ಪ್ರಚಲಿತ

ಪ್ರಕಾಶ್ ರಾಜ್ ಗೆ ಬಹಿರಂಗ ಪತ್ರ ಬರೆದು ಮೈ ಛಳಿ ಬಿಡಿಸಿದ ಮಂಗಳೂರು ನಾರಿ..!

ಹಿಂದೂ ಧರ್ಮದಲ್ಲಿ ಹುಟ್ಟಿ ಹಿಂದೂಗಳ ವಿರುದ್ಧವಾಗಿ ಬಾಯಿ ಬಡಿದುಕೊಳ್ಳುವುದು ಎಂದರೆ ಕೆಲವರಿಗೆ ಅದೆನೋ ಒಂದು ರೀತಿಯ ಛಪಲ. ತಮ್ಮ ಪ್ರಚಾರ ಗಿಟ್ಟಿಸಿಕೊಳ್ಳಲೆಂದೇ ಹಿಂದೂ ಧರ್ಮದ ವಿರುದ್ಧ ಬೊಗಳುತ್ತಾ ಸದ್ಯ ಪ್ರಚಾರದಲ್ಲಿರುವ ಬುಹುಭಾಷಾ ಖಳನಾಯಕ, ಸಿದ್ದರಾಮಯ್ಯನವರ ಸೈಟ್ ಭಾಗ್ಯಕ್ಕಾಗಿ ಜೊಲ್ಲು ಸುರಿಸಿಕೊಂಡು ಕಾಯುತ್ತಿರುವ ಪ್ರಕಾಶ್ ರಾಜ್ ಸದ್ಯ ಒಂದಲ್ಲ ಒಂದು ಹೇಳಿಕೆ ನೀಡಿ ತನ್ನ ಹೆಸರು ಚಾಲ್ತಿಯಲ್ಲಿರುವಂತೆ ಮಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಸದ್ಯ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಬಿಸಿಬಿಸಿ ಚರ್ಚೆಯಾಗುತ್ತಿದ್ದರೆ, ಇತ್ತ ಪ್ರಕಾಶ್ ರಾಜ್ ಮಾತ್ರ ಈ ವಿಚಾರದಲ್ಲೂ ಕಡ್ಡಿ ಅಲ್ಲಾಡಿಸಲು ಬಂದು ತನಗೆ ಇದ್ದ ತೆರೆಮರೆಯ ಮರ್ಯಾದೆಯನ್ನೂ ಹರಾಜಿಗೆ ಇಟ್ಟು ರಾಜ್ಯದ ಜನತೆಯ ಮುಂದೆ ಬೆತ್ತಲಾದ ಘಟನೆ ನಡೆದಿದೆ.

ಆಶ್ಚರ್ಯವೆಂದರೆ ಪ್ರಕಾಶ್ ರಾಜ್ ಗೆ ಇಂತಹ ಅವಮಾನ ಎದುರಾಗುತ್ತಿರುವುದು ಇದೇ ಮೊದಲೇನಲ್ಲಾ. ಈ ಹಿಂದೆಯೂ ಅನೇಕ ಬಾರಿ ಇಂತಹ ಅವಮಾನ ಉಂಟಾಗಿದ್ದರು, ನಾಯಿ ಬಾಲ ಡೊಂಕು ಎಂಬಂತೆ ಪ್ರಕಾಶ್ ರಾಜ್ ಮಾತ್ರ ತನ್ನ ಬುದ್ದಿ ಮುಂದುವರಿಸುತ್ತಲೇ ಬಂದಿದ್ದಾರೆ. ಆದರೆ ನಿನ್ನೆ ನಡೆದ ಘಟನೆಯಿಂದ ಚೀರಾಡುತ್ತಿದ್ದ ಪ್ರಕಾಶ್ ರಾಜ್ ಅವರ ಸುದ್ದಿಯೇ ಸದ್ಯ ಇಲ್ಲದಂತಾಗಿದೆ. ಯಾಕೆಂದರೆ ಟ್ವಿಟ್ಟರ್ ನಲ್ಲಿ ನಡೆದ ಧರ್ಮಯುದ್ಧ ಪ್ರಕಾಶ್ ರಾಜ್ ಅವರು ಬಿಲ ಸೇರುವಂತೆ ಮಾಡಿದೆ ಎಂದರೆ ಯಾವ ಮಟ್ಟಿಗೆ ಅವಮಾನವಾಗಿರಬಹುದು ಎಂಬುದು ಅರಿವಾಗಬಹುದಲ್ಲವೇ..!

ಮಂಗಳೂರಿನ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಅವರ ಪ್ರಚಾರ ಕಾರ್ಯದಲ್ಲಿ ಅವರ ಧರ್ಮಪತ್ನಿ ಹಿಂದೂ ಧರ್ಮದ ಉಳಿವಿಗಾಗಿ ಬಿಜೆಪಿ ಪಕ್ಷ ಅನಿವಾರ್ಯ ಎಂದು ಮತದಾರರ ಬಳಿ ಮತಯಾಚನೆ ನಡೆಸುತ್ತಿದ್ದರು. ಈ ವೇಳೆಯಲ್ಲಿ ಪಕ್ಷದ ಕಾರ್ಯಕರ್ತರು ಈ ಸನ್ನಿವೇಶವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರು. ಈ ವಿಡಿಯೋ ಭಾರೀ ಸುದ್ದೀ ಮಾಡಿತ್ತು. ಆದರೆ ಇದನ್ನು ಕಂಡ ಪ್ರಕಾಶ್ ರಾಜ್ ಗೆ ಅದೇನು ಮೈ ಉರಿಯಿತೋ ಗೊತ್ತಿಲ್ಲ, ತಕ್ಷಣ ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ‘ ನೋಡಿ ನಿಮ್ಮ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯ ಧರ್ಮಪತ್ನಿ ಧರ್ಮದ ಆಧಾರದ ಮೇಲೆ ಜನರ ಬಳಿ ವೋಟು ಕೇಳುತ್ತಿದ್ದಾರೆ ಇವರ ಕೋಮುವಾದಕ್ಕೆ ನಾಚಿಕೆಯಾಗಬೇಕು. ಇದೇನಾ ನಿಮ್ಮ ಸಬ್ ಕಾ ಸಾಥ್ , ಸಬ್ ಕಾ ವಿಕಾಸ್ ” ಎಂದು ಪ್ರಶ್ನಿಸಿ ಲೇವಡಿ ಮಾಡಿದ್ದರು.

ಆದರೆ ಈ ಟ್ವೀಟ್ ಗೆ ಮರು ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ , ಕರ್ನಾಟಕದ ಯುವಕರ ಆದರ್ಶ – ಪ್ರಖರ ವಾಗ್ಮಿ – ಖ್ಯಾತ ಅಂಕಣಕಾರ – ಯುವಾಬ್ರಿಗೇಡ್ ಮಾರ್ಗದರ್ಶಕರಾದ ಶ್ರೀ ಚಕ್ರವರ್ತಿ ಸೂಲಿಬೆಲೆ ಅವರು ,” ಪ್ರಕಾಶ್ ರಾಜ್ ಅವರೇ, ವೇದವ್ಯಾಸ ಕಾಮತ್ ಅವರ ಪತ್ನಿ ಹೇಳಿರುವುದರಲ್ಲಿ ತಪ್ಪೇನಿದೆ.? ಸಿದ್ದರಾಮಯ್ಯನವರು ೫ ವರ್ಷದಲ್ಲಿ ಹಿಂದೂಗಳನ್ನು ಮುಗಿಸಲು ಎಲ್ಲಾ ರೀತಿಯ ದಾರಿಗಳನ್ನು ಅನುಸರಿಸಿದರು, ಪ್ರತ್ಯೇಕ ಧರ್ಮಕ್ಕಾಗಿ ಲಿಂಗಾಯತರನ್ನು ಪ್ರೇರೇಪಿಸಿದರು, ಪಿ.ಎಫ್.ಐ ಸಂಘಟನೆಗೆ ಬೆಂಬಲಿಸಿದರು, ಹಾಗಾಗಿ ಧರ್ಮ ಉಳಿಯಬೇಕೆಂದರೆ ಈ ಮುಖ್ಯಮಂತ್ರಿ ತೊಲಗಲೇಬೇಕು” ಎಂದು ತಿರುಗೇಟು ನೀಡಿದ್ದರು. ಇದರಿಂದ ಪೇಚೆಗೆ ಸಿಲುಕಿದ ಪ್ರಕಾಶ್ ರಾಜ್ ಚಕ್ರವರ್ತಿ ಸೂಲಿಬೆಲೆ ಅವರನ್ನು ತಮ್ಮ ಟ್ವಿಟ್ಟರ್ ನಲ್ಲಿ ಬ್ಲಾಕ್ ಮಾಡಿ , ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಆದರೆ ಅಷ್ಟಕ್ಕೆ ಸುಮ್ಮನಾಗದ ಚಕ್ರವರ್ತಿ ಅದನ್ನೇ ಮತ್ತೆ ತಮ್ಮ ಟ್ವಿಟ್ಟರ್ ನಲ್ಲಿ ಹಾಕಿ #ಜಸ್ಟ್ ಆನ್ಸರಿಂಗ್ ಎಂಬ ಅಡಿಬರಹದೊಂದಿಗೆ ಪ್ರಕಟಿಸಿದ್ದರು. ಚಕ್ರವರ್ತಿಗೆ ಟ್ವಿಟ್ಟರ್ ನಲ್ಲಿ ಅತೀ ಹೆಚ್ಚು ಬೆಂಬಲಿಗರು ಇರುವುದರಿಂದ ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿ,ಪ್ರಕಾಶ್ ರಾಜ್ ಮತ್ತಷ್ಟು ಅವಮಾನಕ್ಕೊಳಗಾಗುವಂತಾಗಿದೆ..!

ಹಿಂದೂ ಧರ್ಮದ ಮತ್ತು ವೇದವ್ಯಾಸ ಕಾಮತ್ ಅವರ ಪತ್ನಿಯ ವಿಚಾರವಾಗಿ ಮಾತನಾಡಿದ ಪ್ರಕಾಶ್ ರಾಜ್ ಅವರಿಗೆ ಇದೀಗ ಮಂಗಳೂರು ಬಿಜೆಪಿ ಮಹಿಳಾ ಮೋರ್ಚಾದ ಸದಸ್ಯೆಯರು ಒಂದಷ್ಟು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ, ನಿಮ್ಮಲ್ಲಿ ಇದಕ್ಕೆ ಉತ್ತರ ಇದ್ದರೆ ಪ್ರತಿಕ್ರಿಯೆ ನೀಡಬಹುದು…ಮಿಸ್ಟರ್!

೧. ಶಾಂತಿಗೆ ಹೆಸರಾಗಿದ್ದ ಮಂಗಳೂರಿನಲ್ಲಿ ಹಾಡುಹಗಲೇ ಹಿಂದೂ ಕಾರ್ಯಕರ್ತರ ಹತ್ಯೆಯಾಗುತ್ತಿದೆ. ಈ ವಿಚಾರವಾಗಿ ಪ್ರಕಾಶ್ ರಾಜ್ ಒಮ್ಮೆಯೂ ತುಟಿ ಬಿಚ್ಚಲಿಲ್ಲ ಏಕೆ..?

೨. ಕೇಸರಿ ಶಾಲು ಹಾಕಿಕೊಂಡು ಹೊರಗಡೆ ಹೋದ ಎಂಬ ಕಾರಣಕ್ಕಾಗಿ ಜಿಹಾದಿಗಳು ಅಟ್ಟಾಡಿಸಿ ಕೊಂದಾಗ ಹೆತ್ತವರು ಕಣ್ಣೀರಲ್ಲೇ ಕೈ ತೊಳೆಯುತ್ತಿರುವಾಗ ನೀವು ಒಂದೂ ಟ್ವೀಟ್ ಅಥವಾ ಹೇಳಿಕೆ ನೀಡಿಲ್ಲವಲ್ಲಾ ಏಕೆ..?

೩. ಗೌರಿ ಲಂಕೇಶ್ ಅವರ ಹತ್ಯೆಯಾದಾಗ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ನಡೆಸಿದ ವೇಳೆ ಸಿದ್ದರಾಮಯ್ಯ ಸರಕಾರ ಶಂಕಿತರ ರೇಖಾ ಚಿತ್ರವನ್ನು ರಚಿಸಿದಾಗ ಅದರಲ್ಲೂ ಅವರ ಹಣೆಗೆ ಕುಂಕುಮ ಇಟ್ಟು ಅದರಲ್ಲೂ ಬೇಕಂತಲೇ ಹಿಂದೂ ಧರ್ಮವನ್ನು ಕೀಳು ಎಂಬಂತೆ ಬಿಂಬಿಸಲು ಹೊರಟರಲ್ಲಾ. ಆವಾಗ ನಿಮ್ಮಲ್ಲಿದ್ದ ಈ ಹಿಂದೂ ಪ್ರೇಮ ಎಲ್ಲಿ ಅಡಗಿ ಹೋಗಿತ್ತು..?

೪. ಲಿಂಗಾಯತ- ವೀರಶೈವ ಧರ್ಮವನ್ನು ಬೇರ್ಪಡಿಸಿ ಸನಾತನ ಹಿಂದೂ ಧರ್ಮವನ್ನೇ ಬೇರ್ಪಡಿಸಲು ಪಣತೊಟ್ಟರಲ್ಲ ನಿಮ್ಮ ಸಿದ್ದರಾಮಯ್ಯನವರು, ಆವಾಗ ನಿಮಗೆ ಸೌಹಾರ್ದತೆ – ಸದ್ಭಾವನೆಗಳು ನೆನಪೇ ಆಗಿಲ್ಲವಲ್ಲಾ ಏಕೆ..?

೫. ಕರಾವಳಿಯ ಉದ್ದಕ್ಕೂ ಲವ್ ಜಿಹಾದ್ ನ ಮೂಲಕ ಹಿಂದೂ ಹೆಣ್ಣು ಮಕ್ಕಳನ್ನು ಅನ್ಯ ಮುಸ್ಲೀಮರು ಅಪಹರಿಸಿಕೊಂಡು ಮತಾಂತರ ಮಾಡಿ , ಹೆಣ್ಣು ಹೆತ್ತವರ ಮನೆಯವರು ಊರಲ್ಲಿ ತಲೆ ಎತ್ತಲಾರದೆ ಕಣ್ಣೀರು ಹಾಕುತ್ತಾ ಕೂತಿರುವಾಗ ನೀವು ಯಾವುದೇ ಹೇಳಿಕೆ ನೀಡಿರಲಿಲ್ಲವಲ್ಲಾ ಏಕೆ..?

೬. ಹಿಂದೂಗಳು ಆರಾಧಿಸಿಕೊಂಡು ಬಂದಿರುವ ಗೋವನ್ನು ಹಟ್ಟಿಯಿಂದಲೇ ಕದ್ದೊಯ್ಯುವ ಗೋಕಳ್ಳರನ್ನು ತಡೆಯಲು ಹೋದ ನಮ್ಮ ಹಿಂದೂ ತರುಣರು ಅದೇ ಕಳ್ಳರ ತಲ್ವಾರು ಏಟಿಗೆ ಬಲಿಯಾದಾಗ , ಅವರ ಹೆತ್ತವರ ಕರುಳಿನ ಕೂಗು ನಿಮಗೆ ಕೇಳಿಸಲೇ ಇಲ್ಲವಲ್ಲಾ ಏಕೆ..?

೭. ಬೆಳೆದು ನಿಂತ ಮಗ ಇನ್ನೇನು ಕೆಲಸಕ್ಕೆ ಸೇರಿ ನಮ್ಮನ್ನೆಲ್ಲಾ ಸಾಕುತ್ತಾನೆ ಎಂದು ಆಸೆಯಿಂದ ಕೂತ ಹೆತ್ತವರಿಗೆ ತಮ್ಮ ಮಗ  ಮಂಗಳೂರಿನಲ್ಲಿ ಮಿತಿ ಮೀರುತ್ತಿರುವ ಮಾದಕ ದ್ರವ್ಯ, ಡ್ರಗ್ ಮಾಫಿಯಾ ಈ ಛಟಕ್ಕೆ ಬಲಿಯಾಗಿದ್ದಾನೆ ಎಂಬ ವಿಚಾರ ತಿಳಿದಾಗ ಹೇಳಲಾರದ ನೋವನುಭವಿಸಿದ ಹೆತ್ತ ತಾಯಿಯ ಕೂಗು ನಿಮಗೆ ಕೇಳಿಸಲೇ ಇಲ್ಲವಲ್ಲಾ ಏಕೆ..?

೮. ಸಂಭ್ರಮದಿಂದ ಪ್ರತೀ ವರ್ಷ ನಡೆಯುತ್ತಿದ್ದ ನಮ್ಮ ಮಂಗಳೂರಿನ ಸಾರ್ವಜನಿಕ ಗಣೇಶೋತ್ಸವಕ್ಕೆ ಇದೇ ಸಿದ್ದರಾಮಯ್ಯ ಸರಕಾರ ೧೦ ಲಕ್ಷ ಬಾಂಡ್ ನೀಡಬೇಕೆಂದು ಆದೇಶ ಹೊರಡಿಸಿತ್ತಲ್ಲವೇ..? ಆವಾಗ ನಿಮ್ಮ ಈ ಆಕ್ರೋಶ ಎಲ್ಲಿ ಕುಂದು ಹೋಗಿತ್ತು..?

೯. ಎಲ್ಲದಕ್ಕೂ ಮಿಗಿಲಾಗಿ, ಮನೆಯಿಂದ ಹೊರ ಹೋದ ಮಗ ಜಿಹಾದಿಗಳ ಅಟ್ಟಹಾಸಕ್ಕೆ ಬಲಿಯಾಗುತ್ತಾನೋ ಅಥವಾ ಪೊಲೀಸರಿಂದ ರೌಡಿ ಶೀಟರ್ ಎಂಬ ಬಿರುದು ಪಡೆಯುತ್ತಾನೋ ಎಂದು ಜೀವ ಕೈಯಲ್ಲಿ ಹಿಡಿದು ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸ್ಥಿತಿಯಲ್ಲಿ ನೀವು ಯಾವುದೇ ಹೇಳಿಕೆ ನೀಡುವುದಿಲ್ಲವಲ್ಲಾ ಏಕೆ..?

೧೦. ಮನೆಯಿಂದ ಹೊರ ಹೋದ ಮನೆ ಮಗಳು ಕ್ಷೇಮವಾಗಿ ಪುನಃ ಮನೆ ಸೇರುತ್ತಾಳೆ ಎಂಬ ಧೈರ್ಯ ಇಲ್ಲದೇ ಕಾಯುತ್ತಿರುವ ತಾಯಿಯ ಬಗ್ಗೆ ಎಂದಾದರೂ ನೀವು ಆಲೋಚನೆಯೂ ಮಾಡಿರಲಿಕ್ಕಿಲ್ಲ ಏಕೆ..?

ಡಿಯರ್ ಪ್ರಕಾಶ್ ರಾಜ್ ಅವರೇ..! ಇವೆಲ್ಲವೂ ನಿಮಗೆ ಯೋಚನೆ ಬಂದಿರಲು ಸಾಧ್ಯ ಇಲ್ಲ. ಯಾಕೆಂದರೆ ಇನ್ನೊಬ್ಬರ ಬಗ್ಗೆ ಕನಿಕರ ತೋರಿಸಿದರೆ ನಿಮಗೆ ಯಾವುದೇ ಪ್ರಚಾರ ಸಿಗುವುದಿಲ್ಲ.

ಪ್ರಚಾರ ಗಿಟ್ಟಿಸಿಕೊಳ್ಳಬೇಕೆಂದರೆ ಪ್ರಧಾನಿ ಮೋದಿಗೆ ಬೈಯ್ಯ ಬೇಕು.!

ಪ್ರಚಾರ ಗಿಟ್ಟಿಸಿಕೊಳ್ಳಬೇಕೆಂದರೆ ಹಿಂದೂ ಧರ್ಮವನ್ನು ನಿಂದನೆ ಮಾಡಬೇಕು..!

ಕಾಶ್ಮೀರದಲ್ಲಿ ಆಸಿಫಾ ಎಂಬ ಹೆಣ್ಣು ಮಗಳ ಕೊಲೆಯಾದಾಗ ರಸ್ತೆಯಲ್ಲಿ ಕ್ಯಾಂಡಲ್ ಹಿಡಿದವರು, ಇಂದು ಗೀತಾ ಎಂಬ ಹೆಣ್ಣು ಮಗಳ ಅತ್ಯಾಚಾರವಾಗಿದೆ. ಇದರ ಬಗ್ಗೆ ಯಾರೊಬ್ಬರೂ ಧ್ವನಿ ಎತ್ತಲೇ ಇಲ್ಲವಲ್ಲಾ ಏಕೆ.? ಸಾವಲ್ಲೂ ಧರ್ಮ ಹುಡುಕುವ ನಿಮಗೆ ಪ್ರಚಾರವೇ ಮುಖ್ಯವಾಯಿತೇ.?

ನೀವು ಕರಾವಳಿಯವರೇ ಎಂಬುದು ನೆನಪಿನಲ್ಲಿರಲಿ ಪ್ರಕಾಶ್ ರಾಜ್, ನೀವೇನಾದರೂ ಕರಾವಳಿಯಲ್ಲಿ ನಾಲ್ಕು ದಿನ ಇದ್ದರೆ ಇಲ್ಲಿನ ಹಿಂದೂಗಳ ಸ್ಥಿತಿ ಅರಿವಾಗಬಹುದು. ಯಾಕೆಂದರೆ ಇಲ್ಲಿ ಕಾಶ್ಮೀರದಲ್ಲಿ ಇರುವ ಹಿಂದೂಗಳ ಸ್ಥಿತಿ ಬಂದು ನಿಂತಿದೆ.!

ಧರ್ಮದ ಬಗ್ಗೆ , ಜಾತಿಯ ಬಗ್ಗೆ ಎಲ್ಲಿ ಮಾತನಾಡಬೇಕೋ ಅಲ್ಲೇ ಮಾತನಾಡಿದರೆ ಉತ್ತಮ . ಯಾಕೆಂದರೆ ಹೆಣ ಮುಂದಿಟ್ಟುಕೊಂಡು ರಾಜಕೀಯ ನಡೆಸುವ ಮನಸ್ಥಿತಿ ನಿಮ್ಮದಾದರೆ , ಸತ್ತ ವ್ಯಕ್ತಿಯ ಮನೆಯವರ ಕಣ್ಣೀರು ಒರೆಸುವ ಮನಸ್ಥಿತಿ ನಮ್ಮದು..!

ಆಲೋಚನೆ ಒಳ್ಳೆಯದಾಗಿದ್ದರೆ ನಡವಳಿಕೆಯೂ ಒಳ್ಳೆಯ ರೀತಿಯಲ್ಲೇ ಇರುತ್ತದೆ.

ಇಂತೀ ,

— ಸ್ಪೂರ್ತಿ ಶೆಟ್ಟಿ

Tags

Related Articles

Close