ಪ್ರಚಲಿತ

ನಂಬಿದ ಹೆಣ್ಮಗಳಿಗೇ ಜೀವ ಬೆದರಿಕೆ ಒಡ್ಡಿದ ಪ್ರಿಯಾಂಕಾ ವಾದ್ರಾ ಆಪ್ತ: ಕಾಂಗ್ರೆಸಿಗರೇ.. ಇದೇನ ಸಂಸ್ಕೃತಿ, ಇದೇನ ಸಭ್ಯತೆ?

ಕಾಂಗ್ರೆಸ್ ನಾಯಕರಿಗೆ, ಅವರ ಹಿಂಬಾಲಕರಿಗೆ ಬೇರೆಯವರನ್ನು ಹೆದರಿಸಿ, ಬೆದರಿಸಿಯೇ ಬದುಕುವುದು ರೂಢಿಯಾಗಿದೆ ಎಂದೆನಿಸುತ್ತಿದೆ.

ಇದೀಗ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಆಪ್ತ ಸಹಾಯಕ ತನಗೆ ಬೆದರಿಕೆ ಒಡ್ಡಿದ್ದಾರೆ ಎಂಬುದಾಗಿ ಬಿಗ್ ಬಾಸ್ ಕಂಟಸ್ಟಂಟ್ ಆಗಿದ್ದ ಅರ್ಚನಾ ಗೌತಮ್ ಎಂಬವರು ಆರೋಪಿಸಿದ್ದಾರೆ. ಪ್ರಿಯಾಂಕಾ ವಾದ್ರಾ ಅವರ ಆಪ್ತ ಸಹಾಯಕ ಸಂದೀಪ್ ಸಿಂಗ್ ಎಂಬಾತನ ಮೇಲೆ ಅರ್ಚನಾ ಅವರು ಮೀರತ್‌ನ ಪರ್ತಾಪುರ್ ಪೊಲೀಸ್ ಠಾಣೆಯಲ್ಲಿ ‌ದೂರು ದಾಖಲಿಸಿದ್ದಾರೆ.

ಸಂದೀಪ್ ಸಿಂಗ್ ತಮ್ಮನ್ನು ನಿಂದಿಸಿ, ಜಾತಿ ನಿಂದನೆ ಮಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಒಡ್ಡಿದ್ದಾಗಿಯೂ ಅರ್ಚನಾ ದೂರಿನಲ್ಲಿ ತಿಳಿಸಿದ್ದಾರೆ. ಪ್ರಿಯಾಂಕಾ ಗಾಂಧಿ ಅವರು ಛತ್ತೀಸ್‍ಘಡ್ ನ ರಾಯಪುರದಲ್ಲಿ ನಡೆಯುವ ಕಾಂಗ್ರೆಸ್ ಸಮಾವೇಷಕ್ಕೆ ಅರ್ಚನಾ ಅವರನ್ನೂ ಆಹ್ವಾನಿಸಿದ್ದರು. ಅವರ ಆಹ್ವಾನದ ಮೇರೆಗೆ ತೆರಳಿದ್ದ ಅರ್ಚನಾ ಅವರು ಸಂದೀಪ್ ಸಿಂಗ್‌ಗೆ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿ ಮಾಡಿಸುವಂತೆ ಮನವಿ ಮಾಡಿದ್ದಾರೆ. ಆದರೆ ಈ ಸಂದರ್ಭದಲ್ಲಿ ಸಂದೀಪ್ ತಮ್ಮನ್ನು ಬೇಡದ ಶಬ್ದಗಳನ್ನು ಬಳಸಿ ನಿಂದಿಸಿ, ಜಾತಿ ನಿಂದನೆ ಮಾಡಿ, ಕೊಲೆ ಬೆದರಿಕೆ ಸಹ ಒಡ್ಡಿದ್ದಾಗಿ ಅರ್ಚನಾ ಆರೋಪ ಮಾಡಿದ್ದಾರೆ.

ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಅವರನ್ನು ನಂಬಿದವರಿಗೂ ಉಳಿಗಾಲ ಇಲ್ಲ. ಕಾಂಗ್ರೆಸ್ ವಿರೋಧಿಗಳಂತೂ ಕಾಂಗ್ರೆಸ್ ಆಡಳಿತದಲ್ಲಿ ಬದುಕುವಂತೆಯೇ ಇಲ್ಲ. ಇಲ್ಲಿ ಕಾಂಗ್ರೆಸ್ ಅನ್ನು ನಂಬಿ ಹೋದ ಹೆಣ್ಣು ಮಗಳಿಗೆಯೇ ಜೀವ ಬೆದರಿಕೆ, ಜಾತಿ ನಿಂದನೆ ಮಾಡುವ ಮೂಲಕ ಕಾಂಗ್ರೆಸ್ ನಂಬಿಕೆಗೆ ಅರ್ಹವಲ್ಲ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ.

ತಮ್ಮ ಹಿಂಬಾಲಕರಿಗೆಯೇ ನ್ಯಾಯ ಒದಗಿಸದ ಕಾಂಗ್ರೆಸ್, ಜನ ಸಾಮಾನ್ಯರಿಗೆ ನ್ಯಾಯ ಒದಗಿಸುವುದು ಸಾಧ್ಯವೇ?

Tags

Related Articles

Close