ಕ್ರಿಕೆಟ್ ನ ದಂತಕಥೆ ಮತ್ತು ಭಾರತ್ ರತ್ನ ಪ್ರಶಸ್ತಿ ಪುರಸ್ಕೃತ ಸಚಿನ್ ತೆಂಡುಲ್ಕರ್ ರವರಿಗೆ ರಾಜ್ಯಸಭಾದಲ್ಲಿಯೇ ಅತಿರೇಕವೆನ್ನುವಷ್ಟು ಅವಮಾನ ಮಾಡಿದ್ದಾರೆ ಕಾಂಗ್ರೆಸ್ ಪಕ್ಷದ ಸಂಸದ! ರಾಜ್ಯಸಭಾ ಸದಸ್ಯರಾಗಿರುವ ಸಚಿನ್ ತೆಂಡುಲ್ಕರ್ ಇವತ್ತು ಅವರ ಪ್ರಥಮ ಭಾಷಣವನ್ನು ಮಾಡುವವರಿದ್ದರು.
ರಾಜ್ಯ ಸಭಾದಲ್ಲಿ, ಇವತ್ತು ಸೆಂಟ್ರಲ್ ಹೆಲ್ತ್ ಗ್ಯಾರಂಟಿ ಸ್ಕೀಮ್ (ಸಿಜಿಎಚ್ ಎಸ್) ರ ಇನ್ನೂ ಬಾಕಿ ಉಳಿದಿದ್ದ ಕೆಲವು ಕಾರ್ಯತಂತ್ರಗಳನ್ನು ಹಾಗೂ ರಾಷ್ಟ್ರೀಯ ಪದಕ ವಿಜೇತರರ ಆರೋಗ್ಯ ಕುರಿತಾಗಿ ಎಂಬೆಲ್ಲ ವಿಷಯಗಳ ಬಗ್ಗೆ ಮಾತನಾಡುವವರಿದ್ದ ಕ್ರಿಕೆಟ್ ದಿಗ್ಗಜ, ಪ್ರಥಮ ಭಾಷಣ ಆರಂಭಿಸುವ ಹೊತ್ತಿನಲ್ಲಿಯೇ, ಕಾಂಗ್ರೆಸ್ ನಾಯಕರು ಸ್ಲೋಗನ್ ಗಳನ್ನು ಅರಚಿದ್ದಲ್ಲದೇ, ಪ್ರಧಾನಿ ಮೋದಿಯವರು ಕ್ಷಮೆ ಕೇಳಬೇಕೆಂದು ಆಗ್ರಹಿಸಲು ಪ್ರಾರಂಭಿಸಿದ ಪರಿಣಾಮ ಸಚಿನ್ ಗೆ ತೀರಾ ಮುಖಭಂಗವಾಗಿದೆ!
ಯಾವಾಗ ಈ ನಾಟಕ ಪ್ರಾರಂಭವಾಯಿತೋ, ಹತ್ತು ನಿಮಿಷಗಳ ಕಾಲ ಸಚಿನ್ ಕಾದರೂ ಸಹ, ಯಾವುದೇ ಕಾಂಗ್ರೆಸ್ ನಾಯಕನೂ ಸಹ ಭಾಷಣ ಪ್ರಾರಂಭಿಸಲು ಅವಕಾಶವನ್ನೇ ಕೊಡದೇ, ಮೂರು ಬಿಟ್ಟವರೆಂಬುದನ್ನು ಇನ್ನೊಮ್ಮೆ ಸಾಬೀತು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ!
” ಪ್ರತಿ ಏಕಾಗ್ರತೆಯೂ ಸಹ ಸಚಿನ್ ತೆಂಡುಲ್ಕರ್ ಮೇಲಿರಬೇಕು. ಬೇರಾವುದೂ ಸಹ ಕೇಳಬಾರದು ಕೂಡ. ಇದು ಅವರ ಪ್ರಥಮ ಭಾಷಣ! ನಾವು ಕ್ರೀಡೆಯ ಬಗ್ಗೆ ಚರ್ಚೆ ಮಾಡುತ್ತಿದ್ದರೆ, ನಿಮಗೆ ಯಾರಿಗೂ ಸಹ ಆ ಕ್ರೀಡಾ ಉತ್ಸಾಹವೇ ಇಲ್ಲ!” ಎಂಬುದಾಗಿ ಉಪರಾಷ್ಟ್ರಪತಿಯಾದ ವೆಂಕಯ್ಯ ನಾಯ್ಡು ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ! ಇನ್ನೊಂದಿಷ್ಟು ವಿಷಯಗಳ ಬಗ್ಗೆಯೂ ಚರ್ಚಿಸುವವರಿದ್ದ ತೆಂಡುಲ್ಕರ್ ಇವತ್ತು ಅವಕಾಶವನ್ನು ಕಳೆದುಕೊಳ್ಳುವ ಹಾಗೆ ಮಾಡಿರುವ ಕಾಂಗ್ರೆಸ್ಸಿಗರಿಗೆ ಬಿಜೆಪಿ ನಾಯಕರೂ ಸಹ ತಿರಸ್ಕಾರ ತೋರಿಸಿದ್ದಾರೆ.
ಸಚಿನ್ ತೆಂಡುಲ್ಕರ್ ರವರನ್ನು ಕಾಂಗ್ರೆಸ್ಸಿಗರು ಅವಮಾನಿಸಿದ್ದು ಹೀಗೆ!
Congress MPs Disrupt #SachinTendulkar's Speech In Rajya Sabha. Shame On Congress
Retweet & Expose Corrupt Congis pic.twitter.com/7zGdajfXis
— Narendra Modi (@narendramodi177) December 21, 2017
ತಕ್ಷಣವೇ, ಇಡೀ ದೇಶ ಕಾಂಗ್ರೆಸ್ ವಿರುದ್ಧ ಸಿಡಿದೆದ್ದಿದೆ!
https://twitter.com/ankita__rathore/status/943805040799522816
ಪ್ರತಿಯೊಂದಕ್ಕೂ ಮೋದಿಯನ್ನು ದೂರುವ ಕಾಂಗ್ರೆಸ್ ಗೆ ತನ್ನದೇ ಬುಡವೊಂದು ಹಗರಣಗಳಿಂದ ಕೊಳೆಯುತ್ತ ಬಿದ್ದಿರುವುದರ ಪರಿವೇ ಇಲ್ಲ ಬಿಡಿ!
ಸಚಿನ್ ತೆಂಡುಲ್ಕರ್ ಮತಬ್ಯಾಂಕ್ ಪಂಗಡಕ್ಕೆ ಸೇರಿದವರಲ್ಲ ಎಂಬ ಕಾರಣಕ್ಕೆ ಅವಮಾನಿಸಿತೇ ಕಾಂಗ್ರೆಸ್?!
ಕಾಂಗ್ರೆಸ್ ಗೊಂದು ಹವ್ಯಾಸವಿದೆ! ದೇಶಭಕ್ತರನ್ನು ಅವಮಾನಿಸುವುದು ಮತ್ತು ದೇಶದ್ರೋಹಿಗಳನ್ನು ಬೆಂಬಲಿಸುವುದು!” ಇವತ್ತು ನಡೆದ ಘಟನೆ ಅದಕ್ಕೆ ತಾಜಾ ಉದಾಹರಣೆ!
Congress has no sympathy for #SachinTendulkar as he is not going to add to their vote bank. Right now MMS is their trump card to use in 2019 elections. It is their way of treating the stalwarts like Sachin who incidentally was awarded Bharat Ratna by this very corrupt congress.
— Totlani Krishan (@kktotlani) December 21, 2017
ರಾಹುಲ್ ಗಾಂಧಿ ಕೇಳುತ್ತಾನಾ ಕ್ಷಮೆ?!
ರಾಹುಲ್ ಗಾಂಧಿ ಸ್ವತಃ ತಾನೊಬ್ಬ ಯುವ ನಾಯಕ ಎಂದು ಬಿಂಬಿಸಿಕೊಳ್ಳುತ್ತಾನಷ್ಟೇ! ಆದರೆ, ಇನ್ನೊಬ್ಬ ಯುವ ನಾಯಕನ ಮಾತಿಗೆ ಅವಕಾಶವೇ ಕೊಡದವನು ಎಂತಹ ನಾಯಕ?”
What a shame!! Legand Bharat Ratna #SachinTendulkar not allowed to speak on being repeated reminder by RS Chairman saying "Respect the icon".Its country Insult by #Congress
— Abhay Surpurkar (@ASurpurkar) December 21, 2017
ಇದು ಇಡಿಯ ಕ್ರೀಡೆ ಗೆ ಆದ ಅವಮಾನ!!
ಈ ಹಿಂದೆ, ಇಲ್ಲಸಲ್ಲದ ಅವಮಾನವನ್ನು ಕಾಮನ್ ವೆಲ್ತ್ ಕ್ರೀಡೆಯಲ್ಲಿ ಮಾಡಿಕೊಂಡು ರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಿದ ಕಾಂಗ್ರೆಸ್ ಈಗ ಮತ್ತೆ
ಕ್ರಿಕೆಟ್ ದಿಗ್ಗಜರನ್ನು ಅವಮಾನ ಮಾಡುವ ಮೂಲಕ ಇಡಿಯ ಕ್ರೀಡಾ ಸಂಸ್ಕೃತಿಗೆ ಅವಮಾನ ಮಾಡಲು ತಯಾರಾಗಿದೆ ಅಷ್ಟೇ!
– ಪೃಥು ಅಗ್ನಿಹೋತ್ರಿ