ಅಪ್ಪ ಮಗನ ಪಕ್ಷ ಎಂದೇ ಕರೆಸಿಕೊಳ್ಳುತ್ತಿದ್ದ ಜನತಾದಳ (ಜೆಡಿಎಸ್) ಕೂಡಾ ಈ ಬಾರಿ ತನ್ನ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು, ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ತಾವೇ ಕಿಂಗ್ ಮೇಕರ್ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ನೇರವಾಗಿ ಸ್ಪರ್ಧೆಗೆ ಇಳಿದರೆ, ಇತ್ತ ಜೆಡಿಎಸ್ ಕೂಡಾ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ತಾವೂ ಸ್ಪರ್ಧೆ ನೀಡುತ್ತೇವೆ ಎಂದು ಹೇಳಿಕೊಂಡಿದ್ದರು. ಆದರೆ ಇದೀಗ ಜೆಡಿಎಸ್ ನ ಭಾರೀ ಉಪಾಯವೊಂದು ಬಹಿರಂಗವಾಗಿದ್ದು, ರಾಜ್ಯದ ಜನತೆಯ ಮುಂದೆ ತಲೆತಗ್ಗಿಸುವಂತಾಗಿದೆ.!
ತನ್ನ ಅಭ್ಯರ್ಥಿಯನ್ನೇ ಸೋಲಿಸುತ್ತಾರಂತೆ ಕುಮಾರಣ್ಣ..!
ಜೆಡಿಎಸ್ ವರಿಷ್ಠ ದೇವೇಗೌಡರು ಹೇಳಿದಂತೆ ಕೇಳಿಕೊಂಡು ಬರುತ್ತಿದ್ದ ಮಗ ಕುಮಾರಸ್ವಾಮಿ ಪಕ್ಷ ಸಂಘಟಿಸುತ್ತಾ ಅಲ್ಲಲ್ಲಿ ತಮ್ಮ ಸಾಮಾರ್ಥ್ಯ ಏನೆಂಬುದನ್ನು ಪ್ರದರ್ಶಿಸುತ್ತಾ ಬಂದಿದ್ದಾರೆ. ರಾಜ್ಯಾಧ್ಯಕ್ಷನಾಗಿ ಜೆಡಿಎಸ್ ಪಕ್ಷವನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಕುಮಾರಸ್ವಾಮಿ ಇದೀಗ ತನ್ನ ಪಕ್ಷದ ವಿರುದ್ಧವೇ ಪಿತೂರಿ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.!
ಈಗಾಗಲೇ ಅಭ್ಯರ್ಥಿಗಳ ಪಟ್ಟಿ ಘೋಷಣೆಯಾಗಿ , ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆ ನಡೆಯಲಿದೆ. ಜೆಡಿಎಸ್ನಿಂದ ಟಿಕೆಟ್ ಪಡೆದಿದ್ದ ರವಿ ಅವರಿಗೂ ಕುಮಾರಸ್ವಾಮಿ ಅವರಿಗೂ ನಡುವಿನ ಸಂಬಂಧ ಸರಿಯಾಗಿರಲಿಲ್ಲ. ಪಕ್ಷದಲ್ಲಿದ್ದರೂ ಒಳಗೊಳಗೇ ತಂತ್ರ ಹೂಡಿ ರವಿ ಅವರಿಗೆ ಟಿಕೆಟ್ ತಪ್ಪುವಂತೆ ಮಾಡಲು ಕುಮಾರಸ್ವಾಮಿ ಭಾರೀ ಪ್ರಯತ್ನಿಸಿದ್ದರು. ಆದರೆ ಪಕ್ಷದ ಹಿರಿಯನಾಗಿರುವ ದೇವೇಗೌಡರು ಮಾತ್ರ ತನ್ನದೇ ನಿರ್ಧಾರ ಅಂತಿಮ ಎಂದು ಹೇಳಿ ರವಿ ಅವರಿಗೆ ಟಿಕೆಟ್ ನೀಡಿದ್ದರು. ಇದರಿಂದಾಗಿ ಕುಮಾರಸ್ವಾಮಿಗೆ ಭಾರೀ ಅಸಮಧಾನವಾಗಿತ್ತು. ಆದ್ದರಿಂದ ತನ್ನ ಪಕ್ಷದ ಅಭ್ಯರ್ಥಿಯ ವಿರುದ್ಧವೇ ಪಿತೂರಿ ಹೂಡಿರುವ ಸತ್ಯಾಂಶ ಬೆಳಕಿಗೆ ಬಂದಿದೆ..!
ಅಪ್ಪನ ನಿರ್ಧಾರದಿಂದ ಕೋಪಗೊಂಡ ಎಚ್ಡಿಕೆ..!
ಕುಮಾರಸ್ವಾಮಿ ಅವರು ತಾವು ಸೂಚಿಸಿದ್ದ ವ್ಯಕ್ತಿಗೆ ಟಿಕೆಟ್ ನೀಡಬೇಕೆಂದು ಪ್ರಯತ್ನಿಸಿದ್ದರು. ಆದರೆ ದೇವೇಗೌಡರು ಮಾತ್ರ ರವಿ ಅವರಿಗೆ ಟಿಕೆಟ್ ಅಂತಿಮಗೊಳಿಸಿದ್ದರು. ಆದ್ದರಿಂದ ಅಪ್ಪನ ವಿರುದ್ಧವೇ ಕೋಪಗೊಂಡ ಕುಮಾರಸ್ವಾಮಿ ಶಿಡ್ಲಘಟ್ಟ ಶಾಸಕ ರಾಜಣ್ಣ ಅವರಿಗೆ ಪಕ್ಷೇತರನಾಗಿ ಸ್ಪರ್ಧಿಸುವಂತೆ ತಾಕೀತು ಮಾಡಿದ್ದರು. ಯಾಕೆಂದರೆ ರವಿ ಅವರು ಗೆದ್ದರೂ ಕುಮಾರಣ್ಣನಿಗೆ ಯಾವುದೇ ಉಪಯೋಗವಿಲ್ಲ, ಆದ್ದರಿಂದ ಈ ಕ್ಷೇತ್ರದಲ್ಲಿ ರವಿ ಅವರನ್ನು ಸೋಲಿಸುವ ಸಲುವಾಗಿ ರಾಜಣ್ಣ ಅವರನ್ನು ಕಣಕ್ಕಿಳಿಯುವಂತೆ ಆದೇಶಿಸಿದ್ದರು ಎಂಬ ಸತ್ಯಾಂಶ ಬೆಳಕಿಗೆ ಬಂದಿದೆ.
ಮೇಲೂರು ರವಿ ಅವರು ದೇವೇಗೌಡರಿಗೆ ಹಣ ಕೊಟ್ಟು ಟಿಕೆಟ್ ಪಡೆದುಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿರುವ ಕುಮಾರಸ್ವಾಮಿ ಅವರ ಫೋನ್ ಕಾಲ್ ರೆಕಾರ್ಡಿಂಗ್ ಬಹಿರಂಗವಾಗಿದೆ. ರವಿಗೆ ತಮ್ಮ ಪಕ್ಷದಿಂದ ನೀಡುವ ವಿಚಾರವಾಗಿ ಕುಮಾರಸ್ವಾಮಿಗೆ ಅಸಮಧಾನ ಇದ್ದಿದ್ದರಿಂದ ಟಿಕೆಟ್ ನೀಡದಂತೆ ದೇವೇಗೌಡರಿಗೆ ಮೊದಲೇ ಹೇಳಿದ್ದರು. ಆದರೆ ದೇವೇಗೌಡರು ಹಣ ಪಡೆದುಕೊಂಡು ಟಿಕೆಟ್ ಹಂಚಿದ್ದಾರೆ ಎಂದು ಸ್ವತಃ ಮಗ ಕುಮಾರಸ್ವಾಮಿ ಅವರೇ ಇದೀಗ ಹೇಳಿರುವುದರಿಂದ ಜೆಡಿಎಸ್ ಅಭ್ಯರ್ಥಿಗಳನ್ನು ಸೋಲಿಸುವಂತೆ ಕುಮಾರಸ್ವಾಮಿ ಕರೆ ಕೊಟ್ಟಿದ್ದಾರೆ.!
ಈಗಾಗಲೇ ಜೆಡಿಎಸ್ ನಲ್ಲಿ ಟಿಕೆಟ್ ಹಂಚಿಕೆ ವಿಚಾರವಾಗಿ ಭಾರೀ ಕೋಲಾಹಲ ಉಂಟಾಗಿದ್ದು, ಇದೀಗ ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರೇ ತಮ್ಮ ಅಭ್ಯರ್ಥಿಗಳನ್ನು ಸೋಲಿಸುವಂತೆ ಕರೆ ನೀಡಿರುವ ವಿಚಾರ ರಾಜಕೀಯ ವಲಯದಲ್ಲೇ ಹೊಸ ತಿರುವು ಪಡೆದುಕೊಳ್ಳಲಿದೆ..!
–ಅರ್ಜುನ್