ಒಂದಲ್ಲ ಒಂದು ವಿಚಾರದಲ್ಲಿ ನರಿ ಬುದ್ಧಿಯನ್ನು ತೋರಿಸುತ್ತಿರುವ ಪಾಕಿಸ್ತಾನಕ್ಕೆ ಪದೇ ಪದೇ ಅವಮಾನವಾಗುತ್ತನೇ ಇದೆ!! ಪಾಪಿ ಪಾಕಿಸ್ತಾನಕ್ಕೆ ಎಲ್ಲಾ ರಾಷ್ಟ್ರಗಳು ತಕ್ಕ ಬುದ್ಧಿಯನ್ನು ಕಲಿಸಿದರು ಸಹ ಮತ್ತೆ ಮತ್ತೆ ತನ್ನ ಕುತಂತ್ರ ಬುದ್ಧಿಯನ್ನು ತೋರಿಸುತ್ತನೇ ಇದೆ!! ಭಾರತದ ಅವಿಭಾಜ್ಯ ಅಂಗವಾಗಿರುವ ಕಾಶ್ಮೀರದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಪಾಕಿಸ್ತಾನ ವಿರುದ್ಧ ವಿಶ್ವಸಂಸ್ಥೆಯಲ್ಲಿ ಭಾರತ ವಾಗ್ದಾಳಿ ನಡೆಸಿದೆ!! ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾದರೂ ಪಾಕಿಸ್ತಾನ ಮಾತ್ರ ಪದೇ ಪದೇ ಕಾಶ್ಮೀರ ಬಗ್ಗೆ ಕ್ಯಾತೆ ತೆಗೆಯುತ್ತಿರುವುದರಿಂದ ಈ ಬಾರಿ ಮತ್ತೆ ಪಾಪಿ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆಯಲ್ಲಿ ಭಾರತ ತಕ್ಕ ಪಾಠ ಕಲಿಸಿದೆ!!
ವಿಶ್ವ ಸಂಸ್ಥೆಯಲ್ಲಿ ಕಾಶ್ಮೀರ ಭಾರತದ್ದೇ ಎಂದು ಪುನರುಚ್ಛರಿಸಿದ ಸಂದೀಪ್ ಕುಮಾರ್!!
ಈಗಾಗಲೇ ಆ ಪಾಪಿ ಪಾಕಿಸ್ತಾನದ ಜೊತೆ ಸಂಗಡದಲ್ಲಿದ್ದ ಕೆಲ ರಾಷ್ಟ್ರಗಳು ಕೂಡಾ ಪಾಕ್ನ ನರಿ ಬುದ್ಧಿ ನೋಡಿ ದೂರ ಸರಿಯುತ್ತಿವೆ!! ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ, ಪಾಕಿಸ್ತಾನದ ಸತ್ವವಿಲ್ಲದ ಹೇಳಿಕೆಗಳು, ಖಾಲಿ ವಾಖ್ಚಾತುರ್ಯ ವಾಸ್ತವವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತ ಸ್ಪಷ್ಟನೆಯನ್ನು ನೀಡಿದ್ದು, ಪಾಕಿಸ್ತಾನ ನಾಟಕವನ್ನು ವಿಶ್ವದೆದುರು ಮತ್ತೊಮ್ಮೆ ಬಹಿರಂಗಪಡಿಸಿದೆ!! ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರತಿಕ್ರಿಯಿಸುವ ಹಕ್ಕಿನ ಸಂದರ್ಭದಲ್ಲಿ ಮಾತನಾಡಿದ ಭಾರತದ ವಿಶ್ವಸಂಸ್ಥೆಯ ಕಾರ್ಯದರ್ಶಿ ಸಂದೀಪ್ ಕುಮಾರ್ ಬಯ್ಯಾಪು ಅವರು ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಮತ್ತು ಅತೀಮುಖ್ಯ ಭಾಗ ಎಂಬುವುದನ್ನು ಪುನರುಚ್ಚರಿಚ್ಚಿಸಿದ್ದಾರೆ!! ಪಾಕಿಸ್ತಾನದ ಯಾವುದೇ ಪ್ರಮಾಣದ ಟೊಳ್ಳು ವಾಕ್ಚಾತುರ್ಯ ಈ ಸತ್ಯವನ್ನು ಬದಲಾಯಿಸದು ಎಂದಿದ್ದಾರೆ!! ಕಾಶ್ಮೀರದ ವಿರುದ್ಧ ನಿರಂತರ ಸುಳ್ಳು ಸುದ್ದಿಗಳನ್ನು ಹರಡುತ್ತಿರುವ ಭಾರತದ ವಿರುದ್ಧ ಸುಳ್ಳು ಪ್ರಚಾರ ಮಾಡಲು ಒಂದು ನಿಯೋಗ ವಿಶ್ವಸಂಸ್ಥೆಯ ವೇದಿಕೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಭಾರತ ಪಾಕಿಸ್ತಾನಕ್ಕೆ ವಿರುದ್ಧ ದೂರಿದೆ!!
ದಾಖಲೆ ಸಹಿತ ಜಮ್ಮು ಕಾಶ್ಮೀರ ಭಾರತ ಅವಿಭಾಜ್ಯ ಮತ್ತು ಅನಿವಾರ್ಯವಾದ ಅಂಗ. ಪಾಕಿಸ್ತಾನದ ಬುಟಾಟಿಕೆಯ ಹೇಳಿಕೆಗಳು ಕಾಶ್ಮೀರವನ್ನು ಭಾರತದಿಂದ ದೂರಮಾಡಲು ಸಾಧ್ಯವಿಲ್ಲ ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲೇ ಭಾರತದ ಕಾರ್ಯದರ್ಶಿ ಸಂದೀಪಕುಮಾರ ಬೈಯಪ್ಪು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ.
1 delegation has yet again misused the platform to made an unwarranted reference to the Indian state of J&K: India during right to reply at UNGA General Debate on responsibility to Protect and the Prevention of Genocide, War Crimes, Ethnic Cleansing and Crimes against Humanity pic.twitter.com/QKQTMRhlD8
— ANI (@ANI) June 26, 2018
ಪಾಕಿಸ್ತಾನದ ವಿರುದ್ಧ ಛಾಟಿ ಬೀಸಿರುವ ಬೈಯಪ್ಪು ಅವರು, ಜಮ್ಮು ಕಾಶ್ಮೀರದ ವಿಷಯದಲ್ಲಿ ಪಾಕಿಸ್ತಾನ ಸುಳ್ಳುಗಳನ್ನು ಹರಡುತ್ತಲೆ ದಿನದೂಡುತ್ತಿದೆ. ಭಾರತ ವಿರೋಧಿ ನೀತಿಯನ್ನು ಜಮ್ಮು ಕಾಶ್ಮೀರದ ವಿಷಯದ ಮೂಲಕ ದುರ್ಬಳಕೆ ಮಾಡಿಕೊಳ್ಳುತ್ತಿದ್ದೆ. ಭಾರತ ಜಮ್ಮು ಕಾಶ್ಮೀರದಲ್ಲಿ ಅಪರಾಧ ಪ್ರಕರಣಗಳನ್ನು ನಿಯಂತ್ರಿಸುತ್ತಿದೆ ಹೀಗಾಗಿ ಶಾಂತಿ ನೆಲೆಸುತ್ತಿದೆ. ಆದರೆ ಪಾಕಿಸ್ತಾನ ವಿನಾಕಾರಣ ಸುಳ್ಳುಗಳನ್ನು ಹರಡುತ್ತಾ ದ್ವೇಷ ಕಾರುತ್ತಿದೆ ಎಂದು ಖಡಕ್ ಸಂದೇಶವನ್ನು ವಿಶ್ವಸಮುದಾಯಕ್ಕೆ ನೀಡಿದ್ದಾರೆ.
ಇದೀಗಾಗಲೇ ಜಮ್ಮು ಕಾಶ್ಮೀರದಲ್ಲಿ ಪಿಡಿಪಿಯೊಂದಿಗಿನ ಮೈತ್ರಿಯನ್ನು ಬಿಜೆಪಿ ಕಡಿದುಕೊಂಡ ಕೆಲ ದಿನಗಳ ನಂತರ ಕಣಿವೆ ರಾಜ್ಯದಲ್ಲಿ ಮಹತ್ತರ ಬದಲಾವಣೆಗಳಾಗುತ್ತಿದ್ದು, ಇಡೀ ದೇಶ ಮೂಗಿನ ಮೇಲೆ ಬೆರಳಿಡುವಂತಾಗಿದೆ!! ಈಗಾಗಲೇ ಭಯೋತ್ಪಾದಕರನ್ನು ನಿಯಂತ್ರಿಸುತ್ತಿರುವ ನಮ್ಮ ಸೇನೆಯಿಂದಾಗಿ ಪ್ರಸ್ತುತ ನಡೆಸುತ್ತಿರುವ ಕಾರ್ಯಚರಣೆಗಳಿಂದ ಇಡೀ ದೇಶವೇ ಸಂತಸವನ್ನು ವ್ಯಕ್ತ ಪಡಿಸಿದೆ!! ಇದೀಗ ವಿಶ್ವಸಂಸ್ಥೆಯಲ್ಲೂ ಪಾಕಿಸ್ತಾನದ ಮಾನವನ್ನು ಹರಾಜಿಗೆ ಹಾಕುವ ಮೂಲಕ ಭಾರತ ತನ್ನ ಅಂತಸತ್ವವನ್ನು ಕಾಪಾಡಿಕೊಂಡು ಮುನ್ನಡಿ ಇಡುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರಿದರೇ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ಕಲ್ಪಿಸಿರುವ 370 ಕಾಯಿದೆ ತೆಗೆದು ಹಾಕುವ ದಿನಗಳು ದೂರವಿಲ್ಲ ಎಂಬುವು ಎಲ್ಲರ ಆಶಯವಾದರೆ ಮತ್ತೊಂದು ಕಡೆಯಲ್ಲಿ ಪಾಕಿಸ್ತಾನಕ್ಕೆ ಅವಮಾನದ ಮೇಲೆ ಅವಮಾನವಾಗುವುದು ನೋಡುತ್ತಿದ್ದರೆ ಮುಂದೆ ಚಿಪ್ಪೇ ಗತಿ ಅನಿಸುತ್ತಿದೆ!! ಇಷ್ಟಾದರೂ ತನ್ನ ನರಿ ಬುದ್ಧಿಯನ್ನು ಬಿಟ್ಟು ಮುಂದೆ ತನ್ನಷ್ಟಕ್ಕೆ ತಾನಿದ್ದು, ಉಗ್ರರನ್ನು ಸಲಹುದನ್ನೂ ದೂರ ಮಾಡಿದರೆ ಪಾಪಿ ಪಾಕಿಸ್ತಾನಕ್ಕೆ ಒಂದು ನೆಲೆ ಸಿಗಬಹುದು ಇಲ್ಲವಾದಲ್ಲಿ ಮಾತ್ರ ಯಾವ ದೇಶವೂ ಪಾಕಿಸ್ತಾನವನ್ನು ಕ್ಯಾರೇ ಮಾಡಲ್ಲ!!
ಈ ಹಿಂದೆಯೂ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನದ ಭಯೋತ್ಪಾದನೆಯ ಕರಾಳ ಮುಖವನ್ನು ವಿಶ್ವಸಂಸ್ಥೆಯ ಎದುರೇ ಪಾಕ್ಗೆ ಮುಖಭಂಗ ಮಾಡಿದ್ದರು ಇದೀಗ ಈಗಾಗಲೇ ಪಾಕಿಸ್ತಾನದ ಹಣೆಬರಹ ಇಡೀ ರಾಷ್ಟ್ರಕ್ಕೆ ತಿಳಿದಿದ್ದು ವಿಶ್ವದ ದೊಡ್ಡಣ್ಣ ಸೇರಿದಂತೆ ಪಾಕಿಸ್ತಾನದ ಮಿತ್ರ ರಾಷ್ಟ್ರವಾದ ಚೀನಾ ಕೂಡಾ ಪಾಕ್ನಿಂದ ದೂರಸರಿಯುತ್ತಿರುವ ನೋಡುತ್ತಿದ್ದರೆ ಕ್ರಮೇಣ ಮೂಲೆಗುಂಪಾಗಿರುವ ಪಾಕ್ ಮುಂದೊಂದು ದಿನ ಯಾರಿಗೂ ಬೇಡವಾಗದ ರಾಷ್ಟ್ರವಾಗುತ್ತದೆ ತುಂಬಾ ಸನಿಹದಲ್ಲಿದೆ ಎಂದನಿಸುತ್ತದೆ!!
source: news13.in
- ಪವಿತ್ರ