ಅಂಕಣದೇಶಪ್ರಚಲಿತ

ಭಾರತೀಯ ಸೇನೆ ಲೈನ್ ಆಫ್ ಕಂಟ್ರೋಲ್ ಬಗ್ಗೆ ಸೈನಿಕರಿಗೆ ನೀಡಿದ ಆಜ್ಞೆಯೊಂದು ಪಾಕಿಸ್ಥಾನದ ಬೆವರಿಳಿಸಿದ್ದು ಯಾಕೆ ಗೊತ್ತೇ?!

ಪಾಕಿಸ್ಥಾನ ಈಗ ನಡುಗಲು ಪ್ರಾರಂಭಿಸಿದೆ! ಅದರಲ್ಲಿಯೂ, ಭಾರತೀಯ ಸೇನೆ ಲೈನ್ ಆಫ್ ಕಂಟ್ರೋಲ್ ನಲ್ಲಿರುವ ಸೈನಿಕರ ಶಿಬಿರಗಳಿಗೆ ಮತ್ತು ನಿವಾಸಿಗಳಿಗೆ ‘ರೆಡ್ ಅಲರ್ಟ್’ ನೀಡಿದ ಮೇಲಂತೂ, ಪಾಕಿಸ್ಥಾನ ನಡುಗುತ್ತಿದೆ!

ಮೂಲಗಳ ಪ್ರಕಾರ, ಪಾಕಿಸ್ಥಾನ ಮುಂಬರುವ ಬೇಸಿಗೆಯಲ್ಲಿ ಮತ್ತೆ ಭಯೋತ್ಪಾದಕರನ್ನು ಭಾರತದೊಳ ಪ್ರವೇಶಿಸಲು ಉಪಾಯ ಹೂಡುತ್ತಿದೆಯಲ್ಲದೇ, ಮತ್ತೆ ದಾಳಿ ಮಾಡುವ ಮುನ್ಸೂಚನೆ ಸಿಕ್ಕಿರುವುದರಿಂದ ಭಾರತೀಯ ಸೇನೆ ಈಗಾಗಲೇ ಮುಂಚಿತವಾಗಿ ಸೈನಿಕರಿಗೆ ತರಬೇತಿ ನೀಡುವಲ್ಲಿ ನಿರತವಾಗಿದೆ!

ನಾರ್ತನ್ ಕಮಾಂಡ್ ಪ್ರಕಾರ., ಈಗಾಗಲೇ ಉಧನ್ ಪುರದ ಹೆಡ್ ಕ್ವಾರ್ಟ್ರರ್ಸ್ ನ ಹತ್ತಿರದಲ್ಲಿ ಬರೋಬ್ಬರಿ 375 – 400 ಉಗ್ರರು ಕಾಶ್ಮೀರದ ಮೇಲೆ ಆಕ್ರಮಣ ಮಾಡುವುದಕ್ಕೆ ಕಾಯುತ್ತಿದ್ದಾರೆ ಎಂದು ವರದಿ ಮಾಡಿದೆ! ಅದೂ ಸಹ, ಈ ಸಲ ಕಾಶ್ಮೀರದಲ್ಲಿ ಹಿಮವೂ ಅಷ್ಟು ಬೀಳದೇ ಇರುವುದರಿಂದ ಪಾಕಿಸ್ಥಾನ ಈಗಲೇ ಉಗ್ರರನ್ನು ಭಾರತದೊಳ ನುಗ್ಗಿಸಲು ತಯಾರಿ ನಡೆಸುತ್ತಿದೆ ಎಂಬ ವರದಿ ಭಾರತೀಯ ಸೇನೆಗೆ ಸಿಕ್ಕಿದೆ!

ಮೂಲಗಳ ಪ್ರಕಾರ, ಕಳೆದ ವರ್ಷದಲ್ಲಿ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಗೆ ಬರೋಬ್ಬರಿ, 138 ಪಾಕಿಸ್ಥಾನಿ ಉಗ್ರರು ಹತ್ಯೆಯಾಗಿದ್ದು, ಜೊತೆಗೆ 156 ಉಗ್ರರು ಮಾರಣಾಂತಿಕವಾಗಿ ಗಾಯಗೊಂಡಿದ್ದಾರೆ! ಈ ವರ್ಷ ಇಲ್ಲಿಯತನಕ 30 ಪಾಕಿಸ್ಥಾನಿ ಉಗ್ರರು ಸಾವನ್ನಪ್ಪಿದ್ದಾರೆ! ಮತ್ತು, ಏಳು ಜನಕ್ಕೂ ಹೆಚ್ಚು ಮಾರಣಾಂತಿಕವಾಗಿ ಗಾಯಗೊಂಡಿದ್ದಾರೆ!

ಈ ವರ್ಷ LoC ಯಲ್ಲಿ ಒಂಭತ್ತು ಭಾರತೀಯ ಸೈನಿಕರು ಹುತಾತ್ಮರಾಗಿದ್ದರೆ, ಕಳೆದ ವರ್ಷ 32 ಸೈನಿಕರು ಹುತಾತ್ಮರಾಗಿದ್ದಾರೆ! ಅದರಲ್ಲಿಯೂ, ಕೂಡ LoC ಯಲ್ಲಿ ನಡೆಯುತ್ತಿರುವ ಪಾಕಿಸ್ಥಾನಿಗಳ ಕಿತಾಪತಿಗೆ ಸರಿಯಾಗಿಯೇ ಉತ್ತರಿಸುತ್ತಿರುವ ಭಾರತೀಯ ಸೇನೆ ಈಗಾಗಲೇ ಎಲ್ಲಾ ರೀತಿಯ ಆಪರೇಷನ್ ಗಳಿಗೂ ಕೂಡ ತಯಾರಾಗಿದೆ! ಅದಲ್ಲದೇ, ಪ್ರತೀ ಸಲವೂ ಗಡಿ ಉಲ್ಲಂಘನೆ ಮಾಡುತ್ತಿರುವ ಪಾಕಿಸ್ಥಾನಿಗಳು ಜನವರಿಯಲ್ಲಿಯೇ ಗಡಿ ಉಲ್ಲಂಘನೆ ಮಾಡಿದ್ದಕ್ಕೆ ಭಾರತೀಯ ಸೇನೆ ತಕ್ಕನಾದ ಉತ್ತರ ನೀಡುತ್ತಿದೆ! ಜೊತೆಗೆ, ಲೆಫ್ಟಿನೆಂಟ್ ಜನರಲ್ ನದೀಮ್ ರಜಾ ರಾವಲ್ಪಿಂಡಿಯ ಕಮಾಂಡೋ ಬೇಸ್ ಗೆ ಭೇಟಿ ನೀಡಿ ಕಾರ್ಯಸೂಚಿಯನ್ನೂ ನೀಡಿದ್ದಾರೆಂಬ ಮಾಹಿತಿ ಲಭ್ಯವಾಗಿದೆ!

ಭಾರತೀಯ ಸರಕಾರದ ಪ್ರಕಾರ, ಕಳೆದ ವರ್ಷ LoCಯಲ್ಲಿ 860 ಕ್ಕೂ ಹೆಚ್ಚು ಸೀಸ್ ಫೈರ್ ವಯೋಲೇಷನ್ ಗಳಾಗಿದ್ದರೆ, ಈ ವರ್ಷ ಈಗಾಗಲೇ 280 ಕ್ಕೆ ಮುಟ್ಟಿದೆ! ಆದರೆ, ಪಾಕಿಸ್ಥಾನ ನೀಡಿರುವ ಮಾಹಿತಿ ಪ್ರಕಾರ, ಭಾರತದಿಂದ 1970 ಬಾರಿ ವಯೋಲೇಷನ್ ಕಳೆದ ವರ್ಷ ನಡೆದಿದ್ದು, ಈ ವರ್ಷ 335 ದಾಟಿದೆ ಎಂದಿದೆ! ಅದಲ್ಲದೇ, ಈ ವರ್ಷ ಪಾಕಿಸ್ಥಾನದ ಅತ್ಯಮೂಲ್ಯವಾದ ಬಂಕರ್ ಗಳನ್ನು ಭಾರತೀಯ ಸೇನೆ ನಾಶ ಪಡಿಸಿದ್ದು, ಕಳೆದ ವರ್ಷ ಸ್ನಿಪ್ಪರ್ ಗಳನ್ನೂ ನಾಶ ಮಾಡಿದೆ!

ಎರಡೂ ದೇಶದ ರಕ್ಷಣಾ ಸಚಿವರು ಶಾಂತಿ ಸಂಧಾನ ನಡೆಸಿದ್ದರೂ ಸಹ, ಪಾಕಿಸ್ಥಾನ ನಾಯಿಯ ಬಾಲ ಡೊಂಕೆನ್ನುವಂತೆ ಕ್ಯಾತೆ ತೆಗೆದಾಗ, ಭಾರತದ ರಕ್ಷಣಾ ಸಚಿವರಾದ ನಿರ್ಮಲಾ ಸೀತಾರಾಮನ್ ಖಡಕ್ ಎಚ್ಚರಿಕೆ ನೀಡಿದ್ದಾರೆ! “ಶರಣಾಗಿ, ಇಲ್ಲವೇ ದೇಶ ಬಿಟ್ಟು ತೊಲಗಿ! ಇಲ್ಲವೇ, ಕಂಡಲ್ಲು ಗುಂಡಿಕ್ಕುತ್ತೇವೆ! ಹುಡುಕಿ ಕೊಲ್ಲುತ್ತೇವೆ!” ಎಂದಿರುವ ರೀತಿಗೆ ಪಾಕಿಸ್ಥಾನ ತತ್ತರಿಸತೊಡಗಿದೆ!

ಅದೇ ರೀತಿ, ಪಾಕಿಸ್ಥಾನ ಭಾರತದ ಮೇಲೆ ಮಾಡುತ್ತಿರುವ ಆರೋಪಗಳಿಗೆ ಜನರಲ್ ಬಿಪಿನ್ ರಾವತ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, LoC ಯಲ್ಲಿ ಹೆಚ್ಚುವರಿ ಭದ್ರತಾ ವ್ಯವಸ್ಥೆಗಳನ್ನು ಮಾಡಿರುವುದಲ್ಲದೇ, ಶಸ್ತ್ರಾಸ್ತ್ರಗಳಿಗೆ ಯಾವುದೇ ರೀತಿಯಲ್ಲಿಯೂ ಕೊರತೆಯಾಗದಂತೆ ತಯಾರಿ ಮಾಡುವಲ್ಲಿ ಜನರಲ್ ರಾವತ್ ತೀವ್ರ ನಿಗಾ ವಹಿಸಿದ್ದಾರೆ!

ಭಾರತಕ್ಕೇನೂ ತಿಳಿಯದು ಎಂದುಕೊಂಡಿದ್ದ ಪಾಕಿಸ್ಥಾನಕ್ಕೀಗ ಪ್ರಾಣ ಸಂಕಟಕ್ಕಿಟ್ಟುಕೊಂಡಿದೆ! ಈಗಾಗಲೇ ನಿಯೋಜಿಸಿರುವ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವುದು ಸಾಯಲಿ, ಬದಲಿಗೆ ಕೆಮ್ಮಿದರೂ ಗುಂಡಿಕ್ಕುವ ಭಾರತೀಯ ಸೈನಿಕರಿಂದ ತಪ್ಪಿಸಿಕೊಳ್ಳಲಾಗದೇ ನಿಂತಲ್ಲೇ ಒದ್ದಾಡುತ್ತಿರುವ ಪಾಕಿಸ್ಥಾನದ ಪ್ಯಾಂಟ್ ಒದ್ದೆಯಾಗತೊಡಗಿದೆ!

– ಪೃಥು ಅಗ್ನಿಹೋತ್ರಿ

Tags

Related Articles

Close