ಪ್ರಚಲಿತ

ಕಾಂಗ್ರೆಸ್ ನಾಯಕನ ಆಟ ಮುಗಿಯಿತು! ರಹಸ್ಯ ವರದಿ ಪ್ರಕಾರ, ಸುನಂದಾ ಪುಷ್ಕರ್ ಕೊಲೆಯಾಗಿದ್ದಳು!! ಮೊದಲ ದಿನವೇ ದೆಹಲಿ ಪೋಲಿಸರಿಗೆ ಗೊತ್ತಾದರೂ ಇಷ್ಟು ವರ್ಷ ಮುಚ್ಚಿಟ್ಟಿದ್ದೇಕೆ?!

ಸುನಂದಾ ಪುಷ್ಕರ್ ಸಾವಿಗೀಗ ಹೊಸ ತಿರುವು!! ಅದೆಷ್ಟೋ ವರ್ಷಗಳಿಂದಲೂ ಸಹ ಆಕೆಯ ಸಾವೊಂದು ಚರ್ಚೆಯಾಗುತ್ತಲೇ ಇದೆ! ತನಿಖೆ ನಡೆಯುತ್ತಲೇ ಇದೆ ವಿನಃ ನ್ಯಾಯ ಮಾತ್ರ ಸಿಕ್ಕಿಲ್ಲ! ತನಿಖೆ ಎಷ್ಟೇ ನಡೆಯುತ್ತಲೇ ಇದ್ದರೂ ಇನ್ನೂಬ ಸಹ ಇದಃಮಿತ್ಥಂ ಎಂಬ ತೀರ್ಮಾನಕ್ಕೂ ಬರದ ತನಿಖಾ ಆಯೋಗ ಈಗ ಕೆಲ ಸತ್ಯಗಳನ್ನು ಬಹಿರಂಗಪಡಿಸಿದೆ !! ಹೌದು! ಇಷ್ಟು ವರ್ಷದ ನಂತರ, ರಹಸ್ಯ ವರದಿಯೊಂದು ಕಾಂಗ್ರೆಸ್ ನ ಹಿರಿಯ ನಾಯಕರು ಮತ್ತು, ಮಾಜಿ ಯುನಿಯನ್ ಮಿನಿಸ್ಟರ್ ಆಗಿದ್ದ ಶಶಿ ತರೂರ್ ರ ಹೆಂಡತಿಯಾದ ಸುನಂದಾ ಪುಷ್ಕರ್ ಅವರದ್ದು ಆತ್ಮಹತ್ಯೆಯಲ್ಲ, ಬದಲಿಗೆ ಕೊಲೆ ಎಂಬುದನ್ನು ಸಾಬೀತು ಪಡಿಸಿದೆ!

ವರದಿಯಲ್ಲಿ, ಡಿಎನ್ ಎ ಪರೀಕ್ಷೆಗೆ ಸಂಬಂಧಪಟ್ಟ ವರದಿಯೊಂದು ಸುನಂದಾ ಪುಷ್ಕರ್ ಕೊಲೆಯಾಗಿದ್ದರು ಎಂಬುದನ್ನು ಮತ್ತು, ಆಕೆಯ ಹತ್ಯೆಗೆ ಕಾರಣರ್ಯಾರು ಎಂಬುದು, ದೆಹಲಿಯ ತನಿಖಾ ಆಯೋಗಕ್ಕೆ ತನಿಖೆಯ ಮೊದಲ ದಿನವೇ ಗೊತ್ತಾಗಿತ್ತು ಎಂಬುದನ್ನು ವರದಿ ಬಹಿರಂಗಪಡಿಸಿದೆ! ದುರಾದೃಷ್ಟವಶಾತ್, ಇವತ್ತಿಗೂ ಸಹ ಸುನಂದಾ ಪುಷ್ಕರ್ ಳ ಸಾವು ನಿಗೂಢವಾಗಿಯೇ ಉಳಿದಿದೆ!!

ಅಷ್ಟಕ್ಕೂ, ಡಿಎನ್ ಎ ವರದಿ ಹೇಳುವುದೇನು ಗೊತ್ತಾ?!

ಮಾಜಿ ಡಿಸಿಪಿ ಯಾದ ಬಿ ಎಸ್ ಜೈಸ್ವಾಲ್ ರವರು ಪ್ರಕರಣಕ್ಕೆ ಸಂಬಂಧಪಟ್ಟ ಮೊದಲ ವರದಿಯ ಪ್ರಕಾರ, “ಸುನಂದಾ ಪುಷ್ಕರ್ ಸಾವಾದ ಪ್ರದೇಶವನ್ನು ಕೂಲಂಕಷವಾಗಿ ಪರೀಕ್ಷಿಸಿದ್ದ ಮತ್ತು , ಪ್ರಾಥಮಿಕ ಹಂತದ ವರದಿ ನೀಡಿದ್ದ ವಸಂತ್ ವಿಹಾರ್ ಅಲೋಕ್ ಶರ್ಮಾಗೆ ಮೊದಲ ದಿನವೇ ಸುನಂದಾ ಪುಷ್ಕರ್ ಳದ್ದು ಆತ್ಮಹತ್ಯೆಯಲ್ಲ, ಬದಲಿಗೆ ಹತ್ಯೆ ಎಂಬುದು ಗೊತ್ತಾಗಿ ಹೋಗಿತ್ತು! ಅದಲ್ಲದೇ, ಸುನಂದಾ ಸಾವಿಗೀಡಾಗಿದ್ದ ಲೀಲಾ ಹೋಟೆಲ್ ಪ್ರದೇಶವನ್ನು ಪರೀಕ್ಷಿಸಿದ್ದ ದೆಹಲಿ ಪೋಲಿಸರಿಗೆ ಮುಂಚೆ ಇಂದಲೇ ವಿಷಯ ತಿಳಿದಿತ್ತೆನ್ನಲಾಗಿದೆ!”

ಡಿಎನ್ ಎ ಆಧಾರದ ಮೇಲೆ ನೀಡಿದ ವರದಿಯು ಯಾವುದೇ ರೀತಿಯಲ್ಲಿಯೂ ಸಹ ತೃಪ್ತಿಕರವಾಗಿಲ್ಲವೆಂದ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ಈಗ ಮತ್ತೆ, ಈ ಪ್ರಕರಣವನ್ನು “ಹತ್ಯೆ” ಎಂದು ಪರಿಗಣಿಸಿ ತನಿಖೆ ಮಾಡುವಂತೆ ಆದೇಶಿಸಿದೆ!

“ನನ್ನ ಜ್ಞಾನ ಮತ್ತು ನಂಬಿಕೆಯ ಪ್ರಕಾರ, ಈ ಪ್ರಕರಣದಲ್ಲಿ ವ್ಯಕ್ತಿಗೆ ವಿಷಪ್ರಾಶನವಾಗಿದೆ! ಪ್ರಯೋಗಾಲಯದಿಂದ ಬಂದ ವರದಿಯ ಪ್ರಕಾರ, ವ್ಯಕ್ತಿಗೆ ಅಲ್ಪ್ರಾಝೋಲಮ್ ಎನ್ನುವ ವಿಷವನ್ನು ರಕ್ತಕ್ಕೆ ಸೇರಿಸಲಾಗಿದೆ! ಗುರುತಿಸಲಾಗಿರುವ ವ್ಯಕ್ತಿಯ ದೇಹದ ಮೇಲಿನ ಗಾಯಗಳ ಪೈಕಿ, ಕೆಲವೊಂದು ಹೊಡೆತ ದಿಂದ ಆಗಿರುವಂತಹದ್ದು! ಅದಲ್ಲದೇ, ೧೦ ನೇ ಗಾಯದ ಗುರುತು ಮಾತ್ರ ಇಂಜೆಕ್ಷನ್ ನಿಂದ ಆಗಿರುವಂತಹದ್ದು! ೧೨ ನೆಯ ಗಾಯ ಆಗಿರುವುದು ಹಲ್ಲುಗಳಿಂದ! ಉಳಿದಂತೆ, ಒಂದರಿಂದ ಹದಿನೈದರ ತನಕ ವಿರುವ ಗಾಯದ ಗುರುತುಗಳಾಗಿರುವುದು ೧೨ ನೇ ತಾಸಿನಿಂದ ೪ ದಿನಗಳ ವರೆಗಾಗಿರುವುದು” ಎಂಬ ಆಟೋಪ್ಸಿ ವರದಿ ಬಂದ ಮೇಲೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ!

The cause of death to the best of my knowledge and belief, in this case, is poisoning. The circumstantial evidenced are suggestive of alprazolam poisoning. All the injuries mentioned are caused by blunt force, simple in nature, non-contributing to death and are produced in a scuffle, except injury number 10 with an injection mark. Injury number 12 is teeth bite mark. The injuries number 1 to 15 is of various durations ranging from 12 hours to 4 days.”

ವರದಿ ಹೇಳುವ ಪ್ರಕಾರ, ಇಂಜೆಕ್ಷನ್ನಿನಿಂದಾದ ಗುರುತುಗಳು ಇನ್ನೂ ಹಸಿಯಾಗಿದ್ದವು!! ಅದಲ್ಲದೇ, ಸುನಂದಾ ಪುಷ್ಕರ್ ಳ ದೇಹದ ಮೇಲಿರುವ ಅದೆಷ್ಟೋ
ಗುರುತುಗಳು ತಳ್ಳಾಟಗಳಿಂದ ಅಥವಾ, ಬಲವಾದ ಹೊಡೆತದಿಂದ ಆಗಿರುವಂತಹದ್ದು!!

“ಪಿಎ ಆಗಿದ್ದ ನರೇನ್ ಸಿಂಗ್ ಹೇಳಿದ ಪ್ರಕಾರ, ಶಶಿ ತರೂರ್ ಮತ್ತು ಸುನಂದಾ ಪುಷ್ಕರ್ ಇಬ್ಬರೂ ಕೈ ಕೈ ಮಿಲಾಯಿಸಿ ಕೊಂಡಿದ್ದರು!” ಎಂಬ ಹೇಳಿಕೆಯ ವರದಿಯ ಮೇಲೆ , ಶಶಿ ತರೂರನ್ನು ವಿಚಾರಣೆ ನಡೆಸಿದ್ದ ದಕ್ಷಿಣ ದೆಹಲಿಯ ಜಂಟಿ ಆಯುಕ್ತರಾದ ವಿವೇಕ್ ಗೋಗಿಯಾಗೆ ವೈಯುಕ್ತಿಕವಾಗಿ ಈ ಪ್ರಕರಣವನ್ನು ತನಿಖೆ ಮಾಡಲು ಹೇಳಲಾಗಿತ್ತು! ತನಿಖೆಯ ಸಂಪೂರ್ಣ ವರದಿಯನ್ನು, ಗೃಹ ಸಚಿವಾಲಯಕ್ಕೆ ಕಳುಹಿಸಿ ಕೊಡಲಾಗಿತ್ತು!

ಅಚ್ಚರಿಯೇನೆಂದರೆ, ಸಾವಿಗೆ ಕಾರಣ ಏನು ಎನ್ನುವುದು ನಿಖರವಾಗಿ ಗೊತ್ತಾಗಿದ್ದರೂ ಮತ್ತು, ಕಾರಣ ಯಾರು ಎಂಬುದರ ಬಗ್ಗೆ ಅರಿವಾಗಿದ್ದರೂ ಸಹ, ಪ್ರಕರಣಕ್ಕೆ ಸಂಬಂಧ ಪಟ್ಟಂತೆ, ಮೊಕದ್ದಮ ದಾಖಲಿಸಿರಲಿಲ್ಲ! ಆದರೆ, ಯಾವಾಗ ಈ ಪ್ರಕರಣವನ್ನು ವಾರದ ನಂತರ ಕ್ರೈಂ ಬ್ರಾಂಚ್ ಗೆ ವರ್ಗಾವಣೆ ಮಾಡಿ, ಎಫ್ ಐ ಆರ್ ದಾಖಲಿಸಿ, ತನಿಖೆ ಮಾಡುವಂತೆ ಆದೇಶಿಸಿತೋ, ನಾಲ್ಕೇ ತಾಸುಗಳಲ್ಲಿ, ಪ್ರಕರಣವನ್ನು ಕ್ರೈಂ ಬ್ರಾಂಚ್ ನಿಂದ ವಾಪಾಸು
ತೆಗೆದುಕೊಂಡಿದ್ದರು ಜಂಟಿ ಆಯುಕ್ತರಾಗಿದ್ದ ವಿವೇಕ್ ಗೋಗಿಯಾ!

The secret report had all the annexure, which included, post-mortem, chemical, biological fingerprints reports – accessed by DNA — separately and each report pointed towards murder yet the police did not registered a case.

Interestingly, the report questioned the teeth bite marks of the hand of the Pushkar and also the injection mark on her hand. “Whether poisoned was orally given or injected is a matter to be probed,” the report stated.

ಸ್ವತಃ ಕ್ರೈಂ ಬ್ರಾಂಚ್ ಅಧಿಕಾರಿಗಳೇ ಸ್ಥಳವನ್ನು ಪರೀಕ್ಷಿಸಿ ಬಂದಿದ್ದರದರೂ ಸಹ, ಮಾಜಿ ಕಮಿಷನರ್ ಬಿ ಎಸ್ ಬಸ್ಸಾಯ್ ಅವರು ಮಾತ್ರ, ಎಫ್ ಐ ಆರ್ ದಾಖಲಿಸಲು ತಯಾರಾಗದ ಪರಿಣಾಮ, ಪ್ರಕರಣವನ್ನು ಇನ್ನೂ ಒಂದು ವರ್ಷಕ್ಕೆ ಎಳೆದಿದ್ದಲ್ಲದೇ, ಜೊತೆಗೆ ಎರಡು ವರ್ಷಗಳ ಕಾಲ ತನಿಖೆ ನಡೆಸುವ ಪರಿಸ್ಥಿತಿ ಒದಗಿತು!!

ರಹಸ್ಯ ವರದಿ ಹೇಳುವ ಪ್ರಕಾರ, “ಇಲ್ಲಿಯ ತನಕ ಯಾವ್ಯಾವ ಪರೀಕ್ಷೆ ನಡೆಸಲಾಗಿದೆಯೋ, (ಶವ ಪರೀಕ್ಷೆ, ರಾಸಾಯನಿಕ, ಬೆರಳಚ್ಚುಗಳ ವರದಿಯೂ ಸೇರಿ), ಅವೆಲ್ಲವೂ ಸಹ, ಸುನಂದಾ ಪುಷ್ಕರ್ ರಳದ್ದು ಹತ್ಯೆ ಎಂದು ತೋರಿಸಿದ್ದರೂ ಸಹ ಯಾವುದೇ ರೀತಿಯಾದ ಮೊಕದ್ದಮೆ ದಾಖಲಾಗಿರಲಿಲ್ಲ! ಅಚ್ಚರಿಯೆಂದರೆ, ವರದಿ ಪ್ರಶ್ನಿಸಿದ್ದೂ ಅದನ್ನೇ!! ಪುಷ್ಕರ್ ಳ ಕೈ ಯ ಮೇಲೆ ಹಲ್ಲಿನಿಂದ ಕಚ್ಚಿದ ಗುರುತು ಮತ್ತು, ಚುಚ್ಚು ಮದ್ದಿನ ಗಾಯದ ಗುರುತುಗಳಿವೆ! ವಿಷವನ್ನು, ಇಂಜೆಕ್ಷನ್ ಮೂಲಕ ಕೊಡಲಾಗಿದೆಯೇ ಅಥವಾ ಇನ್ನು ಯಾವುದರಿಂದ ನೀಡಲಾಗಿದೆ ಎಂಬದು ತನಿಖೆಯ ನಂತರವಷ್ಟೇ ಗೊತ್ತಾಗಬೇಕಿದೆ!” ಎಂದು ವರದಿ ಹೇಳಿದೆ!

ಜನವರಿ ೧೭, ೨೦೧೪ ರ ರಾತ್ರಿ, ಸುಮಾರು ೯ ಗಂಟೆಗೆ ಪೋಲಿಸರಿಗೆ ಸುನಂದಾ ಪುಷ್ಕರ್, ಹೋಟೆಲ್ ಲೀಲಾ ಪ್ಯಾಲೇಸ್ ನ ರೂಮ್ ನಂ : ೩೪೫ ರಲ್ಲಿ ಸಾವಿಗೀಡಾಗಿದ್ದಾರೆ ಎನ್ನುವುದು ತಿಳಿದಿದೆ! ಪ್ರಾಥಮಿಕ ತನಿಖೆ ಹೇಳುವ ಪ್ರಕಾರ, ಸುನಂದಾ ಹೋಟೆಲಿನಲ್ಲಿ ಚೆಕ್ – ಇನ್ ಆಗಿದ್ದು, ಜನವರಿ೧೫, ೨೦೧೪ ರ ಸಂಜೆ ೫.೪೬ ರ ಹೊತ್ತಿಗೆ! ಮುಂಚೆ, ಆಕೆಗೆ ೩೦೭ ನೇ ನಂ ನ ಕೋಣೆಯನ್ನು ನೀಡಲಾಗಿತ್ತು! ಆದರೆ, ಜನವರಿ ೧೬ ರಂದು, ೩೪೫ ನಂ ನ ಕೋಣೆಗೆ ವಾಸ್ತವ್ಯ ಬದಲಿಸಿದ್ದರು!

On January 17, 2014, at about 9 pm police came to know that Sunanda Pushkar has died in Room Number 345, which is a suite, at Hotel Leela Palace. Preliminary enquiries stated that she had checked in to this hotel on January 15, 2014, at 5: 46 pm. The room number 307 was earlier given to her, later on, she moved to Room number 345 in the afternoon on January 16, 1 2014.

ಕ್ರೈಂ ಬ್ರಾಂಚಿನ ಪತ್ರಕರ್ತೆಯಾದ ನಳಿನಿ ಸಿಂಗ್ ಹೇಳುವ ಪ್ರಕಾರ, ಸುನಂದಾ ಪತ್ರಿಕಾ ಗೋಷ್ಟಿಯನ್ನು ಕರೆಯಲು ಬಯಸಿದ್ದರು! ಮಧ್ಯಾಹ್ನ ೩ ಗಂಟೆಗೆ, ಅವರ ಸಹಾಯಕಿ ಬಳಿ ತನ್ನ ಬಿಳಿ ವಸ್ತ್ರವನ್ನು ತೆಗೆದುಕೊಂಡು ಬರಲು ಹೇಳಿದ್ದಲ್ಲದೇ, ತನಗೆ ಪತ್ರಿಕಾ ಗೋಷ್ಟಿ ಕರೆಯಬೇಕಿದೆ ಎಂಬುದಾಗಿ ಹೇಳಿದ್ಧರು! ಆದರೆ, ನಂತರ ಅವರು ಸಾವಿಗೀಡಾಗಿದ್ದರು!! ಪ್ರಶ್ನೆಯೂ ಹಾಗೆಯೇ ಉಳಿಯಿತು! ಸುನಂದಾ ಪುಷ್ಕರ್ ಳನ್ನು ಹತ್ಯೆ ಮಾಡಿದ್ದು ಯಾರು?!” ಎಂಬುದಷ್ಟೇ ಉಳಿದಿತ್ತು!

ಪ್ರಕರಣವನ್ನು ಅಲೋಕ್ ಶರ್ಮಾಗೆ ವಹಿಸಿದ ನ್ಯಾಯಾಲಯ, ಮದುವೆಯಾದ ಏಳು ವರ್ಷಗಳ ಆಕೆ ವೈಯುಕ್ತಿಕ ಬದುಕು, ಮತ್ತು ಪ್ರದೇಶದ ಪರಿಶೀಲನೆ, ವರದಿಗಳ ಪರೀಕ್ಷೆಗಳನ್ನು ನಡೆಸಿ ವರದಿ ನೀಡಲು ಹೇಳಿದೆ!!

ಇನ್ನಿದೆ ಕಾಂಗ್ರೆಸ್ ನಾಯಕನಾದ ಶಶಿ ತರೂರ್ ಗೆ ಹಬ್ಬ!! ಯಾಕೆಂದರೆ, “ತನಿಖೆಯ ಮೊದಲ ದಿನದಿಂದಲೂ ಸಹ ಸುನಂದಾ ಪುಷ್ಕರ್ ಳದ್ದು ಆತ್ಮಹತ್ಯೆಯಲ್ಲ, ಬದಲಿಗೆ ಸಾವು ಎಂಬುದಾಗಿ ತೋರಿಸಿದರೂ ಸಹ, ಆಕೆಯ ಸಾವು ಇನ್ನೂ ನಿಗೂಢಾವಾಗಿಯೇ ಉಳಿದಿದೆ” ಎಂದಿರುವ ವರದಿ ಶಶಿ ತರೂರ್ ರ ಕಡೆಗೆ ಬೆಟ್ಟು ಮಾಡಿದೆ!!

ಸ್ವತಃ ಸುಬ್ರಹ್ಮಣಿಯನ್ ಸ್ವಾಮಿ ಕೂಡ ಹೇಳಿದ್ದರು!

” ಸುನಂದಾ ಪುಷ್ಕರ್ ತಾನು ಐಪಿಎಲ್ ಡೀಲಿನ ಬಗ್ಗೆ ಬಹಿರಂಗ ಪಡಿಸುತ್ತೇನೆ ಎಂದು ಹೇಳಿದ್ದರು! ರಾಬರ್ಟ್ ವಾದ್ರಾ ನ ಹೆಸರೂ ಸಹ ಇತ್ತು!! ಆಟೋಪ್ಸಿ ವರದಿಯ ಪ್ರಕಾರ, ಇದು ಅಸಹಜ ಸಾವು!! ಎಫ್ ಐ ಆರ್ ಹೇಳುವ ಪ್ರಕಾರ ಇದು ಕೊಲೆ!! ಅಷ್ಟಾದರೂ ಇನ್ನೂ ಏನು ಆಗಿಲ್ಲ!” ಎಂದು!!

“Sunanda Pushkar had said she would expose the IPL deals. Robert Vadra’s name would also have surfaced”. The autopsy report says it was an unnatural death. The FIR says it was a murder. Nothing has been done”

– Dr. Subramanian Swamy

Source : http://zeenews.india.com/india/sunanda-pushkar-was-murdered-says-secret-report-2088760.html

– ಪೃಥು ಅಗ್ನಿಹೋತ್ರಿ

Tags

Related Articles

Close