ಪ್ರಚಲಿತ

ಬ್ರೇಕಿಂಗ್: ಮೋದಿಯ ಭಾಷಣದ ಬಗ್ಗೆ ಮಾಧ್ಯಮ ಮಾಡಿದ ಸಮೀಕ್ಷೆಯ ಫಲಿತಾಂಶ ಹೇಗಿತ್ತು ಗೊತ್ತಾ?! ಮತ್ತೆ ಪೇಚಿಗೆ ಸಿಲುಕಿದ ಸಿದ್ದರಾಮಯ್ಯ!!

ನಿನ್ನೆ ತಾನೇ ಪ್ರಧಾನಿ ಮೋದಿ ಬೆಂಗಳೂರಿನಲ್ಲಿ ಆರ್ಭಟಿಸಿದ್ದರು. ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವಂತೆ ಮೋದಿ ಭರ್ಜರಿಯಾಗಿ ಭಾಷಣ ಮಾಡಿದ್ದರು. ಪ್ರಧಾನಿಯವರ ಭಾಷಣ ಮುಗಿಯುತ್ತದ್ದಂತೆ ಕಾಂಗ್ರೆಸ್ ನಾಯಕರು ಎದ್ನೋ ಬಿದ್ನೋ ಎಂಬಂತೆ ಒಬ್ಬೊಬ್ಬರಾಗಿ ಮಾಧ್ಯಮಗಳ ಮುಂದೆ ಬಂದು ಪಟ ಪಟನೆ ತಮ್ಮ ಸರ್ಕಾರದ ಸಾಧನೆಯನ್ನು ವಿವರಿಸುತ್ತಾರೆ. ಕುಡಿದ ಮತ್ತಿನಿಂದ ರಮ್ಯಾ ಕೆಳಮಟ್ಟದ ಮಾತುಗಳಿಂದ ನಿಂದಿಸಿದರೆ ಇನ್ನುಳಿದವರು ತಮ್ಮದೇ ಶೈಲಿಯಲ್ಲಿ ಮೋದಿಯನ್ನು ಟೀಕಿಸುತ್ತಾರೆ.

10% ಸರ್ಕಾರ ಎಂದಿದ್ದ ನಮೋ..! ಚಾ ಸಿದ್ದರಾಮಯ್ಯ

ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಮಾಡಿದ ಭಾಷಣ ಕಾಂಗ್ರೆಸ್ ಪಕ್ಷವನ್ನು ಅಕ್ಷರಷಃ ಬೆಚ್ಚಿ ಬೀಳಿಸಿತ್ತು. ಮೋದಿ ಮಾಡಿದ ಮೋಡಿಗೆ ಕಮಲ ಪಡೆಯ ಕಾರ್ಯಕರ್ತರು ಉತ್ಸಾಹದಲ್ಲಿ ತೇಲುತ್ತಿದ್ದರೆ ಕಾಂಗ್ರೆಸ್ ನಾಯಕರು ಮೋದಿ ಮಾಡಿದ ಆರೋಪಕ್ಕೆ ಹೇಗೆ ಉತ್ತರ ನೀಡೋದು ಎಂಬ ಗೊಂದಲದಲ್ಲಿ ಮುಳುಗಿದ್ದರು.

ಈ ಮಧ್ಯೆ ಪ್ರಧಾನಿ ಮೋದಿ ಕರ್ನಾಟಕ ರಾಜ್ಯ ಸರ್ಕಾರದ ಮೇಲೆ ಅತಿದೊಡ್ಡ ಆರೋಪವನ್ನು ಮಾಡುತ್ತಾರೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ 10% ಸರ್ಕಾರ ಎಂದು ಝಾಡಿಸಿದ್ದರು. ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗುತ್ತಿದೆ.10% ಕಮಿಷನ್ ಪಡೆದು ಅನುದಾನ ಬಿಡುಗಡೆಗೊಳಿಸುತ್ತಿರುವ ಈ ಸರ್ಕಾರವನ್ನು ರಿಜ್ಯದಿಂದ ಕಿತ್ತೊಗೆಬೇಕು ಎಂದು ಅಬ್ಬರಿಸಿದ್ದರು.

ಚಡಪಡಿಸಿದ ಕಾಂಗ್ರೆಸ್..!

ಮೋದಿಯವರ ಈ ಆರೋಪಕ್ಕೆ ಕಾಂಗ್ರೆಸ್ ಪಕ್ಷ ತತ್ತರಿಸಿ ಹೋಗುತ್ತೆ. ರಾಜ್ಯ ಕಾಂಗ್ರೆಸ್ ಸರ್ಕಾರ 10% ಸರ್ಕಾರ ಎಂಬ ಆರೋಪಕ್ಕೆ ಮಾಧ್ಯಮಗಳು ಮುಖ್ಯಮಂತ್ರಿ ಸಿದ್ದರಾಮ್ಯ ಸಹಿತ ಕಾಂಗ್ರೆಸ್ ನಾಯಕರಿಗೆ ಪ್ರಶ್ನೆಗಳ ಸುರಿಮಳೆಗಳನ್ನೇ ಕೇಳುತ್ತಾರೆ. ಆದರೆ ಇದಕ್ಕೆಲ್ಲ ಜಾಣ್ಮೆಯಿಂದ ಉತ್ತರಿಸಿದ್ದ ಕಾಂಗ್ರೆಸ್ ನಾಯಕರು ತಮ್ಮ ಸಾಧನೆಯನ್ನು ಬಿಚ್ಚಿಡುತ್ತಾರೆ. ಆದರೆ ಪ್ರಧಾನಿ ಮೋದಿಯವರು ಆರೋಪಿಸಿದ್ದ ಬ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ನಾಯಕರು ಸೊಲ್ಲೆತ್ತುವುದಿಲ್ಲ. ನಾವು 10% ವ್ಯವಹಾರ ಮಾಡಿಲ್ಲ ಎಂದೇ ಉತ್ತರಿಸುತ್ತಾರೆ.

ಸಮೀಕ್ಷೆಯ ಮೊರೆ ಹೋದ ಮಾಧ್ಯಮಗಳು…

ಮೋದಿ ಮಾಡಿದ ಆ ಒಂದೇ ಒಂದು ಆರೋಪವನ್ನು ಹಿಡಿದುಕೊಂಡ ಮಾಧ್ಯಮಗಳು ಸಮೀಕ್ಷೇಯ ಮೊರೆ ಹೋಗುತ್ತವೆ. ಆರೋಪ ಪ್ರತ್ಯಾರೋಪಗಳನ್ನು ಗಮನಿಸಿದ ಮಾಧ್ಯಮ ನೇರವಾಗಿ ಜನರಿಂದಲೇ ಉತ್ತರ ಕೇಳುವ ಕಾರ್ಯಕ್ಕೆ ಇಳಿಯುತ್ತಾರೆ. ಮೋದಿ ಮಾಡಿದ ಆ ಒಂದು ಪ್ರಶ್ನೆಗೆ ಜನರ ಬಳಿ ಉತ್ತರ ಕೇಳಿದ್ದವು ರಾಜ್ಯದ ಪ್ರಮುಖ ಮಾಧ್ಯಮಗಳು.

ಟಿವಿ9 ಸಮೀಕ್ಷೆಗೆ ಬೆಚ್ಚಿ ಬಿದ್ದ ಕಾಂಗ್ರೆಸ್..!

ರಾಜ್ಯದ ಪ್ರಮುಖ ಸುದ್ಧಿವಾಹಿನಿಯಾದ ಟಿವಿ9 ಜನರ ಮುಂದೆ ಈ ಪ್ರಶ್ನೆಯನ್ನಿಟ್ಟು ಉತ್ತರ ಕೇಳುತ್ತದೆ. ಟಿವಿ9 ನಡೆಸಿದ ಈ ಸಮೀಕ್ಷೆಯಲ್ಲಿ ಜನ ಅದ್ಭುತವಾಗಿ ಪ್ರತಿಕ್ರಿಯಿಸಿದ್ದು ಮೋದಿ ಮಾತಿಗೆ ಜೈ ಅಂದಿದ್ದಾರೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ತೀವ್ರ ಮುಖಭಂಗವಾಗಿದೆ. “ಸಿದ್ದರಾಮಯ್ಯ ಅವರದ್ದು 10% ಸರ್ಕಾರ ಎಂಬ ಮೋದಿ ಆರೋಪವನ್ನು ನೀವು ಒಪ್ಪುತ್ತೀರಾ?” ಎಂಬ ಮಾಧ್ಯಮ ಪ್ರಶ್ನೆ ಕೇಳಿತ್ತು. ಮಾಧ್ಯಮ ಕೇಳಿದ ಈ ಪ್ರಶ್ನೆಗೆ ಬರೋಬ್ಬರಿ 73%ಕ್ಕೂ ಅಧಿಕ ಮಂದಿ ಮೋದಿ ಹೇಳಿದ್ದು ಸತ್ಯ ಎಂದು ಮೋದಿ ಮಾತಿಗೆ ಜೈ ಎಂದಿದ್ದಾರೆ. 73%ರಷ್ಟಿದ್ದ ಮತಗಳು ಗಣನೀಯವಾಗಿ ಮೋದಿ ಪರವಾಗಿ ಏರುತ್ತಲೇ ಇತ್ತು. ಒಂದೊಂದು ಮತಗಳು ಏರುತ್ತಿದ್ದಂತೆಯೇ ಕಾಂಗ್ರೆಸ್ ಸರ್ಕಾರದ ಪತನವನ್ನು ತೋರಿಸುತ್ತಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಭಾರೀ ಮುಖಭಂಗವೇ ಆಗಿತ್ತು. ಇದು ಮೋದಿಗೆ ಕರ್ನಾಟಕದಲ್ಲಿ ಸಿಕ್ಕ ಭಾರೀ ಯಶಸ್ಸು ಎಂದೇ ಪರಿಗಣಿಸಲಾಗುತ್ತಿದೆ.

10%ಅಂದರೆ ಏನು ಗೊತ್ತಾ?

ಸರ್ಕಾರದಿಂದ ಶಾಸಕರುಗಳಿಗೆ ಹಾಗೂ ಸಚಿವರಿಗೆ ಭಾರೀ ಮೊತ್ತದ ಅನುದಾನಗಳು ಬಿಡುಗಡೆಯಾಗುತ್ತದೆ. ಹೀಗೆ ಬಿಡುಗಡೆ ಅನುದಾನದಲ್ಲಿ 10%ಹಣವನ್ನು ಸರ್ಕಾರ ರಚಿಸುವ ಪಕ್ಷಕ್ಕೆ ಅಥವಾ ಮುಖ್ಯಮಂತ್ರಿಗಳಿಗೆ ನೀಡಬೇಕು. ಇದು ಪಕ್ಷದ ರಾಷ್ಟ್ರೀಯ ನಿಧಿಗೆ ಕಪ್ಪವಾಗಿ ಹೋಗುತ್ತದೆ. ಈ ಹಣದಿಂದ ಪಕ್ಷ ಚುನಾವಣೆಗಳಿಗೆ ಖರ್ಚು ಮಾಡುತ್ತದೆ.

ಬಯಲಾಗಿತ್ತು ಕಾಂಗ್ರೆಸ್ ಕಪ್ಪದ ಕಥೆ..!

ಈಗಾಗಲೇ ಕಾಂಗ್ರೆಸ್ಸಿಗೆ ಕಪ್ಪ ಸಂದಿರುವ ವಿಚಾರ ಬಯಲಾಗಿದೆ. ಈ ಹಿಂದೆ ಅಮಿತ್ ಶಾ ಕರ್ನಾಟಕಕ್ಕೆ ಬಂದಾವಾಗ ಕಾಂಗ್ರೆಸ್ ಹೈಕಮಾಂಡ್ ಗೆ ಕಪ್ಪ ಸಂದಿರುವ ಬಗ್ಗೆ ಕಾಂಗ್ರೆಸ್ ಎಮ್.ಎಲ್.ಸಿ.ಯ ಡೈರಿಯ ಬಗ್ಗೆ ಉಲ್ಲೇಖಿಸಿದ್ದರು. ಈವಾಗ ಮೋದಿ ಆಗಮಿಸಿ ಕರ್ನಾಟಕಲ್ಲಿ ಪರ್ಸೆಂಟೇಜ್ ಆಡಳಿತದ ಬಗ್ಗೆ ಬಹಿರಂಗಪಡಿಸಿದ್ದಾರೆ.

ಒಟ್ಟಿನಲ್ಲಿ ಮೋದಿ ಮಾಡಿದ ಆರೋಪಕ್ಕೆ ಜನರು ಭಾರೀ ಬೆಂಬಲವನ್ನು ನೀಡಿದ್ದು, ಪ್ರಧಾನಿ ಮೋದಿ ಹೇಳಿದ್ದ ಸತ್ಯ ಎಂದು ಹೇಳಿದ್ದಾರೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ನಡುಕವುಂಟಾಗಿದ್ದಂತು ಸುಳ್ಳಲ್ಲ.

-ಸುನಿಲ್ ಪಣಪಿಲ

Tags

Related Articles

Close