ಪ್ರಚಲಿತ

ಬ್ರೇಕಿಂಗ್: ದೀಪಕ್ ರಾವ್ ನಂತರ ಮತ್ತೊಬ್ಬ ಹಿಂದೂ ಕಾರ್ಯಕರ್ತನ ಕೊಲೆಗೆ ಪಿಎಫ್‍ಐ ಟಾರ್ಗೆಟ್..!!! ಮತ್ತೊಮ್ಮೆ ಬೆಚ್ಚಿ ಬಿತ್ತು ಕರ್ನಾಟಕ…

ಮಂಗಳೂರಿನ ಕಾಟಿಪಳ್ಳದ ಸುರತ್ಕಲ್ ಎಂಬಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತ ದೀಪಕ್ ರಾವ್ ಎಂಬಾತನನ್ನು ಪಿಎಫ್‍ಐ ಉಗ್ರರು ಹಾಡಹಗಲೇ ಕೊಚ್ಚಿ ಕೊಲೆ ಮಾಡಿದ್ದರು. ಇದು ಕರಾವಳಿ ಮಾತ್ರವಲ್ಲದೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಸಾಲು ಸಾಲು ಹಿಂದೂ ಕಾರ್ಯಕರ್ತರನ್ನು ಕಳೆದುಕೊಂಡಿರುವ ಕರ್ನಾಟಕದಲ್ಲಿ ಈಗ ಮತ್ತೊಬ್ಬ ಬಡ ಕುಟುಂಬದ ಹಿಂದೂ ಕಾರ್ಯಕರ್ತನನ್ನು ಹಿಂದೂ ಸಮಾಜ ಕಳೆದುಕೊಂಡು ದುಖಃದ ಮಡುವಿನಲ್ಲಿ ಮುಳುಗಿದೆ. ಕೋಮು ಗಲಭೆಗಳಿಂದಲೇ ಸುದ್ದಿಯಾಗುತ್ತಿರುವ ಮಂಗಳೂರು ಈಗ ಮತ್ತೆ ಧರ್ಮೀಯ ಹತ್ಯೆಗಳು ತಾಂಡವಾಡುತ್ತಿದೆ. ಶರತ್ ಮಡಿವಾಳನನ್ನು ಕಳೆದುಕೊಂಡು ಕೆಲವೇ ತಿಂಗಳುಗಳಾಗಿವೆ. ಅಷ್ಟರಲ್ಲೇ ಮತ್ತೊಬ್ಬ ಹಿಂದೂ ಯುವಕನ ತಲೆಯನ್ನು ಜಿಹಾದಿಗಳು ಉರುಳಿಸಿದ್ದಾರೆ. ಮುಸಲ್ಮಾನ ಉಗ್ರರ ಜಿಹಾದಿ ಕೃತ್ಯಕ್ಕೆ ಈಗ ಮತ್ತೊಂದು ಹೆಣ ಬೀದಿಯಲ್ಲಿ ಬೀಳಿಸಿದ್ದು ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.

ಮತ್ತೊಬ್ಬ ಹಿಂದೂವಿಗೆ ಡೇಟ್ ಫಿಕ್ಸ್ ಮಾಡಿದ್ರಾ ಉಗ್ರರು.?

ನಿಸ್ಸಂಶಯವಾಗಿ ಹೇಳಬಹುದು. ರಾಜ್ಯದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಎಂಬ ಮುಸ್ಲಿಂ ಸಂಘಟನೆ ಅದ್ಯಾವ ರೀತಿಯ ಕ್ರೌರ್ಯಕ್ಕೂ ಇಳಿಯಲೂ ಸಿದ್ದವಿದೆ. ಇದು ಅನೇಕ ಬಾರಿ ಸಾಭೀತಾಗಿದೆ. ಈಗ ಮತ್ತೊಮ್ಮೆ ಈ ಉಗ್ರ ಸಂಘಟನೆಯ ಕೃತ್ಯ ಬಟಬಯಲಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಬೆಂಬಲದೊಂದಿಗೆ ನಡೆಯುವ ಈ ಪಿಎಫ್‍ಐ ಉಗ್ರರ ಅಟ್ಟಹಾಸ ಈಗ ಮತ್ತೊಮ್ಮೆ ರಾಜ್ಯದ ಮುಂದೆ ಬೆತ್ತಲಾಗಿದೆ.

ದೀಪಕ್ ರಾವ್ ಹತ್ಯೆಯ ನಂತರ ಈಗ ಮತ್ತೊಬ್ಬ ಹಿಂದೂ ಕಾರ್ಯಕರ್ತನಿಗೆ ಬೆದರಿಕೆಯ ಸಂದೇಶವೊಂದು ರವಾನೆಯಾಗಿದೆ. ಸುಬ್ಬು ಎಂಬಾತನಿಗೆ ಈ ಸಂದೇಶ ರವಾನೆಯಾಗಿದ್ದು ಇದು ಮತ್ತೊಮ್ಮೆ ರಾಜ್ಯದಲ್ಲಿ ಉಗ್ರರ ಕರಾಳ ಮುಖವನ್ನು ದರ್ಶನ ಮಾಡುವತ್ತ ಆತಂಕದ ಛಾಯೆಯನ್ನು ಮೂಡಿಸಿದೆ. ಹಿಂದೂ ಸಂಘಟನೆಯ ಕಾರ್ಯಕರ್ತ ಸುಬ್ಬು ಎಂಬಾತನಿಗೆ ಮುಸಲ್ಮಾನ ಸಂಘಟನೆಯ “ಟ್ರು ಮೀಡಿಯಾ ನೆಟ್‍ವರ್ಕ್” ಎಂಬ ಫೇಸ್ ಬುಕ್ ಪೇಜ್‍ನಿಂದ ಬೆದರಿಕೆಯ ಸಂದೇಶ ಬಂದಿದೆ. ಬಹಿರಂಗವಾಗಿಯೇ ಬೆದರಿಕೆ ಹಾಕಿದ ಪಾಪಿಗಳು ಬೀದಿ ಹೆಣ ಮಾಡಿಬಿಡ್ತೀವಿ ಎಂದು ಬೆದರಿಕೆ ನೀಡಿದ್ದಾರೆ.

“ಟ್ರೂ ಮೀಡಿಯಾ ನೆಟ್‍ವರ್ಕ್” ಎಂಬ ಮುಸ್ಲಿಂ ಫೇಸ್‍ಬುಕ್ ಪೇಜ್‍ನಲ್ಲಿ ಹಿಂದೂ ಸಂಘಟನೆಯ ಸುಬ್ಬು ಎಂಬಾತ ಸಂದೇಶವನ್ನು ರವಾನಿಸಿದ್ದಾನೆ. ಅದರಲ್ಲಿ ಪಿಎಫ್‍ಐ ಸಂಘಟನೆಗಳನ್ನು ಉದ್ಧೇಶಿಸಿ “ಏನು ಗಲಭೆ. ನಿಮ್ಮ ಸಂಘಟನೆಗಳ ಹಣೆಬರಹವನ್ನು ತೋರಿಸುತ್ತದೆಯಲ್ಲಿ ನ್ಯೂಸ್ ಛಾನೆಲ್‍ಗಳು ಅದನ್ನು ನೋಡು ನಂತರ ಬೊಗಳು” ಎಂದು ಸಂದೇಶವನ್ನು ರವಾನಿಸಿದ್ದರು.

ಈ ಸಂದೇಶಕ್ಕೆ ಪ್ರತಿ ಕಮೆಂಟ್ ಮಾಡಿದ “ಟ್ರೂ ಮೀಡಿಯಾ ನೆಟ್‍ವರ್ಕ್”, “ಸುಬ್ಬು ಸುಬ್ಬು ತೊಡೆಯಲ್ಲಿ ಕಾಲು ಕೆಜಿ ಮಾಂಸ ಇಲ್ಲ… ಪೊಗರು ಜಾಸ್ತಿ ಮಾಡ್ಬೇಡ.. ನೀನು ಎಲ್ಲಾದ್ರು ಬೀದಿ ಹೆಣವಾಗ್ತೀಯ ಅಷ್ಟೆ. ಮರಿಯಾದೆಯಾಗಿ ಕುಟುಂಬ ಸಾಕಲು ಕಲಿ… ಎಲ್ಲಾದ್ರು ದುಡಿದು…ಜಿಹಾದಿ ಜಿಹಾದಿ ಅಂತ ಬೊಬ್ಬೆ ಒಡೆಯುವವರೆ ತಾಳ್ಮೆ ಕಳೆದರೆ ನಿನ್ನ ಬೀದಿ ಹೆಣ ಮಾಡಿ ಬಿಸಾಕ್ತಾರೆ ಅಷ್ಟೆ” ಎಂದು ಬೆದರಿಕೆ ಹಾಕಿದ್ದಾರೆ.

ಬಹಿರಂಗ ಬೆದರಿಕೆಗೆ ಕ್ರಮವೇನು ಸಚಿವರೇ..?

ಇನ್ನೆಷ್ಟು ಮಂದಿಯನ್ನು ನಿಮ್ಮ ರಕ್ತದ ದಾಹಕ್ಕೆ ಬಲಿ ಕೊಡಬೇಕು ನಾವು. ಬರೋಬ್ಬರಿ 24 ಮಂದಿಯನ್ನು ಕಳೆದುಕೊಂಡ ಬೇಸರದಲ್ಲಿ ನಾವಿದ್ದೇವೆ. ಸಾಕಾಗಲ್ವಾ..? ಇನ್ನೂ ನಮ್ಮ ಸಹೋದರರನ್ನು ಸಾಯಿಸಲೆಂದೇ ನೀವು ಕಾಯುತ್ತಿರುವಿರಾ.? ಟ್ರೂ ಮೀಡಿಯಾ ನೆಟ್‍ವರ್ಕ್ ಎಂಬ ಫೇಸ್ ಬುಕ್ ಪೇಜ್ ಬಹಿರಂಗವಾಗಿಯೇ ಈ ಬೆದರಿಕೆಯನ್ನು ಹಾಕುತ್ತಿದೆ. ಯಾಕೆ ಮೌನವಾಗಿದ್ದೀರಾ.? ಈ ಬಗ್ಗೆ ಯಾವಾಗ ಕ್ರಮ ಕೈಗೊಳ್ಳುತ್ತೀರಾ..?

ಹಿಂದೂ ಕಾರ್ಯಕರ್ತರ ಶವ ಯಾತ್ರೆಯ ಮೆರವಣಿಗೆಗೆ ತೆರಳಿದವರನ್ನು ಬಂಧಿಸಲು ಪಕ್ಕನೆ ಆದೇಶ ನೀಡುವ ನೀವುಗಳು ಇಂತಹ ಬಹಿರಂಗ ಬೆದರಿಕೆಗಳಿಗೆ ಯಾಕೆ ಗಮನ ಕೊಡುವುದಿಲ್ಲ. ಮೊನ್ನೆ ತಾನೆ ಹತ್ಯೆಗೀಡಾದ ದೀಪಕ್ ರಾವ್ ಎಂಬ ಹಿಂದೂ ಸಂಘಟನೆಯ ಕಾರ್ಯಕರ್ತನಿಗೂ ಮುಸಲ್ಮಾನರಿಂದ ಬೆದರಿಕೆ ಕರೆಗಳು ಬಂದಿತ್ತು. ಆದರೆ ಈ ಬಗ್ಗೆ ತಾತ್ಸಾರ ವಹಿಸಿದರಿಂದಲೇ ಆತನ ಹತ್ಯೆಯಾಗಿದೆ. ಕರಾವಳಿ ಕೋಮು ದಳ್ಳುರಿಯಿಂದ ಹೊತ್ತಿ ಉರಿಯುತ್ತಿದೆ. ಸಚಿವರುಗಳು ತಮ್ಮ ದೇಹವನ್ನು ಬೆಳೆಸಿಕೊಳ್ಳುತ್ತಿದ್ದಾರೆಯೇ ಹೊರತು ಈ ಬಗ್ಗೆ ಗಮನ ಹರಿಸುತ್ತಿಲ್ಲ.

ಕಳೆದ ವಿಧಾನ ಸಭಾ ಚುನಾವಣೆ ವೇಳೆ ಕರಾವಳಿಯಲ್ಲಿ 3 ವಿಧಾನ ಸಭಾ ಶಾಸಕರನ್ನು ಹಾಗೂ ಓರ್ವ ವಿಧಾನ ಪರಿಷತ್ತಿನ ಶಾಸಕರನ್ನಾಗಿ ಅಲ್ಪಸಂಖ್ಯಾತರನ್ನು ಯಾವಾಗ ಆಯ್ಕೆ ಮಾಡಿ ಪಟ್ಟಕ್ಕೇರಿಸಿದರೋ ಅಂದಿನಿಂದ ಈ ಜಿಲ್ಲೆಯಲ್ಲಿ ಕೊಲೆಗಳು ತಾರಕಕ್ಕೇರಿತ್ತು. ಮಾತ್ರವಲ್ಲದೆ ರಾಜಕೀಯ ತುಷ್ಟೀಕರಣದಿಂದ ಬಹುಸಂಖ್ಯಾತ ಹಿಂದೂಗಳು ತಮ್ಮ ಸ್ವಾಭಿಮಾನವನ್ನೇ ಅಡವಿಡುವಂತೆ ಆಗಿರುವಂತಾಗಿದೆ.

ಉಳಿದಂತೆ ಇರುವ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ ಹಾಗೂ ಮೂಡುಬಿದಿರಿ ಶಾಸಕ ಅಭಯಚಂದ್ರ ಜೈನ್ ಮುಸಲ್ಮಾನರಿಗೆ ಬೆಂಬಲವನ್ನು ನೀಡುತ್ತಾ ರಾಜಕೀಯ ಹತ್ಯೆಗಳಿಗೆ ಪ್ರೋತ್ಸಾಹವನ್ನು ನೀಡುತ್ತಾ ಬಂದಿದ್ದಾರೆ. ಈ ಎಲ್ಲಾ ಶಾಸಕ ಸಚಿವರುಗಳ ತುಷ್ಟೀಕರಣ ನೀತಿಯಿಂದಲೇ ಈಗ ರಾಜಕೀಯ ಕೊಲೆಗಳು ನಡೆಯುತ್ತಿರುವದನ್ನು ಯಾವ ಕಾರಣಕ್ಕೂ ಅಲ್ಲಗಳೆಯುವಂತಿಲ್ಲ.

ಈಗ ಮತ್ತೊಬ್ಬ ಹಿಂದೂ ಕಾರ್ಯಕರ್ತನಿಗೆ ಮುಸಲ್ಮಾನ ಉಗ್ರರು ಬಹಿರಂಗ ಬೆದರಿಕೆಯನ್ನು ಹಾಕಿದ್ದು ಮತ್ತೊಮ್ಮೆ ರಕ್ತಪಾತವಾಗುವ ಭಯದಲ್ಲಿ ರಾಜ್ಯದ ಜನತೆ ಬಿಸಿಉಸಿರಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

-ಹರೀಶ್

Tags

Related Articles

Close