ಪ್ರಚಲಿತ

ಸಾಲಗಾರನಾಗಿರುವ ಈ ಬಿಜೆಪಿ ಅಭ್ಯರ್ಥಿಯ ಮನೆ ನೋಡಿದರೆ ಶಾಕ್ ಆಗೋದ್ ಗ್ಯಾರಂಟಿ!! ಇದು ಮಂಡ್ಯದ ಗಂಡಿನ ರೋಚಕ ಸತ್ಯ!!

ರಾಜ್ಯದೆಲ್ಲೆಡೆ ಕಾಂಗ್ರೆಸ್ಸಿನ ನಾಯಕರ ಮನೆಗಳಲ್ಲಿ ತೆರಿಗೆ ದಾಳಿಯ ನಂತರ ಕೋಟಿ-ಕೋಟಿ ರೂಪಾಯಿ ಸಿಗುತ್ತಿರುವ ವೇಳೆಯಲ್ಲೇ ಮಂಡ್ಯದಲ್ಲಿ 45 ಲಕ್ಷ ರೂಪಾಯಿ ಸಾಲ ಹೊಂದಿರುವ ವ್ಯಕ್ತಿಯೊಬ್ಬರು ಬಿಜೆಪಿಯ ಅಭ್ಯರ್ಥಿಯಾಗಿ ಎದುರಾಳಿಗಳಿಗೆ ನಡುಕ ಹುಟ್ಟಿಸಿದ್ದಾರೆ. ಚಂದಗಾಲು ಶಿವಣ್ಣ ಮಂಡ್ಯದಲ್ಲಿ ಬಿಜೆಪಿಯ ಟಿಕೆಟನ್ನು ಪಡೆದಾಗಲೇ ಅನೇಕರ ಹುಬ್ಬು ಮೇಲೇರಿತ್ತು. ಅಲ್ಲಿ 5 ರೂಪಾಯಿ ವೈದ್ಯರೆಂದೇ ಖ್ಯಾತರಾಗಿರುವ ಶಂಕರೇಗೌಡರನ್ನು ಕರೆತರಲು ಪ್ರಯತ್ನಿಸಿ ಸೋತ ಬಿಜೆಪಿಗೆ ಸಿಕ್ಕಿದ್ದು ಒಬ್ಬ ಅದ್ಭುತವಾದ ವ್ಯಕ್ತಿ ಶಿವಣ್ಣ. ಒಂದು ಪುಟ್ಟ ಅಕ್ಕಿ ಗಿರಣಿ, 2 ಲಾರಿ, ಒಂದು ಬುಲೆಟ್ ಅಷ್ಟೇ ಇವರ ಆಸ್ತಿ. ಆದರೆ ಕೈಯೊಡ್ಡಿ ಬಂದವರಿಗೆ ಇಲ್ಲ ಎನ್ನದೇ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತ ಇಷ್ಟೂ ವರ್ಷಗಳ ಕಾಲ ಎಲೆಮರೆಯ ಕಾಯಿಯಾಗಿ ಅವರು ದುಡಿದದ್ದು ಈಗ ಸಾರ್ಥಕವೆನಿಸುತ್ತಿದೆ.

ಅವರು ವಾಸವಾಗಿರುವ ಮನೆಯನ್ನು ಕಂಡರೆ ನೀವು ಖಂಡಿತವಾಗಿಯೂ ಕಂಗಾಲಾಗಿಬಿಡುತ್ತೀರಿ. ಚೂರಾದ ಹೆಂಚುಗಳು, ಮುರಿದು ಹೋದ ತೊಲೆಗಳು ಇದು ಮೇಲ್ನೋಟಕ್ಕೆ ಕಾಣ ಬರುವ ಅವರ ಮನೆಯ ವ್ಯವಸ್ಥೆ. ಇತ್ತೀಚೆಗೆ ಊರಿನ ಜನರೇ ಒಂದಷ್ಟು ಸೇರಿಕೊಂಡು ತಾವೇ ಮುಂದೆ ನಿಂತು ಮನೆಯನ್ನು ದುರಸ್ಥಿಗೊಳಿಸುವ ಪ್ರಯತ್ನವನ್ನು ಮಾಡಿದ್ದಾರೆ. ಶೌಚಾಲಯವನ್ನೂ ಕಟ್ಟಿಕೊಟ್ಟಿದ್ದಾರೆ ಅತ್ಯಾಶ್ಚರ್ಯವೆಂದರೆ ಇತರ ಅಭ್ಯರ್ಥಿಗಳೆಲ್ಲಾ ಜನರಿಗೆ ತಾವೇ ದುಡ್ಡು ಹಂಚಿದರೆ ಶಿವಣ್ಣನವರಿಗೆ ಮತದಾರರೇ ದುಡ್ಡು ಕೊಟ್ಟು ನೀವು ಆರಿಸಿ ಬರಲೇಬೇಕೆಂದು ಹಾರೈಸುತ್ತಿದ್ದಾರೆ!

ಕಾಂಗ್ರೆಸ್, ಜೆಡಿಎಸ್ ಬಿಟ್ಟರೆ ಬೇರೆ ಯಾರೂ ಗೆಲ್ಲಲು ಸಾಧ್ಯವೇ ಇಲ್ಲ ಎಂಬ ವಾತಾವರಣವಿದ್ದ ಮಂಡ್ಯದಲ್ಲಿ ಶಿವಣ್ಣ ಬಿಜೆಪಿಯ ಮುಖವಾಗಿದ್ದಾರೆ. ಕಾರ್ಯಕರ್ತರಲ್ಲೂ ಶಿವಣ್ಣನವರ ಉಮೇದುವಾರಿಕೆ ಅದೆಷ್ಟು ಉತ್ಸಾಹ ತುಂಬಿದೆಯೆಂದರೆ ಈ ಬಾರಿ ಶಿವಣ್ಣ ಕಾಂಗ್ರೆಸ್ಸು ದಳಗಳನ್ನು ಹಿಂದಕ್ಕೆ ನೂಕಿ ಗೆದ್ದೇಬಿಟ್ಟರೂ ಹುಬ್ಬೇರಿಸಬೇಕಾದ ಅಗತ್ಯವಿಲ್ಲ.

 

ಶಿವಣ್ಣನಂತವರು ಗೆಲ್ಲಲೇಬೇಕು. ಆಗ ಮಾತ್ರ ಪ್ರಾಮಾಣಿಕತೆ, ಸರಳತೆ, ಸಜ್ಜನಿಕೆಗಳಿಗೆಲ್ಲಾ ಬೆಲೆ ಬರೋದು. ಶಿವಣ್ಣನವರಿಗೆ ಶುಭವಾಗಲಿ. ಇಂಥ ವ್ಯಕ್ತಿಯನ್ನು ಕಣಕ್ಕಿಳಿಸಿದ ಬಿಜೆಪಿಗೂ ಅಭಿನಂದನೆಗಳು.

Tags

Related Articles

Close