು ಪ್ರತಿಯೊಬ್ಬ ಹಿಂದುವನ್ನೂ ಕೂಡ ‘ಭಯೋತ್ಪಾದಕ’ನೆಂದೇ ಬಿಂಬಿಸಲಾಗುತ್ತಿತ್ತೇನೋ!!

“ಮುಂಬೈ ಭಯೋತ್ಪಾದಕ ನಿಗ್ರಹ ದಳ ನನಗೆ ರಾಷ್ಟ್ರೀಯ ಸ್ವಯಂ ಸೇವಕರ ನಾಯಕರ ಹೆಸರನ್ನು ಸುಖಾ ಸುಮ್ಮನೆ ಬಳಸಿ ಹೇಳಿಕೆ ಕೊಡುವಂತೆ ಹಿಂಸಿಸಿತು. ನಾನು 24 ದಿನಗಳ ಕಾಲ ಆಹಾರವಿಲ್ಲದೆಯೇ ಜೀವ ಹಿಡಿದುಕೊಂಡಿರಬೇಕಾಯಿತು.ಪ್ರತಿದಿನದ ಹೊಡೆತದಿಂದ ನನ್ನ ದೇಹ ಜರ್ಝರಿತವಾಗಿ ಬಹಳಷ್ಟು ಭಾಗಗಳಲ್ಲಿ ಊದಿಕೊಂಡಿತು. ಕೈ ಗಂಟುಗಳ ಮೇಲೆ ಬಿದ್ದ ಹೊಡೆತದ ನೋವಿಗೂ ನಾನು ಸುಳ್ಳು ಹೇಳಲು ತಯಾರಿರಲಿಲ್ಲ.” ಎಂದಿದ್ದ ಕಾಲೋನೆಲ್ ಪುರೋಹಿತ್ ಅಂತೂ ಒಂಭತ್ತು ವರ್ಷಗಳ ನಂತರ ಜೈಲಿನಿಂದ ಹೊರ ಬಂದರಷ್ಟೇ! ಆದರೆ.. ಅಷ್ಟೊತ್ತಿಗಾಗಲೇ, ತಮ್ಮ ಅಮೂಲ್ಯ ಬದುಕನ್ನು ಕಳೆದುಕೊಂಡು ಬಿಟ್ಟಿದ್ದರು!!

ಈ ಸೋನಿಯಾ ಗಾಂಧಿ ಎಂಬ ಶನಿಯ ಹುಚ್ಚಾಟಕ್ಕೆ, ದಿಗ್ವಿಜಯ್ ಸಿಂಗ್ ಎಂಬುವವನ ಬೆಂಬಲವೊಂದೂ ಸೇರಿ ಒಬ್ಬ ಸಾಧ್ವಿಯನ್ನು ಅದೆಷ್ಟು ಮಟ್ಟಿಗೆ ಹಿಂಸಿಸಿತೆಂದರೆ ಭಾರತ ಕೂಡ ಆಕೆ ಜೀವಂತವಾಗಿ ಹೊರಬಹುದೆಂಬ ಆಸೆಯನ್ನೇ ಕೈಬಿಟ್ಟಿತ್ತು ಬಿಡಿ!! ನಿಮಗಿದು ಗೊತ್ತಿರಲೇ ಬೇಕು! ಆಕೆ ಸ್ತನ ಕ್ಯಾನ್ಸರ್ ನಿಂದ ಬಳಲುವಾಗಲೂ ಉಹೂಂ! ಯಾವ ವೈದ್ಯನೂ ಹತ್ತಿರ ಸುಳಿಯಲು ಕಾಂಗ್ರೆಸ್ ಬಿಡಲಿಲ್ಲ! ಸಾಧ್ವಿಯೆಂಬ ಸರಸ್ವತಿಗೆ ಸ್ವತಃ ಹಿಂದೂಸ್ಥಾನದಲ್ಲಿ ಬೇಡಿ ಹಾಕಿದ್ದೆವು! ದೇಶ ಕಾಯುವ ಸೈನಿಕನಿಗೆ, ಅದೆಷ್ಟೋ ಉಗ್ರ ಚಟುವಟಿಕೆಗಳ ಪ್ರಾಣ ಒತ್ತೆ ಇಟ್ಟು ಅಧ್ಯಯನ ಮಾಡಿದ್ದ ಒಬ್ಬ ಯೋಧನನ್ನೇ ಉಗ್ರ ಎಂದು ಜೈಲಿಗಟ್ಟಿದೆವು! ಸ್ವಾಮಿ ಅಸೀಮಾನಂದರನ್ನೂ ಬಿಡದ ನಮಗೆ ‘ಕೇಸರೀ ಭಯೋತ್ಪಾದನೆ’ ಯೆಂಬ ಮಿಥ್ಯೆಯೊಂದು ತಲೆಗೆ ಹೊಕ್ಕಿಬಿಟ್ಟಿತ್ತು! ಅಲ್ಲಿಂದ ಪ್ರಾರಂಭವಾಯಿತು ನೋಡಿ! ಭಯೋತ್ಪಾದನೆಗೆ ಧರ್ಮವಿಲ್ಲ ಎಂಬ ಅರೆಕಾಲಿಕ ಅರ್ಧಸತ್ಯವೊಂದು! ಅದೆಷ್ಟರ ಮಟ್ಟಿಗೆ ಈ ಅರೆಕಾಲಿಕ ಸತ್ಯ ಭಾರತೀಯರ ತಲೆಗೆ ಹೊಕ್ಕಿತೆಂದರೆ, ಅಯ್ಯೋ!! ಇವತ್ತು, ಭಯೋತ್ಪಾದನೆ ಎಂಬುದು ಸಾಮಾನ್ಯ ವಿಷಯವಾಗಿ ಬಿಡುವಷ್ಟು!!

ನಿಮಗಿದಷ್ಟೂ ಅರ್ಥವಾಗಿದ್ದೇ ಆದರೆ, ಒಬ್ಬ ದೇಶವನ್ನು ಅಥವಾ , ಮನೆಯ ಹೆಣ್ಣನ್ನು ಪೂಜಿಸುವವನಾದರೆ ಹೇಳಿ!! ಇವತ್ತಿಗೂ ಕಾಂಗ್ರೆಸ್ ಎಂಬ ಪಕ್ಷಕ್ಕೆ ಮತ ನೀಡಲು ಹಂಬಲಿಸುವಿರಲ್ಲವೇ?! ಇವತ್ತು, ಹಿಂದೂ ಹೆಣ್ಣು ಮಗಳು! ನಾಳೆ ಅವಶ್ಯಕತೆ ಬಿದ್ದರೆ ಇವತ್ತು ಓಲೈಸುವ ಬಾಂಧವರ ಮನೆಯ ಹೆಣ್ಣು
ಮಕ್ಕಳನ್ನೂ ನಿರ್ದಯವಾಗಿ ಕಾಣುವಂತಹ ಕಾಂಗ್ರೆಸ್ ನಂತಹ ಪಕ್ಷ ಭಾರತದಲ್ಲಿರಬೇಕಾ?! ಇಷ್ಟಕ್ಕೆಲ್ಲ, ಕಾರಣರಾದವರನ್ನು ಬಿಟ್ಟುಬಿಡಬೇಕಾ?! ಸೋನಿಯಾ ಗಾಂಧಿಗೆ ಯಾವ ಶಿಕ್ಷೆ ವಿಧಿಸಲು ಸಾಧ್ಯವಿದೆ?! ದಿಗ್ವಿಜಯ್ ಸಿಂಗ್ ಗೆ ಯಾವ ಶಿಕ್ಷೆಯನ್ನು ನೀಡಬಹುದು?! ಕಾಂಗ್ರೆಸ್ ನಾಯಕರುಗಳೆಲ್ಲ ಶಿಕ್ಷೆಯಿಲ್ಲದೇ ಸ್ವಚ್ಛಂಧವಾಗಿ ತಿರುಗುವಾಗ ಯಾವ ನ್ಯಾಯಾಲಯವೂ ಧೈರ್ಯ ತೋರಲೇ ಇಲ್ಲ! ಇಷ್ಟು ವರ್ಷಗಳ ಹಗರಣಗಳಿಗೆ ಶಿಕ್ಷೆಯೇ ಇಲ್ಲದಿರುವ ನ್ಯಾಯಾಲಯಗಳ ದುರ್ಬಲತೆಯೊಂದು ಭಾರತದ ದುರಂತವಲ್ಲದೇ ಮತ್ತೇನು ಹೇಳಿ!!

ಅಯ್ಯೋ! ಅದಕ್ಕೇ ಇವತ್ತಿಗೂ ಹಿಂದೂ ಗಳು ಇನ್ನೂ ಮೂರ್ಖರಂತೆ ಬಲಿಯಾಗುತ್ತಿರುವುದು!! ಇವತ್ತಿಗೂ ಸಹ ಅದೆಷ್ಟೋ ಹಿಂದುಗಳ ಹಿಂಸೆ ನಡೆದರೂ ಬಾಯಿ ಮುಚ್ಚಿ ಕೂತು, ಎಲ್ಲಾ ಧರ್ಮವೂ ಒಂದೇ ಎಂದು ಮತ್ತದೇ ಗುಲಾಮಗಿರಿಯ ಬದುಕಿಗೆ, ಮತ್ತದೇ ಮೊಘಲ ಸಂತಾನದ ಕತ್ತಿಗೆ, ಮತ್ತದೇ
ಬ್ರಿಟಿಷರ ವ್ಯಾಟಿಕನ್ ನ ತಂತ್ರಕ್ಕೆ ಬಲಿಯಾಗುತ್ತಿರುವುದು!! ಧರ್ಮಕ್ಕೆ ಭಯೋತ್ಪಾದನೆ ಇಲ್ಲವೆನ್ನುವ ಓ ಹಿಂದೂಗಳೇ!! ನಿಮ್ಮಲ್ಲಿ ಹಿಂದುತ್ವದ ಜ್ವಾಲೆ ಜ್ವಲಿಸುವುದು ಯಾವಾಗ?! ಅದಾವುದೋ ಇಂದಿರಾಳನ್ನು ಗೌರವದಿಂದ ಕಾಣಿ ಎಂದಿರಲ್ಲ?! ಅದಾವುದೋ ಕಸಬ್, ಅಫ್ಜಲ್ ನಿಗೆ ಕ್ಷಮೆ ನೀಡಿ ಎಂದಿರಲ್ಲ?! ನಿಮ್ಮಲ್ಲಿಯೂ ಸಹ ಹಿಂದುತ್ವಕ್ಕೆ ಪ್ರಾಣ ಕೊಡಬಲ್ಲ, ಭಾರತವನ್ನು ತಾಯಿಗಿಂತಲೂ ಅತಿಯಾಗಿ ಪ್ರೀತಿಸಬಲ್ಲಂತಹ ವ್ಯಕ್ತಿತ್ವ ನಿರ್ಮಾಣವಾಗುವುದು ಯಾವಾಗ?!

ಕಾಂಗ್ರೆಸ್ ಮಾಡಿದ್ದು ಸರಿ ಇದೆ ಎಂದಾದರೆ, ಹೇಳಿಬಿಡಿ!! ನಿರಪರಾಧಿ ಸಾಧ್ವಿಗಾದ ಅನ್ಯಾಯವನ್ನು ಸರಿದೂಗಿಸಿಕೊಡುವಿರಾ?! ನನ್ನ ದೇಶದ ಯೋಧನನ್ನು ಭಯೋತ್ಪಾದಕನೆಂದು ಮಾನಸಿಕವಾಗಿ ಹಿಂಸಿಸಿದ್ದಕ್ಕೆ ನ್ಯಾಯ ಒದಗಿಸಿಕೊಡುವಿರಾ?! ಅದಷ್ಟೋ ಹಿಂದೂಗಳ ಪ್ರಾಣ ಬಲಿ ಕೊಟ್ಟ ಕಾಂಗ್ರೆಸ್ ನಂತಹ ಪಕ್ಷವನ್ನು ದೇಶದಿಂದ ತೊಲಗಿಸುವಿರಾ?! ತಾಯಿ ಭಾರತಿಯ ಕೊರಳಿಗೆ ಕೈ ಹಾಕಿದ ಮತ್ತದೇ ಗಾಂಧಿ – ನೆಹರೂ ವಿನ ಪಕ್ಷವೊಂದರ ಉತ್ತರಾಧಿಕಾರಿಗಳೂ ಸೇರಿ ಮಾಡಿದ ಅನ್ಯಾಯಕ್ಕೆ ಧ್ವನಿ ಎತ್ತಬಲ್ಲಿರಾ?! ಹೇಳಿ!! ಸಾಧ್ಯವಾದರೆ ಉತ್ತರ ಕೊಡಿ!!

– ತಪಸ್ವಿ

Tags

Related Articles

Close