ಕೊನೆಗೂ ಮಾಲೆಗಾಂವ್ ಸ್ಫೋಟದಲ್ಲಿ ಭಾಗಿಯಾಗಿದ್ದರು ಎಂದು ಸುಳ್ಳು ಆರೋಪ ಹೊರಿಸಿದ್ದ ಕಾಂಗ್ರೆಸ್ ನ ನಿಲುವಿಗೀಗ ದೊಡ್ಡ ಹೊಡೆತ ಬಿದ್ದಿದೆ! ಭಾರತೀಯ ಸೇನೆಯಲ್ಲಿ ಕಾಲೊನೆಲ್ ಆಗಿದ್ದ ಪುರೋಹಿತ್ ಗೆ ಸುಪ್ರೀಮ್ ಕೋರ್ಟ್ ಇಂದು ಜಾಮೀನು ಮಂಜೂರು ಮಾಡಿದೆ!
ರಾಜಕೀಯ ತಿಕ್ಕಾಟದಿಂದ ಹಠಕ್ಕೆ ಬಿದ್ದಿದ್ದ ಕಾಂಗ್ರೆಸ್ ತನ್ನ ಬಣ್ಣ ಬಯಲಾದರೆಂದು ಹೆದರಿ, ಶ್ರೀಕಾಂತ್ ಪುರೋಹಿತ್ ಸೇರಿದಂತೆ ಇನ್ನೂ ಹಲವು ಹಿಂದೂ ನಾಯಕರನ್ನು ಗುರಿಯಾಗಿಸಿತ್ತು! ಅಲ್ಲದೇ, ಯುಎಸ್ ವರದಿಗಳು ನಿಜವಾದ ಉಗ್ರರ ಕೈವಾಡವನ್ನೂ ಪುರೋಹಿತ್ ಅವರಿಂದಲೇ ತೆಗೆದುಕೊಂಡಿತ್ತು! ಪುರೋಹಿತ್ ಗೆ ಸಿಕ್ಕಿದ ಆಧಾರಗಳೆಲ್ಲಿ ಅಧಿಕಾರಕ್ಕೆ ತೊಂದರೆ ಮಾಡುವುದೋ ಎಂದು ಬಗೆದ ಕಾಂಗ್ರೆಸ್ ಸಾಧ್ವಿ, ಅಸೀಮಾನಂದ ರನ್ನೂ ಬಿಡಲಿಲ್ಲ! ಸತತ ಒಂಭತ್ತು ವರ್ಷಗಳಿಂದಲೂ ಜೈಲಿನಲ್ಲಿದ್ದ ಪುರೋಹಿತ್ ಗೆ ಅದೆಷ್ಟೋ ಹಿಂಸೆಯನ್ನು ನೀಡಿದ್ದಾರೆ! ಅಲ್ಲದೇ, ಸತತ ಒಂಭತ್ತು ವರ್ಷಗಳ ನಿರಂತರ ಹೋರಾಟದಿಂದ ಈಗ ಶರತ್ತು ಬದ್ಧ ಜಾಮೀನು ಪುರೋಹಿತ್ ಗೆ ಸಿಕ್ಕಿದೆ!!!
ಮುಂಬೈ ಹೈ ಕೋರ್ಟ್ ಈ ಮೊದಲು ಜಾಮೀನನ್ನು ತಿರಸ್ಕರಿಸಿತ್ತು! ಅದರ ವಿರುದ್ಧವೂ ಪುರೋಹಿತ್ ಸುಪ್ರೀಮ್ ಕೋರ್ಟ್ ಮೆಟ್ಟಿಲೇರಿದ್ದರು! ಅಲ್ಲದೇ, ತಾನು ಒಬ್ಬ ಯೋಧನಾಗಿದ್ದೆ ಹೊರತು, ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿರಲಿಲ್ಲವೆಂದು ಸುಪ್ರೀಮ್ ಕೋರ್ಟ್ ಗೆ ಹೇಳಿಕರ ನೀಡಿದ್ದರು!
ಸುಪ್ರೀಮ್ ಕೋರ್ಟ್ ಜಾಮೀನಿನ ಅರುಹನ್ನೂ ಕೇಳಬಾರದೆಂದು ರಾಷ್ಟ್ರೀಯ ತನಿಖಾ ದಳ ವಿರೋಧ ವ್ಯಕ್ತಪಡಿಸಿದ್ದು, ಇನ್ನಷ್ಟು ಅನುಮಾನಕ್ಕೆ ಕಾರಣವಾಗಿದ್ದಲ್ಲದೇ, ಪುರೋಹಿತ್ ಒಂಟಿಯಾಗಿ ಅದರ ವಿರುದ್ಧವೂ ಹೋರಾಡಿದ್ದರು!
Rohini Salian, former prosecutor of NIA, speaks to TIMES NOW #JusticeForPurohit pic.twitter.com/gp2um2xj5c
— TIMES NOW (@TimesNow) August 21, 2017
ಆರ್ ಕೆ ಅಗರ್ವಾಲ್ ಹಾಗೂ ಎ ಎಮ್ ಸಪ್ರೆ ಯ ಜಂಟಿ ಆಯೋಗ ಜಾಮೀನು ಮಂಜೂರಿನ ತೀರ್ಮಾನವನ್ನು ಸೋಮವಾರಕ್ಕೆ ಮುಂದೂಡಿತ್ತು! ಎಮ್ ಸಿಒಸಿಎ ಎಂಬ ಮಹಾರಾಷ್ಟ್ರದ ಭಯೋತ್ಮಪಾದಕ ನಿಗ್ರಹ ದಳ ಮನಸ್ಸಿಗರ ಬಂದಂತೆ ಹಲವರ ಮೇಲೆ ದೂರು ದಾಖಲಿಸಿ ಜೈಲಿಗಟ್ಟಿದ್ದಲ್ಲದೇ, ಚಾರ್ಜ್ ಶೀಟನ್ನೂ ಸರಿಯಾಗಿ ಸಲ್ಲಿಸಿರಲಿಲ್ಲ.
ಮಾಲೆಗಾಂವ್ ಸ್ಫೋಟದಲ್ಲಿ ಭಾಗಿಯಾಗಿದ್ದು ಲಷ್ಕರ್ ತಾಯ್ಬಾದಂತಹ ಉಗ್ರ ಸಂಘಟನೆಗಳೆಂದು ಯುಎಸ್ ತನಿಖಾ ದಳ ವರದಿ ನೀಡಿದ್ದರೂ ಸಹ, ಕಾಂಗ್ರೆಸ್ ಗೆ ಕೇಸರೀ ಭಯೋತ್ಪಾದನೆಯೆಂಬುದನ್ನು ಸೃಷ್ಟಿಸಬೇಕಿತ್ತು! ಬಿಡಿ! ತನ್ನ ಸಹಭಾಗಿತ್ವದಲ್ಲೇ ನಡೆದ ಈ ಸ್ಳೋಟದ ಬಗ್ಗೆ ಪುರೋಹಿತ್ ಎಲ್ಲಿ ವಾಯಿ ಬಿಡುತ್ತಾರೋ ಎಂದಿ ಹೆದರಿದ ಕಾಂಗ್ರೆಸ್ ಜೈಲಿಗಟ್ಟಿದ್ದು ಆಶ್ಚರ್ಯವೇನಲ್ಲ!
It’s been a long battle for us. I am thankful to the court, says Aparna Purohit, Col. Purohit’s wife after he was granted bail by the SC pic.twitter.com/JPyHwp5eqL
— TIMES NOW (@TimesNow) August 21, 2017
ಇವತ್ತು, ಪುರೋಹಿತ್ ಗೆ ಜಾಮೀನು ನೀಡಲಾಗಿದೆಯಾದರೂ ಶರತ್ತುಬದ್ಧ ಜಾಮೀನಾಗಿದೆ! ಇಷ್ಟು ದಿನವೂ ವಿರೋಧ ವ್ಯಕ್ತಪಡಿಸಿದ್ದ ರಾಷ್ಟ್ರೀಯ ತನಿಖಾ ದಳದ ಕಾಣದ ‘ಕೈ’ ಗಳ ಸತ್ಯವೊಂದು ಹೊರಬರಬೇಕಿದೆ!
I am very happy. He was a sterling quality officer who was framed: Subramanian Swamy, BJP MP on Col. Purohit's bail pic.twitter.com/TYhAEeUOZh
— TIMES NOW (@TimesNow) August 21, 2017
– ಪೃಥ