ಪ್ರಚಲಿತ

ಸೀತೆಗೆ ರಾವಣ-ಲಕ್ಷ್ಮಣನ ಜೊತೆ, ಸುಭದ್ರೆಗೆ ಕೃಷ್ಣನ ಜೊತೆ ಅಕ್ರಮ ಸಂಬಂಧ ಕಲ್ಪಿಸಿ ಪಿಎಚ್‍ಡಿ ವಿದ್ಯಾರ್ಥಿಯಿಂದ ಅಕ್ಷರ ವ್ಯಭಿಚಾರ… ಅನಂತ್ ಕುಮಾರ್ ಹೆಗ್ಡೆ ಟೀಕಿಸುವ ನೆಪದಲ್ಲಿ ಹಿಂದೂ ದೇವರ ನಿಂದನೆ!!!

ಹಿಂದೂ ದೇವತೆಗಳನ್ನು ನಿಂದಿಸಿದರೆ ಬಹು ಬೇಗನೇ ಪ್ರಸಿದ್ಧಿಯನ್ನು ಹೊಂದಬಹುದು ಎನ್ನುವ ಕೆಲ ವಿಕೃತ ಮನುಷ್ಯರು ಹಿಂದೂಸ್ತಾನದ ಪುಣ್ಯಭೂಮಿಯಲ್ಲಿ ಇದ್ದಾರೆ ಎಂದರೆ ಅವರು ಭಾರತದಲ್ಲಿ ಇರಲು ಯೋಗ್ಯರಲ್ಲ ಎಂದೆನಿಸುತ್ತೇ!! ಈಗಾಗಲೇ ಹಲವಾರು ಮಂದಿ ಹಿಂದೂ ದೇವತೆಗಳನ್ನು ಅವಮಾನಿಸಿ ಬಹು ಬೇಗನೇ ಪ್ರಸಿದ್ದಿಯನ್ನು ಪಡೆದಿದ್ದು, ಇವರ ಸಾಲಿಗೆ ಮತ್ತೋರ್ವ ಸೇರಿಕೊಂಡಿದ್ದಾನೆ.

ಹೌದು… ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗ್ಡೆ ಅವರನ್ನು ನಿಂದಿಸುವ ಭರದಲ್ಲಿ ಹಿಂದೂ ದೇವರುಗಳ ಬಗ್ಗೆ ಬಾಯಿಗೆ ಬಂದಂತೆ ಒದರಿದ ಫೇಸ್‍ಬುಕ್ ಪುಡಾರಿಯೊಬ್ಬ ರಾಮ, ಲಕ್ಷ್ಮಣ, ಸೀತೆ, ಕೃಷ್ಣನ ಬಗ್ಗೆ ಅವಾಚ್ಯ ಶಬ್ದದಿಂದ ನಿಂದಿಸಿ ಇದೀಗ ಸುದ್ದಿಯಾಗಿದ್ದಾನೆ!! ಮೈಸೂರಿನ ಹಾರೋಹಳ್ಳಿ ರವೀಂದ್ರ ಹಿಂದೂ ದೇವರು ಹಾಗೂ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ಬರೆದು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದು, ಈತನ ವಿರುದ್ಧ ದೂರು ನೀಡಲಾಗಿದೆ.

ಈ ಹಿಂದೆ, “ಹಿಂದೂ ಧರ್ಮೀಯ ಎನ್ನಲು ಮುಜುಗರ, ಸಂಕೋಚವಾಗುತ್ತದೆ. ಹಿಂದೂ ಎನ್ನುವುದು ಧರ್ಮವಾಗಿ ಕಾಣುತ್ತಿಲ್ಲ. ಹಿಂದೂ ಧರ್ಮ ಎನ್ನುವುದು ಭ್ರಮೆ” ಎಂದಿರುವ ಪ್ರಖ್ಯಾತ ಪತ್ರಕರ್ತ ಅಗ್ನಿ ಶ್ರೀಧರ್, ತನ್ನ ಒಡೆತನ “ಅಗ್ನಿ ಅಸ್ತ್ರ” ಯೂಟ್ಯೂಬ್ ಚಾನಲ್ ಮತ್ತು ಬ್ಲಾಗ್ ನಲ್ಲಿ ಯತಿರಾಜ್ ಬ್ಯಾಲಹಳ್ಳಿ ಬರೆದಿರುವ ಭಾರತ ಮಾತೆಯ ಮೇಲೆ ಅಶ್ಲೀಲ ಕವಿತೆ ಪೋಸ್ಟ್ ಮಾಡಿದ್ದಲ್ಲದೇ ಭಾರತ ಮಾತೆಯನ್ನು ವೇಶ್ಯೆಗೆ ಹೋಲಿಸಿರುವ ಕವಿತೆಯನ್ನು ಪ್ರಕಟಿಸಿ ರಾಷ್ಟ್ರದ್ರೋಹ ಆರೋಪದ ಅಡಿ ಸುದ್ದಿಯಾಗಿದ್ದರು.

ಆದರೆ ಇದೀಗ ಮೈಸೂರು ವಿಶ್ವವಿದ್ಯಾಲಯದ ಪೋಸ್ಟ್ ಮಹೇಶ್‍ಚಂದ್ರ ಗುರು ಮಾರ್ಗದರ್ಶನದಲ್ಲಿ ಪಿಎಚ್.ಡಿ ಮಾಡುತ್ತಿರುವ ಹಾರೋಹಳ್ಳಿ ರವೀಂದ್ರ ಎನ್ನುವಾತ ಒಂದೇ ದಿನದಲ್ಲಿ ಹಿಂದೂ ದೇವರನ್ನು ನಿಂದಿಸುವ ಮೂಲಕ ಸುದ್ದಿಯಾಗಿದ್ದಾನೆ. ರಾಮ, ಲಕ್ಷ್ಮಣ, ಸೀತೆ, ಕೃಷ್ಣನ ಬಗ್ಗೆ ಅವಾಚ್ಯ ಶಬ್ದದಿಂದ ನಿಂದಿಸಿರುವ ಈತ ಗೌರಿ ಲಂಕೇಶ್, ಎಂ.ಎಂ ಕಲಬುರ್ಗಿ, ಪ್ರೋ. ಭಗವಾನ್, ಯು. ಆರ್ ಆನಂತಮೂರ್ತಿಯವರಂತೆ ತನ್ನ ನಾಲಗೆಯನ್ನು ಹರಿಯ ಬಿಟ್ಟಿದ್ದಾನೆ!!

ಒಂದೇ ದಿನದಲ್ಲಿ ಫೇಮಸ್ ಆಗಬೇಕು ಅಂದರೆ ಹಿಂದೂ ದೇವತೆಗಳನ್ನು ನಿಂದಿಸಿದರೆ ಸಾಕು ಎನ್ನುವ ಮನಸ್ಥಿತಿಯುಳ್ಳ ಬುದ್ದಿವಂತರು, ಅನ್ಯ ಧರ್ಮದ ಬಗ್ಗೆ ತುಟಿಕ್ ಪಿಟಿಕ್ ಎನ್ನದೇ ನೀರಾಳ ಮೌನವರೆಸುತ್ತಾರೆ ಎಂದರೆ ಏನೆನ್ನಬೇಕು!! ಆದರೆ ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗ್ಡೆ ಅವರನ್ನು ನಿಂದಿಸುವ ಭರದಲ್ಲಿ ಹಿಂದೂ ದೇವತೆಗಳಿಗೆ ಅವಮಾನ ಮಾಡಿದ್ದು, ದೇವರುಗಳ ಲೈಂಗಿಕ ಕ್ರಿಯೆಯ ಬಗ್ಗೆ ಫೇಸ್ ಬುಕ್ ನಲ್ಲಿ ನಿಂದನೆ ಮಾಡಿದ್ದಾನೆ.

ಅಷ್ಟಕ್ಕೂ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದಿದ್ದಾದರೂ ಏನು ಗೊತ್ತೇ?

ಹಿಂದೂಗಳ ಆರಾಧ್ಯ ದೇವನಾದ ಶ್ರೀರಾಮನ ಮಡದಿ ಸೀತೆಗೂ, ಶ್ರೀರಾಮನ ತಮ್ಮ ಲಕ್ಷ್ಮಣನಿಗೂ ಅಕ್ರಮ ಸಂಬಂಧವಿತ್ತು ಎಂದು ಫೇಸ್ ಬುಕ್ ನಲ್ಲಿ ಬರೆದಿದ್ದು, ಸೀತೆ ತಾನಾಗಿಯೇ ರಾವಣನ ಬಳಿ ಲೈಂಗಿಕ ಸುಖಕ್ಕಾಗಿ ಹೋಗಿದ್ದಳು. ರಾವಣನ ಜೊತೆಗಿನ ಲೈಂಗಿಕ ಸಂಪರ್ಕದ ನಂತರವೇ ಲವಕುಶ ಹುಟ್ಟಿದ್ದು ಎಂದು ಹೇಳಿದ್ದಾನೆ. ಇಷ್ಟೇ ಅಲ್ಲದೇ, ರಾಮ, ಲಕ್ಷಣ, ಸೀತೆಯ ಕುರಿತು ಅವಹೇಳನಕಾರಿಯಾಗಿ ಬರೆದಿರುವ ಈತ ಅನಂತ್‍ಕುಮಾರ್ ಹೆಗ್ಡೆ ಹಾಗೂ ಯೋಗಿ ಆದಿತ್ಯನಾಥ್‍ರನ್ನು ಟೀಕಿಸಿ ಪೋಸ್ಟ್ ಹಾಕಿದ್ದಾನೆ.

ಇನ್ನು ಈತ, ಶ್ರೀಕೃಷ್ಣ ತನ್ನ ತಂಗಿ ಸುಭದ್ರೆ ಜೊತೆ ಲೈಂಗಿಕ ಸಂಪರ್ಕ ಇಟ್ಟುಕೊಂಡಿದ್ದ. ಕೃಷ್ಣ 16 ಸಾವಿರ ಗೋಪಿಕಾಸ್ತ್ರೀಯರ ಜೊತೆ ತನ್ನ ತಂಗಿಯ ಜೊತೆಯೂ ಲೈಂಗಿಕ ಸುಖ ಪಡೆದಿದ್ದಾನೆ ಎಂದು ಹಿಂದೂ ದೇವತೆಗಳನ್ನು ಅವಮಾನಿಸಿದ್ದಾನೆ. ಅಲ್ಲದೇ ರಾಮಾಯಣದಲ್ಲಿ ಬರುವ ರಾಮ ರಾಮನ ಮಕ್ಕಳು ಅವರ ಅಪ್ಪನಿಗೆ ಹುಟ್ಟಿಲ್ಲ. ಮಹಾಭಾರತದಲ್ಲಿ ಬರುವ ಪಂಚ ಪಾಂಡವರೂ ಕೂಡ ಅವರಪ್ಪನಿಗೆ ಹುಟ್ಟಿಲ್ಲ ಎಂದೆಲ್ಲಾ ಬರೆದುಕೊಂಡಿದ್ದಾನೆ.

ಅಷ್ಟೇ ಅಲ್ಲದೇ, ಈಶ್ವರ ದಲಿತ ಸಮುದಾಯಕ್ಕೆ ಸೇರಿದವ. ಪಾರ್ವತಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು ಎಂದು ಶಿವ, ಪಾರ್ವತಿ, ಅಗ್ನಿದೇವನ ಕುರಿತು ಅಸಹ್ಯ ಪದಗಳ ಬಳಸಿ ಬರೆದಿದ್ದಾನೆ. ಗಣೇಶ, ಸುಬ್ರಮಣ್ಯ ಸೇರಿದಂತೆ ಬಹುತೇಕ ಹಿಂದೂ ದೇವರುಗಳ ಬಗ್ಗೆ ಅವಹೇಳನ ಮಾಡಿರುವ ಈತ ರಾಮಾಯಣ ಮುಂದುವರೆದಿದ್ದೇ  ರಾವಣ ಹುಟ್ಟಿಸಿದ್ದ ಮಕ್ಕಳಿಂದ ಹಾಗಾಗಿ ಬ್ರಾಹ್ಮಣಶಾಯಿಗಳು ಬಹುತೇಕವಾಗಿ ಅವರ ಅವರ ಅಪ್ಪನಿಗೆ ಹುಟ್ಟಿರುವುದು ಕಡಿಮೆ ಎಂದೆಲ್ಲಾ ಬರೆದುಕೊಂಡಿದ್ದಾನೆ!!


 

 

ಇದೀಗ ಈತನ ಪೋಸ್ಟ್ ಗೆ ಆಕ್ರೋಶ ಭರಿತವಾದ ಕಾಮೆಂಟ್‍ಗಳು ವ್ಯಕ್ತವಾಗಿದ್ದು, ಫೇಸ್‍ಬುಕ್ ನಲ್ಲೇ ಆತನ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಹೀಗಾಗಿ ಈತನ ವಿರುದ್ಧ ಮೈಸೂರಿನ ಸಮಗ್ರ ರಕ್ಷಣಾ ವೇದಿಕೆ ವತಿಯಿಂದ ಡಿಸಿಪಿ ವಿಷ್ಣುವರ್ಧನ ಅವರಿಗೆ ದೂರು ನೀಡಲಾಗಿದೆ.

Inline image 1

ಆದರೆ ಹಿಂದೂಸ್ತಾನದ ಪುಣ್ಯಭೂಮಿಯಲ್ಲಿದ್ದುಕೊಂಡು ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಇಂಥವರು ಹಿಂದೂ ಭೂಮಿಯಲ್ಲಿರಲು ಯೋಗ್ಯರಲ್ಲ ಎಂದೆನಿಸುತ್ತೇ!! ಅಷ್ಟೇ ಅಲ್ಲದೇ ಹಿಂದೂ ಧರ್ಮದ ಬಗ್ಗೆ, ದೇವತೆಗಳ ಬಗ್ಗೆ ಇಲ್ಲ ಸಲ್ಲದ ಆರೋಪಗಳು ಹೊರೆಸುವ ಇಂಥವರು ಅನ್ಯಧರ್ಮವನ್ನು ನಿಂದಿಸಲು ಸಿದ್ಧರಿದ್ದಾರೆಯೇ??

source:http://publictv.in/complaint-against-person-who-put-defamatory-post-on-fb-about-hindu-gods/
– ಅಲೋಖಾ

 

Tags

Related Articles

Close