ಪ್ರಚಲಿತ

ಕೇಜ್ರಿವಾಲರ ರಾಜ್ಯದಲ್ಲಿ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ!! ಪಾಕಿಸ್ತಾನಿ ಹಿಂದೂ ನಿರಾಶ್ರಿತರ ಮನೆಗೆ ವಿದ್ಯುತ್ ಸಂಪರ್ಕವಿಲ್ಲ ಆದರೆ ಬಾಂಗ್ಲಾದೇಶಿ ಮುಸ್ಲಿಂ ಮನೆಯಲ್ಲಿ ಎಸಿ ಫಿಟ್!!

ದೆಹಲಿಯ ಮಾಲಿಕ ಕೇಜ್ರಿವಾಲರ ಮುಸ್ಲಿಂ ಪ್ರೀತಿ ಮತ್ತೊಮ್ಮೆ ಅನಾವರಣಗೊಂಡಿದೆ. ಆಪ್ ಪಕ್ಷದ ಬಂಡಾಯ ನಾಯಕ ಕಪಿಲ್ ಮಿಶ್ರಾ ಅವರು ಕೇಜ್ರಿವಾಲ್ ಮೇಲೆ ಹಿಂದೂ ಮತ್ತು ಮುಸ್ಲಿಮ್ ನಿರಾಶ್ರಿತರಲ್ಲಿ ತಾರತಮ್ಯ ಎಸಗುತ್ತಿರುವ ಆರೋಪ ಹೊರಿಸಿದ್ದಾರೆ. ಪಾಕಿಸ್ತಾನದಿಂದ ಬಂದ ಹಿಂದೂ ನಿರಾಶ್ರಿತರ ಕೇರಿಯಲ್ಲಿರುವ ಏಕೈಕ ವಿದ್ಯುತ್ ಸಂಪರ್ಕವನ್ನೂ ದೆಹಲಿ ಸರಕಾರ ಕಿತ್ತು ಹಾಕಿದೆ ಎಂದು ಅವರು ದೆಹಲಿ ಸರಕಾರದ ಒಡೆದು ಆಳುವ ನೀತಿಗೆ ಕನ್ನಡಿ ಹಿಡಿದಿದ್ದಾರೆ.

ಧರ್ಮ ಉಳಿಸುವ ಸಲುವಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದ ಸುಮಾರು 600 ಹಿಂದೂ ನಿರಾಶ್ರಿತರು, ಅದರಲ್ಲಿ 140 ಮಕ್ಕಳು ಮತ್ತು 7 ಶಿಶುಗಳು ರಾಷ್ಟ್ರೀಯ ರಾಜಧಾನಿಯ ಆದರ್ಶ ನಗರ ಪುನರ್ವಸತಿ ಶಿಬಿರದಲ್ಲಿ ವಾಸಿಸುತ್ತಿದ್ದಾರೆ. 2013ರಲ್ಲಿ ಈ ಇಡಿಯ ಕೇರಿಗೆ ಒಂದೆ ಒಂದು ವಿದ್ಯುತ್ ಸಂಪರ್ಕ ಒದಗಿಸಲಾಗಿತ್ತು. ಆದರೆ ಈಗ ಕೇಜ್ರಿವಾಲ್ ಸರಕಾರ ಕೇರಿಯಲ್ಲಿದ್ದಂತಹ ಒಂದೆ ಒಂದು ವಿದ್ಯುತ್ ಸಂಪರ್ಕವನ್ನೂ ಕಡಿದು ಹಾಕಿದ್ದರಿಂದ ಕಳೆದ ಇಪ್ಪತ್ತನಾಲ್ಕು ದಿನಗಳಿಂದ ನಿರಾಶ್ರಿತ ಹಿಂದೂಗಳ ಬಾಳಿನಲ್ಲಿ ಕತ್ತಲು ತುಂಬಿದೆ. ಆದರೆ ಅದೆ ಆದರ್ಶ ನಗರದಲ್ಲಿ ರಸ್ತೆಯ ಆಚೆ ಬದಿ ವಾಸಿಸುತ್ತಿರುವ ಬಾಂಗ್ಲಾ ನಿರಾಶ್ರಿತರ ಮನೆಯಲ್ಲಿ ಎಸಿಗಳನ್ನು ಫಿಟ್ ಮಾಡಲಾಗಿದೆ!

ಒಂದೆ ರಸ್ತೆಯ ಎರಡು ಬದಿಯಲ್ಲಿ ಎದುರು ಬದುರು ಇರುವ ಹಿಂದೂ ಮತ್ತು ಮುಸ್ಲಿಮರ ಕೇರಿಗಳಲ್ಲಿ ಈ ರೀತಿಯ ತಾರತಮ್ಯ ಮಾಡುತ್ತಿರುವುದು ಕೇಜ್ರಿವಾಲರ ಹಿಂದೂ ದ್ವೇಷ ಮತ್ತು ಮುಸ್ಲಿಂ ವೋಟ್ ಬ್ಯಾಂಕ್ ಓಲೈಕೆಗೆ ಪ್ರತ್ಯಕ್ಷ ಸಾಕ್ಷಿ. ಇಂಥವರು ದೇಶದ ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ. ಇವರ ಕೈಯಲ್ಲಿ ದೇಶದ ಚುಕ್ಕಾಣಿ ಕೊಟ್ಟರೆ ಹಿಂದೂಗಳ ಗತಿ ಏನಾಗಬಹುದು? ಒಂದೆಡೆ ಭಾಜಪ ಶಾಸನವಿರುವ ಉತ್ತರ ಪ್ರದೇಶ, ಗುಜರಾತ್, ಛತ್ತಿಸ್ ಗಢ, ಮಧ್ಯ ಪ್ರದೇಶ ಸರಕಾರಗಳು ಪಾಕಿಸ್ತಾನ ಮತ್ತು ಬಾಂಗ್ಲಾ ದೇಶದ ಹಿಂದೂ ನಿರಾಶ್ರಿತರಿಗೆ ಭಾರತೀಯ ಪೌರತ್ವ ಕೊಡುತ್ತಿವೆ. ಮತ್ತೊಂದೆಡೆ ಮಮತಾ, ಪಿಣರಾಯಿ, ಕೇಜ್ರಿವಾಲ್, ಸಿದ್ದ, ಮುಲಾಜು ಮುಖ್ಯಮಂತ್ರಿ ಸರಕಾರಗಳು ರೋಹಿಂಗ್ಯಾಗಳನ್ನು ಕೆಂಪು ಚಾದರ ಹಾಸಿ ಬರ ಮಾಡಿಕೊಳ್ಳುತ್ತಿವೆ. ಇದೆಲ್ಲವನ್ನು ನೋಡಿದ ಮೇಲೂ ಹಿಂದೂಗಳಿಗೆ ಬುದ್ದಿ ಬರುತ್ತಿಲ್ಲ!

ಕೇಜ್ರಿವಾಲ್ ಸರಕಾರ ಹಿಂದೂ ಮುಸ್ಲಿಮರಲ್ಲಿ ದ್ವೇಷ ಬಿತ್ತುವ ಕೆಲಸ ಕಳೆದ ಮೂರು ವರ್ಷಗಳಿಂದಲೂ ಮಾಡುತ್ತಲೆ ಬಂದಿದೆ. ದೆಹಲಿಯಲ್ಲಿ ಕೇಜ್ರಿವಾಲ್ ಅವರನ್ನು “ಮುಸ್ಲಿಮರ ಮಸೀಹಾ” ಎಂದು ಬರೆದ ಪೋಸ್ಟರ್ ಗಳ ವಿರುದ್ದವೂ ಟೀಕೆ ಎದುರಾಗಿದೆ. ಆಪ್ ಪಕ್ಷದ ಕಾರ್ಯಕರ್ತರು ಮಸೀದಿಯ ಮುಂದೆ ತಲವಾರು ಝಳಪಿಸಿ ಹಿಂದೂ-ಮುಸ್ಲಿಂ ಗಲಾಟೆ ಎಬ್ಬಿಸುವ ಹುನ್ನಾರ ಮಾಡಿದ್ದಾರೆ ಎನ್ನುವ ಆರೊಪಗಳು ಕೂಡಾ ಕೇಳಿ ಬಂದಿವೆ. ಮೇಡಮ್ ಜಿಯ ಬಲ “ಕೈ” ಬಂಟನಾಗಿರುವ ಕೇಜ್ರಿವಾಲ್ ತನ್ನ ಮಾತೆಯ ಅಣತಿಯಂತೆಯೆ ಹಿಂದೂ-ಮುಸ್ಲಿಮರನ್ನು ಎತ್ತಿ ಕಟ್ಟುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇನ್ನಾದರೂ ಹಿಂದೂಗಳು ಎಚ್ಚೆತ್ತುಕೊಳ್ಳಬೇಕು, ಮತದ ಹೆಸರಿನಲ್ಲಿ ದೇಶ ವಿಭಾಜಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವವರನ್ನು ತಿರಸ್ಕರಿಸಬೇಕು.

-ಶಾರ್ವರಿ

Tags

Related Articles

Close