ಪ್ರಚಲಿತ

ಜಾತ್ಯಾತೀತ ಸೋಗಿನ ಪ್ರಕಾಶ್ ರೈ ಹಾಗೂ ದೊರೆ ಸ್ವಾಮಿಯ ಮುಖವಾಡ ಕಳಚಿಟ್ಟ ನವರಸ ನಾಯಕ!!

ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ಸರಕಾರದ ಹಿಂದೂ ವಿರೋಧಿ ನೀತಿಯಿಂದಾಗಿ ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಸಾಲು ಸಾಲು ಕೊಲೆ ನಡೆಯುತ್ತಿದೆ..! ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರವೇ ಕೊಲೆಗಳಿಗೆ ಕುಮ್ಮಕ್ಕು ನೀಡುತ್ತಿದ್ದು,ಪಕ್ಷದ ಬೆಳವಣಿಗೆಗಾಗಿ ಹಿಂದೂ ಕಾರ್ಯಕರ್ತರನ್ನು ಕೊಲೆ ಮಾಡಲಾಗುತ್ತಿದೆ.

ಇತ್ತೀಚೆಗಷ್ಟೇ ಪತ್ರಕರ್ತೆ ಗೌರಿ ಲಂಕೇಶ್ ಕೊಲೆಯಾಗಿತ್ತು.ಕೊಲೆಯಾದ ಗೌರಿ ಲಂಕೇಶ್ ಸದಾ ಹಿಂದೂ ಧರ್ಮವನ್ನು ಧೂಷಿಸುತ್ತಲೇ ಬಂದವರು.ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದ ಗೌರಿ ಲಂಕೇಶ್ ಹಿಂದೂ ದೇವರುಗಳ ಬಗ್ಗೆ ಬಹಳ ಕೀಳಾಗಿ ಮಾತನಾಡುತ್ತಿದ್ದರು…!! ನಾಸ್ತಿಕವಾದಿಯಾಗಿದ್ದ ಗೌರಿ ಕೊಲೆ ನಡೆಯುತ್ತಲೇ ಬುದ್ದಿಜೀವಿಗಳು ಎನಿಸಿಕೊಂಡವರೆಲ್ಲರೂ ಒಟ್ಟಾಗಿ ಪ್ರತಿಭಟಿಸಿದರು.

ಆದರೆ ವಿಶೇಷವೆಂದರೆ ರಾಜ್ಯದಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರವನ್ನು ಪ್ರಶ್ನಿಸುವ ಬದಲು ನೇರವಾಗಿ ಕೇಂದ್ರದ ಮೋದಿ ಸರಕಾರವನ್ನು ಪ್ರಶ್ನಿಸಿದರು…!! ಈ ಬಗ್ಗೆ ವ್ಯಾಪಕ ಆಕ್ರೋಷವೂ ವ್ಯಕ್ತವಾಯಿತು…!!

ರಾಜ್ಯ ಸರಕಾರದ ಆಡಳಿತ ವೈಫಲ್ಯವನ್ನು ಮುಚ್ಚಿಹಾಕಲು ಬುದ್ಧಿಜೀವಿಗಳು ಪ್ರಯತ್ನಿಸಿದ್ದರು.
ಪ್ರತಿಯೊಬ್ಬರ ಸಾವಿನಲ್ಲೂ ರಾಜಕೀಯ ಮಾಡುತ್ತಿರುವ ಬುದ್ಧಿಜೀವಿಗಳು ಹಿಂದೂ ಕಾರ್ಯಕರ್ತರ ಸರಣಿ ಕೊಲೆಗಳು ನಡೆಯುತ್ತಿದ್ದರೂ ಬಾಯಿ ಬಿಡುತ್ತಿಲ್ಲ…!!

ಇತ್ತೀಚೆಗೆ ನಡೆದ ‘ಗೌರಿ ಡೇ’ ಕಾರ್ಯಕ್ರಮ ಕಾಂಗ್ರೆಸ್ ನ ಸಮಾವೇಶವಾಗಿ ಮಾರ್ಪಟ್ಟಿತ್ತು…! ಬೆಂಗಳೂರಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರಾಜ್ಯ ಸರಕಾರದ ಬಗ್ಗೆ ಯಾವುದೇ ಮಾತನಾಡದ ಬುದ್ಧಿಜೀವಿಗಳು ನರೇಂದ್ರ ಮೋದಿಯವರನ್ನು ಪ್ರಶ್ನಿಸುವ ಮೂಲಕ ರಾಜಕೀಯ ಲಾಭ ಗಿಟ್ಟಿಸಿಕೊಳ್ಳಲು ಪ್ರಯತ್ನಿಸಿದರು…!
ಈ ಕಾರ್ಯಕ್ರಮದಲ್ಲಿ ಮಾತನಾಡಿದ ತನ್ನನ್ನು ತಾನು ಸ್ವಾತಂತ್ರ್ಯ ಹೋರಾಟಗಾರ ಎಂದು ಕರೆಸಿಕೊಳ್ಳುವ ಎಚ್ ಎಸ್ ದೊರೆಸ್ವಾಮಿ ನರೇಂದ್ರ ಮೋದಿಯವರನ್ನು ಬೆಂಗಳೂರಿಗೆ ಬರಲು ಬಿಡಲೇಬಾರದು ಎನ್ನುವ ಮೂಲಕ ಕರ್ನಾಟಕವನ್ನು ಗುತ್ತಿಗೆ ಪಡೆದವರಂತೆ ಮಾತನಾಡಿದರು…! ಈ ಬಗ್ಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಯಿತು…!!

https://postcardkannada.com/pc15612

ಆದರೆ ಬುದ್ಧಿಜೀವಿಗಳ ಇಂತಹ ನಡವಳಿಕೆಯಿಂದ ಕೆಂಡಾಮಂಡಲವಾದ ನಟ ಜಗ್ಗೇಶ್ ನಟ ಪ್ರಕಾಶ್ ರೈ ಮತ್ತು ಎಚ್ ಎಸ್ ದೊರೆಸ್ವಾಮಿ ವಿರುದ್ಧ ಟ್ವಿಟ್ಟರ್ ನಲ್ಲಿ ವಾಗ್ದಾಳಿ ನಡೆಸಿದ್ದಾರೆ…!! “ಗೌರಿಯ ಸಾವಿಗೆ ಅಬ್ಬರಿಸಿದ್ದ ಮಹನೀಯರುಗಳಿಬ್ಬರಿಗೆ ಇಂದು ಕರ್ನಾಟಕದಲ್ಲಿ ಸಂಭವಿಸುತ್ತಿರುವ ಸಂಘ ಪರಿವಾರ ಕಾರ್ಯಕರ್ತರ ಸಾಲು ಸಾಲು ಹೆಣಗಳು ಕಾಣುತಿಲ್ಲವೆ..?” ಎಂದು ಕನ್ನಡ ನಟ ಜಗ್ಗೇಶ್ ಅವರು ನೋವಿನಿಂದ ಈ ಮಹಾನ್ ಹೋರಾಟಗಾರರಿಬ್ಬರಿಗೆ ಕೇಳಿದ್ದಾರೆ. ದೊರೆಸ್ವಾಮಿ ಹಾಗೂ ಪ್ರಕಾಶ್ ರೈ ಅವರು ಬಿಜೆಪಿ, ಸಂಘಪರಿವಾರದ ಕಾರ್ಯಕರ್ತರ ಹತ್ಯೆಯ ಸಂದರ್ಭ ತುಟಿಬಿಚ್ಚದ ವಿರುದ್ಧ ಈ ಪ್ರಶ್ನೆಗಳನ್ನು ಕನ್ನಡದ ಹಿರಿಯ ನಟ ಹಾಗು ಬಿಜೆಪಿ ನಾಯಕ ಜಗ್ಗೇಶ್ ಟ್ವಿಟ್ಟರ್ ನಲ್ಲಿ ಕೇಳಿದ್ದಾರೆ…!!

ಪ್ರಕಾಶ್ ರೈ ಹಾಗು ಅವರ ಪಟಾಲಂಗಳ ನೀತಿಗಳು ಹಾಗು ಸಿದ್ದಾಂತಗಳು ಏನೇ ಇರಲಿ!! ಆದರೆ ಹಿಂದೂ ಕಾರ್ಯಕರ್ತರ ಸರಣಿ ಹತ್ಯೆಗಳ ಬಗ್ಗೆ ತುಟಿ ಬಿಚ್ಚದಷ್ಟು ಮೌನವಾಗಿ ಹೋಗಿದ್ದಾರೆ. ಹಿಂದೂ ಸಂಘಟನೆಗಳ ಕಾರ್ಯಕರ್ತರ ಸಾವಿಗೆ ಬೆಲೆಯಿಲ್ಲವೆ ಅಥವಾ ಹಂತಕರಿಂದ ಹತ್ಯೆಯಾಗುತ್ತಿರುವ ಅವರುಗಳ ಸಂಘ ಪರಿವಾರದವದರು ಎಂಬ ಕಾರಣಕ್ಕೆ ನಿರ್ಲಕ್ಷ್ಯವೇ ಎಂಬುದು ತಿಳಿಯದಾಗಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ಹತ್ಯೆಯಾದ ಒಬ್ಬನೇ ಒಬ್ಬ ಸಂಘ ಪರಿವಾರದ ಕಾರ್ಯಕರ್ತರ ಪರವಾಗಿ ಇವರು ದ್ವನಿ ಎತ್ತಿಲ್ಲ. ಗೌರಿ ಲಂಕೇಶ್ ರವರ ಪರವಾಗಿ ಅಷ್ಟೊಂದು ಅಬ್ಬರಿಸಿದ್ದ ಇವರಿಗೆ ಸರಣಿ ಹತ್ಯೆಗಳು ಕಾಣದಾಗಿವೆ. ಗೌರಿ ಅವರ ಹತ್ಯೆಯ ನ್ಯಾಯಕ್ಕಾಗಿ ಇಂದು ಸರಣಿ ಕಾರ್ಯಕ್ರಮಗಳನ್ನು ಆಚರಿಸುತ್ತಿರುವ ಇವರು ಅಲ್ಲಿ ತೆಗಳುತ್ತಿರುವುದು ಮಾತ್ರ ಮೋದಿಯವರನ್ನು. ಕರ್ನಾಟಕದಲ್ಲಿ ಹತ್ಯೆಯಾದರೆ ಇಲ್ಲಿನ ಸರ್ಕಾರಕ್ಕೆ ಪ್ರಶ್ನೆ ಮಾಡುವ ಬದಲು ಇವರ ರಾಜಕೀಯ ಪಿತೂರಿಗಳಿಗಾಗಿ ಮೋದಿಯವರನ್ನು ವಿರೋಧಿಸುತಿದ್ದಾರೆ‌.

ಹೌದು. ಇವರುಗಳ ದ್ವಂದ್ವ ನಿಲುವುಗಳನ್ನು ಇಂದು ಕರ್ನಾಟಕದ ಪ್ರತಿಯೊಬ್ಬ ನಾಗರೀಕರು ಪ್ರಶ್ನಿಸುವಂತಾಗಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ ಇವರ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದ್ದು ನಟ ಹಾಗು ಮಾಜಿ ಶಾಸಕರಾದ ಜಗ್ಗೇಶ್ ರವರು ನೆನ್ನೆ ಸಂಜೆ ನಡೆದಿರುವ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತ ಸಂತೋಷ್ ರವರ ಹತ್ಯೆಯನ್ನು ಖಂಡಿಸಿ ಇವರೇಕೆ ದ್ವನಿ ಎತ್ತುತಿಲ್ಲ ಎಂದು ತಮ್ಮದೇ ಶೈಲಿಯಲ್ಲಿ ಪ್ತಶ್ನಿಸಿದ್ದಾರೆ.

ರಾಜ್ಯದಲ್ಲಿ ನಡೆಯುವ ಘಟನೆಗಳಿಗೆ ರಾಜಕೀಯ ಲಾಭಕ್ಕಾಗಿ ಮೋದಿ ಸರಕಾರವನ್ನು ಪ್ರಶ್ನಿಸುವ ಬುದ್ಧಿಜೀವಿಗಳು ಕೂಡ ಕಾಂಗ್ರೆಸ್ ಜೊತೆ ಸೇರಿಕೊಂಡಿವೆ ಎಂಬೂದರಲ್ಲಿ ಸಂಶಯವಿಲ್ಲ…!!
-ಅರ್ಜುನ್

Tags

Related Articles

Close