ಪ್ರಚಲಿತ

ಪಾಕ್ ಉಗ್ರರ ಎದೆಗೆ ಗುಂಡಿಟ್ಟ ಕನ್ನಡದ ಗಂಡು..!! ಶೌರ್ಯ ಮೆರೆದ ಕರುನಾಡ ಯೋಧ!!

ಇಡೀ ದೇಶವನ್ನು ಕಾಯುತ್ತಿರುವ ಸೈನಿಕರಿಗೆ ನಮ್ಮ ಕಡೆಯಿಂದ ಎಷ್ಟೇ ಸಲಾಂ ಹೇಳಿದರು ಅದು ಕಡಿಮೆಯೇ. ಯಾಕೆಂದರೆ ತಮ್ಮ ಜೀವ – ಜೀವನವನ್ನು ದೇಶಕ್ಕಾಗಿ ಸಮರ್ಪಿಸುವ ವೀರ ಯೋಧರಿಗೆ ಇಡೀ ದೇಶವೇ ತಲೆಬಾಗುತ್ತದೆ. ಎಂತಹ ಪರಿಸ್ಥಿತಿಯಲ್ಲೂ ತಮ್ಮ ಕರ್ತವ್ಯ ಬಿಡದ ಸೈನಿಕರು ಇಡೀ ದೇಶವನ್ನು , ದೇಶದ ಜನತೆಯನ್ನು ಶತ್ರು ರಾಷ್ಟ್ರಗಳಿಂದ ರಕ್ಷಿಸುತ್ತಾರೆ.

ಗಡಿಭಾಗದಲ್ಲಿ ಪದೇ ಪದೇ ಖ್ಯಾತೆ ತೆಗೆಯುತ್ತಿರುವ ಪಾಕಿಸ್ತಾನ ಭಾರತದ ಮೇಲೆ ದಾಳಿ ನಡೆಸಲು ಸಂಚು ರೂಪಿಸುತ್ತಲೇ ಇರುವ ದೇಶ. ಯಾವ ಸಂದರ್ಭದಲ್ಲಿ, ಯಾವ ರೀತಿಯಲ್ಲಿ ದಾಳಿ ನಡೆಸುತ್ತಾರೆ ಎಂಬುದು ಅರಿವಿಲ್ಲದೆ ಮೈಯೆಲ್ಲಾ ಕಣ್ಣಿಟ್ಟು ದೇಶ ಕಾಯುತ್ತಾರೆ. ಶತ್ರುಗಳ ದಾಳಿಗೆ ಎದೆಕೊಟ್ಟು ಹೋರಾಡುವ ಸೈನಿಕರೇ ನಮ್ಮ ಹೆಮ್ಮೆ.!

ಇತ್ತೀಚೆಗೆ ಜಮ್ಮು ಕಾಶ್ಮೀರದ ಕರಣ್ ನಗರಕ್ಕೆ ನುಗ್ಗಿದ ಪಾಕಿಸ್ತಾನಿ ಉಗ್ರ ಸಂಘಟನೆಯಾದ ಲಷ್ಕರ್ – ಎ – ತೋಯಿಬಾ ಭಯೋತ್ಪಾದಕರು ಸ್ಥಳೀಯ ಕಟ್ಟಡವೊಂದರಲ್ಲಿ ಅಡಗಿ ಕುಳಿತು ಭಾರತೀಯ ಸೈನಿಕರ ಮೇಲೆ ದಾಳಿ ನಡೆಸಲು ಹೊಂಚು ಹಾಕಿದ್ದರು. ಭಾರತೀಯ ಯೋಧರ ಕಣ್ತಪ್ಪಿಸಿ ಭಾರತದೊಳಗೆ ಪ್ರವೇಶಿಸಿದ ಪಾಕಿಸ್ತಾನಿ ಭಯೋತ್ಪಾದಕರು ಯೋಧರನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಿದ್ದರು. ದಾಳಿ ನಡೆಯುತ್ತಲೇ ತಕ್ಷಣ ಎಲ್ಲಾ ತಯಾರಿ ನಡೆಸಿದ ಭಾರತೀಯ ಸೇನೆ ಇಂತಹ ಅಪಾಯಕಾರಿ ಹಾಗೂ ಅನಿರೀಕ್ಷಿತ ದಾಳಿಯಿಂದ ಕಂಗೆಡಲಿಲ್ಲ. ಕೂಡಲೇ ಭಾರತದ ಸಿ.ಆರ್.ಪಿ‌.ಎಫ್ ಯೋಧರು ತಕ್ಕ ಉತ್ತರ ನೀಡಿ ಪಾಕಿಸ್ತಾನದ ಭಯೋತ್ಪಾದಕರನ್ನು ಹೆಡೆಮುರಿಕಟ್ಟಿದ್ದಾರೆ.!

ಇಡೀ ದೇಶ ಯಾವುದೇ ಖುಷಿ ಸಂತೋಷದಿಂದ ಇದ್ದರೂ ಸೈನಿಕರು ಮಾತ್ರ ದೇಶ ಕಾಯುತ್ತಾ ತಮ್ಮ ಜೀವನವನ್ನೇ ಭಾರತಾಂಬೆಯ ಪಾದಕ್ಕೆ ಮುಡಿಪಾಗಿಡುತ್ತಾರೆ. ಇಂತಹ ವೀರ ಯೋಧರು ಭಾರತೀಯರು ಎಂದು ಹೇಳಿಕೊಳ್ಳುವುದೇ ಭಾರತೀಯರಾದ ನಮಗೆ ಹೆಮ್ಮೆಯ ವಿಚಾರ.!

ದೇಶಕ್ಕಾಗಿ ಸೇವೆ ಸಲ್ಲಿಸುವ ಯೋಧರು ನಮ್ಮ ಜಿಲ್ಲೆಯವರಾದರೆ, ಖುಷಿಗೆ ಪಾರವೇ ಇರುವುದಿಲ್ಲ. ಅದರಲ್ಲೂ ನಮ್ಮದೇ ಊರಿನವರಾದರೆ, ವಾಹ್ ಸ್ವತಃ ನಾವೇ ಸೈನಿಕರು ಎಂಬ ಭಾವನೆ ನಮ್ಮಲ್ಲೂ ಮಾಡುವುದರಲ್ಲಿ ಸಂಶಯವಿಲ್ಲ.!

ಹೌದು, ಇತ್ತೀಚೆಗೆ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ನಡೆದ ಕಾಳಗದಲ್ಲಿ ಭಯೋತ್ಪಾದಕರನ್ನು ಹೆಡೆಮುರಿಕಟ್ಟಿ ನರಕಕ್ಕೆ ಕಳುಹಿಸುವಲ್ಲಿ ಯಶಸ್ವಿಯಾದ ವೀರ ಯೋಧರ ಪೈಕಿ ಒಬ್ಬರು ಮಂಗಳೂರಿನವರಾಗಿದ್ದಾರೆ..!
ಹೌದು ಭಯೋತ್ಪಾದಕರನ್ನು ಯಮಲೋಕಕ್ಕೆ ಅಟ್ಟುವಲ್ಲಿ ಯಶಸ್ವಿಯಾಗಿರುವ ವೀರ ಯೋಧರ ಪೈಕಿ ಒಬ್ಬರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಜುಬೈರ್.

ಸೇನೆಯಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಯಾವುದೇ ಧರ್ಮದ ಅಮಲು ಇರುವುದಿಲ್ಲ ಎಂಬೂದಕ್ಕೆ ಇದುವೇ ಸಾಕ್ಷಿ. ದೇಶದಲ್ಲಿ ಧರ್ಮದ ಹೆಸರಿನಲ್ಲಿ ಕಿತ್ತಾಡುವ ಜನರ ಮಧ್ಯೆಯೇ ಜುಬೈರ್ ಎಂಬ ಮಂಗಳೂರಿನ ಯೋಧ ದೇಶ ಸೇವೆಯನ್ನು ಮಾಡುತ್ತಾ ಧರ್ಮದ ಅಮಲಿನಲ್ಲಿ ಭಾರತವನ್ನು ನಾಶ ಮಾಡಲು ಹೊರಟಿರುವ ಪಾಕಿಸ್ತಾದ ಉಗ್ರ ಸಂಘಟನೆಯ ಭಯೋತ್ಪಾದರಿಗೆ ದಿಟ್ಟ ಉತ್ತರ ನೀಡಿದ್ದಾರೆ.

ನರೇಂದ್ರ ಮೋದಿಯವರು ಅಧಿಕಾರಕ್ಕೆ ಬರುತ್ತಲೇ ಭಾರತೀಯ ಸೇನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಸೇನೆಗೆ ಬೇಕಾದ ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸುವ ಮೂಲಕ ಸೈನಿಕರಿಗೆ ವಿಶೇಷವಾಗಿ ಬೆನ್ನೆಲುಬಾಗಿ ನಿಂತಿದ್ದಾರೆ. ಭಾರತದ ವಿರುದ್ಧ ಕತ್ತಿಮಸಿಯುತ್ತಲೇ ಇರುವ ಪಾಕಿಸ್ತಾನ ಸದ್ಯ ಭಾರತೀಯ ಸೈನಿಕರ ದಿಟ್ಟ ಉತ್ತರಕ್ಕೆ ತತ್ತರಿಸಿದೆ.

ಈ ಹಿಂದೆಯೂ ದಾಳಿಗೆ ಪ್ರತಿದಾಳಿ ನಡೆಸಿದ ಭಾರತ ಪಾಕಿಸ್ತಾನದ ಸೇನಾ ನೆಲೆಗಳನ್ನು ಮತ್ತು ಉಗ್ರ ಅಡಗು ತಾಣಗಾಲನ್ನು ನೆಲಸಮ ಮಾಡಿತ್ತು‌. ಇದರಿಂದಲೇ ಪಾಕಿಸ್ತಾನ ಬಾಲಮುದುಡಿಕೊಂಡು ಕೂತಿತ್ತು. ಇದೀಗ ಮತ್ತು ಹಳೇ ಛಾಳಿ ಮುಂದುವರಿಸಿದ ಪಾಕಿಸ್ತಾನಕ್ಕೆ ಮತ್ತೆ ಭಾರತೀಯ ಯೋಧರು ದಿಟ್ಟ ಉತ್ತರ ನೀಡಿದ್ದಾರೆ. ಈಗಾಗಲೇ ಭಾರತದ ಪ್ರತಿದಾಳಿಗೆ ಕಂಗೆಟ್ಟ ಪಾಕಿಸ್ತಾನಕ್ಕೆ ಮತ್ತೆ ದೊಡ್ಡ ಹೊಡೆತ ಬಿದ್ದಿದೆ.

ಇಂತಹ ಅದೆಷ್ಟೋ ವೀರ ಯೋಧರು ತಮ್ಮ ಸರ್ವಸ್ವವನ್ನೂ ಬಿಟ್ಟು ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜೀವದ ಮೇಲೆ ಭಯ ಇಲ್ಲದೆ ಶತ್ರುಗಳ ಗುಂಡಿನ ದಾಳಿಗೆ ಎದೆಕೊಟ್ಟು ಹೋರಾಡುತ್ತಾರೆ. ಜೈ ಜವಾನ್..!

–ಅರ್ಜುನ್

Tags

Related Articles

Close