ಪ್ರಚಲಿತ

ಸಿಪಿಐಎಮ್ ಕಾರ್ಯಕರ್ತರು ದೇಶಭಕ್ತನ ಬಾಯಿಯಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಕ್ಕಾಗಿ ತ್ರಿಪುರ ಅದೇ ರೀತಿಯಲ್ಲಿಯೇ ಸಿಪಿಐಎಮ್ ಗೆ ಉತ್ತರಿಸಿದೆ!!!

ಏನ್ ಗೊತ್ತಾ?! ಅವತ್ತು, ಜವಾಹರಲಾಲ್ ಯುನಿವರ್ಸಿಟಿಯ ವಿದ್ಯಾರ್ಥಿಗಳನ್ನೆಸಿಕೊಂಡ ಹಲವಾರು ವಿದ್ಯಾರ್ಥಿಗಳು, ಭಾರತ ನಾಶವಾಗುವವರೆಗೂ ಯುದ್ಧ ಮುಂದುವರೆಯುತ್ತದೆ ಎನ್ನುವಾಗ, ಭಾರತವನ್ನು ಬರ್ಬಾದ್ ಮಾಡುತ್ತೇವೆ ಎಂದಾಗ, ಅಫ್ಜಲ್ ಗುರುವನ್ನು ಪೂಜಿಸಿದಾಗಲೆಲ್ಲ ದೇಶಭಕ್ತನ ಕಣ್ಣೀರಲ್ಲಿದ್ದದ್ದು ಬರೀ ನೀರಲ್ಲ, ಬದಲಿಗೆ ರಕ್ತ!! ನಂಬುತ್ತೀರೋ ಬಿಡುತ್ತೀರೋ! ಸೀತಾರಾಮ್ ಯೆಚೂರಿ ಮತ್ತು ಡಿ, ರಾಜಾ ರೆಂಬ ಕಮ್ಯುನಿಸ್ಟ್ ಪಕ್ಷದ ನಾಯಕರು ಇದೇ ಜೆಎನ್ ಯು ವಿದ್ಯಾರ್ಥಿಗಳನ್ನು ಬೆಂಬಲಿಸಿ ಮಾತನಾಡಿದ್ದರು!! ಅವರು ಹಾಗೆ ಅರಚುವುದರಲ್ಲಿ ತಪ್ಪಿಲ್ಲ! ಭಾರತ ನಾಶವಾಗಬೇಕಿದೆ ಎಂಬಂತಹ ಇರಾದೆಯನ್ನೂ ಸಾಬೀತು ಪಡಿಸಿದ್ದ ಇವರಿಬ್ಬರ ನೋಡಿ, ನಿಜಕ್ಕೂ ಭಾರತಕ್ಕೆ ಆಶ್ಚರ್ಯವಾಗಿತ್ತು! ಭಾರತದಲ್ಲಿ ಹುಟ್ಟಿ, ಬೆಳೆದು, ಅದರ ಉಸಿರು ಪಡೆದು, ಕೊನೆಗೆ ಭಾರತದ ರಕ್ತವನ್ನೇ ಬಯಸುವಂತಹವರನ್ನು ನೋಡಿ ಅಚ್ಚರಿಯಾಗಬೇಕಾದದ್ದೇ!!

ಅಕಸ್ಮಾತ್ ಆಗಿ ಒಬ್ಬಳು ಮಹಿಳೆ ಈ ಕಮ್ಯುನಿಸ್ಟ್ ಪಕ್ಷವನ್ನು ತೊರೆಯಲು ಧೈರ್ಯ ತೋರಿದರೆ, ಆಕೆಯನ್ನು ಅತ್ಯಾಚಾರಗೊಳಿಸಲಾಗುತ್ತದೆ! ಅಂತಹ ಸಂಸ್ಕೃತಿ ಈ ಪಕ್ಷಗಳದ್ದು!! ಯಾಕೆಂದರೆ, ತ್ರಿಪುರಾದಲ್ಲಿ ಮುಂಚೆ ಸಿಪಿಐಎಮ್ ನ ಕಾರ್ಯಕರ್ತಳಾಗಿದ್ದವಳನ್ನು ಅತ್ಯಾಚಾರಗೊಳಿಸಲಾಗಿತ್ತು! ಕೇವಲ ಒಂದೇ ಕಾರಣಕ್ಕಾಗಿ! ಆಕೆ ಪಕ್ಷವನ್ನು ತೊರೆಯಲು ತಯಾರಿ ನಡೆಸಿದ್ದಳು! ೨೦೧೬, ಮಾರ್ಚ್ ೧೬ ರಂದು ಸಂಜೆ ಆಕೆ ಮನಗೆ ಮರಳಿ ಹೋಗುತ್ತಿದ್ದಾಗ ಒಬ್ಬ ರೌಡಿ ಆಕೆಯನ್ನು ಹಿಂಸಿಸತೊಡಗಿದ್ದ! ಆಕೆ ಹಿಂಸೆ ತಡೆಯಲಾರದೇ ಪ್ರಜ್ಞೆ ತಪ್ಪಿದಾಗ ಆಕೆಯನ್ನು ಅತ್ಯಾಚಾರಗೊಳಿಸಿ, ಅದೇ ಸ್ಥಿತಿಯಲ್ಲಿ ರಸ್ತೆಯ ಮಧ್ಯದಲ್ಲಿ ಬಿದ್ದಿದ್ದಳು!!

In 2016 CPIM Cadres urinated in the mouth of a student Alok Deb who had a ‘Bharat Mata ki Jai’ sticker on his motorcycle in Kamalpur College,Tripura..

ಅದೇ ರೀತಿ, ಇದೇ ಪಕ್ಷದ ಕಾರ್ಯಕರ್ತರು ಅಲೋಕ್ ಡೆಬ್ ಎನ್ನುವಂತಹ ಯುವಕನ ಬಾಯಲ್ಲಿ ಮೂತ್ರ ವಿಸರ್ಜಿಸಿದ್ದರು! ಆತನ ಅಪರಾಧ ಬೇರೇ ಏನೂ ಅಲ್ಲ!! ತನ್ನ ಮೋಟರರ ಸೈಕಲ್ಲಿನ ಮೇಲೆ “ಭಾರತ್ ಮಾತಾ ಕಿ ಜೈ” ಎನ್ನುವಂತಹ ಚಿತ್ರವನ್ನು ಅಂಟಿಸಿದ್ದನಷ್ಟೆ! ಕಮಲಾಪುರ್ ಕಾಲೇಜಿನಲ್ಲಿ, ಸೆಕೆಂಡ್ ಇಯರ್ ನ ವಿದ್ಯಾರ್ಥಿ ಆತ!! ಇದೇ ಸ್ಟೂಡೆಂಟ್ ಫೆಡರೇಷನ್ ಆಫ್ ಇಂಡಿಯಾ ದ ಎರಡು ರೌಡಿಗಳು ಆತನನ್ನು ಕಾಲೇಜಿನ ಕೊಠಡಿಯೊಳ ಕರೆದುಕೊಂಡು ಹೋಗಿ, ಚೆನ್ನಾಗಿ ಬಡಿದು ಕೊನೆಗೆ ಇನ್ನೆರಡು ಎಸ್ ಎಫ್ ಐ ರೌಡಿಗಳು ಆತನನ್ನು ಮೆಟ್ಟಿ ಹಿಡಿದಿದ್ದಾರೆ!! ಉಳಿದಿಬ್ಬರು ಒಬ್ಬರಾದ ಮೇಲೆ ಇನ್ನೊಬ್ಬರು ಮೂತ್ರ ವಿಸರ್ಜಿಸಿದ್ದಾರೆ!! ಮೂತ್ರ ವಿಸರ್ಜಿಸಿ ಆದ ಮೇಲೆ ಆತ ತನ್ನ ಸಹಚರರಿಗೆ ಹೇಳಿದ್ದೇನು ಗೊತ್ತಾ?!

“There is nothing wrong in saying Pakistan Zindabad – Sitaram Yechury “(Communist Party of India, Marxist)

Comrade wants the prosperity of the nation which dreams 24*7 about destroying India – Common Citizen of Tripura

“ಭಾರತ ಮಾತಾ ಕೀ ಜೈ” ಎಂದಿದ್ದ ಇವನ ಬಾಯಿ ಅಪವಿತ್ರವಾಗಿತ್ತು! ಈಗ ನಾನು ಮೂತ್ರ ವಿಸರ್ಜಿಸಿದ್ದರಿಂದ ಪವಿತ್ರವಾಯಿತು!!” ಎಂದು!! ಒಮ್ಮೆ ಕಲ್ಪಿಸಿಕೊಳ್ಳಿ!! ತನ್ನ ದೇಶವನ್ನೇ ಪ್ರೀತಿಸಲಾಗದಿದ್ದವನು ತನ್ನ ಹೆತ್ತವರನ್ನು ಗೌರವಿಸಿಯಾನೆ?! ಅದೂ ಬೇಡ! ತನ್ನ ಜನ್ಮವನ್ನಾದರೂ ಆತ ಸಾರ್ಥಕ್ಯಗೊಳಿಸಿಕೊಳ್ಳುವನೇ?! ಖಂಡಿತಾ ಇಲ್ಲ!!

೧೯೬೨ ರಲ್ಲಿ ಚೀನಾ ಮತ್ತು ಭಾರತ, ಎರಡೂ ರಾಷ್ಟ್ರಗಳ ನಡುವೆ ಯುದ್ಧ ಪ್ರಾರಂಭವಾದಾಗ, ಇದೇ ಭಾರತೀಯ ಕಮ್ಯುನಿಸ್ಟರು ಚೀನಾದ ಪರ ವಹಿಸಿದ್ದರು!! ಅದೂ ಸಹ, ಇದು ರಾಷ್ಟ್ರಗಳ ನಡುವಿನ ಯುದ್ಧವಲ್ಲ ಬದಲಿಗೆ ಸಮಾಜವಾದಿ ಮತ್ತು ಬಂಡವಾಳ ಶಾಹಿ ರಾಜ್ಯಗಳ ನಡುವಿನ ಯುದ್ಧ! ಎಂದು ಚೀನಾಕೆ ಬೆಂಬಲ ನೀಡಿದ್ದವರು ಬೇರಾರೂ ಅಲ್ಲ! ಮತ್ತಿದೇ, ತಾಯಿಯನ್ನೇ ಮಾರಲು ಶಕ್ತವಿರುವ ಕಮ್ಯನಿಸ್ಟ್ ಗಳು ಅಷ್ಟೇ!! ಭಾರತದ ಸೈನಿಕರಿಗೆ ರಕ್ತದ ಅಗತ್ಯ ಬಿದ್ದಾಗ ಕೊಡಬೇಡಿ ಎಂದು ಪ್ರತಿ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತನಿಗೆ ವೈಯುಕ್ತಿಕ ಸಂದೇಶಗಳನ್ನು, ಜೊತೆಗೆ ಕಟ್ಟೆಚ್ಚರವನ್ನೂ ನೀಡಲಾಗಿತ್ತು!! ತಮ್ಮ ಸಿದ್ಧಾಂತವನ್ನು ಚೀನಾ ಪ್ರತಿಪಾದಿಸುತ್ತದೆ ಎಂದು ಚೀನಾಕೆ ಬೆಂಬಲ ನೀಡಿದ್ದರು!!

ಹಾಸ್ಯಾಸ್ಪದವೇನೆಂದರೆ, ಭಾರತವನ್ನು ನಾಶ ಮಾಡುವುದು ಕಮ್ಯುನಿಸ್ಟರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ!! ಅದೇ, ಪಕ್ಷವನ್ನು ಯಾರಾದರೂ ತೊರೆದರೆ ಅದವರ
ಅಭಿವ್ಯಕ್ತಿ ಸ್ವಾತಂತ್ರ್ಯವಾಗುವುದಿಲ್ಲ! ಆ ಪಕ್ಷದ ಧ್ವಜವೇ ಹೇಳುತ್ತದೆ!! ಆ ಕೆಂಪು ಧ್ವಜ ಬಯಸುವುದೇ ರಕ್ತವನ್ನು! ಭಾರತದ ಹಸಿ ಹಸಿ ರಕ್ತವನ್ನು!! ಸುತ್ತಿಗೆ , ಕತ್ತಿ ಮತ್ತು ಕುಡಗೋಲು ಹಿಂಸೆಯನ್ನು ಪ್ರತಿಪಾದಿಸುತ್ತದೆ! ಮತ್ತು, ಅವರ ಸಿದ್ಧಾಂತಕ್ಕೆ ಯಾರಾದರೂ ಅಡ್ಡಿ ಬಂದರೆ ರಕ್ತ ಹೀರು ಎನ್ನುವಂತಹದ್ದೇ ಪ್ರತಿಪಾದಿಸುವ ರಕ್ತಶಾಹಿಗಳಿಗೆ ಇವತ್ತು, ತ್ರಿಪುರದಲ್ಲಿ ನಯಾ ಪೈಸೆಯ ಬೆಲೆಯೂ ಇಲ್ಲವಾಗಿದೆಯಷ್ಟೇ!!

Communists issued orders to party members not to donate blood for Indian Army Soldiers during 1962 war….

ಯಾಕೆಂದರೆ, ಸುತ್ತಿಗೆ ಮೊಳೆ ಹಿಡಿದವರನ್ನೇ ಚಚ್ಚುವ ಹನುಮಂತನ ಗದೆ ಹಿಡಿದ ಭಜರಂಗಿಯ ಕೇಸರೀ ಪ್ರತ್ಯಕ್ಷವಾಗಿದೆ!!

Source : SathyaVijayi

– ಪೃಥು ಅಗ್ನಿಹೋತ್ರಿ

Tags

Related Articles

Close