ಪ್ರಚಲಿತ

ಭಾರತಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಉಗ್ರ ಯಮಪುರಿಗೆ?

2023 ನೇ ವರ್ಷದಲ್ಲಿ ಭಾರತಕ್ಕೆ ಬೇಕಾಗಿದ್ದ, ವಿದೇಶಗಳಲ್ಲಿ ತಲೆ ಮರೆಸಿಕೊಂಡು ಭಾರತದ ಕೈಗೆ ಸಿಗದಂತೆ ಅವಿತಿದ್ದ ಹಲವಾರು ಉಗ್ರರನ್ನು ಅಪರಿಚಿತರು ಹತ್ಯೆ ಮಾಡುತ್ತಿದ್ದ ಸಂಗತಿ ಎಲ್ಲರಿಗೂ ಸಂಗೀತ. ಅಪರಿಚಿತರು ಭಾರತ ವಿರೋಧಿ, ಮೋಸ್ಟ್ ವಾಂಟೆಡ್ ಉಗ್ರರ ಹತ್ಯೆಯನ್ನು ಈ ವರ್ಷದಲ್ಲಿಯೂ ಮುಂದುವರೆಸುತ್ತದೆ ಎನ್ನುವುದಕ್ಕೆ ಸಾಕ್ಷಿ ಎಂಬಂತೆ ಘಟನೆಯೊಂದು ನಡೆದಿದೆ.

2024 ರ ಕ್ಯಾಲೆಂಡರ್ ವರ್ಷದ ಆರಂಭದಲ್ಲಿಯೇ ಅಪರಿಚಿತರು ಬಾಂಬ್ ಸ್ಪೋಟಿಸಿ ಭಾರತಕ್ಕೆ ಬೇಕಾಗಿದ್ದ ಉಗ್ರನೋರ್ವನನ್ನು ಉಡೀಸ್ ಮಾಡಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಕುಖ್ಯಾತ ಪಾತಕಿ, ಜಾಗತಿಕ ಭಯೋತ್ಪಾದಕನಾದ, ಜೈಶ್ ಎ ಮೊಹಮ್ಮದ್ ಎಂಬ ಉಗ್ರ ಸಂಘಟನೆಯ ಮುಖ್ಯಸ್ಥನಾಗಿದ್ದ ಮೌಲಾನಾ ಮಸೂದ್ ಅಜರ್ ಎಂಬಾತನನನ್ನೇ ಬಾಂಬ್ ಸ್ಪೋಟಿಸುವ ಮೂಲಕ ಅಪರಿಚಿತರು ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ನಿನ್ನೆ ಬೆಳಗ್ಗೆ ಸುಮಾರು ಐದು ಗಂಟೆಯ ಸಮಯದಲ್ಲಿ ಭವಲ್ಪುರ ಮಸೀದಿಯ ಸಮೀಪ ಈ ಘಟನೆ ನಡೆದಿದೆ ಎಂದು ಅನಾಮಧೇಯ ಮೂಲಗಳು ಹೇಳಿವೆ. ಅಜರ್ ತನ್ನ ಕಾರಿನ ಸಮೀಪ ಬರುತ್ತಿದ್ದ ಸಂದರ್ಭದಲ್ಲಿ ಕಾರಿನ ಬಲ ಬಾಗಿಲಿನ ಬಳಿ ಈ ಸ್ಪೋಟ ಸಂಭವಿಸಿದೆ. ಈ ಸಂದರ್ಭದಲ್ಲಿ ಅಜರ್ ‌ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಆತನ ಕಾರ್ ನಲ್ಲಿ ಅಪರಿಚಿತ ದುಷ್ಕರ್ಮಿಗಳು ಬಾಂಬ್ ಅಳವಡಿಸಿದ್ದು, ಆತ ಕಾರ್ ಬಳಿ ಬರುತ್ತಿದ್ದಂತೆಯೇ ಬಾಂಬ್ ಸ್ಪೋಟಿಸಿದ್ದಾರೆ. ಈ ವೇಳೆ ಆತ ಸಾವನ್ನಪ್ಪಿದ್ದಾನೆ. ಈತನೂ ಭಾರತ ಹುಡುಕುತ್ತಿದ್ದ ಮೋಸ್ಟ್ ವಾಂಟೆಡ್ ಉಗ್ರರಲ್ಲಿ ಓರ್ವನಾಗಿದ್ದಾನೆ.

ಈತ ಮಸೀದಿಗೆ ತೆರಳಿ ಅಲ್ಲಿಂದ ತನ್ನ ನಿವಾಸಕ್ಕೆ ಹಿಂದಿರುಗಲು ಕಾರಿನ ಬಳಿ ಬಂದಿದ್ದ. ಈ ಸಮಯವನ್ನು ಕಾಯುತ್ತಿದ್ದ ಅಪರಿಚಿತರು ಈತನನ್ನು ಬಾಂಬ್ ಸ್ಪೋಟಿಸಿ ಹತ್ಯೆ ಮಾಡಿದ್ದಾರೆ.

ಈತ 1999 ರ ಡಿಸೆಂಬರ್ 24 ರಂದು 176 ಪ್ರಯಾಣಿಕರನ್ನು ಹೊಂದಿದ್ದ IC814 ವಿಮಾನವನ್ನು ಅಪಹರಿಸಿದ್ದ ಕೃತ್ಯದಲ್ಲಿ ಭಾಗಿಯಾಗಿದ್ದ. ಈ ವಿಮಾನ ಕಾಠ್ಮಂಡು‌ವಿನಿಂದ ದೆಹಲಿಗೆ ಬರುತ್ತಿತ್ತು.

ಕಳೆದ ವರ್ಷವಷ್ಟೇ ಈತನ ಆಪ್ತ ಜೈಶ್ ಎ ಮೊಹಮ್ಮದ್ ಸಂಘಟನೆಯ ಉಗ್ರ ಮೌಲಾನಾ ರಹೀಮುಲ್ಲಾ ತಾರಿಕ್‌ನನ್ನು ಅಪರಿಚಿತರು ಗುಂಡಿಕ್ಕಿ ಯಮಪುರಿಗೆ ಅಟ್ಟಿದ್ದರು.

Tags

Related Articles

Close