ಪ್ರಚಲಿತರಾಜ್ಯ

ಬಿಗ್ ಬ್ರೇಕಿಂಗ್: ಕಾಂಗ್ರೆಸ್ ಶಾಸಕನ ಗೂಂಡಾ ಮಗ ಆರೆಸ್ಟ್! ಎಫ್.ಐ.ಆರ್ ದಾಖಲು.. ಮನೆಯಲ್ಲಿಯೇ ಇಟ್ಟುಕೊಂಡು ಸುಳ್ಳು ಹೇಳಿದ್ದ ಕಾಂಗ್ರೆಸ್ ಶಾಸಕನಿಗೆ ಸಹಕರಿಸಿದ ಪೊಲೀಸರು..

ನಿನ್ನೆಯಿಂದ ಭಾರೀ ಸುದ್ಧಿಯಾಗಿದ್ದ ಕಾಂಗ್ರೆಸ್ ಶಾಸಕ ಹ್ಯಾರೀಸ್ ಪುತ್ರನ ಅವಾಂತರದ ಪ್ರಕರಣ ಕೊನೆಗೂ ಆತನ ಬಂಧನದ ಮೂಲಕ ಅಂತ್ಯವಾಗಿದೆ. ಕಾಂಗ್ರೆಸ್ ಮುಖಂಡ ತನ್ನ ಮಗನನ್ನು ಗೂಂಡಾನಂತೆ ಬೆಳಸಿ, ಗೂಂಡಾಗಿರಿಯನ್ನೇ ತನ್ನ ವೃತ್ತಿಯಾಗಿರಿಸಿಕೊಂಡು ಬಂದಿದ್ದ ಈ ಅಹಂಕಾರಿಯನ್ನು ಕೊನೆಗೂ ಕಾನೂನು ಮುಖಾಂತರ ಬಂಧಿಸಿದ್ದಾರೆ.

ಏನಿದು ಪ್ರಕರಣ..?

ಫೆಬ್ರವರಿ 17ರಂದು ಕಾಂಗ್ರೆಸ್ ಶಾಸಕ ಹ್ಯಾರಿಸ್ ಎಂಬವರ ಗೂಂಡಾ ಪುತ್ರ ಮಹಮ್ಮದ್ ನಲಪಾಡ್ ಓರ್ವ ದಿವ್ಯಾಂಗನಿಗೆ ಮನಬಂದಂತೆ ಭಾರಿಸಿದ್ದಾನೆ. ಶನಿವಾರ ಬೆಂಗಳೂರಿನ ಪ್ರತಿಷ್ಟಿತ ಹೊಟೇಲ್ ಒಂದರಲ್ಲಿ ಕಾಂಗ್ರೆಸ್ ಶಾಸಕ ಹ್ಯಾರಿಸ್ ರ ಮಗ ಗೂಂಡ ಮಹಮ್ಮದ್ ನಲಪಾಡ್ ಎಂಬಾತ ತನ್ನ ದರ್ಪದ ಅಮಲಿನಲ್ಲಿ ದುಷ್ಕøತ್ಯವನ್ನು ಮೆರೆದಿದ್ದಾನೆ. ಅದೇ ಹೋಟೆಲ್‍ನಲ್ಲಿದ್ದ ದಿವ್ಯಾಂಗ ವಿದ್ವತ್ ಎಂಬವನೇ ಹಲ್ಲೆಗೊಳಗಾದ ವ್ಯಕ್ತಿ.

ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ಪುತ್ರ ಮಹಮ್ಮದ್ ನಲಪಾಡ್ ಎಂಬ ಗೂಂಡಾ ಊಟ ಮಾಡುತ್ತಿರುವ ಸಂದರ್ಭದಲ್ಲಿ ಅದನ್ನು ವಿದ್ವತ್ ಎಂಬ ಅಂಗವಿಕಲ ಬಾಧಿತನೊಬ್ಬ ನೋಡತ್ತಿದ್ದೆಂಬ ಕ್ಷುಲ್ಲಕ ಕಾರಣಕ್ಕಾಗಿ ಆತನ ಮೇಲೆ ಮಾರಣಾಂತಿಕ ಹಲ್ಲೆಯನ್ನು ಮಾಡಿ ಅಮಾನವೀಯತೆಯನ್ನು ಮೆರೆದಿದ್ದಾನೆ. ಮನಬಂದಂತೆ ಥಳಿಸಿದ ಕಾಂಗ್ರೆಸ್ ಮುಖಂಡ ಮಹಮ್ಮದ್ ನಲಪಾಡ್ ರಕ್ತದ ಜೊತೆಗೆ ಚೆಲ್ಲಾಟವನ್ನೇ ನಡೆಸಿದ್ದಾನೆ. ಆತ ಓರ್ವ ದಿವ್ಯಾಂಗ ಎಂಬ ಕನಿಷ್ಟ ಯೋಚನೆಯನ್ನೂ ಮಾಡದ ಕಾಂಗ್ರೆಸ್ ಗೂಂಡಾ ಆ ವ್ಯಕ್ತಿಯನ್ನು ಮನ ಬಂದಂತೆ ಭಾರಿಸಿ ತನ್ನ ಗೂಂಡಾಗಿರಿಯ ಮತ್ತೊಂದು ಮುಖವನ್ನು ಅನಾವರಣಗೊಳಿಸಿದ್ದಾನೆ.

ನಾಪತ್ತೆಯಾಗಿದ್ದ ಕಾಂಗ್ರೆಸ್ ಮುಖಂಡ…

ದಿವ್ಯಾಂಗನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಕಾಂಗ್ರೆಸ್ ಶಾಸಕ ಹ್ಯಾರಿಸ್ ನ ಪುತ್ರ ಕಾಂಗ್ರೆಸ್ ಮುಖಂಡ ಮಹಮ್ಮದ್ ನಲಪಾಡ್ ಎಂಬ ಗೂಂಡಾ ಘಟನೆಯ ಬಳಿಕ ನಾಪತ್ತೆಯಾಗಿದ್ದ. ರಕ್ತ ಬಂದಂತೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಗೂಂಡ ಎಲ್ಲೋ ಹೋಗಿ ಅಡಗಿ ಕುಳಿತಿದ್ದ. ಪೊಲೀಸರ ಹಾಗೂ ತನ್ನ ತಂದೆ ಶಾಸಕ ಹ್ಯಾರಿಸ್ ಅವರ ಸುಪರ್ಧಿಯಲ್ಲಿ ಭದ್ರವಾಗಿದ್ದ.

ಮತ್ತೆ ಬಂದು ಆಸ್ಪತ್ರೆಯಲ್ಲೇ ಧಮ್ಕಿ ಹಾಕಿದ್ದ ಗೂಂಡಾ..!!!

ಕಾಂಗ್ರೆಸ್ ಮುಖಂಡ ಗೂಂಡಾ ನಲಪಾಡ್ ಎಂಬಾತ ಪರಾರಿಯಾಗಿದ್ದಾನೆ ಎಂದುಕೊಂಡೇ ಕಾಲಹರಣ ಮಾಡುತ್ತಿದ್ದರು ಕಬ್ಬನ್ ಪಾರ್ಕ್ ಪೊಲೀಸರು. ಆದರೆ ಈ ಗೂಂಡಾ ಅದರ ಮಧ್ಯೆ ಹಲ್ಲೆಗೊಳಗಾದ ವಿದ್ವತ್ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗೆ ದೌಡಾಯಿಸಿ ಮತ್ತೆ ವಿದ್ವತ್ ಎಂಬಾತನಿಗೆ ಧಮ್ಕಿ ಹಾಕಿದ್ದ. ಒಂದು ವೇಳೆ ಪೊಲೀಸರಿಗೆ ವಿಚಾರ ತಿಳಿಸಿದರೆ ನಿನ್ನನ್ನು ಉಳಿಸೋದಿಲ್ಲ ಎಂದು ಭಾರೀ ಬೆದರಿಕೆಯನ್ನು ಹಾಕಿದ್ದನು. ಆದರೆ ಈ ಎಲ್ಲಾ ಬೆದರಿಕೆಗೂ ಜಗ್ಗದ ವಿದ್ವತ್ ಪೋಷಕರು ಪೊಲೀಸ್ ಠಾಣೆಯಲ್ಲಿ ರೌಡಿ ನಲಪಾಡ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸೆಂಟಿಮೆಂಟ್ ಕ್ರಿಯೇಟ್ ಮಾಡಿ ಸುಳ್ಳು ಹೇಳಿದ್ದ ಕಾಂಗ್ರೆಸ್ ಶಾಸಕ…

ತನ್ನ ಮಗ ಗೂಂಡಾ ಮಹಮ್ಮದ್ ನಲಪಾಡ್‍ನ ಈ ರೀತಿಯ ವರ್ತನೆ ಬಗ್ಗೆ ಸೆಂಟಿಮೆಂಟ್ ಕ್ರಿಯೇಟ್ ಮಾಡಲು ಯತ್ನಿಸಿದ್ದರು. “ಹೌದು ನನ್ನ ಮಗ ತಪ್ಪು ಮಾಡಿದ್ದಾನೆ. ಅವನನ್ನು ನಾನೇ ಪೊಲೀಸರ ಮುಂದೆ ಸರೆಂಡರ್ ಮಡುತ್ತೇನೆ. ಕಾಲಾವಲಕಾಶ ಕೊಡಿ” ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು.

ಮಾತ್ರವಲ್ಲದೆ “ನನ್ನ ಮಗ ಎಲ್ಲಿದ್ದಾನೆ ಎಂದು ನನಗೆ ಗೊತ್ತೇ ಇಲ್ಲ. ಆತ ನನ್ನ ಸಂಪರ್ಕಕ್ಕೇ ಸಿಗುತ್ತಿಲ್ಲ. ಆತ ಎಲ್ಲೇ ಇದ್ದರೂ ನಾನು ಅವನನ್ನು ಕರೆದುಕೊಂಡು ಬರುತ್ತೇನೆ” ಎಂದು ರಾಜ್ಯದ ಜನತೆಯ ಮುಂದೆ ಮೊಸಳೆ ಕಣ್ಣೀರನ್ನು ಸುರಿಸಿ ಸಿಂಪತಿ ಗಿಟ್ಟಿಸಿಕೊಳ್ಳುವ ಪ್ರಯತ್ನವನ್ನೂ ಮಾಡಿದ್ದರು.

ಅರೆಸ್ಟ್ ಮಾಡಿದ ಪೊಲೀಸರು…

ಇಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ಪುತ್ರ ಗೂಂಡಾ ನಲಪಾಡ್‍ನ್ನು ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ. ಸತತ 37 ಗಂಟೆಗಳ ಕಾಲ ಪೊಲೀಸರ ಕೈಗೆ ಸಿಗದ! ನಲಪಾಡ್ ಇಂದು ಪೊಲೀಸರಿಗೆ ಶರಣಾಗಿದ್ದಾನೆ.

ನಾಟಕ ಮಾಡಿದ ಕಾಂಗ್ರೆಸ್ ಶಾಸಕ…!

ಸ್ಪೋಟಕ ಸುದ್ಧಿಯೇನೆಂದರೆ ಕಾಂಗ್ರೆಸ್ ಶಾಸಕ ಹ್ಯಾರಿಸ್, ತನ್ನ ಗೂಂಡಾ ಪುತ್ರನನ್ನು ಮನೆಯಲ್ಲಿಯೇ ಇಟ್ಟುಕೊಂಡು ನಾಟಕ ಮಾಡಿ ರಾಜ್ಯದ ಜನತೆಯ ಎದುರು ಸಿಂಪತಿ ಗಿಟ್ಟಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದರು. “ನನ್ನ ಮಗ ಎಲ್ಲಿದ್ದಾನೆ ಎಂದು ನನಗೆ ಗೊತ್ತಿಲ್ಲ, ಆತ ನನ್ನ ಸಂಪರ್ಕಕ್ಕೆ ಸಿಗುತ್ತಿಲ್ಲ. ನನ್ನ ಮಗನನ್ನು ನಾನು ಪೊಲೀಸರ ಮುಂದೆ ಶರಣಾಗತಿಪಡಿಸುತ್ತೇನೆ” ಎಂದು ಹೇಳಿದ್ದ ಶಾಸಕ ಹ್ಯಾರೀಸ್‍ರ ನಿಜಮುಖ ಈಗ ಅನಾವರಣವಾಗಿದೆ. ಇಂದು ಕಬ್ಬನ್ ಪಾರ್ಕ್ ಪೊಲೀಸರು ನೇರವಾಗಿ ಆತನ ಮನೆಯಿಂದಲೇ ಅವನನ್ನು ಬಂಧಿಸಿದ್ದಾರೆ. ಆತ ಎಲ್ಲಿದ್ದಾನೆ ಎಂದು ಗೊತ್ತಿಲ್ಲ ಎಂದು ಹೇಳಿಕೊಂಡೇ ಬರುತ್ತಿದ್ದ ಕಾಂಗ್ರೆಸ್ ಶಾಸಕನ ನಿಜಮುಖ ಅನಾವರಣವಾಗಿದೆ. ತನ್ನ ಮಗನನ್ನು ಮನೆಯಲ್ಲಿಯೇ ಇಟ್ಟುಕೊಂಡು ಸುಳ್ಳು ಹೇಳಿದ್ದ ಶಾಸಕ ಇಂದು ತನ್ನ ಮಗನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಪೊಲೀಸರಿಗೂ ಗೊತ್ತಿತ್ತು..?

ಇದು ಕೇವಲ ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ನಾಟಕವಲ್ಲ. ಇದು ಸ್ವತಃ ಕಬ್ಬನ್ ಪಾರ್ಕ್ ಪೊಲೀಸರ ಒಪ್ಪಂದವೂ ಹೌದು. ಇದು ಈಗ ಬಹಿರಂಗವಾಗಿದೆ. ಕಬ್ಬನ್ ಪಾರ್ಕ್ ಪೊಲೀಸರು ಆತ ಕಾಂಗ್ರೆಸ್ ಶಾಸಕರ ಮನೆಯಲ್ಲಿ ಇದ್ದಾನೆ ಎಂಬ ಸ್ಪಷ್ಟ ಮಾಹಿತಿ ಇದ್ದರೂ ಆತನನ್ನು ಬಂಧಿಸಲು ಹಿಂದೇಟು ಹಾಕುತ್ತಾರೆ. ಹೀಗಾಗಿ ಇದೊಂದು ಕಾಂಗ್ರೆಸ್ ಸರ್ಕಾರವನ್ನು ಬಳಸಿಕೊಂಡು ದರ್ಪ ಮೆರೆದ ಶಾಸಕ ಹ್ಯಾರೀಸ್ ಹಾಗೂ ಪೊಲೀಸರ ನಾಟಕ ಎಂಬುವುದು ಸುಳ್ಳಲ್ಲ.

ಎಫ್.ಐ.ಆರ್. ದಾಖಲು…

ಮೀನಾಮೇಷವೆನಿಸಿದ ಪೊಲೀಸರು ಕೊನೆಗೂ ಗೂಂಡಾ ಪುತ್ರ ನಲಪಾಡ್ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 307 ನಡಿ ಪ್ರಕರಣ ದಾಖಲಿಸಿದ್ದಾರೆ. ಜನತೆ ಬೀದಿಗಿಳಿದು ಹೋರಾಟ ನಡೆಸಿದ ನಂತರ ಈ ಕ್ರಮವನ್ನು ಕೈಗೊಂಡ ಪೊಲೀಸರು ಆತನ ವಿರುದ್ಧ ಕೇಸ್ ದಾಖಲಿಸಿ ನ್ಯಾಯಾಧೀಶರಿಗೆ ಕಳಿಸಿದ್ದಾರೆ. ಮಾತ್ರವಲ್ಲದೆ ನ್ಯಾಯಾಧೀಶರ ಬಳಿ 5 ದಿನಗಳವರೆಗೆ ಆತನನ್ನು ತಮ್ಮ ಕಸ್ಟಡಿಗೆ ಕೊಡುವಂತೆ ಬೇಡಿಕೆಯನ್ನೂ ಇಡಲಿದ್ದಾರೆ. ಆದರೆ ಅತನನ್ನು ಜೈಲಿಗೆ ಕಳಿಸುವ ತೀರ್ಮಾನವೂ ನ್ಯಾಯಾಧೀಶರಿಂದ ಬರಬಹುದು ಎಂದೂ ಹೇಳಲಾಗುತ್ತಿದೆ.

ಒಟ್ಟಿನಲ್ಲಿ ಕಾಂಗ್ರೆಸ್ ಗೂಂಡಾ ಕುಟುಂಬದ ನಾಟಕ ಬಯಲಾಗಿ ಬಂಧನ ಮೂಲಕ ಕೊನೆಗೊಂಡಿದೆ. ಇನ್ನೇನಿದ್ದರೂ ಆತನಿಗೆ ಶಿಕ್ಷೆ ಹಾಗೂ ಓರ್ವ ಶಾಸಕನಾಗಿ ಆತನಿಗೆ ಸಹಾಯ ಮಾಡಿ ಅಪರಾಧ ಮೆರೆದ ಗೂಂಡಾ ಮಗನ ಅಪ್ಪ ಶಾಸಕ ಹ್ಯಾರಿಸ್‍ರನ್ನೂ ಬಂಧಿಸಬೇಕೆಂಬ ಆಗ್ರಹವೂ ಕೇಳಿ ಬರುತ್ತಿದ್ದು ಈ ಕೆಲಸವೂ ಆಗಬೇಕಾಗಿದೆ. ಈ ಮೂಲಕ ನ್ಯಾಯವನ್ನು ಎತ್ತಿಹಿಡಿಯಬೇಕಾಗಿದೆ.

-ಸುನಿಲ್ ಪಣಪಿಲ

Tags

Related Articles

Close