ಪ್ರಚಲಿತ

ಕರಾವಳಿ ಹಿಂದೂಗಳ ಭದ್ರಕೋಟೆ, ಹಿಂದುತ್ವವೇ ಮೂಲ ಮಂತ್ರ..! ಒಂದೇ ವೇದಿಕೆಯಲ್ಲಿ ಹಿಂದೂ ವಿರೋಧಿಗಳ ವಿರುದ್ಧ ಘರ್ಜಿಸಿದ ಬಿಜೆಪಿ ಶಾಸಕರು.!

ಭಾರತೀಯ ಜನತಾ ಪಕ್ಷ ಹಿಂದೂಗಳಿಗಾಗಿ ಇರುವ ಏಕೈಕ ಪಕ್ಷ ಎಂದರೆ ತಪ್ಪಾಗದು. ಯಾಕೆಂದರೆ ಹಿಂದೂಗಳಿಗೆ ಎಲ್ಲಿಯೇ ತೊಂದರೆಯಾದಾಗಲೂ ತಕ್ಷಣ ಸ್ಪಂದಿಸುವವರು ಕೇವಲ ಬಿಜೆಪಿ ನಾಯಕರು ಮಾತ್ರ. ಆದ್ದರಿಂದಲೇ ಪ್ರತೀ ಬಾರಿಯೂ ಭಾರತೀಯ ಜನತಾ ಪಕ್ಷ ಹಿಂದುತ್ವವನ್ನೇ ಆಧಾರವನ್ನಾಗಿಟ್ಟುಕೊಂಡು ಮುಂದೆ ಬರುತ್ತದೆ. ಹಿಂದೂ ಕಾರ್ಯಕರ್ತರಿಗೂ ತೊಂದರೆಯಾದಾಗ ನೆರವಾಗುವ ಬಿಜೆಪಿ ಮುಖಂಡರು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲೂ ಹಿಂದುತ್ವದ ಅಜೆಂಡಾ ಇಟ್ಟುಕೊಂಡೇ ಅಖಾಡಕ್ಕಿಳಿದಿದ್ದರು. ಆದ್ದರಿಂದಲೇ ಕರಾವಳಿಯಲ್ಲಿ ಭರ್ಜರಿಯಾಗಿ ಗೆಲುವು ಸಾಧಿಸಲು ಸಾಧ್ಯವಾಗಿತ್ತು. ಕೇವಲ ಚುನಾವಣೆಗಾಗಿ ಮಾತ್ರ ಹಿಂದುತ್ವದ ಜಪ ಮಾಡದೆ, ಚುನಾವಣೆಯ ನಂತರವೂ ಹಿಂದೂ ಕಾರ್ಯಕರ್ತರ ಬೆಂಬಲಕ್ಕೆ ನಿಂತ ಶಾಸಕರು ಇದೀಗ ಒಂದೇ ವೇದಿಕೆಯಲ್ಲಿ ಹಿಂದೂ ವಿರೋಧಿಗಳ ವಿರುದ್ಧ ಆರ್ಭಟಿಸಿದ್ದಾರೆ.!

ಕರಾವಳಿ ಹಿಂದೂಗಳ ಭದ್ರಕೋಟೆ, ದೇಶದಲ್ಲಿ ಸಂಘಪರಿವಾರದ ಯಾವುದೇ ಕಾರ್ಯಕ್ರಮ ನಡೆದರೂ ಅದಕ್ಕೆ ರಣಕಹಳೆ ಮೊಳಗಿಸುವುದು ಇದೇ ಕರಾವಳಿಯಲ್ಲಿ. ಯಾಕೆಂದರೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಈ ಭಾಗದಲ್ಲಿ ಧರ್ಮ ರಕ್ಷಣೆಗಾಗಿ ಯಾವುದೇ ಅಪಾಯವನ್ನೂ ಎದುರಿಸಲು ಸಜ್ಜಾಗಿರುತ್ತಾರೆ. ಆದರೆ ಈ ಹಿಂದಿನ ಕಾಂಗ್ರೆಸ್ ಸರಕಾರ ಹಿಂದೂ ವಿರೋಧಿ ನೀತಿಯನ್ನೇ ಅನುಸರಿಸಿಕೊಂಡು ಬಂದಿದ್ದರಿಂದ ಸುಳ್ಳು ಆರೋಪ ಹೊರಿಸಿ ಹಿಂದೂಗಳನ್ನು ಕುಗ್ಗಿಸಲು ಪ್ರಯತ್ನಿಸಿತ್ತು. ಆದರೂ ಧರ್ಮ ರಕ್ಷಣೆಯ ಕಾರ್ಯ ನಡೆಸಿಕೊಂಡು ಬಂದಿದ್ದ ಹಿಂದೂ ಪರ ಸಂಘಟನೆಗಳು ಇನ್ನು ಮುಂದೆ ರಾಜಾರೋಷವಾಗಿ ಧರ್ಮ ಕಾರ್ಯಗಳನ್ನು ನಡೆಸುವಂತಾಗಿದೆ. ಯಾಕೆಂದರೆ ಕರಾವಳಿಯಲ್ಲಿ ಹಿಂದುತ್ವವೇ ಜಯಗಳಿಸಿದೆ,ಆದ್ದರಿಂದಲೇ ಭಾರತೀಯ ಜನತಾ ಪಕ್ಷ ಕರಾವಳಿಯಲ್ಲಿ ಒಟ್ಟು ೨೧ ಕ್ಷೇತ್ರಗಳಲ್ಲಿ ೧೮ ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿತ್ತು. ಇದೀಗ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರು ಮತ್ತು ಸಂಸದರು ಒಟ್ಟಾಗಿ ಹಿಂದೂ ವಿರೋಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ.!

ಇನ್ನು ಮುಂದೆ ಕಾಂಗ್ರೆಸ್ ಪ್ರೇರಿತ ಗೂಂಡಾಗಳ ಆಟ ನಡೆಯುವುದಿಲ್ಲ..!

ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಅಶಾಂತಿಯ ವಾತಾವರಣವೇ ನಿರ್ಮಾಣವಾಗಿತ್ತು. ಕೇವಲ ವೋಟ್ ಬ್ಯಾಂಕ್ ರಾಜಕೀಯ ನಡೆಸುತ್ತಿದ್ದ ಕಾಂಗ್ರೆಸ್ ಕರಾವಳಿಯಲ್ಲಿ ಪದೇ ಪದೇ ಹಿಂದೂ ಮತ್ತು ಮುಸ್ಲೀಮರ ನಡುವೆ ಗಲಭೆ ಸೃಷ್ಟಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದರು. ಅನೇಕ ಹಿಂದೂ ಕಾರ್ಯಕರ್ತರ ಕೊಲೆ ನಡೆದಾಗಲೂ ಸುಮ್ಮನಿದ್ದ ಕಾಂಗ್ರೆಸ್ ಮುಖಂಡರು , ಮುಸ್ಲಿಮರು ದನ ಕಳ್ಳತನ ಮಾಡಿ ಪೊಲೀಸರ ಕೈಯಲ್ಲೇ ಎನ್‌ಕೌಂಟರ್ ಆದಾಗಲೂ ಅವರ ನೆರವಿಗೆ ಸಾಲು ಸಾಲಾಗಿ ಧಾವಿಸಿದ್ದರು. ಯಾಕೆಂದರೆ ಕರಾವಳಿಯಲ್ಲಿ ಕಾಂಗ್ರೆಸ್ ಶಾಸಕರೇ ಆಡಳಿತ ನಡೆಸುತ್ತಿದ್ದರು. ಆದರೆ ಇದೀಗ ಸಂಪೂರ್ಣವಾಗಿ ಕೇಸರಿ ಪಡೆಯೇ ಕರಾವಳಿಯಲ್ಲಿ ಜಯಗಳಿಸಿರುವುದರಿಂದ ಇನ್ನು ಮುಂದೆ ಕಾಂಗ್ರೆಸ್‌ನ ಯಾವುದೇ ಗೂಂಡಾಗಿರಿಯೂ ನಡೆಯುವುದಿಲ್ಲ ಎಂದು ಬಿಜೆಪಿ ಶಾಸಕರು ಒಕ್ಕೊರಲಿನಿಂದ ಹೇಳಿಕೊಂಡಿದ್ದಾರೆ.!

ಬಂಟ್ವಾಳ ಕ್ಷೇತ್ರದ ಶಾಸಕ ಯು.ರಾಜೇಶ್ ನಾಯ್ಕ್ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲೆಯ ಎಲ್ಲಾ ಶಾಸಕರೂ ಕೂಡ ಮತ್ತೊಮ್ಮೆ ಹಿಂದುತ್ವವನ್ನೇ ಎತ್ತಿ ಹಿಡಿದಿದ್ದಾರೆ. ಕರಾವಳಿಯಲ್ಲಿ ಸಂಪೂರ್ಣವಾಗಿ ಹಿಂದುತ್ವ ಗೆದ್ದಿದೆ, ಭಾರತೀಯ ಜನತಾ ಪಕ್ಷದ ಶಾಸಕರು ಇನ್ನು ಮುಂದೆ ಹಿಂದೂ ಕಾರ್ಯಕರ್ತರ ಮೈ ಮುಟ್ಟಲೂ ಬಿಡುವುದಿಲ್ಲ. ಸಂಘಪರಿವಾರದ ಕಾರ್ಯಕರ್ತರನ್ನು ಮತ್ತೆ ಮತ್ತೆ ಕೆಣಕಲು ಬಂದರೆ ಯಾವುದೇ ಕಾರಣಕ್ಕೂ ಸುಮ್ಮನೆ ಕೂರುವ ಪ್ರಶ್ನೆಯೇ ಇಲ್ಲ ಎಂದು ಹಿಂದೂ ವಿರೋಧಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.!

ಸಂಸದರಿಂದಲೂ ಖಡಕ್ ವಾರ್ನಿಂಗ್..!

ದಕ್ಷಿಣ ಕನ್ನಡ ಜಿಲ್ಲಾ ಸಂಸದರಾಗಿರುವಂತಹ ನಳಿನ್ ಕುಮಾರ್ ಕಟೀಲ್ ಅವರೂ ಕೂಡ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ್ದು, ಬಂಟ್ವಾಳ ಕ್ಷೇತ್ರ ಕಾಂಗ್ರೆಸ್ ಆಡಳಿತದಲ್ಲಿ ನರಕದ ವಾತಾವರಣ ಸೃಷ್ಟಿಯಾಗಿತ್ತು. ಆದರೆ ಇನ್ನು ಮುಂದೆ ಯಾವುದೇ ಗೂಂಡಾಗಳ ರಂಪಾಟ ನಡೆಯಲು ನಾವು ಬಿಡುವುದಿಲ್ಲ. ನಮ್ಮ ಶಾಸಕರೂ ಕೂಡ ಈಗಾಗಲೇ ತಮ್ಮ ಕ್ಷೇತ್ರದ ಜನರಿಗೆ ತೊಂದರೆಯಾದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದ್ದು, ಪೊಲೀಸ್ ಅಧಿಕಾರಿಗಳಿಗೂ ಸೂಚಿಸಲಾಗಿದೆ ಎಂದರು. ಕಾಂಗ್ರೆಸ್ ಆಡಳಿತದಲ್ಲಿ ಹಿಂದೂ ಕಾರ್ಯಕರ್ತರು ಮನೆಯಿಂದ ಹೊರ ಹೋದರೆ ಮತ್ತೆ ವಾಪಾಸಾಗುತ್ತಾರೋ ಇಲ್ಲವೋ ಎಂಬುದು ಗೊತ್ತಿರಲಿಲ್ಲ. ಯಾಕೆಂದರೆ ಅಂತಹ ಸ್ಥಿತಿ ನಿರ್ಮಿಸಿತ್ತು ಕಾಂಗ್ರೆಸ್, ಆದರೆ ಇನ್ನು ಯಾವುದೇ ದುಶ್ಕೃತ್ಯ ನಡೆಸಲು ನಮ್ಮ ಶಾಸಕರು ಬಿಡುವುದಿಲ್ಲ , ಅಂತಹ ಸಾಹಸಕ್ಕೆ ಕೈ ಹಾಕಿದರೆ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ವಾರ್ನಿಂಗ್ ನೀಡಿದ್ದಾರೆ.!

 

ಆದ್ದರಿಂದ ಕರಾವಳಿಯಲ್ಲಿ ಈ ಹಿಂದೆ ಕಳೆದುಕೊಂಡ ಹಿಂದೂ ಕಾರ್ಯಕರ್ತರ ಆತ್ಮಕ್ಕೆ ಈಗ ಶಾಂತಿ ಸಿಗುವುದು ಗ್ಯಾರಂಟಿ. ಯಾಕೆಂದರೆ ಕಳೆದುಕೊಂಡ ಕಾರ್ಯಕರ್ತರು ಸಂಘಪರಿವಾರದ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸದಾ ಧರ್ಮ ಕಾರ್ಯಗಳಲ್ಲಿ ಭಾಗಿಯಾಗಿದ್ದವರು. ಆದರೆ ಇನ್ನು ಮುಂದೆ ಇಂತಹ ಯಾವುದೇ ಘಟನೆಗಳು ನಡೆಯುವುದಿಲ್ಲ, ನಡೆಸಲು ಪ್ರಯತ್ನಿಸಿದವನ್ನೂ ಸುಮ್ಮನೆ ಬಿಡುವುದಿಲ್ಲ ಎಂದು ಬಿಜೆಪಿ ಶಾಸಕರು ಮತ್ತು ಜೆಲ್ಲೆಯ ಸಂಸದರು ಎಚ್ಚರಿಸಿದ್ದಾರೆ..!

–ಸಾರ್ಥಕ್

Tags

Related Articles

Close