2023 ನೇ ವರ್ಷದಲ್ಲಿ ಭಾರತಕ್ಕೆ ಬೇಕಾಗಿದ್ದ, ವಿದೇಶಗಳಲ್ಲಿ ತಲೆ ಮರೆಸಿಕೊಂಡು ಭಾರತದ ಕೈಗೆ ಸಿಗದಂತೆ ಅವಿತಿದ್ದ ಹಲವಾರು ಉಗ್ರರನ್ನು ಅಪರಿಚಿತರು ಹತ್ಯೆ ಮಾಡುತ್ತಿದ್ದ ಸಂಗತಿ ಎಲ್ಲರಿಗೂ ಸಂಗೀತ. ಅಪರಿಚಿತರು ಭಾರತ ವಿರೋಧಿ, ಮೋಸ್ಟ್ ವಾಂಟೆಡ್ ಉಗ್ರರ ಹತ್ಯೆಯನ್ನು ಈ ವರ್ಷದಲ್ಲಿಯೂ ಮುಂದುವರೆಸುತ್ತದೆ ಎನ್ನುವುದಕ್ಕೆ ಸಾಕ್ಷಿ ಎಂಬಂತೆ ಘಟನೆಯೊಂದು ನಡೆದಿದೆ.
2024 ರ ಕ್ಯಾಲೆಂಡರ್ ವರ್ಷದ ಆರಂಭದಲ್ಲಿಯೇ ಅಪರಿಚಿತರು ಬಾಂಬ್ ಸ್ಪೋಟಿಸಿ ಭಾರತಕ್ಕೆ ಬೇಕಾಗಿದ್ದ ಉಗ್ರನೋರ್ವನನ್ನು ಉಡೀಸ್ ಮಾಡಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಕುಖ್ಯಾತ ಪಾತಕಿ, ಜಾಗತಿಕ ಭಯೋತ್ಪಾದಕನಾದ, ಜೈಶ್ ಎ ಮೊಹಮ್ಮದ್ ಎಂಬ ಉಗ್ರ ಸಂಘಟನೆಯ ಮುಖ್ಯಸ್ಥನಾಗಿದ್ದ ಮೌಲಾನಾ ಮಸೂದ್ ಅಜರ್ ಎಂಬಾತನನನ್ನೇ ಬಾಂಬ್ ಸ್ಪೋಟಿಸುವ ಮೂಲಕ ಅಪರಿಚಿತರು ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ನಿನ್ನೆ ಬೆಳಗ್ಗೆ ಸುಮಾರು ಐದು ಗಂಟೆಯ ಸಮಯದಲ್ಲಿ ಭವಲ್ಪುರ ಮಸೀದಿಯ ಸಮೀಪ ಈ ಘಟನೆ ನಡೆದಿದೆ ಎಂದು ಅನಾಮಧೇಯ ಮೂಲಗಳು ಹೇಳಿವೆ. ಅಜರ್ ತನ್ನ ಕಾರಿನ ಸಮೀಪ ಬರುತ್ತಿದ್ದ ಸಂದರ್ಭದಲ್ಲಿ ಕಾರಿನ ಬಲ ಬಾಗಿಲಿನ ಬಳಿ ಈ ಸ್ಪೋಟ ಸಂಭವಿಸಿದೆ. ಈ ಸಂದರ್ಭದಲ್ಲಿ ಅಜರ್ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಆತನ ಕಾರ್ ನಲ್ಲಿ ಅಪರಿಚಿತ ದುಷ್ಕರ್ಮಿಗಳು ಬಾಂಬ್ ಅಳವಡಿಸಿದ್ದು, ಆತ ಕಾರ್ ಬಳಿ ಬರುತ್ತಿದ್ದಂತೆಯೇ ಬಾಂಬ್ ಸ್ಪೋಟಿಸಿದ್ದಾರೆ. ಈ ವೇಳೆ ಆತ ಸಾವನ್ನಪ್ಪಿದ್ದಾನೆ. ಈತನೂ ಭಾರತ ಹುಡುಕುತ್ತಿದ್ದ ಮೋಸ್ಟ್ ವಾಂಟೆಡ್ ಉಗ್ರರಲ್ಲಿ ಓರ್ವನಾಗಿದ್ದಾನೆ.
ಈತ ಮಸೀದಿಗೆ ತೆರಳಿ ಅಲ್ಲಿಂದ ತನ್ನ ನಿವಾಸಕ್ಕೆ ಹಿಂದಿರುಗಲು ಕಾರಿನ ಬಳಿ ಬಂದಿದ್ದ. ಈ ಸಮಯವನ್ನು ಕಾಯುತ್ತಿದ್ದ ಅಪರಿಚಿತರು ಈತನನ್ನು ಬಾಂಬ್ ಸ್ಪೋಟಿಸಿ ಹತ್ಯೆ ಮಾಡಿದ್ದಾರೆ.
ಈತ 1999 ರ ಡಿಸೆಂಬರ್ 24 ರಂದು 176 ಪ್ರಯಾಣಿಕರನ್ನು ಹೊಂದಿದ್ದ IC814 ವಿಮಾನವನ್ನು ಅಪಹರಿಸಿದ್ದ ಕೃತ್ಯದಲ್ಲಿ ಭಾಗಿಯಾಗಿದ್ದ. ಈ ವಿಮಾನ ಕಾಠ್ಮಂಡುವಿನಿಂದ ದೆಹಲಿಗೆ ಬರುತ್ತಿತ್ತು.
ಕಳೆದ ವರ್ಷವಷ್ಟೇ ಈತನ ಆಪ್ತ ಜೈಶ್ ಎ ಮೊಹಮ್ಮದ್ ಸಂಘಟನೆಯ ಉಗ್ರ ಮೌಲಾನಾ ರಹೀಮುಲ್ಲಾ ತಾರಿಕ್ನನ್ನು ಅಪರಿಚಿತರು ಗುಂಡಿಕ್ಕಿ ಯಮಪುರಿಗೆ ಅಟ್ಟಿದ್ದರು.