ಪ್ರಚಲಿತ

ಪಾಕ್ ವಿರುದ್ಧ ಬಾಂಬ್ ಸಿಡಿಸಿದ ಗೃಹ ಸಚಿವ! ಮೋದಿ ಸರಕಾರದ ನಡೆಯಿಂದಾಗಿ ನಾಶವಾಗಲಿದೆ ಪಾಕಿಸ್ತಾನ?!

ಭಾರತ ಸದ್ಯ ಯಾವ ರೀತಿಯ ಆಡಳಿತದಲ್ಲಿ ಸಾಗುತ್ತಿದೆ ಎಂಬೂದು ಹೆಚ್ಚು ವಿವರವಾಗಿ ಹೇಳಬೇಕಾಗಿಲ್ಲ. ಯಾಕೆಂದರೆ ನರೇಂದ್ರ ಮೋದಿಯವರ ಕೈಯಲ್ಲಿ ಭಾರತ ಬಲಿಷ್ಠವಾದ ರಾಷ್ಟ್ರವಾಗಿ ಹೊಮ್ಮಲಿದೆ ಎಂಬೂದು ಇಡೀ ಜಗತ್ತಿಗೆ ಈಗಾಗಲೇ ತಿಳಿದಿದೆ. ಸ್ವಾತಂತ್ರ್ಯ ಸಿಕ್ಕ ದಿನದಿಂದಲೇ ಭಾರತದ ವಿರುದ್ಧ ಕತ್ತಿ ಮಸಿಯುತ್ತಿರುವ ರಾಷ್ಟ್ರ ಪಾಕಿಸ್ತಾನ ಕೂಡಾ ಮೋದಿ ನಿರ್ಧಾರಕ್ಕೆ ಇದೀಗ ಸಂಪೂರ್ಣ ಹಿಂದೇಟು ಹಾಕಿ ಮಂಕಾಗಿ ಕುಳಿತಿದೆ.

ಈಗಾಗಲೇ ಗಡಿ ಭಾಗದಲ್ಲಿ ಭಾರತೀಯ ಸೈನಿಕರ ಮೇಲೆ ನಿರಂತರ ಅಪ್ರಚೋದಿತ ದಾಳಿ ನಡೆಸಿ ಭಾರತೀಯ ಸೈನಿಕರನ್ನು ಹತ್ಯೆ ಮಾಡಲು ಹೊಂಚು ಹಾಕುತ್ತಿರುವ ಪಾಕಿಸ್ತಾನಕ್ಕೆ ಭಾರತ ಸ್ಪಷ್ಟ ಸಂದೇಶ ರವಾನಿಸಿದೆ. ಪಾಕಿಸ್ತಾನದ ಗಡಿ ಪ್ರವೇಶಿಸಿ ಪಾಕ್ ಸೈನಿಕರ ಮೇಲೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಗೆ ಪಾಕಿಸ್ತಾನ ಇಂದಿಗೂ ಭಾರತದ ಕಡೆ ಮುಖ ಮಾಡಲು ಭಯಪಡುವಂತಾಗಿದೆ. ಆದರೂ ನರಿ ಬುದ್ದಿ ಬಿಡದ ಪಾಕಿಸ್ತಾನ ತನ್ನ ದೇಶದಲ್ಲಿ ಉಗ್ರರನ್ನು ಪೋಷಣೆ ಮಾಡುತ್ತಾ ಭಾರತದ ವಿರುದ್ಧ ಭಯೋತ್ಪಾದಕ ಕೃತ್ಯ ಎಸಗಲು ಹೊಂಚು ಹಾಕುತ್ತಿದೆ.

ಕಾಶ್ಮೀರ ವಿಚಾರವಾಗಿ ಪಾಕ್ ಗೆ ಎಚ್ಚರಿಸಿದ ಮೋದಿ ಟೀಂ..!

ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಇರಿಸು ಮುರಿಸು ಉಂಟಾಗಿರುವುದೇ ಕಾಶ್ಮೀರದಿಂದ. ಕಾಶ್ಮೀರ ಭಾರತದ ಪಾಲಿಗೆ ಭೂಲೋಕ ಸ್ವರ್ಗ. ಇದು ಎಂದಿಗೂ ಭಾರತದ ಭೂಪಟದಲ್ಲಿಯೇ ಇರಬೇಕು ವಿನಃ ಪಾಕಿಸ್ತಾನಕ್ಕಲ್ಲ. ಆದರೆ ಕಾಶ್ಮೀರ ತಮ್ಮ ಭೂಭಾಗ ಎಂದು ಖ್ಯಾತೆ ತೆರೆದುಕೊಂಡು ಬರುವ ಪಾಕಿಸ್ತಾನ ಪದೇ ಪದೇ ತಮ್ಮ ಹಳೇ ಛಾಳಿಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಆದರೆ ಇದೀಗ ಹಿಂದೆಂದಿಗಿಂತಲೂ ಸ್ಪಷ್ಟವಾಗಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿರುವ ಗೃಹ ಸಚಿವ ರಾಜನಾಥ್ ಸಿಂಗ್ , ಪಾಕಿಸ್ತಾನ ಇನ್ನೇನಾದರು ಕಾಶ್ಮೀರದ ವಿಚಾರದಲ್ಲಿ ಮೂಗು ತೂರಿಸಿಕೊಂಡು ಬಂದಿದ್ದೇ ಆದಲ್ಲಿ ಪಾಕಿಸ್ತಾನ ಸಂಪೂರ್ಣ ನಾಶವಾಗಲಿದೆ. ಭಾರತ ಈಗಾಗಲೇ ಇದಕ್ಕೆ ಬೇಕಾದ ಎಲ್ಲಾ ತಯಾರಿ ನಡೆಸಿದೆ ಎಂದು ಉಗ್ರ ಸಂದೇಶ ರವಾನಿಸಿದ್ದಾರೆ.

ಪ್ರಧಾನಿ ಮೋದಿ ಈಗಾಗಲೇ ವಿಶ್ವದ ಮುಂದೆ ಪಾಕಿಸ್ತಾನವನ್ನು ಉಗ್ರರಾಷ್ಟ್ರ ಎಂದು ಬಿಂಬಿಸಿದ್ದು, ಜಗತ್ತನ ಬಲಿಷ್ಠ ರಾಷ್ಟ್ರಗಳು ಮೋದಿ ಮಾತಿಗೆ ತಲೆದೂಗಿದ್ದಾರೆ‌. ಪಾಕಿಸ್ತಾನವನ್ನು ಜನತ್ತಿನ ಮುಂದೆ ಮೂಲೆಗುಂಪುಮಾಡುವಲ್ಲಿ ಯಶಸ್ವಿಯಾದ ಮೋದಿ ಇದೀಗ ಮತ್ತೊಮ್ಮೆ ಪಾಕಿಸ್ತಾನದ ವಿರುದ್ಧ ಬಾಣ ಹೂಡಿದ್ದಾರೆ.

ಕಾಶ್ಮೀರದ ಸಮಸ್ಯೆ ನಮ್ಮ ಸಮಸ್ಯೆ..!

ಕಾಶ್ಮೀರವನ್ನು ಭಾರತ ಈವರೆಗೂ ಬೇರೆ ಎಂದು ಕಾಣಲಿಲ್ಲ, ಇನ್ನು ಮುಂದೆಯೂ ಕಾಣುವುದಿಲ್ಲ. ಕಾಶ್ಮೀರದಲ್ಲಿ ಏನೇ ಸಮಸ್ಯೆ ಆದರೂ ಅದು ನಮ್ಮ ಎಲ್ಲರ ಸಮಸ್ಯೆ ಎಂದ ರಾಜನಾಥ್ ಸಿಂಗ್ , ಕಾಶ್ಮೀರ ಸರಕಾರದ ಜೊತೆ ಈಗಾಗಲೇ ಎಲ್ಲಾ ಮಾತುಕತೆ ನಡೆಸಿದ್ದು ಸಂಪೂರ್ಣವಾಗಿ ಕಾಶ್ಮೀರವನ್ನು ಪಿಡುಗು ಮುಕ್ತ ರಾಜ್ಯವನ್ನಾಗಿ ಮಾಡಲು ಪಣ ತೊಟ್ಟಿದ್ದಾರೆ. ಕಾಶ್ಮೀರದ ಎಲ್ಲಾ ವರ್ಗದ ಜನರ ಜೊತೆಗೂ ಕೇಂದ್ರ ಸರಕಾರ ಮಾತುಕತೆ ನಡೆಸಲಿದೆ. ಜನರು
ಯಾವುದೇ ಕಪಟ ಮಾತಿಗೆ ಕಿವಿಗೊಡದೆ ಕೇಂದ್ರ ಸರಕಾರದ ಜೊತೆ ಕೈಜೋಡಿಸಬೇಕು ಎಂದು ಹೇಳಿಕೊಂಡ ರಾಜನಾಥ್ ಸಿಂಗ್ , ಪಾಕಿಸ್ತಾನಕ್ಕೆ ಕಾಶ್ಮೀರದ ಮೇಲೆ ಯಾವುದೇ ಅಧಿಕಾರ ಸಾಧಿಸಲು ಭಾರತ ಬಿಡುವುದಿಲ್ಲ ಎಂದು ಮತ್ತೊಮ್ಮೆ ಖಾರವಾಗಿ ನುಡಿದರು.!

ರಾಷ್ಟ್ರ ರಾಜಧಾನಿಯಲ್ಲಿ ಸಿ ಎನ್ ಎನ್ ನ್ಯೂಸ್೧೮ ಏರ್ಪಡಿಸಿದ್ದ ರೈಸಿಂಗ್ ಇಂಡಿಯಾದಲ್ಲಿ ಮಾತನಾಡಿದ ರಾಜನಾಥ್ ಸಿಂಗ್ ನೇರವಾಗಿ ಪಾಕಿಸ್ತಾನದ ವಿರುದ್ಧವೇ ಕೆಂಡಕಾರಿದ್ದಾರೆ. ಈಗಾಗಲೇ ಪಾಕಿಸ್ತಾನ ಮತ್ತು ಭಾರತದ ಸಂಬಂಧ ಸಂಪೂರ್ಣ ಹದಕೆಟ್ಟಿದ್ದು, ಭಾರತ ಗೃಹ ಸಚಿವರ ಈ ಎಚ್ಚರಿಕೆ ಯಿಂದ ಇನ್ನೇನಾದರು ಪಾಕಿಸ್ತಾನ ತನಯ ನರಿ ಬುದ್ದಿ ಪ್ರದರ್ಶಿಸಿದ್ದೇ ಆದಲ್ಲಿ ಪಾಕಿಸ್ತಾನ ಸಂಪೂರ್ಣ ನೆಲಸಮವಾಗುವುದು ಖಂಡಿತ..!

-ಅರ್ಜುನ್

Tags

Related Articles

Close