ಪ್ರಚಲಿತ

ಬಿಗ್ ಬ್ರೇಕಿಂಗ್: ಮುಖ್ಯಮಂತ್ರಿಗಳನ್ನೇ ನಾಚಿಸಿದ ಪರಮೇಶ್ವರ್!! ಅರೆಬರೆ ಬಟ್ಟೆ ತೊಟ್ಟ ಹೆಂಗಳೆಯರ ಮಧ್ಯೆ ಪರಮೇಶ್ವರ್ ರಸಿಕನಾಗಿದ್ದು ಹೇಗೆ ಗೊತ್ತಾ?! ಕಾಂಗ್ರೆಸ್ ಅಧ್ಯಕ್ಷರ ಮತ್ತೊಂದು ಮುಖ ಬಯಲು!!

ಮುಖ್ಯಮಂತ್ರಿ ಸಿದ್ದರಾಮಯ್ಯರ ರಸಿಕತನ ಎಲ್ಲರಿಗೂ ಗೊತ್ತಿರುವಂತದ್ದೇ. ಅವರೆಲ್ಲಿಗೇ ಹೋದರೂ ಬಾಲೆಯರು ಅವರ ಹಿಂದೆ ಸುತ್ತುವುದು, ಮುಖ್ಯಮಂತ್ರಿಗಳೂ ಅವರಿಗೆ ತಮ್ಮ ಮುಗ್ದತೆಯನ್ನು ಪ್ರದರ್ಶಿಸುವುದು, ಇದೆಲ್ಲಾ ಹೊಸದೇನಲ್ಲ. ಹುಡುಗರು ಮುಖ್ಯಮಂತ್ರಿಗಳ ಎದುರು ನಿಂತರೆ ಕೆಂಡ ಕಾರುವ ನಮ್ಮ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಲಲನೆಯರು ಬಂದರೆಂದರೆ ಸಾಕು ನಾಚಿ ಕೆಂಪಗಾಗುತ್ತಾರೆ. ಆದರೆ ಈಗ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮುಖ್ಯಮಂತ್ರಿಗಳಿಗಿಂತ ತಾನೂ ಏನೂ ಕಡಿಮೆ ಇಲ್ಲ ಎಂಬುವುದನ್ನು ಸಾಭೀತು ಪಡಿಸಿದ್ದಾರೆ.

ಬಾಲೆಯರ ಮಧ್ಯೆ ಕೃಷ್ಣನಂತೆ ನಿಂತ ಪರಮೇಶ್ವರ..!!!

ಸುತ್ತ ಬಾಲೆಯರ ನರ್ತನ. ಮಧ್ಯೆ ಶ್ರೀ ಕೃಷ್ಣನಂತೆ ನಿಂತು ಪೋಸು ನೀಡಿದ ಪರಮೇಶ್ವರ. ಇದು ನಿನ್ನೆಯ ತುಮಕೂರಿನ ಕೊರಟಗೆರೆ ಉತ್ಸವದಲ್ಲಿ ಕಂಡು ಬಂದ ದೃಶ್ಯಾವಳಿ. ಕಾಂಗ್ರೆಸ್‍ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಪ್ರಚಾರವನ್ನು ಕಂಡಂತಹ ಪರಮೇಶ್ವರ್ ಕಕ್ಕಾಬಿಕ್ಕಿಯಾಗಿದ್ದರು. ವಿವಿಧ ಕಾಮಗಾರಿಗಳ ಉಧ್ಘಾಟನೆ ಹಾಗೂ ಶಂಕು ಸ್ಥಾಪನೆಯ ನೆಪವೊಡ್ಡಿ ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೂ ತಿರುಗಿ ಜನಾಶಿರ್ವಾದ ಯಾತ್ರೆಯ ಹೆಸರಿನಲ್ಲಿ ಪ್ರಚಾರ ಪಡೆಯುತ್ತಿದ್ದಾರೆ. ಆದರೆ ಇದನ್ನು ಸಹಿಸಲಾಗದ ಪರಮೇಶ್ವರ್ ತಾನೂ ಶೈನ್ ಆಗಬೇಕೆಂದು ಶತಾಯ ಗತಾಯ ಪ್ರಯತ್ನಿಸಿದ್ದರು. ಅದೇಗೇ ಪ್ರಯತ್ನ ಪಟ್ಟರೂ ಪರಮೇಶ್ವರ್ ಕನಸು ಈಡೇರಲೇ ಇಲ್ಲ. ಈ ಕಾರಣಕ್ಕಾಗಿಯೇ ಈ ಒಂದು ಕಾರ್ಯಕ್ರಮವನ್ನು ಸೆಟ್ಟಿಂಗ್ ಮಾಡಿ ತನ್ನ ಸುತ್ತ ಹುಡುಗಿಯರನ್ನು ನರ್ತಿಸುವಂತೆ ಮಾಡಿದ್ದಾರೆ.

 

ಮುಖ್ಯಮಂತ್ರಿಯ ರಸಿಕತೆಯನ್ನು ಪ್ಲಾಪ್ ಮಾಡಲು ಹೊರಟರೇ ಪರಂ?

ಸಿದ್ದರಾಮಯ್ಯ ಅಂದರೆ ಹಾಗೇನೆ. ಮಹಿಳೆಯರೆಂದರೆ ಅದೇನೋ ಅವರಿಗೆ ಸಾಫ್ಟ್ ಕಾರ್ನರ್. ಅದೆಷ್ಟೋ ಸ್ಥಳಗಳಲ್ಲಿ ಇದನ್ನು ಸಾಭೀತುಪಡಿಸಿದ್ದಾರೆ. ಈ ಹಿಂದೆ ಮಹಿಳಾ ಕಾಂಗ್ರೆಸ್ ನ ಕಾರ್ಯಕರ್ತರೊಬ್ಬರು ವೇದಿಕೆಯಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮುತ್ತು ಕೊಟ್ಟಿದ್ದರು. ಇದು ಭಾರೀ ಪ್ರಚಾರವನ್ನು ಪಡೆದಿತ್ತು. ಮಾಧ್ಯಮ ಹಾಗೂ ಸಾರ್ವಜನಿಕರ ಎದುರಲ್ಲೇ ಮುಖ್ಯಮಂತ್ರಿಗಳಿಗೆ ತಬ್ಬಿ ಮುತ್ತು ಕೊಟ್ಟಿರುವುದೂ, ಮುಖ್ಯಮಂತ್ರಿಗಳೂ ಆಕೆಯನ್ನು ತಬ್ಬಿಕೊಂಡಿದ್ದೂ ಭಾರೀ ಚರ್ಚೆಗೆ ಕಾರಣವಾಗಿತ್ತು.

ನಂತರ ಮಂಗಳೂರಿನಲ್ಲಿ ಮೇಯರ್ ಕವಿತಾ ಸನಿಲ್ ಎಂಬವರೊಂದಿಗೆ ಕರಾಟೆ ಕಾರ್ಯಕ್ರಮ ಉಧ್ಘಾಟನೆ ವೇಳೆ ಮಹಿಳಾ ಮೇಯರ್ ಹೊಟ್ಟೆಗೆ ಪಂಚ್ ನೀಡಿದ್ದರು. ಹೊಟ್ಟೆಗೆ ನೀಡಿದ್ದ ಪಂಚ್ ಅದೆಲ್ಲೆಲ್ಲಿಗೋ ಬಿದ್ದು ಅದು ಕೂಡಾ ರಾಜ್ಯವ್ಯಾಪಿ ಪ್ರಚಾರವನ್ನು ಪಡೆದುಕೊಂಡಿತ್ತು. ಮಹಿಳಾ ಮೇಯರ್‍ನ ಹೊಟ್ಟೆಗೆ ನೀಡಿದ್ದ ಪಂಚ್‍ನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಮೇಯರ್ ಕವಿತಾ ಸನಿಲ್ ಬಿಟ್ಟಿ ಪ್ರಚಾರವನ್ನೇ ಪಡೆದಿದ್ದರು.

ಹುಡುಗರು ಸೆಲ್ಫಿ ತೆಗೆಯಲು ದುಂಬಾಲು ಬಿದ್ರೆ ಅದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೂಡಿ ಅವರಿಗೆ ಗದರಿಸುತ್ತಾರೆ. ಆದರೆ ಇತ್ತೀಚೆಗೆ ಮಹಿಳೆಯರ ತಂಡವೊಂದು ವೇದಿಕೆಯಲ್ಲೇ ಮುಖ್ಯಮಂತ್ರಿಗಳೊಂದಿಗೆ ದೂರದಿಂದ ಸೆಲ್ಫಿ ತೆಗೆಯಲು ಮುಂದಾದಾಗ ಸ್ವತಃ ಮುಖ್ಯಮಂತ್ರಿಗಳೇ ಆ ಮಹಿಳೆಯನ್ನು ಕೈಯ್ಯಲ್ಲಿ ಹಿಡಿದು ಎಳೆದು, ತನ್ನತ್ತ ಬರಸೆಳೆದು, ಹತ್ತಿರದಿಂದ ಸೆಲ್ಫಿ ತೆಗೆಸಿಕೊಳ್ಳುವಂತೆ ಮಾಡಿದ್ದರು.

ಕೇವಲ ಇವಿಷ್ಟು ಮಾತ್ರವಲ್ಲ. ವೃದ್ಧ ಮಹಿಳೆಯರನ್ನೋ ಅಥವಾ ಪುರುಷರನ್ನೋ ತನ್ನ ಹತ್ತಿರಕ್ಕೂ ಸುಳಿಯಲು ಬಿಡದ ಮುಖ್ಯಮಂತ್ರಿ ಸಿದ್ದರಾಮಯ್ಯ, ಲಲನೆಯರನ್ನು ಕಂಡರೆ ಮಾತ್ರ ಹತ್ತಿರ ಬರಸೆಳೆದು ಅಪ್ಪಿಕೊಳ್ಳುತ್ತಾರೆ.

ಸಿಎಂಗೇ ಟಾಂಗ್ ಕೊಟ್ಟ ಪರಂ…

ಈವಾಗ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೇ ಪರಮೇಶ್ವರ್ ಟಾಂಗ್ ಕೊಟ್ಟಿದ್ದಾರೆ. ಮಹಿಳೆಯರೊಂದಿಗೆ ನರ್ತನ ಮಾಡುವುದು ನಮಗೂ ಗೊತ್ತಿದೆ. ನಾನೂ ಏನೂ ಕಡಿಮೆಯಲ್ಲಿಲ್ಲ ಎಂಬುವುದನ್ನು ಸಾಭೀತುಪಡಿಸಿದ್ದಾರೆ. ಕೊರಟಗೆರೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸುತ್ತಮುತ್ತ ಮಹಿಳಾ ಡ್ಯಾನ್ಸರ್‍ಗಳು ಹೆಜ್ಜೆ ಹಾಕುತ್ತಿದ್ದರೆ, ಮಧ್ಯೆ ಒಂದು ಸಿಂಹಾಸನದಲ್ಲಿ ಕುಳಿತು ಶ್ರೀ ಕೃಷ್ಣನಂತೆ ಪೋಸು ನೀಡಿದ್ದಾರೆ ನಮ್ಮ ಕೆಪಿಸಿಸಿ ಅಧ್ಯಕ್ಷರಾದ ಡಾ.ಜಿ.ಪರಮೇಶ್ವರ್.

ಚುನಾವಣೆ ಹತ್ತಿರ ಬರುತ್ತಿದ್ದಂತೆ ಹೈಡ್ರಾಮ ಮಾಡುತ್ತಿರುವ ಪರಂ..!!!

ಕಳೆದ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಕುತಂತ್ರದಲ್ಲಿ ಸೋಲನುಭವಿಸಿದ್ದ ಪರಮೇಶ್ವರ್ ಈ ಬಾರಿ ಹೇಗಾದರೂ ಮಾಡಿ ಗೆಲ್ಲಲೇ ಬೇಕು ಎನ್ನುವ ಪಣ ತೊಟ್ಟಿದ್ದಾರೆ. ಈ ಕಾರಣಕ್ಕಾಗಿಯೇ ಇಂತಹ ಡ್ರಾಮಗಳನ್ನು ಮಾಡುವ ಮೂಲಕ ಮುಂದಿನ ಚುನಾವಣೆಯಲ್ಲಿ ತಾನೇ ಶೈನ್ ಆಗಬೇಕೆನ್ನುವ ಹಠಕ್ಕೆ ಬಿದ್ದಿದ್ದಾರೆ. ಈ ಕಾರಣಕ್ಕಾಗಿಯೇ ಸೆಂಟರ್‍ನಲ್ಲಿ ನಿಂತ ಪರಮೇಶ್ವರ್ ಸುತ್ತ ಹೆಂಗಳೆಯರನ್ನು ಕುಣಿಯುವಂತೆ ಮಾಡಿದ್ದಾರೆ. ತುಮಕೂರಿನ ಕೊರಟೆಗೆರೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದ್ದು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ತೀವ್ರ ಆಕ್ರೋಷವನ್ನು ಉಂಟುಮಾಡಿದೆ.

ಕೆಪಿಸಿಸಿ ಅಧ್ಯಕ್ಷ ಅನ್ನೋದೇ ಮರೆತರಾ ಪರಂ?

ತಾನು ರಾಷ್ಟ್ರೀಯ ಪಕ್ಷವೊಂದರ ರಾಜ್ಯ ಅಧ್ಯಕ್ಷ ಎನ್ನುವ ಪದವಿಯನ್ನೇ ಮರೆತರಾ ಪರಮೇಶ್ವರ್ ಎನ್ನುವ ಮಾತೂ ಕೇಳಿ ಬರುತ್ತಿದ್ದು, ಎಲ್ಲಡೆ ಆಕ್ರೋಷ ವ್ಯಕ್ತವಾಗಿದೆ. ಓರ್ವ ಜವಬ್ದಾರಿಯುತ ಸ್ಥಾನದಲ್ಲಿರುವ ನಾಯಕ ಈ ರೀತಿ ವರ್ತಿಸುವುದು ಎಷ್ಟು ಸರಿ? ಇದರಿಂದ ಜನರಿಗೆ ಯಾವ ಸಂದೇಶವನ್ನು ನೀಡಿದಂತಾಗುತ್ತದೆ? ಮಹಿಳೆಯರ ಸಂಸ್ಕøತಿಯನ್ನು ಗೌರವಿಸಬೇಕಾದ ಇವರೇ ಅರೆಬರೆ ಬಟ್ಟೆ ತೊಟ್ಟ ಮಹಿಳೆಯರೊಂದಿಗೆ ನೃತ್ಯ ಮಾಡುವುದು ಸರಿನಾ ಎಂಬ ಪ್ರಶ್ನೆಗಳೂ ಮೂಡುತ್ತಿದೆ.

ಒಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‍ಗೆ ಅದೇನೋ ಮಾಡಿ ಮತ್ತಿನ್ನೇನೋ ಆದ ಹಾಗೆ, ಫೇಮಸ್ ಆಗಲು ಹೋಗಿ ತನ್ನ ಬುಡಕ್ಕೆ ತಾನೇ ಕೊಡಲಿ ಯೇಟು ನೀಡಿದ ಹಾಗೆ ಆಗಿದೆ. ಇದು ಖಂಡಿತವಾಗಿಯೂ ಮುಖ್ಯಮಂತ್ರಿಗಳಿಗೆ ಹಾಲು ಕುಡಿದಷ್ಟು ಸಂತೋಷವನ್ನು ನೀಡಿದ್ದಂತು ಸುಳ್ಳಲ್ಲ.

-ಹರೀಶ್

Tags

Related Articles

Close