ಪ್ರಚಲಿತ

ರವಿ ಬೆಳಗೆರೆ, ಪರೇಶ್ ಮೇಸ್ತ ಮತ್ತು ಕನ್ನಡ ದೃಶ್ಯ ಮಾಧ್ಯಮ! ಬಹುದೊಡ್ಡ ಪಗಡೆಯಾಟದ ದಾಳ ಉರುಳಿಸುವವನ ಹಿಂದಿದೆ ಇಪ್ಪತ್ತು ಹಿಂದೂಗಳ ಹೆಣ!

ಆದರೆ, ಪರೇಶ್ ಮೇಸ್ತನ ಹೆಣದ ಕಣ್ಣುಗಳು ತೆರೆದಿವೆ!

ಒಂದಷ್ಟು ಕ್ರೌರ್ಯಗಳಿಗೆ ಯಾವ ಹೆಸರನ್ನಿಟ್ಟು ‘ತಾಳ್ಮೆ ತಾಳ್ಮೆ’ ಎನ್ನುತ್ತೀರಿ?! ಪಕ್ಕದ ಮನೆಯವನು ಯಾರದೋ ಕೈಗೆ ಸಿಕ್ಕು ಹೆಣವಾಗಿ ಹೋಗಿದ್ದಾನೆ! ಅಯ್ಯೋ! ಇನ್ಯಾವ ಸಂಘಗಳಿಗೂ ನಮ್ಮ ಮಕ್ಕಳನ್ನು ಬಿಡಲೇಬಾರದು! ಎಂದು ಒಬ್ಬ ಹಿಂದೂ ಹುಡುಗಜ ಕೆಚ್ಚನ್ನು ಅಲ್ಲಿಯೇ ತಂದೆ ತಾಯಿ ಅಳಿಸಿರುತ್ತಾರೆ! ಭಗತ್ ಸಿಂಗ್ ಹುಟ್ಟಿದರೆ ಪಕ್ಕದ ಮನೆಯಲ್ಲಿ ಹುಟ್ಟಲಿ ಎನ್ನುವ ಒಂದಷ್ಟು ಸಂಸ್ಕಾರವಾದಿಗಳಿಗೆ, ಭಗತ್ ಸಿಂಗ್ ನ ಬಗ್ಗೆ ಮಾಧ್ಯಮದವರು ಪ್ರಶ್ನೆಗಳೆಸೆಯುತ್ತ ಬಂದಾಗ ‘ಸಂದರ್ಶನ” ನೀಡಲು ಮಾತ್ರವೇ ಹುತಾತ್ಮನ ಕಥೆ ಹೇಳುವ ಒಂದಷ್ಟು ಹಿಂದೂಗಳು, ಮನೆಯ ಮಕ್ಕಳ ಮುಂದೆ ಅಪ್ಪಿ ತಪ್ಪಿಯೂ ತುಟಿ ಬಿಚ್ಚುವುದಿಲ್ಲ! ಅದಕ್ಕೆ, ಸರಿಯಾಗಿ ಮಾಧ್ಯಮಗಳೂ ಕೂಡ ಜೊತೆಯಾಗಿ ನಿಂತು ಬಿಡುತ್ತವೆ! ಬರುವ ಟಿಆರ್ ಪಿ ಯನ್ನು ನೆಚ್ಚಿಕೊಂಡು!!

ಪರೇಶ್ ಮಾಸ್ತನ ಹತ್ಯೆಯಾಗಿ ಹೋಗಿದೆ!

ಹತ್ಯೆಯಾಗಿ ಮೂರ್ನಾಲ್ಕು ದಿನಗಳು ಕಳೆದು ಹೋಗಿದೆ! ಆದರೂ, ಮಾಧ್ಯಮಗಳಲಿ ರವಿ ಬೆಳಗೆರೆಯ ಸುದ್ದಿ ಬಿಟ್ಟು ಬೇರಿಲ್ಲ! ರವಿ ಬೆಳಗೆರೆ ಸಿಗರೇಟು ಸೇದಿದ, ಬೆಳಗೆರೆ ಪೆನ್ನು ಕೇಳಿದ, ಪೇಪರ್ರು ಕೇಳಿದ, ಬಿದ್ದ ಎದ್ದ, ಪಿಳಿಪಿಳಿ ನೋಡಿದ,.ನಕ್ಕುಬಿಟ್ಟ!! ಎಂಬುದನ್ನೇ ಎಕ್ಸ್ ಕ್ಲೂಸಿವ್ ಸ್ಟೋರಿ ಎಂದು ಮುದ್ರೆ ಒತ್ತಿ ತೋರಿಸಿಕೊಳ್ಳುತ್ತ ಕೂತ ಮಾಧ್ಯಮಗಳಿಗೆ, ಪರೇಶ್ ಮಾಸ್ತನ ಭೀಕರ ಸಾವು ಕಣ್ಣಿಗೇ ಕಾಣಲಿಲ್ಲ! ಆತನ ಸಾವಿಗೆ ನ್ಯಾಯವೆಲ್ಲಿದೆ ಎಂದು ಪ್ರಶ್ನೆ ಕೂಡಾ ಮಾಡದಷ್ಟು ಧ್ವನಿಯಡಗಿಸಿ ನಪುಂಸಕರ ಹಾಗೆ ಕೂತ ಮಾಧ್ಯಮಗಳು ಒಬ್ಬ ಮುಸಲ್ಮಾನನ್ನು ಮುಟ್ಟಿದರೆ ಇಡೀ ಸಮಾಜವನ್ನೇ ಬೀದಿಗಿಳಿಸಿ ನ್ಯಾಯ ಎಂದು ಬಿಡುವಾಗ ಅಸಹ್ಯ ಎನ್ನುವುದಕಿಂತಲೂ ಸಹ, ‘ಮಾಧ್ಯಮದವರ ನೈತಿಕತೆಯ ಮೇಲೆ’ ಪ್ರಶ್ನೆಗಳೇಳುತ್ತವೆ!

ಜಿಹಾದಿಗಳ ಕೈಗೆ ಸಿಕ್ಕ ಪರೇಶ್ ಮೇಸ್ತನ ಕೈ ಯ ಮೇಲಿದ್ದ ಶಿವಾಜಿಯ ಹಚ್ಚೆಯೊಂದನ್ನು ಮಾಂಸ ಸಮೇತ ತುಂಡರಿಸಿ, ಕಬ್ಬಿಣದ ಮೊಳೆಗಳಿಂದ
ಸಿಕ್ಕ ಸಿಕ್ಕಲ್ಲಿ ಚುಚ್ಚಿ, ಕೊನೆಗೆ ಬಿಸಿ ಡಾಂಬರಿನ ಎಣ್ಣೆಯನ್ನು ಸುರಿದು, ಕೊನೆಗೆ ಸಜೀವವಾಗಿಯೇ, ವೃಷಣವನ್ನು ಸೀಳಿ, ಬೀಜ ಹೊರತೆಗೆದು ಕೇಕೆ ಹಾಕಿದ ಜಿಹಾದಿಗಳ ಅಬ್ಬರದಡಿಯಲ್ಲಿ, ಮೂರು ಗಂಟೆಗಳ ಕಾಲ ವಿಲವಿಲ ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ ಪರೇಶ್ ಮೇಸ್ತನೆಂಬ ಹತ್ತೊಂಬತ್ತರ ಹರೆಯದ ಹಿಂದೂ ಕಾರ್ಯಕರ್ತ!

ಉಹೂಂ! ಮಾಧ್ಯಮಗಳು ಅವನ ಶವವನ್ನು ತೋರಿಸುವ ಧೈರ್ಯವನ್ನೂ ಮಾಡಲಿಲ್ಲ! ಏಕೆ ಹೇಳಿ?! ಹಿಂದಿನಿದ ಸಿದ್ರಾಮಯ್ಯನ ಆಜ್ಞೆಯೊಂದು ಕಾಯುತ್ತ ಕುಳಿತಿದೆಯಲ್ಲ?! ‘ಸಮಾಜದ ಶಾಂತಿ ಕೆಡಿಸಬೇಡಿ’ ಎಂಬ ಮಹಾಆಜ್ಞೆ!!! ಮಾಧ್ಯಮಗಳ ಧ್ವನಿ ಅಡಗಿ ಹೋಗಿದೆ! “ರವಿ ಬೆಳಗೆರೆಯ ವಿವಾದವನ್ನೇ ತೋರಿಸ್ರೋ, ಇವೆಲ್ಲ ಬೇಡ! ಯಾಕೆ ಸುಮ್ಮನೆ ರಗಳೆ?!” ‘ನಾನ್ ಕೂಡಾ ಉತ್ತರಕನ್ನಡದ ಪ್ರವಾಸದಲ್ಲಿದ್ದೇನ್ ನೋಡಿ, ಹೆಂಗೂ ಮುಚ್ಚಿ ಹಾಕುವ ಕೇಸ್ ನ, ಅಮಿಕೊಂಡಿರಿ! ನಂಗೆಲ್ಲ ಗೊತ್ತಿದೆ!” ಎಂದು ತುಘಲಕ್ ನ ಶಿಷ್ಯನೊಬ್ಬ ಅಬ್ಬರಿಸಿದ ನೋಡಿ, ಮಾಧ್ಯಮಗಳೂ ‘ಸರಿ ಗುರುವೇ!” ಎಂದು ಸುಮ್ಮನಾಗಿ ಹೋಗಿದೆ!

ಪರೇಶ್ ಮೇಸ್ತ ಸಾಮಾನ್ಯ ಹುಡುಗನೆಂಬುದಕ್ಕೋ?!

ಮಾಧ್ಯಮಗಳಿಗೊಂದು ಹುಚ್ಚಿದೆ! ತಮ್ಮ ಹೊಟ್ಟೆಗೆ ಯಾವುದು ಹೆಚ್ಚು ಹಿಟ್ಟು ಹಾಕುವುದೋ, ಅಂತಹದ್ದಕ್ಕೆ ಮಾತ್ರ ಬೆಂಬಲ ನೀಡಿಬಿಡುವಂತಹ
ಹುಚ್ಚು! ಅಥವಾ ತಿಕ್ಕಲು! ಮೊನ್ನೆ ಜಿಹಾದಿಗಳು ಕೊಂದಿದ್ದಾರೆಂಬುದನ್ನು ಬಿತ್ತರಿಸಿದ ಮಾಧ್ಯಮಗಳು, ಬಿಜೆಪಿ ಪ್ರತಿಭಟನೆ ಮಾಡುತ್ತಿದೆ ಎಂಬುದನ್ನು, ಕಲ್ಲು ಒಡೆದಿದ್ದನ್ನು, ಸಾವಿಗೆ ಆಕ್ರೋಶಗೊಂಡು ಹತ್ತಿ ಉರಿಯುತ್ತಿರುವುದರ ಬಗ್ಗೆ, ನೈತಿಕತೆ ಮರೆತ ಪೋಲಿಸರಿಗೆ ಗಾಯವಾಗಿ ಹೋಯಿತು ಎಂಬುದರ ಬಗ್ಗೆ,. , .ಧಾರಾಳವಾಗಿ ಸುದ್ದಿ ಬಿತ್ತರಿಸುತ್ತಿರುವಾಗಿರುವ ಈಗಿನ ತಾಕತ್ತು ನ್ಯಾಯ ಕೇಳಲು ಇರಲಿಲ್ಲವೇ?!

ಅಪ್ಪಿತಪ್ಪಿಯೂ ಈ ವಿಷಯದಲ್ಲಿ ಪರೇಶ್ ಮೇಸ್ತನ ಸಾವಿಗೆ ನ್ಯಾಯ ಒದಗಿಸಿ ಎಂಬ ಸೊಲ್ಲೇ ಇರದ ಮಾಧ್ಯಮಗಳೂ ಸೋಗಲಾಡಿ ಸೆಕ್ಯುಲರ್ ಗಳಾಗಿ ಹೋಯಿತೇ?! ಅಥವಾ, ತಮ್ಮ ಮಕ್ಕಳನ್ನಷ್ಟೇ ಎದೆಗೊತ್ತಿಕೊಂಡು ಆಡುತ್ತಿರುಗ ‘ಸೇಫ್ ಪ್ಲೇ’ ಯೋ?! ನಾಯಿಗಳಿಗಾದರೂ ಇರುವ ನಿಯತ್ತು ಇವತ್ತು, ಇಂತಹ ಸಮಾಜವನ್ನು ರಕ್ಷಿಸುವವರಿಗೆ, ಮಾಧ್ಯಮಗಳಿಗೆ ಇಲ್ಲದೆ ಹೋಯಿತಲ್ಲ?! ಛೇ!

ಸಮಾಜವನ್ನು ಬೇರೆಡಗೆ ತಿರುಗಿಸುವುದಕ್ಕೋಸ್ಕರ ಪರೇಶ್ ಮಾಸ್ತನ ಹತ್ಯೆಯಾದರೂ ತೋರಿಸದೇ, ಕೇವಲ ರವಿ ಬೆಳಗೆರೆಯ ವಿಷಯವನ್ನೇ ಮಾಧ್ಯಮಗಳು ಬಿತ್ತರಿಸಿದವೇ?!

ಎಷ್ಟು ಗಲಾಟೆ ಮಾಡುತ್ತಾರ್ರೀ ಈ ಭಾರತೀಯ ಜನತಾ ಪಕ್ಷ ಎಂದು ಬೊಬ್ಬಿರಿದು, ಎರಡು ತಿಂಗಳಲ್ಲಿ ಎಂಟು ಗಲಭೆ ಮಾಡಿದ್ದಾರೆ ಎಂದ ಕಾಂಗ್ರೆಸ್ಸಿನವರಿಗೆ, ಅಥವಾ ಅದನ್ನೇ ಎಷ್ಟು ಗಲಾಟೆ ಮಾಡಿದ್ದಾರೆ ಎಂದು ಇನ್ನಷ್ಟು ಸ್ಕ್ರಿಪ್ಟ್ ಮಾಡಿ ತೋರಿಸುತ್ತಿರುವ ಮಾಧ್ಯಮಗಳೇ! ಇಲ್ಲಿಯವರೆಗೆ ಎಷ್ಟು ಜನ ಹಿಂದೂವಿನ ಹತ್ಯೆಯಾಗಿದೆ ಗೊತ್ತೇ?! ಅದನ್ನು ಎಲಾಬೋರೇಟ್ ಮಾಡಿ ತೋರಿಸುವಷ್ಟು ನೈತಿಕತೆ ಇದೆಯೇ?! ಹತ್ಯೆಯ ಹಿಂದಿನ ರೂವಾರಿಗಳಾದ ಜಿಹಾದಿಗಳ ಅನಾವರಣ ಮಾಡುವಷ್ಟು ತಾಕತ್ತಿದೆಯೇ?! ಅಮಾನುಷ ಹಲಾಲ್ ಹತ್ಯೆಯಾಗಿದ್ದನ್ನು ವಿರೋ಼ಧಿಸುವಷ್ಟು ನಿಮ್ಮ ಕಣಗಳಲಿ ರಕ್ತವಿದೆಯೇ?!

ಉತ್ತರಕನ್ನಡ ಪ್ರವಾಸ ಹೋದ ಸಿದ್ರಾಮಯ್ಯನವರ ಹಿಂದಿನ ಅಜೆಂಡಾಗಳನ್ನು ಬಿಚ್ಚಿಡುವಷ್ಟು ನಿಮ್ಮಲ್ಲಿ ಏನಾದರೂ ಉಳಿದಿದೆಯೇ?!

ಉತ್ತರಕನ್ನಡದ ಪ್ರವಾಸದಲ್ಲಿದ್ದ ಸಿದ್ರಾಮಯ್ಯನವರ ಪ್ರವಾಸ ರದ್ದಾಗಬಾರದೆಂಬ ಕಾರ್ಯಕ್ರಮಕ್ಕೆ ಪರೇಶ್ ಮೇಸ್ತನ ಶವವನ್ನು ಎರಡು ದಿನಗಳ ಹಿಂದೆಯೇ ಶವದ ಬಗ್ಗೆ ಮಾಹಿತಿ ಸಿಕ್ಕಿದ್ದರೂ, ನೀರಿಗೆಸೆಯಲಾಯಿತೇ?! ಡಿಸೆಂಬರ್ 8 ಕ್ಕೆ ಶೆಟ್ಟಿಕೆರೆಯಲ್ಲಿ ಶವ ಸಿಕ್ಕಿದ ಮೇಲೆ ನಾಟಕ ಶುರು ಹಚ್ಚಿದ್ದನ್ನು ‘ಎಕ್ಸ್ ಕ್ಲೂಸಿವ್ ಸ್ಟೋರಿ’ ಮಾಡಿ ಸತ್ಯಕ್ಕೆ ಹೋರಾಡುವಷ್ಟು ಏನಾದರೂ ನರಗಳಲ್ಲಿ ಜೀವವಿದೆಯೇ?!

ಈಗ ಆಕಸ್ಮಿಕ ಸಾವೆಂದು ವರದಿ ನೀಡಿರುವ ವೈದ್ಯನ ಹಿಂದಿರುವ ಒತ್ತಡವನ್ನು ತೋರಿಸಬಲ್ಲಿರಾ?! ಶವದ ವೀಡಿಯೋ ಮಾಡಿ ‘ಆಕಸ್ಮಿಕ ಸಾವು
ಸುಳ್ಳು’ ಎಂದಿರುವವನ ವೀಡಿಯೋವನ್ನು ತೋರಿ, ಸಾವಿಗೆ ನ್ಯಾಯ ಕೇಳಬಲ್ಲಿರಾ?!

ಹಿಂದೂ ಶವಗಳು, ಮುಸಲ್ಮಾನ ಮತಗಳು! ಪಗಡೆಯಾಟ ಆಡುತ್ತಿದ್ದಾನೆ ತುಘಲಕ್ ಶಿಷ್ಯ!!!

ಆಹಾ! ಮುಸಲ್ಮಾನರ ಓಲೈಕೆ ಯಾಗಬೇಕು! ಮನುಷ್ಯತ್ವ ಮರೆತು ಮೃಗನಾಗಬೇಕೆಂಬ ಬಯಕೆ! ತೀರಲಾರದ ಹಿಂದೂರಕ್ತದ ದಾಹ! ತುಘಲಕ್
ಮೆಟ್ಟುಗಳನ್ನು ನೆಕ್ಕುತ್ತ ಬೆಳೆದವನೊಬ್ಬ ಆಡುತ್ತಿರುವ ಪಗಡೆಯಾಟಕ್ಕೆ, ಉರುಳುತ್ತಿದೆ ಸಾಲು ಹಿಂದೂಗಳ ಹೆಣ! ಒಮ್ಮೆ ಮೂಸಿ ಬೆನ್ನ ಹಿಂದೆ ತಳ್ಳುವವನ ಹಿಂದಿದೆ ರಾಶಿ ಹೆಣ! ಹೆಣ ತಿನ್ನುತ್ತ ಕೂತ ಜಿಹಾದಿ! ವ್ಹಾ! ವ್ಹಾ!

ಡಿ.ಕೆ.ರವಿ, ಪ್ರಶಾಂತ್ ಪೂಜಾರಿ, ಪ್ರವೀಣ್ ಪೂಜಾರಿ, ರುದ್ರೇಶ್, ಕುಟ್ಟಪ್ಪ, ಶರತ್ ಮಡಿವಾಳ, ಡಿವೈಎಸ್ ಪಿ ಗಣಪತಿ, ರಾಜು, ಶಶಿಕುಮಾರ್, ರಮೇಶ್,. ಗಿರಿಧರ್ ಮೇಲೆ ಮಾರಣಾಂತಿಕ ಹಲ್ಲೆ, ಹುಣಸೂರಿನ ವಿಘ್ನೇಶ್ ಮತ್ತು ಸುಧೀಂದ್ರ, ವಿಶ್ವನಾಥ್,ಮಾಗಳಿ ರವಿ, ಯೋಗೇಶ್ ಗೌಡರ್, ಶ್ರೀನಿವಾಸ್! ಇನ್ನೆಷ್ಟೋ!!! ಇಂತಹ ವರ ಸಾವೆಲ್ಲವೂ ಅಸಹಜ ಸಾವೇ?! ಈಗ ಪರೇಶ್ ಮೇಸ್ತ ನ ಸಾವೂ ಆಕಸ್ಮಿಕ ಸಾವೇ?! ಅಯ್ಯೋ! ಇಂತಹ ಇನ್ನೆಷ್ಟು ರಕ್ತಗಳ
ಬಲಿಯಾಗಬೇಕು ನಿಮಗೆ?!

ಅಂದರೆ. . . .

ಸಮಾಜದ ದೃಷ್ಟಿಯನ್ನು ಬೇರೆಡೆಗೆ ತಿರುಗಿಸಬೇಕಿತ್ತಲ್ಲವೇ ನಿಮಗೆ?! ಅದಕ್ಕೆ, ಡಿಸೆಂಬರ್ ಎಂಟರಂದೇ ಮೇಸ್ತನ ಹತ್ಯೆಯ ಸುದ್ದಿ ಸಿಕ್ಕಿದ್ದರೂ ಸಹ, ಬಿತ್ತರಿಸದ ನೀವು, ರವಿ ಬೆಳಗೆರೆಯ ವಿವಾದವನ್ನೇ ಅಷ್ಟು ಸಿಲ್ಲಿ ಎನಿಸುವ ಹಾಗೆ ಎಳೆದದ್ದಾ?! ನಿಮ್ಮ ಅನೈತಿಕತೆಯ ಪರಮಾವಧಿಗೊಂದು ಧಿಕ್ಕಾರವಿರಲಿ!

ದಾದ್ರಿಯಲ್ಲಿ ಅಕ್ಲಕ್ ಎಂಬ ಅನ್ಯಧರ್ಮೀಯ ಸತ್ತಾಗ, ತಿಂಗಳದ ಅಷ್ಡೂ ದಿನಗಳನ್ನೂ ಕೊಟ್ಟು ನ್ಯಾಯ ಬೇಕೆಂದ ಮಾಧ್ಯಮಗಳು, ಪರೇಶ್ ಮೇಸ್ತನ
ಸಾವಿಗೆ ದಿನದ ಎರಡು ಗಂಟೆಗಳನ್ನು ಕೊಡಲು ಹಿಂದೆ ಮುಂದೆ ನೋಡುತ್ತಿದೆ! ನಮ್ಮ ಕನ್ನಡ ದೃಶ್ಯ ಮಾಧ್ಯಮಗಳ ಕಣ್ಣುಗಳು ಮುಚ್ಚಿವೆ! ಆದರೆ, ಪರೇಶ್ ಮೇಸ್ತನ ಹೆಣದ ಕಣ್ಣುಗಳು ತೆರೆದಿವೆ!

– ತಪಸ್ವಿ

Tags

Related Articles

Close