ಪ್ರಚಲಿತ

ಕೇಂದ್ರ ಗುಪ್ತಚರ ಇಲಾಖೆಯಿಂದ ಸ್ಪೋಟಕ ಮಾಹಿತಿ !! ಭಾರತಕ್ಕೆ ಬರುವ ಪಾಕ್ ಉಗ್ರರು ತರಬೇತಿ ಪಡೆಯುತ್ತಿರುವುದು ಎಲ್ಲಿ ಗೊತ್ತಾ!!?

ಭಾರತ ಪಾಕಿಸ್ತಾನ ವಿಭಜನೆಗೊಂಡ ದಿನದಿಂದಲೂ ಭಾರತದ ಮೇಲೆ ಸದಾ ಕತ್ತಿಮಸೆಯುತ್ತಲೇ ಬಂದಿರುವ ಪಾಕಿಸ್ತಾನ ಗಡಿಯಲ್ಲಿ ಪದೇ ಪದೇ ಉಪಟಳ ನೀಡುತ್ತಲೇ ಇದೆ…!

ಭಾರತದ್ದೇ ಭೂಭಾಗ ಪಾಕಿಸ್ತಾನ. ಆದರೆ ಇವೆರಡೂ ವಿಭಜನೆಗೊಂಡ ದಿನದಿಂದಲೇ ಶತ್ರು ರಾಷ್ಟ್ರಗಳಾದವು.
ಪಾಕಿಸ್ತಾನಕ್ಕೆ ಭಾರತದ ಸಾಮಾರ್ಥ್ಯ ತಿಳಿದಿದ್ದರೂ ಭಾರತದ ಮೇಲೆ ದಾಳಿ ನಡೆಸಲು ಹೊಂಚುಹಾಕುತ್ತಲೇ ಇದೆ…!!

1999ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ‘ಕಾರ್ಗಿಲ್ ವಾರ್’ ಇಡೀ ಜಗತ್ತಿನ ಗಮನಸೆಳೆದಿತ್ತು.
ಯಾಕೆಂದರೆ ಭಾರತದ ಶತ್ರು ರಾಷ್ಟ್ರವಾದ ಪಾಕಿಸ್ತಾನ ಪದೇ ಪದೇ ಭಾರತದ ವಿರುದ್ಧ ಯುದ್ಧ ಪ್ರೇರಿತ ಚಟುವಟಿಕೆಗಳನ್ನು ನಡೆಸುತ್ತಲೇ ಇತ್ತು.

ಇದನ್ನೆಲ್ಲಾ ಗಮನಿಸಿದ ಭಾರತ ಯುದ್ಧ ಘೋಷಣೆ ಮಾಡಿತ್ತು…!! 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನವನ್ನು ಭಾರತ ಮಣಿಸಿತ್ತು…!! ಭಾರತದ ಸೇನಾಪಡೆಯ ಸಾಮಾರ್ಥ್ಯ ತಿಳಿದಿದ್ದರೂ ಪಾಕಿಸ್ತಾನ ಪದೇ ಪದೇ ಕಾಲುಕೆರೆದು ಜಗಳಕ್ಕೆ ನಿಂತಿದ್ದರಿಂದಲೇ ಭಾರತವೂ ಯುದ್ಧ ನಡೆಸಿತ್ತು, ಮತ್ತು ನಡೆದ ಯುದ್ಧದಲ್ಲಿ ಪಾಕಿಸ್ತಾನವನ್ನು ಸೋಲಿಸಿ ಭಾರತ ಜಯಗಳಿಸಿತ್ತು.

ಈ ನಂತರದಲ್ಲೂ ಪಾಕಿಸ್ತಾನ ಬುದ್ದಿ ಕಲಿಯಲಿಲ್ಲ. ಯಾಕೆಂದರೆ ಗಡಿಯಲ್ಲಿ ಭಾರತದ ಸೈನಿಕರ ಮೇಲೆ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಲೇ ಬಂದಿದೆ. ತನ್ನ ಗಡಿಭಾಗದಲ್ಲಿ ಸೈನಿಕರ ಜೊತೆಗೆ ಉಗ್ರರಿಗೂ ನೆಲೆಸಲು ಅವಕಾಶ ಕಲ್ಪಿಸಿರುವ ಪಾಕಿಸ್ತಾನ ಭಾರತದ ಮೇಲೆ‌ ಉಗ್ರ ದಾಳಿಗೂ ಪ್ರಯತ್ನಪಡುತ್ತಲೇ ಇದೆ. ಭಾರತದ ಗಡಿಯಲ್ಲಿ ಉಗ್ರರನ್ನು ಮೋಸದಿಂದ ಭಾರತದತ್ತ ಕಳುಹಿಸಿ ಭಾರತದಲ್ಲಿ ಉಗ್ರ ಕ್ರತ್ಯ ಎಸಗಲು ಪ್ರಯತ್ನಪಡುತ್ತಲೇ ಇದೆ…!!

ಇದೀಗ ಮತ್ತೆ ಪಾಕಿಸ್ತಾನ‌‌ ಸೇನೆ ಮತ್ತು ಗೂಢಚಾರ ಸಂಸ್ಥೆ (ಐ ಎಸ್ ಐ) ಯಿಂದ ತರಬೇತಿ ಪಡೆದ ಉಗ್ರರನ್ನು ಭಾರತದ ಜಮ್ಮು ಕಾಶ್ಮೀರದ ಗಡಿಭಾಗದಲ್ಲಿ ಭಾರತಕ್ಕೆ ನುಸುಳಿ ,ಉಗ್ರ ಕ್ರತ್ಯವೆಸಗಲು ತಯಾರಿ ನಡೆಸುತ್ತಿದೆ ಎಂಬ ಗಂಭೀರವಾದ ಮಾಹಿತಿಯನ್ನು ಭಾರತದ ಗುಪ್ತಚರ ಇಲಾಖೆ ಬಯಲಿಗೆಳೆದಿದೆ…!!!

ಇತ್ತೀಚೆಗೆ ಪಾಕಿಸ್ತಾನ ಸೇನೆ ಮತ್ತು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಯ ಹಿರಿಯ ಅಧಿಕಾರಿಗಳು ನಡೆಸಿದ ಸಭೆಯಲ್ಲಿ ಪಾಕಿಸ್ತಾನದ ಉಗ್ರರಿಗೆ ದಾಳಿ ನಡೆಸುವ ತರಬೇತಿ ಮತ್ತು ಶಸ್ತ್ರಾಸ್ತ್ರ ನೀಡಿ ಭಾರತದೊಳಗೆ ಕಳುಹಿಸುವ ತೀರ್ಮಾನ ಕೈಗೊಳ್ಳಲಾಗಿತ್ತು ಎಂಬುದು ಭಾರತದ ಗುಪ್ತಚರ ದಳದಿಂದ ತಿಳಿದುಬಂದಿದೆ…!!

ಪಾಕಿಸ್ತಾನದ ಸೇನೆಯಿಂದ ತರಬೇತಿ ಪಡೆದ ಸುಮಾರು 386 ಉಗ್ರರಿರುವ ವಿಶೇಷ ಕಾರ್ಯಪಡೆ ಹೆಸರಿನ ತಂಡವೊಂದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 13 ಲಾಂಚ್ ಪಾಡ್ ಗಳಲ್ಲಿ ಈಗಾಗಲೇ ನೆಲೆಗೊಂಡಿದೆ ಎಂದೂ ಹೇಳಲಾಗಿದೆ…!!

ಈ ಹಿಂದೆ ಭಾರತದ ವಾಯುನೆಲೆಯ ಮೇಲೆ ಪಾಕಿಸ್ತಾನ ಸೈನಿಕರು ನಡೆಸಿದ ದಾಳಿಯಲ್ಲಿ ಭಾರತದ ಕೆಲ ಸೈನಿಕರು ಮ್ರತರಾಗಿದ್ದರು. ಈ ದಾಳಿಗೆ ಇಡೀ ಜಗತ್ತಿನಾದ್ಯಂತ ವಿಷಾದ ವ್ಯಕ್ತವಾಗಿತ್ತು. ಆದರೆ ಭಾರತ ಈ ದಾಳಿಯನ್ನು ಗಂಭೀರವಾಗಿ ಪರಿಗಣಿಸಿ ಕೆಲವೇ ದಿನಗಳಲ್ಲಿ ಪಾಕಿಸ್ತಾನದ ಗಡಿ ದಾಟಿದ ಭಾರತೀಯ ಸೈನಿಕರು ಪಾಕಿಸ್ತಾನದ ಸೇನಾ ನೆಲೆಯ ಮೇಲೆ ಮತ್ತು ಉಗ್ರ ಅಡಗುತಾಣಗಳ ಮೇಲೆ ದಾಳಿ ನಡೆಸಿ ಪಾಕಿಸ್ತಾನದ ಅನೇಕ ಸೈನಿಕರನ್ನು ಹತ್ಯೆ ಮಾಡಿತ್ತು…!!


ಈ ದಾಳಿಯಿಂದ ತತ್ತರಿಸಿದ ಪಾಕಿಸ್ತಾನ ಗಡಿಯಲ್ಲಿ ನಡೆಸುತ್ತಿದ್ದ ಅಪ್ರಚೋದಿತ ದಾಳಿಗೆ ಕಡಿವಾಣ ಹಾಕಿತ್ತು.
ಆದರೆ ‘ನಾಯಿ ಬಾಲ ಡೊಂಕು’ ಎಂದ ಹಾಗೆ ಪಾಕಿಸ್ತಾನ ಮತ್ತೆ ತನ್ನ ಹಳೇ ಛಾಳಿಯನ್ನು ಮುಂದುವರೆಸಿದೆ…!!

ಭಾರತದ ಮೇಲೆ‌ ಈ ಹಿಂದೆಯೂ ಉಗ್ರ ದಾಳಿ ನಡೆಸಿದ್ದ ಪಾಕಿಸ್ತಾನ ಮುಂಬೈಯ ಹೋಟೆಲ್ ಒಂದರಲ್ಲಿ ಭೀಕರ ದಾಳಿ ನಡೆಸಿದ್ದ ಪಾಕಿಸ್ತಾನದ ಕೆಲ‌ ಉಗ್ರರು ಹಲವಾರು ಜೀವ ಬಲಿ ಪಡೆದುಕೊಂಡಿದ್ದರು…!!

ಭಾರತದಲ್ಲಿದ್ದು ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿರುವ ಕೆಲ ಸಂಘಟನೆಗಳ ಮೇಲೂ ಕಣ್ಣಿಡುವಂತೆ ಗುಪ್ತಚರ ಸಂಸ್ಥೆ ಎಚ್ಚರಿಸಿದೆ…!! ಗುಪ್ತಚರ ಇಲಾಖೆಯು ನೀಡಿದ ಈ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಿದ ಭಾರತ ಸರಕಾರ ಗಡಿಯಲ್ಲಿ ಕಟ್ಟೆಚ್ಚರ ವಹಿಸಿದೆ…!!

ಪಾಕಿಸ್ತಾನದ ಇಂತಹ ಚಟುವಟಿಕೆಗಳನ್ನು ವಿಫಲಗೊಳಿಸುವ ಸಾಮಾರ್ಥ್ಯ ಭಾರತಕ್ಕಿದೆ ಎಂದು ಭಾರತದ ಭದ್ರತಾ ಪಡೆ ತಿಳಿಸಿದೆ…!! ಭಾರತದ ಸೇನಾ ಸಾಮಾರ್ಥ್ಯ ಬಲಿಷ್ಠವಾಗಿದೆ.ಪಾಕಿಸ್ತಾನಕ್ಕೆ ಈ ಬಗ್ಗೆ ಅರಿವಿದ್ದರೂ ಭಾರತವನ್ನು ಪದೇ ಪದೇ ಕೆಣಕುತ್ತಲೇ ಇದೆ. ಆದರೆ ಪಾಕಿಸ್ತಾನವೇನಾದರು ಇಂತಹ ಉಗ್ರ ಚಟುವಟಿಕೆಗಳನ್ನು ಭಾರತದ ಮೇಲೆ ನಡೆಸಲು ಪ್ರಯತ್ನ ಪಟ್ಟರೆ ಅದಕ್ಕೆ ಬೇಕಾದ ಉತ್ತರ ನೀಡಲು ಭಾರತೀಯ ಸೇನೆ ಸಿದ್ಧವಿದೆ ಎಂದು ಸೇನಾ ಮುಖ್ಯಸ್ಥರು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ…!!!
–ಅರ್ಜುನ್

Tags

Related Articles

Close