ಪ್ರಚಲಿತ

ಸ್ಫೋಟಕ ಸುದ್ದಿ!! ಕರಾವಳಿಯ ದಕ್ಷ ಅಧಿಕಾರಿಗಳ ವರ್ಗಾವಣೆಯ ಹಿಂದಿದೆ ಕಾಂಗ್ರೆಸ್ ಹೈಕಮಾಂಡ್ ಹಸ್ತಕ್ಷೇಪ!! ಐಪಿಎಸ್ ಅಧಿಕಾರಿಗಳ ಎತ್ತಂಗಡಿ ಮಾಡಿದ್ದು ಯಾಕೆ ಗೊತ್ತಾ?

ಕೋಮುಗಲಭೆಯಿಂದ ಹೊತ್ತಿ ಹುರಿಯುತ್ತಿರುವ ದಕ್ಷಿಣ ಕನ್ನಡ ಜಿಲ್ಲೆ ಈಗಾಗಲೇ ದೀಪಕ್ ರಾವ್, ಶರತ್ ಮಡಿವಾಳ ಸೇರಿದಂತೆ ಮತ್ತಿತ್ತರ ಹತ್ಯೆಯಾದರೂ ಕೂಡ ಯಾವುದಕ್ಕೂ ಸೂಕ್ತ ತನಿಖೆಯಾಗದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎನ್ನುವ ಸುದ್ದಿ ವ್ಯಾಪಕವಾಗಿ ಹರಡಿತ್ತು!! ಆದರೆ ಇದರ ಹಿಂದಿರುವ ಒಳಗುಟ್ಟು ಇದೀಗ ರಟ್ಟಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಏನು ಕಾರಣ ಎಂಬುವುದು ಇದೀಗ ತಿಳಿದು ಬಂದಿದೆ.

ಹೌದು… ಪದೇ ಪದೇ ಒಂದಲ್ಲ ಒಂದು ಕೋಮು ವಿಚಾರವಾಗಿ ಸದ್ದು ಮಾಡುತ್ತಿರುವ ಬುದ್ದಿವಂತರ ನಾಡು ಹೀಗೆಕಾಯಿತು ಎನ್ನುವ ಪ್ರಶ್ನೆ ಎಲ್ಲರಲ್ಲೂ ಮನೆ ಮಾಡಿತ್ತು!!! ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಧಿಕಾರಿಗಳಿಗೂ ಹೈಕಮಾಂಡ್ ಆರ್ಡರ್ ಪಾಸ್ ಆದರೆ ಮಾತ್ರ ಇಲ್ಲಿ ಉಳಿಗಾಲ ಇಲ್ಲದಿದ್ದರೆ ಗೇಟ್ ಪಾಸ್ ಗ್ಯಾರೆಂಟಿಯಂತೆ. ಈ ಆರ್ಡರ್ ಪಾಸ್ ಮಾಡುವುದು ಬೇರಾರು ಅಲ್ಲ ಬಂಟ್ವಾಳದ ಹುಲಿ (ಪಿಲಿ)ಎಂದೇ ತನ್ನನ್ನು ತಾನೂ ಜಂಭದಿಂದ ಕರೆದುಕೊಂಡಿದ್ದ ಉಸ್ತುವಾರಿ ಸಚಿವರಾದ ರಮಾನಾಥ ರೈ!!

ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ನವರು ಮಾತ್ರವಲ್ಲ ಜಿಲ್ಲೆಯ ಎಲ್ಲಾ ಅಧಿಕಾರಿಗಳಿಗೂ ಉಸ್ತುವಾರಿ ಸಚಿವ ರಮಾನಾಥ ರೈ ಅವರೇ ಹೈಕಮಾಂಡ್!! ಅಷ್ಟೇ ಅಲ್ಲದೇ, ಜಿಲ್ಲೆಯ ಕಾಂಗ್ರೆಸ್ಸಿಗರು ಹಾಗೂ ಎಲ್ಲಾ ಅಧಿಕಾರಿಗಳು ಸಚಿವ ರಮಾನಾಥ ರೈ ಅವರ ಮಾತು ತಪ್ಪಿದರೆ ಟಾರ್ಗೆಟ್ ಗ್ಯಾರಂಟಿ. ಇದಕ್ಕೆ ಜೀವಂತ ಸಾಕ್ಷಿ ಕೇವಲ ಆರು ತಿಂಗಳಲ್ಲಿ ಇಬ್ಬರು ಎಸ್‍ಪಿಗಳ ವರ್ಗಾವಣೆ.

ಈಗಾಗಲೇ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರ ಮತ್ತು ಪುಣಚ ಶ್ರೀದೇವಿಯ ಪ್ರೌಢಶಾಲೆಯ ಬಡ ವಿದ್ಯಾರ್ಥಿಗಳಿಗೆ ಕೊಲ್ಲೂರು ದೇವಾಲಯದಿಂದ ನೀಡಲಾಗುತ್ತಿದ್ದ ಅನ್ನವನ್ನು ಕಸಿದಿರುವ ಮೂಲಕ ಸುದ್ದಿಯಾಗಿದ್ದ ರಮಾನಾಥ ರೈ, ಸರಕಾರದ ನೀತಿಯನ್ನು ವಿರೋಧಿಸಿ ಮಕ್ಕಳು ಖಾಲಿತಟ್ಟೆ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದರೂ ಕೂಡ ಕಾಂಗ್ರೆಸ್ ಸರಕಾರವಾಗಲಿ ಅಥವಾ ರಮಾನಾಥ ರೈ ಯವರಿಗಾಗಲಿ ಮನಕರಗಿರಲಿಲ್ಲ. ಆದರೆ ಇದೀಗ ಆರೇ ತಿಂಗಳಲ್ಲಿ ಇಬ್ಬರು ಎಸ್. ಪಿಗಳ ವರ್ಗಾವಣೆ ಮಾಡಿ ಎಲ್ಲಾ ಅಧಿಕಾರಿಗಳಿಗೂ ಉಸ್ತುವಾರಿ ಸಚಿವ ರಮಾನಾಥ ರೈ ಅವರೇ ಹೈಕಮಾಂಡ್ ಎಂದು ನಿರೂಪಿಸಿದ್ದಾರೆ.

ರಮಾನಾಥ ರೈ ಅವರ ಸ್ವ-ಕ್ಷೇತ್ರ ಬಂಟ್ವಾಳದಲ್ಲಿ ಕಳೆದ ಮೇ ತಿಂಗಳಿನಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಸರಣಿ ಹತ್ಯೆಗಳು ನಡೆದಿದೆಯಲ್ಲದೇ ಕೋಮುಗಲಭೆಯೂ ನಡೆದು ಹೋಗಿತ್ತು. ಇದಕ್ಕೆಲ್ಲಾ ಉಸ್ತುವಾರಿ ಸಚಿವರು ಪೆÇಲೀಸ್ ಅಧಿಕಾರಿಗಳ ಕರ್ತವ್ಯಕ್ಕೆ ಮೂಗು ತೂರಿಸುತ್ತಿರೋದೇ ಕಾರಣ ಎಂದು ಜನ ಆಡಿಕೊಳ್ಳುತ್ತಿದ್ದರು. ಇದಕ್ಕೆ ಸಾಕ್ಷಿ ಎಂಬಂತೆ ಬಂಟ್ವಾಳದ ಐಬಿಯಲ್ಲಿ ಅಂದಿನ ಜಿಲ್ಲಾ ಎಸ್.ಪಿ ಭೂಷಣ್ ರಾವ್ ಬೋರಸೆಯನ್ನು ಕಾಂಗ್ರೆಸ್ ಕಾರ್ಯಕರ್ತರ ಎದುರೇ ಹಿಗ್ಗಾ ಮುಗ್ಗ ಬೈದಿದ್ದ ವಿಡಿಯೋ ವೈರಲ್ ಆಗಿತ್ತು. ಇದರಿಂದ ಮುಜುಗರಕ್ಕೊಳಗಾದ ಸಚಿವ ರೈ ಅವರು ಎಸ್.ಪಿ ಬೋರಸೆಯನ್ನು 2017ರ ಜೂನ್ 21 ರಂದು ವರ್ಗಾವಣೆ ಮಾಡಿಸಿದ್ದರು.

ಇನ್ನು, ಎಸ್.ಪಿ ಭೂಷಣ್ ರಾವ್ ಬೋರಸೆಯವರ ವರ್ಗಾವಣೆಯ ಬಳಿಕ ಮಂಡ್ಯದ ಎಸ್.ಪಿಯಾಗಿದ್ದ, ದಕ್ಷ ಅಧಿಕಾರಿಯೆಂದು ಹೆಸರು ಮಾಡಿದ್ದ ಸುಧೀರ್ ಕುಮಾರ್ ರೆಡ್ಡಿಯನ್ನು ದಕ್ಷಿಣ ಕನ್ನಡ ಎಸ್.ಪಿಯಾಗಿ ನಿಯೋಜಿಸಲಾಗಿತ್ತು. ಆದರೆ ನೇಮಕಗೊಂಡ ಆರೇ ತಿಂಗಳಲ್ಲಿ ಎಸ್.ಪಿ ಸುಧೀರ್ ರೆಡ್ಡಿಯನ್ನು ಎತ್ತಂಗಡಿ ಮಾಡಲಾಗಿದೆ. ಸಚಿವ ರೈ ಸತತ ಪ್ರಯತ್ನದ ಮೂಲಕ ಕೊನೆಗೂ ವರ್ಗಾವಣೆ ಮಾಡಿ ಯಶಸ್ವಿಯಾಗಿದ್ದಾರೆ!!

ಆದರೆ ಈಗಾಗಲೇ ನಡೆದಿರುವ ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣದಲ್ಲಿ ಯಾರ ಮುಲಾಜಿಗೂ ಒಳಗಾಗದೆ ರೈ ಮಾತೂ ಕೇಳದೆ ಆರೋಪಿಗಳನ್ನು ಬಂಧಿಸಿದ್ದು, ಕೋಮು ಗಲಭೆಗೆ ಅವಕಾಶ ನೀಡದೆ ರಫ್ ಅಂಡ್ ಟಫ್ ಆಗಿ ವರ್ತಿಸಿರುವುದಕ್ಕೆ ಸುಧೀರ್ ರೆಡ್ಡಿಯನ್ನು ವರ್ಗ ಮಾಡಿಸಲಾಗಿದೆ ಅನ್ನೋ ಮಾತು ಕೇಳಿ ಬಂದಿರೋದು ಮಾತ್ರ ಅಕ್ಷರಶಃ ನಿಜ.

ಇನ್ನು, ಎಸ್ ಡಿಪಿಐ ಮುಖಂಡ ಅಶ್ರಫ್ ಕಲಾಯಿ, ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆಯ ಬಳಿಕ ನಡೆದ ಕೋಮುಗಲಭೆಗಳು ಎಸ್ ಪಿ ರೆಡ್ಡಿ ಬಂದ ಬಳಿಕ ಎರಡೇ ವಾರದಲ್ಲಿ ಕಂಟ್ರೋಲ್‍ಗೆ ತಂದಿದ್ದರು. ಆ ಬಳಿಕ ಯಾವುದೇ ಘಟನೆಗಳು ನಡೆಯದಂತೆಯೂ ನೋಡಿಕೊಂಡಿದ್ದರು!! ಆದರೆ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರ ಹಸ್ತಕ್ಷೇಪಕ್ಕೆ ರೆಡ್ಡಿ ಸೊಪ್ಪು ಹಾಕುತ್ತಿರಲಿಲ್ಲ. ಅಷ್ಟೇ ಅಲ್ಲದೇ, ರೆಡ್ಡಿ ಇರೋವರೆಗೂ ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾಗೋ ರೈ ಆಪ್ತರನ್ನು ರಕ್ಷಿಸಲು ಸಾಧ್ಯವಿಲ್ಲ. ಹೀಗಾಗಿಯೇ ಮುಖ್ಯಮಂತ್ರಿಗಳಿಂದ ಒತ್ತಡ ತಂದು ಎಸ್.ಪಿ ರೆಡ್ಡಿಯವರನ್ನು ವರ್ಗಾವಣೆ ಮಾಡಲಾಗಿದೆ ಎಂಬ ಮಾತುಗಳು ಕೇಳಿಬಂದಿದೆ.

ಇದೀಗ ಚುನಾವಣೆ ಹತ್ತಿರ ಬರುವಾಗ ಸಚಿವರು ಈ ಜಿಲ್ಲೆಯಲ್ಲಿ ತನಗೆ ಬೇಕಾದ ಅಧಿಕಾರಿಗಳನ್ನು ನಿಯೋಜನೆ ಮಾಡಲು ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದ್ದಾರಲ್ಲದೇ, ಸಚಿವರ ಸ್ವಾರ್ಥಕ್ಕಾಗಿ ದಕ್ಷ ಅಧಿಕಾರಿಗಳಿಗೆ ಈ ಜಿಲ್ಲೆಯಲ್ಲಿ ಉಳಿಗಾಲವಿಲ್ಲದಂತಾಗಿದೆ!! ಅಷ್ಟೇ ಅಲ್ಲದೇ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುಗಲಭೆಯಿಂದ ಹತ್ಯೆಗಳು ನಡೆಯುತ್ತಿದ್ದು, ಹಂತಕರನ್ನು ಉಸ್ತುವಾರಿ ಸಚಿವ ರಮಾನಾಥ ರೈ ಕಾಪಾಡುತ್ತಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

ಅಂತೂ ಕಾಂಗ್ರೆಸ್ಸಿನ ನರಿ ಬುದ್ದಿಯಿಂದಾಗಿ, ಬುದ್ದಿವಂತರ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದಲ್ಲದೇ ಸರಣಿ ಹತ್ಯೆಗಳು ನಡೆದರೂ ಕೂಡ ಉಸ್ತುವಾರಿ ಸಚಿವರು ಮಾತ್ರ ಆರೋಪಿಗಳನ್ನು ರಕ್ಷಿಸುತ್ತಲೇ ಬರುತ್ತಿರುವುದು ಮಾತ್ರ ನಾಚಿಕೆಗೇಡಿನ ಸಂಗತಿ. ಅಷ್ಟೇ ಅಲ್ಲದೇ ಈಗಾಗಲೇ ಚುನಾವಣೆ ಹತ್ತಿರ ಬರುವಾಗ ಸಚಿವರು ಈ ಜಿಲ್ಲೆಯಲ್ಲಿ ತನಗೆ ಬೇಕಾದ ಅಧಿಕಾರಿಗಳನ್ನು ನಿಯೋಜನೆ ಮಾಡಲು ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದ್ದಾರಲ್ಲದೇ ದಕ್ಷ ಅಧಿಕಾರಿಗಳಿಗೆ ಈ ಜಿಲ್ಲೆಯಲ್ಲಿ ಉಳಿಗಾಲವಿಲ್ಲದಂತಾಗಿದೆ.
ಕೃಪೆ: ಪಬ್ಲಿಕ್ ಟಿವಿ

– ಅಲೋಖಾ

Tags

Related Articles

Close