ಪ್ರಚಲಿತ

ಮುಸಲ್ಮಾನರ ಪವಿತ್ರ ಮಾಸ ರಂಜಾನ್ ನಲ್ಲೂ ಕಪಟ ನಾಟಕವಾಡಿದ ಪಾಕ್!! ಗಡಿನಿಯಮ ಉಲ್ಲಂಘಿಸಿದ್ದಕ್ಕೇ ಸುಬ್ರಮಣಿಯನ್ ಸ್ವಾಮಿಯಿಂದ ಖಡಕ್ ಉತ್ತರ!!

ಕೇಂದ್ರ ಸರಕಾರವು ಕಾಶ್ಮೀರದಲ್ಲಿ ರಂಜಾನ್ ಕದನ ವಿರಾಮ ಘೋಷಿಸಿ ಸಮಸ್ಯೆಯನ್ನು ಪರಿಹರಿಸುವುದಕ್ಕೆ ಯಾವೆಲ್ಲ ದಾರಿಗಳಿವೆಯೋ ಆ ಎಲ್ಲಾ ದಾರಿಗಳನ್ನೂ ಬಳಸಿಕೊಂಡಿರುವ ವಿಚಾರ ಗೊತ್ತೇ ಇದೆ!! ಆದರೆ ಪಾಕಿಸ್ತಾನದ ಯೋಧರು ಮತ್ತು ಪಾಕ್ ಬೆಂಬಲಿತ ಭಯೋತ್ಪಾದಕರು ಮಾತ್ರ ಮುಸ್ಲಿಮರ ಪವಿತ್ರ ಮಾಸ ರಂಜಾನ್ ಎನ್ನುವುದನ್ನೂ ಲೆಕ್ಕಿಸದೇ ಗಡಿನಿಯಮ ಉಲ್ಲಂಘಿಸಿ ದಾಳಿ ನಡೆಸಿ ತನ್ನ ನರಿ ಬುದ್ದಿಯನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ!!! ಈ ಕುರಿತಂತೆ ಬಿಜೆಪಿ ಮುಖಂಡರಾದ ಸುಬ್ರಮಣಿಯನ್ ಸ್ವಾಮಿ ಖಡಕ್ ಉತ್ತರವನ್ನು ನೀಡಿದ್ದಾರೆ!!

ಹೌದು…. ಮನುಷ್ಯನಲ್ಲಿರುವ ದ್ವೇಷ, ಮದ-ಮತ್ಸರಗಳನ್ನು ತೊರೆದು, ಹಸಿವು ಬಡತನವನ್ನು ಅರಿತುಕೊಳ್ಳುವಂತೆ ಮಾಡಿ ಸಮಾನತೆಯ ತತ್ವವನ್ನು ಸಾರುವುದೇ ರಂಜಾನ್ ಹಬ್ಬದ ವಿಶೇಷ. ಇಸ್ಲಾಂ ಕ್ಯಾಲೆಂಡರ್‍ನ ವರ್ಷದ 9ನೇ ತಿಂಗಳನ್ನು ಮುಸ್ಲಿಮರು ರಂಜಾನ್ ಮಾಸವೆಂದು ಆಚರಿಸುತ್ತಾರೆ. ಕಾರಣ ವರ್ಷದ ಎಲ್ಲ ದಿನಗಳಲ್ಲಿ ನಾವು ಮಾಡಿದ ಪಾಪ ಕರ್ಮಗಳ ಫಲವನ್ನು ಕಳೆದುಕೊಂಡು ಪವಿತ್ರವಾಗಲು ಇಂತಹ ಒಂದು ಅವಕಾಶವನ್ನು ದೇವರು ನೀಡಿದ್ದಾನೆ. ಹಾಗಾಗಿ ಒಂದು ತಿಂಗಳುಗಳ ಕಾಲ ನಿದ್ದೆ, ಹಸಿವು, ನೀರಡಿಕೆಯನ್ನು ಬಿಟ್ಟು ಉಪವಾಸ ವ್ರತವನ್ನು ಆಚರಿಸುವ ಮೂಲಕ ದೇವರ ಸ್ಮರಣೆ ಮಾಡಲಾಗುತ್ತದೆ.

Related image

ಅಷ್ಟೇ ಅಲ್ಲದೇ, ಈ ವ್ರತ ಆಚರಣೆಯಲ್ಲಿ ತೊಡಗಿರುವಾಗ ಯಾರೊಬ್ಬರ ಮನಸ್ಸಿನಲ್ಲೂ ಕೆಟ್ಟ ಆಲೋಚನೆಗಳನ್ನು ಮಾಡುವುದಿಲ್ಲ. ಯಾವುದೇ ಪಾಪಕೃತ್ಯದಲ್ಲಿ ತೊಡಗುವುದಿಲ್ಲ. ಪರಸ್ಪರ ಸಹಕಾರ, ತಾಳ್ಮೆ, ಶಿಸ್ತು, ಸಂಯಮ, ಸಮಯಪಾಲನೆ, ಸಹೋದರತ್ವಗಳನ್ನು ಮೈಗೂಡಿಕೊಂಡು ಬದುಕುತ್ತಾರೆ. ಇದನ್ನೇ ಜೀವನದ ಅವಿಭಾಜ್ಯ ಅಂಗವಾಗಿ ಸ್ವೀಕರಿಸಿ ನಡೆಯಬೇಕು ಎಂಬುದನ್ನು ರಂಜಾನ್ ಹಬ್ಬವು ಪ್ರತಿಯೊಬ್ಬರಿಗೂ ಬೋಧಿಸುತ್ತದೆ!! ಹೀಗಿರಬೇಕಾದರೆ ಪಾಕಿಸ್ತಾನದ ಯೋಧರು ಮತ್ತು ಪಾಕ್ ಬೆಂಬಲಿತ ಭಯೋತ್ಪಾದಕರು ಗಡಿನಿಮಯ ಉಲ್ಲಂಘಿಸಿ ದಾಳಿ ನಡೆಸಿದ್ದಾರೆ ಎಂದರೆ ಅದು ನಿಜಕ್ಕೂ ಕೂಡ ಹೇಯ ಕೃತ್ಯವಲ್ಲದೇ ಮತ್ತೇನು??

ತಮ್ಮ ಪವಿತ್ರ ಮಾಸ ರಂಜಾನ್ ನಲ್ಲೂ ಗಡಿನಿಮಯ ಉಲ್ಲಂಘಿಸಿ ದಾಳಿ ನಡೆಸುತ್ತಿರುವ ಪಾಕಿಸ್ತಾನದ ಯೋಧರು ಮತ್ತು ಪಾಕ್ ಬೆಂಬಲಿತ ಭಯೋತ್ಪಾದಕರಿಗೆ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ತಕ್ಕ ಉತ್ತರ ನೀಡಿದ್ದು, ಭಯೋತ್ಪಾದಕರಿಗೆ ಕೇವಲ ಗುಂಡಿನ ಭಾಷೆಯಲ್ಲೇ ಉತ್ತರ ನೀಡಬೇಕು. ಗುಂಡಿನ ಭಾಷೆ ಮಾತ್ರ ಅವರಿಗೆ ಅರ್ಥವಾಗುತ್ತದೆ ಎಂದು ಖಡಕ್ ಮಾತುಗಳನ್ನು ಹೇಳಿದ್ದಾರೆ.

Image result for AURANGZEB ARMY

ಈಗಾಗಲೇ ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಪವಿತ್ರ ರಂಜಾನ್ ಮಾಸದಲ್ಲಿ ಕೇಂದ್ರ ಸರಕಾರ ಸೈನಿಕ ಕಾರ್ಯಾಚರಣೆ ನಡೆಸುವುದನ್ನು ಸ್ಥಗಿತಗೊಳಿಸಿದೆ. ಆದರೆ ಮುಸ್ಲಿಂ ದೇಶವಾದ ಪಾಕಿಸ್ತಾನ ರಂಜಾನ್ ಮಾಸದಲ್ಲೂ ತನ್ನ ಕುತಂತ್ರ ಬುದ್ಧಿ ಪ್ರದರ್ಶಿಸುತ್ತಿದೆ ಎಂದರೆ ಅದಕ್ಕಿಂತಲೂ ಹೇಯ ಕೃತ್ಯ ಮತ್ತೊಂದಿಲ್ಲ ಎಂದೆನಿಸುತ್ತದೆ!! ಇತ್ತೀಚೆಗಷ್ಟೇ ಯೋಧ ಔರಂಗಜೇಬ್ ಅವರನ್ನು ಅಪಹರಿಸಿ ಕೊಲೆ ಮತ್ತು ರೈಸಿಂಗ್ ಕಾಶ್ಮೀರ ಪತ್ರಿಕೆ ಸಂಪಾದಕ ಪತ್ರಕರ್ತ ಶುಜತ್ ಬುಕಾರಿ ಅವರ ಕೊಲೆ ಮಾಡಿರುವ ಭಯೋತ್ಪಾದಕರ ನಡೆಯನ್ನು ಖಂಡಿಸಿ ಮಾತನಾಡಿರುವ ಸುಬ್ರಮಣಿಯನ್ ಸ್ವಾಮಿ “ದೇಶದ ರಕ್ಷಣಾ ಪಡೆಗಳಿಗೆ ಪೂರ್ಣಾಧಿಕಾರ ನೀಡಬೇಕು. ಭಯೋತ್ಪಾದಕರು ಕಂಡ ಸ್ಥಳದಲ್ಲೇ ಗುಂಡಿಕ್ಕಿ ಕೊಲ್ಲುವ ಅಧಿಕಾರ ನೀಡಬೇಕು. ಇಲ್ಲದಿದ್ದರೇ ಭಯೋತ್ಪಾದಕರಿಗೆ ಪಾಠ ಕಲಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೇ, “ಕಾಶ್ಮೀರದ ಸರಕಾರವನ್ನು ಅಮಾನತ್ತಿನಲ್ಲಿಡಬೇಕು ಮತ್ತು ನೂತನ ರಾಜ್ಯಪಾಲರನ್ನು ನೇಮಿಸಬೇಕು. ಸೇನೆಗೆ ಕೇಂದ್ರ ಸರಕಾರವಲ್ಲ ರಾಜ್ಯಪಾಲರೇ ನೇರವಾಗಿ ಸೂಚನೆಗಳನ್ನು ನೀಡುವ ಅಧಿಕಾರ ನೀಡಬೇಕು. ಅದಲ್ಲದೇ ಜಮ್ಮು ಕಾಶ್ಮೀರದಲ್ಲಿ ರಕ್ಷಣಾ ಪಡೆಗಳ ಸಂಖ್ಯೆಯನ್ನು ಹೆಚ್ಚಿಸಬೇಕು” ಎಂದು ಹೇಳಿದ್ದಾರೆ.

ಇನ್ನು, ಇತ್ತೀಚೆಗಷ್ಟೇ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ವ್ಯಾಪ್ತಿಯಲ್ಲಿ ಪಾಕಿಸ್ತಾನದ ಭಯೋತ್ಪಾದಕರ ದಾಳಿಗೆ ಹುತಾತ್ಮರಾಗಿರುವ ಯೋಧ ಔರಂಗಜೇಬ್ ಕೊಲೆಯನ್ನು ಖಂಡಿಸಿ ಉತ್ತರ ಪ್ರದೇಶದ ಷಿಯಾ ವಕ್ಫ ಬೋರ್ಡ್ ರಂಜಾನ್ ಆಚರಿಸದಿರಲು ನಿರ್ಧರಿಸಿದ್ದು, ಪಾಕಿಸ್ತಾನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಷ್ಟೇ ಅಲ್ಲದೇ, ಯೋಧ ಔರಂಗಜೇಬ್ ಕೊಲೆ ಖಂಡಿಸಿ, ರಂಜಾನ್ ಆಚರಣೆಯನ್ನು ಕೈ ಬಿಟ್ಟು, ನೆರೆ ರಾಷ್ಟ್ರವಾದ ಪಾಕಿಸ್ತಾನದ ಧ್ವಜವನ್ನು ಸುಟ್ಟು ಹೋರಾಟ ಮಾಡಲು ನಿರ್ಧರಿಸಲಾಗಿದೆ. ಯೋಧ ಔರಂಗಜೇಬ್ ಕೊಲೆ ದೇಶಕ್ಕೆ ಮಾರಕವಾದ್ದದ್ದು, ಇಂತಹ ಕೃತ್ಯಗಳನ್ನು ಮುಸ್ಲಿಂ ಸಮುದಾಯ ಖಂಡಿಸುತ್ತಿದ್ದು, ಪಾಕಿಸ್ತಾನದ ವಿರುದ್ಧ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಶಿಯಾ ವಕ್ಫ್ ಬೋರ್ಡ್ ಅಧ್ಯಕ್ಷ ಸೈಯದ್ ವಾಸಿಂ ರಿಜ್ವಿ ತಿಳಿಸಿದ್ದಾರೆ.

ಈಗಾಗಲೇ ಪಾಪಿ ರಾಷ್ಟ್ರ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರದಲ್ಲಿ ಅಂತರಾಷ್ಟ್ರೀಯ ಉಗ್ರ ಹಾಗೂ ಜಮಾತ್ ಉಲ್ ದವಾ ಸಂಘಟನೆಯ ಮುಖ್ಯಸ್ಥ ಹಫೀಸ್ ಸಯೀದ್ ರಂಜಾನ್ ತಿಂಗಳಲ್ಲೇ ಪ್ರಧಾನಿ ಮೋದಿಯವರ ಹತ್ಯೆ ಮಾಡಬೇಕು ಎಂದು ಆದೇಶವನ್ನು ನೀಡಿದ್ದ ವಿಚಾರ ಗೊತ್ತೇ ಇದೆ!! ವಿಪರ್ಯಾಸವೆಂದರೆ, ತನ್ನ ಪವಿತ್ರವಾದ ಹಬ್ಬವನ್ನು ಲೆಕ್ಕಿಸಿದೇ, ತಮ್ಮ ಧರ್ಮ ಗ್ರಂಥವನ್ನೂ ಪಾಲಿಸಿದ ಪಾಕಿಸ್ತಾನವು ತಮ್ಮ ಧರ್ಮದ ಮೇಲೆ ಅದೆಷ್ಟು ಗೌರವವನ್ನು ಹೊಂದಿದೆ ಎನ್ನುವುದು ಈ ಮೂಲಕ ಗೊತ್ತಾಗುತ್ತೆ!!

ಮೂಲ:
http://zeenews.india.com/india/terrorists-only-understand-language-of-bullets-subramanian-swamy-on-terrorism-in-jk-2116836.html

– ಅಲೋಖಾ

Tags

Related Articles

Close