ಪ್ರಚಲಿತ

ಬಿಗ್ ಬ್ರೇಕಿಂಗ್ ! ಕರಾವಳಿಯಲ್ಲೂ ಕಾಂಗ್ರೆಸ್‌ಗೆ ಐಟಿ ಶಾಕ್..! ದಾಳಿಗೆ ಬೆಚ್ಚಿಬಿದ್ದ ರೈ..!

ಕಳೆದ ಒಂದು ತಿಂಗಳಿನಿಂದ ನಿರಂತರ ದಾಳಿ ನಡೆಸುತ್ತಿರುವ ಐಟಿ ಅಧಿಕಾರಿಗಳು ರಾಜ್ಯ ಸರಕಾರದ ಎಲ್ಲಾ ಭ್ರಷ್ಟ ಸಚಿವ,ಶಾಸಕರ ಮೇಲೂ ದಾಳಿ ನಡೆಸುತ್ತಿದ್ದಾರೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆಯೇ ಐಟಿ ಅಧಿಕಾರಿಗಳು ನಡೆಸಿದ ದಾಳಿಗೆ ಇಡೀ ರಾಜ್ಯವೇ ಬೆಚ್ಚಿಬಿದ್ದಿತ್ತು. ಚುನಾವಣೆಗೆ ಇನ್ನು ಕೇವಲ ಮೂರೇ ದಿನ ಬಾಕಿ ಇದ್ದು, ಐಟಿ ಅಧಿಕಾರಿಗಳ ಬೇಟೆ ಮಾತ್ರ ಇನ್ನೂ ನಿಲ್ಲುತ್ತಿಲ್ಲ. ಕಳೆದ ಐದು ವರ್ಷಗಳಿಂದ ಲೂಟಿ ಮಾಡಿ ಸಂಗ್ರಹಿಸಿರುವ ರಾಜ್ಯ ಸರಕಾರದ ಲೂಟಿಕೋರರ ಮೇಲೆ ಹದ್ದಿನ ಕಣ್ಣಿಟ್ಟಿರುವ ಐಟಿ ಇಲಾಖೆ, ಇದೀಗ ಕರಾವಳಿಗೆ ಲಗ್ಗೆ ಇಟ್ಟಿದ್ದಾರೆ..!

ಉಸ್ತುವಾರಿ ಸಚಿವರ ಮೇಲೂ ಐಟಿ ಕಣ್ಣು..!

ಕರಾವಳಿಯ ಪ್ರಭಾವಿ ಕಾಂಗ್ರೆಸ್ ಶಾಸಕ, ರಾಜ್ಯ ಸರಕಾರದ ಸಚಿವರಾಗಿರುವ ರಮಾನಾಥ ರೈ ಅವರು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದಾರೆ. ಕಳೆದ ೨೦ ವರ್ಷಗಳಿಂದ ಸತತವಾಗಿ ಗೆಲುವು ಸಾಧಿಸಿರುವ ರೈಗೆ ಇದೀಗ ಐಟಿ ಇಲಾಖೆಯಿಂದ ಬಿಗ್ ಶಾಕ್ ಎದುರಾಗಿದೆ. ಯಾಕೆಂದರೆ ರಮನಾಥ್ ರೈ ಅವರ ಆಪ್ತರಾಗಿರುವಂತಹ ಸಂಜೀವ್ ಪೂಜಾರಿ ಅವರ ಮೇಲೆ ಐಟಿ ದಾಳಿ ನಡೆಸಿದೆ. ಮಂಗಳೂರಿನ ಕಾವೂರಿನಲ್ಲಿರುವ ಸಂಜೀವ್ ಪೂಜಾರಿ ಅವರ ಮಾಲಕತ್ವದ ಬಿರ್ವ ಸೆಂಟರ್ ಮುಗ್ರೋಡಿ ಕನ್ಸ್ಟ್ರಂಕ್ಷನ್ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

Related image

ಸಚಿವರ ಆಪ್ತನ ಮೇಲೂ ಐಟಿ ದಾಳಿ..!

ಸಚಿವ ರಮಾನಾಥ್ ರೈ ಅವರ ಆಪ್ತನಾಗಿರುವಂತಹ ಸುಧಾಕರ ಶೆಟ್ಟಿ ಎಂಬವರ ಮೇಲೂ ದಾಳಿ ಏಕಾಏಕಿ ದಾಳಿ ನಡೆಸಿದ ಐಟಿ ಅಧಿಕಾರಿಗಳು , ಸಚಿವರಿಗೂ ಶಾಕ್ ನೀಡಿದ್ದಾರೆ. ಯಾಕೆಂದರೆ ಸುಧಾಕರ ಶೆಟ್ಟಿ ಮತ್ತು ಸಂಜೀವ ಪೂಜಾರಿ ಅವರು ರಮನಾಥ್ ರೈ ಅವರ ಕೃಪಾಕಟಾಕ್ಷದಿಂದಲೇ ವ್ಯವಹಾರ ವೈವಾಟು ನಡೆಸುತ್ತಿದ್ದು,ಇದೀಗ ಐಟಿ ಇಲಾಖೆಯ ದಾಳಿಗೆ ಕರಾವಳಿ ಕಾಂಗ್ರೆಸ್ ಅಕ್ಷರಶಃ ತತ್ತರಿಸಿದೆ.

ಕರಾವಳಿಯಲ್ಲಿ ಕಾಂಗ್ರೆಸ್‌ ಆಳ್ವಿಕೆ ಇದ್ದು, ಸರಕಾರವೂ ತಮ್ಮದೇ ಎಂಬ ಕಾರಣಕ್ಕಾಗಿ ಏನೂ ಮಾಡಿದರೂ ಸರಿಹೋಗುತ್ತದೆ ಎಂಬ ಆಲೋಚನೆ ಇಟ್ಟುಕೊಂಡು ಈ ರೀತಿ ನಡೆದುಕೊಳ್ಳುತ್ತಿದ್ದಾರೆ.

–ಅರ್ಜುನ್

Tags

Related Articles

Close