ಪ್ರಚಲಿತ

ದೇಶದ್ರೋಹಿ ಓವೈಸಿ ಗೆ ಭರ್ಜರಿ ಟಾಂಗ್ ನೀಡಿದ ಸ್ವಾಮಿ!! ಸೈನ್ಯದಲ್ಲಿ ಧರ್ಮ ಭೇದ ಮಾಡಿದ ಓವೈಸಿ ಗೆ ಸ್ವಾಮಿ ಕೊಟ್ಟ ಗುನ್ನ ಏನು ಗೊತ್ತಾ..?!

ಭಾರತದಲ್ಲೇ ಇದ್ದು , ಭಾರತದ ಅನ್ನವನ್ನೇ ತಿಂದು ಭಾರತಕ್ಕೆ ದ್ರಾಒಹ ಬಗೆಯುತ್ತಿರುವವರ ಸಾಲಿನಲ್ಲಿಯೇ ಬರುವವರು ಅಸಾದುದ್ದೀನ್ ಓವೈಸಿ. ಪಕ್ಷ ಕಟ್ಟಿಕೊಂಡು ಸಂಸತ್ ನ ಸಂಸದರಾಗಿ ಆಯ್ಕೆಯಾದ ಓವೈಸಿ ಅಧಿಕಾರದ ಬಲದಿಂದ ಏನಾದರೊಂದು ವಿವಾದಾತ್ಮಕವಾಗಿ ಹೇಳಿಕೆ ನೀಡುವ ಮೂಲಕವೇ ಸುದ್ದಿಯಲ್ಲಿರುತ್ತಾರೆ.

ದೇಶದಲ್ಲಿ ಏನೇ ನಡೆದರೂ ಅದಕ್ಕೆ ಪ್ರಧಾನಿ ನರೇಂದ್ರ ಮೋದಿಯೇ ಕಾರಣ ಎಂಬಂತೆ ಬಿಂಬಿಸುತ್ತಿರುವ ಅಸಾದುದ್ದೀನ್ ಓವೈಸಿ ಗೆ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ತಕ್ಕ ತಿರುಗೇಟು ನೀಡುವ ಮೂಲಕ ತೆಪ್ಪಗಾಗಿಸಿದ್ದಾರೆ..!

ಭ್ರಷ್ಟರನ್ನು ಹಾಗು ಜನ ವಿರೋಧಿ ಸರ್ಕಾರದ ನಡೆಗಳ ಹಿಂದಿರುವ ರಹಸ್ಯಗಳನ್ನು ಬಯಲಿಗೆಳೆಯುವ ಮೂಲಕ ಭಾರತದ ಜನಪ್ರಿಯ ರಾಜಕಾರಣಿ ಎಂದೆನಿಸಿಕೊಂಡಿದ್ದಾರೆ ಸುಬ್ರಮಣಿಯನ್ ಸ್ವಾಮಿಯವರು!! ಭಾರತದ ಯೋಜನಾ ಆಯೋಗದಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದ ಇವರು ಹಿಂದೆ ಕೇಂದ್ರದಲ್ಲಿ ಚಂದ್ರಶೇಖರ್ ಸಿಂಗ್ ರವರ ಸಂಪುಟದಲ್ಲಿ ಒಬ್ಬ ಸಚಿವರಾಗಿದ್ದರು. ಅಷ್ಟೇ ಅಲ್ಲದೇ ಮೂಲತಃ ಅರ್ಥಶಾಸ್ತ್ರಜ್ಞರಾದ ಸ್ವಾಮಿ ವಿಶ್ವ ಸಂಸ್ಥೆಯ ‘ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ವ್ಯಾಪಾರ ಮತ್ತು ವಾಣಿಜ್ಯ ಅಭಿವೃದ್ಧಿ ‘ ವಿಚಾರದಲ್ಲಿ ವರದಿ ಸಿದ್ಧಪಡಿಸುವ ಸಮಿತಿಯಲ್ಲಿಯೂ ಕೂಡ ಒಬ್ಬ ಸದಸ್ಯರಾಗಿದ್ದಂತಹ ಒಬ್ಬ ಜನಪ್ರಿಯ ವ್ಯಕ್ತಿ!!

ಸ್ವಾಮಿ 5 ಬಾರಿ ಸಂಸದರಾಗಿ, ಎರಡು ಬಾರಿ ಕೇಂದ್ರ ಸಚಿವರಾಗಿ ಯು.ಪಿ.ಎ ಸರ್ಕಾರದ ನಿದ್ದೆಗೆಡಿಸಿರುವ ವ್ಯಕ್ತಿಯಾಗಿದ್ದಾರೆ!! ಈಗಾಗಲೇ ಗಾಂಧಿ ಪರಿವಾರರಿಂದ ಹಿಡಿದು ಮಾಜಿ ಗೃಹ ಸಚಿವರಾಗಿದ್ದ ಪಿ.ಚಿದಂಬರಂ ಅವರ ಭ್ರಷ್ಟಚಾರವನ್ನು ಹೊರಗೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿಕೊಂಡಿದ್ದಾರೆ!!

ಸುಬ್ರಮಣಿಯನ್ ಸ್ವಾಮಿಯವರು ಯು.ಪಿ.ಎ ಸರ್ಕಾರದ 2ಜಿ ಹಗರಣವನ್ನು ಬಯಲಿಗೆಳೆದಿದ್ದಲ್ಲದೇ ಮಾಜಿ ಸಂಪರ್ಕ ಸಚಿವರಾದ ಎ. ರಾಜಾ ಅವರ ಬಂಧನಕ್ಕೂ ಕೂಡ ಕಾರಣಕರ್ತರಾಗಿದ್ದಾರೆ. ಅಷ್ಟೇ ಅಲ್ಲದೇ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅಕ್ರಮ ಆಸ್ತಿ ಹಗರಣ, ರಾಮಸೇತು ವಿವಾದ, ಸೋನಿಯಾ ಗಾಂಧಿ ಪದವಿ ವಿಚಾರ, ಕಾಂಗ್ರೇಸ್ ಪಕ್ಷದ ನ್ಯಾಷನಲ್ ಹೆರಾಲ್ಡ್ ಹಗರಣ ಮುಂತಾದ ಬಹುಕೋಟಿ ಹಗರಣಗಳನ್ನು ವಿಸ್ಮೃತ ಅಧ್ಯಯನ ಮಾಡಿ ಸೂಕ್ತ ದಾಖಲೆಗಳೊಂದಿಗೆ ಕೋರ್ಟ್‍ನಲ್ಲಿ ದಾವೆ ಹೂಡಿದ್ದಾರೆ. ಇಂತಹ ಅಸಾಧಾರಣ ವ್ಯಕ್ತಿಯ ಬಗ್ಗೆ ಅದೆಷ್ಟೋ ಮಂದಿ ತಿಳಿದಿರದ ಅಪರೂಪದ ಸತ್ಯ ವಿಚಾರಗಳನ್ನು ತಿಳಿದುಕೊಳ್ಳುವುದು ಅತೀ ಮುಖ್ಯ!!

ಸದ್ಯ ದೇಶದ್ರೋಹಿಗಳನ್ನು ಬೆಂಬಲಿಸುವವರನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವವರು ಇದೇ ಸುಬ್ರಮಣಿಯನ್ ಸ್ವಾಮಿ. ಭಾರತದಲ್ಲೇ ಇದ್ದು ಭಾರತದ ಶತ್ರು ರಾಷ್ಟ್ರ ಪಾಕಿಸ್ತಾನವನ್ನು ಬೆಂಬಲಿಸುವ ಅಸಾದುದ್ದೀನ್ ಓವೈಸಿಯಂತವರ ಬಾಯಿ ಮುಚ್ಚಿಸಿದ್ದಾರೆ ಸ್ವಾಮಿ.

ಜಮ್ಮು ಕಾಶ್ಮೀರದಲ್ಲಿ ನಡೆದಿರುವ ದಾಳಿಯಲ್ಲಿ ಐವರು ಕಾಶ್ಮೀರಿ ಮುಸ್ಲೀಮರು ಮ್ರತಪಟ್ಟಿದ್ದ ಕಾರಣಕ್ಕೆ ಅಸಾದುದ್ದೀನ್ ಓವೈಸಿ ಭಾರತೀಯ ಸೇನೆಯ ಮತ್ತು ಮೋದಿ ಸರಕಾರದ ವಿರುದ್ಧ ಹೇಳಿಕೆ ನೀಡಿದ್ದರು. ದೇಶದಲ್ಲಿ ಮುಸ್ಲಿಮರನ್ನು ಗುರಿಯಾಗಿಟ್ಟುಕೊಂಡು ಕೊಲ್ಲಲಾಗುತ್ತಿದೆ ಎಂದು ಆರೋಪಿಸಿದ್ದರು.


ಆದರೆ ಓವೈಸಿಯ ಈ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿಯ ಹಿರಿಯ ಮುಖಂಡ ಸುಬ್ರಮಣಿಯನ್ ಸ್ವಾಮಿ, ‘ದೇಶದಲ್ಲಿ ಭಾರತೀಯ ಸೇನೆಯನ್ನು ವಿರೋಧಿಸಿ ಯುವಕರು ಪಾಕಿಸ್ತಾನದ ಉಗ್ರ ಸಂಘಟನೆಗಳ ಜೊತೆ ಸೇರುತ್ತಿದ್ದಾರೆ. ಈ ರೀತಿ ಬೇಜವಾಬ್ದಾರಿಯಿಂದ ಮಾತನಾಡುವುದನ್ನು ಬಿಟ್ಟು ದೇಶಬಿಟ್ಟು ಭಯೋತ್ಪಾದಕರಾಗುತ್ತಿರುವ ಯುವಕರ ಬಗ್ಗೆ ಓವೈಸಿ ಗಮನಹರಿಸಲಿ’ ಎಂದು ತಿರುಗೇಟು ನೀಡಿದ್ದಾರೆ. ಓವೈಸಿ ಕೇವಲ ಮುಸ್ಲಿಮರು ಸಾಯುತ್ತಿದ್ದಾರೆ ಎಂದು ಲೆಕ್ಕ ಹಾಕುವ ಬದಲು ಭಾರತೀಯ ಸೇನೆಯ ಮೇಲೆ ದಾಳಿ ಮಾಡುತ್ತಿರುವ ಮುಸ್ಲಿಂ ಉಗ್ರ ಸಂಘಟನೆಗಳು ಎಷ್ಟಿವೆ ಎಂದು ಮೊದಲು ಲೆಕ್ಕ ಹಾಕಿಕೊಳ್ಳಲಿ’ ಎಂದು ಟ್ವಿಟ್ಟರ್ ನಲ್ಲಿ ತಕ್ಕ ತಿರುಗೇಟು ನೀಡಿದ್ದಾರೆ.

ಓವೈಸಿ ಒಬ್ಬ ಸಂಸದರಾಗಿ ಇದ್ದುಕೊಂಡು ಕೇವಲ ಮುಸ್ಲಿಮರ ಬಗ್ಗೆ ಮಾತ್ರ ಕಾಳಜಿ ವಹಿಸಿರುವುದು ವಿಪರ್ಯಾಸವೇ ಸರಿ. ದೇಶದಲ್ಲಿ ಸಾಲು ಸಾಲು ಹಿಂದೂ ಯುವಕರನ್ನು ಗುರಿಯಾಗಿಟ್ಟುಕೊಂಡು ಬರ್ಬರವಾಗಿ ಹತ್ಯೆ ಮಾಡಲಾಗುತ್ತಿದೆ. ಆದರೆ ಈ ಬಗ್ಗೆ ಯಾವ ಪ್ರತಿಕ್ರಿಯೆಯೂ ನೀಡುತ್ತಿಲ್ಲ‌. ಆದರೆ ಪದೇ ಪದೇ ಭಾರತೀಯ ಸೇನೆ ಮತ್ತು ಮೋದಿ ಸರಕಾರವನ್ನು ಪ್ರಶ್ನಿಸುತ್ತಿರುವ ಓವೈಸಿ ಗೆ ಸುಬ್ರಮಣಿಯನ್ ಸ್ವಾಮಿ ತಕ್ಕ ಉತ್ತರ ನೀಡಿದ್ದಾರೆ..!

–ಅರ್ಜುನ್

Tags

Related Articles

Close