ಪ್ರಚಲಿತ

ಮತಾಂಧರರಿಗೂ ನಡುಕ ಹುಟ್ಟಿಸುವ ಈ ಹಳ್ಳಿಗೆ ಯಾವೊಬ್ಬ ಅನ್ಯಧರ್ಮಿಯನೂ ಕಾಲಿಡುವ ಧೈರ್ಯ ಮಾಡಲಾರ!! ಮತಾಂಧರರನ್ನೇ ಮೆಟ್ಟಿ ನಿಂತಿದೆ ಈ ಹಿಂದೂ ಹಳ್ಳಿ!!

ಮತಾಂತರ ಎನ್ನುವ ಕೆಟ್ಟ ಪಿಡುಗು ಹಿಂದೂ ರಾಷ್ಟ್ರವಾಗಿದ್ದ ಭಾರತವನ್ನೂ ಸಂಪೂರ್ಣವಾಗಿ ನಿರ್ನಾಮ ಮಾಡ ಹೊರಟಿದ್ದಂತೂ ಅಕ್ಷರಶಃ ನಿಜ!! ಯಾವಾಗ ಮೊಘಲರ ಹಿಂಡು ಭಾರತವನ್ನು ಪ್ರವೇಶಿಸಿತೋ ಶ್ರೀಮಂತ ಭರಿತವಾಗಿದ್ದ ಭಾರತ ಬಡರಾಷ್ಟ್ರವಾಗಿ ಹೋಯಿತು!! ಭಾರತದಲ್ಲಿದ್ದ ಸಂಪತ್ತು ವಿದೇಶಿಗರ ಪಾಲಾಯಿತು. ಹೀಗೆ ಕಾಲಕ್ರಮೇಣ ಮತಾಂತರ ಎನ್ನುವ ರೋಗ ಈಡೀ ದೇಶವನ್ನು ಕಿತ್ತು ತಿಂದು, ಇಂದು ಇದೇ ರೋಗವನ್ನು ಮುಸಲ್ಮಾನರು “ಜಿಹಾದ್” ಎನ್ನುವ ಅಸ್ತ್ರವನ್ನು ಬಳಸಿದರೆ, ಕ್ರಿಶ್ಚಿಯನ್ನರು “ಕ್ರುಸೇಡ್” ಎಂಬ ಅಸ್ತ್ರವನ್ನು ಬಳಸಿ ಹಿಂದೂಗಳನ್ನು ಮತಾಂತರಗೊಳಿಸುತ್ತಿದ್ದಾರೆ. 

ದೇಶದಲ್ಲೆಡೆ ಮತಾಂತರ ಗಾಳಿ ಜೋರಾಗಿಯೇ ಬೀಸುತ್ತಿದ್ದರೆ, ಇತ್ತ ಈ ಒಂದು ಹಳ್ಳಿ ಮಾತ್ರ “ಇದು ಹಿಂದುಗಳಷ್ಟೇ ವಾಸಿಸುವ ಹಳ್ಳಿ ; ಮತಾಂತರಿಗಳಿಗೆ ಅವಕಾಶ ಪ್ರವೇಶ ಇಲ್ಲ ; ಧರ್ಮ ಬದಲಾಯಿಸುವುದು ಒಂದೇ ತಾಯಿಯನ್ನೇ ಬದಲಾಯಿಸುವುದು ಒಂದೇ ಜೈ ಶ್ರೀ ರಾಮ್” ಎನ್ನುವ ಬೋರ್ಡು ಹಾಕಿಕೊಂಡಿದೆ!!

ಹೌದು…. ಮತಾಂತರ ಎಂಬ ರೋಗ ಹಿಂದೂಗಳಿಗೆ ಮಾರಕ ರೋಗವಾಗಿ ಕಾಡಿ ಇಡೀ ಜಗತ್ತನ್ನೇ ಸುಡಲು ಹೊರಟಿದೆ. ಆದರೆ ಈ ಹಳ್ಳಿಯಲ್ಲಿ ಮಾತ್ರ ಬರೀ ಹಿಂದುಗಳಿಗಷ್ಟೇ ವಾಸಿಸುವ ಹಳ್ಳಿ ಎನ್ನುವ ಬೋರ್ಡು ಹಾಕಿಕೊಂಡಿದೆ!! ಅಷ್ಟಕ್ಕೂ ಆ ಹಳ್ಳಿಯಾದರೂ ಯಾವುದು ಗೊತ್ತಾ?? ನಮ್ಮ ರಾಷ್ಟ್ರವನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಹೆಗಲ ಮೇಲಿದೆ ಎನ್ನುವ ಗುರಿಯನ್ನು ಹೊತ್ತಿರುವ ಆ ಊರು ಬೇರಾವುದು ಅಲ್ಲ, ಆಂಧ್ರಪ್ರದೇಶದ ಕಡಪ ಜಿಲ್ಲೆಯ ಕೆಸಲಿಂಗಯಪಲ್ಲಿ ಎನ್ನುವ ಪುಟ್ಟ ಹಳ್ಳಿ!!

ಗ್ರಾಮದ ಪ್ರವೇಶ ದ್ವಾರದಲ್ಲೇ “ಇದು ಹಿಂದುಗಳಷ್ಟೇ ವಾಸಿಸುವ ಹಳ್ಳಿ; ಮತಾಂತರಿಗಳಿಗೆ ಅವಕಾಶ ಪ್ರವೇಶ ಇಲ್ಲ ; ಧರ್ಮ ಬದಲಾಯಿಸುವುದು ಒಂದೇ ತಾಯಿಯನ್ನೇ ಬದಲಾಯಿಸುವುದು ಒಂದೇ ಜೈ ಶ್ರೀ ರಾಮ್. ಈ ಊರಿನಲ್ಲಿ ಹಿಂದುಗಳಷ್ಟೇ ಇದ್ದಾರೆ. ಯಾರಾದರೂ ಹೊರಗಿನವರು ಬಂದು ಇಲ್ಲಿ ಬಲವಂತದ ಮತಾಂತರಕ್ಕೆ ಯತ್ನಿಸುವುದನ್ನು ನಿಷೇಧಿಸಲಾಗಿದೆ” ಎನ್ನುವ ಬೋರ್ಡು ಆಂಧ್ರಪ್ರದೇಶದ ಕಡಪ ಜಿಲ್ಲೆಯ ಕೆಸಲಿಂಗಯಪಲ್ಲಿ ಹಳ್ಳಿಯ ಪ್ರವೇಶ ದ್ವಾರದಲ್ಲಿ ಕೇಸರಿ ಬಣ್ಣದಿಂದ ರಾರಾಜಿಸುತ್ತಿದೆ. ಅಷ್ಟೇ ಅಲ್ಲದೇ ಈ ಬೋರ್ಡು ನೋಡುಗರ ಕಣ್ಣು ಕುಕ್ಕುವಂತೆ ಮಾಡಿದ್ದಲ್ಲದೇ, ಈ ಮುಖಾಂತರ ಮತಾಂಧರನ್ನು ಮೆಟ್ಟಿ ನಿಂತ ಹಿಂದೂ ಹಳ್ಳಿ ಎಂಬ ಬಿರುದಿಗೂ ಪಾತ್ರವಾಗಿದೆ!!

ಅಷ್ಟಕ್ಕೂ ಈ ಹಳ್ಳಿ ಜನರು ಈ ರೀತಿ ಬೋರ್ಡು ಹಾಕಲು ಕಾರಣವಾದರೂ ಏನು ಗೊತ್ತೇ??

ಕಳೆದ ವರ್ಷ ಈ ಊರಿನ ಹಲವರನ್ನು ಕ್ರಿಶ್ಚಿಯನ್ ಮಿಷನರಿಗಳು ಮತಾಂತರ ಮಾಡಿದ್ದು, ಆ ಕಾರಣದಿಂದ ಸಿಡಿದೆದ್ದ ಹಳ್ಳಿಯ ಜನರು ಮತಾಂತರಗೊಂಡ ಹಲವರನ್ನು ಗ್ರಾಮಸ್ಥರು ಸ್ಥಳೀಯ ಆಶ್ರಮಕ್ಕೆ ಕರೆದೊಯ್ದು ಸ್ವಾಮಿ ಅಚಲಾನಂದರನ್ನು ಭೇಟಿ ಮಾಡಿಸಿ ಮರಳಿ ಮಾತೃಧರ್ಮಕ್ಕೆ ಕರೆತಂದಿದ್ದರು!! ಅಲ್ಲಿಯವರೆಗೂ ಶಾಂತಿ, ಸಹಬಾಳ್ವೆ ಎನ್ನುತ್ತಿದ್ದ ಆ ಜನರಿಗೆ ಈ ಮಿಷನರಿಗಳ ವಿಷಯದಿಂದ ಸಿಡಿದೇಳುವಂತೆ ಮಾಡಿತು. ಆಗಲೇ ಆ ಊರಿನ ಜನರೆಲ್ಲ ಜಾಗೃತರಾಗಿ ಕಳೆದ ವರ್ಷ ರಾಮನವಮಿಯ ದಿನ ಊರ ಪ್ರವೇಶ ದ್ವಾರದಲ್ಲಿ “ಇದು ಹಿಂದುಗಳಷ್ಟೇ ವಾಸಿಸುವ ಹಳ್ಳಿ ; ಮತಾಂತರಿಗಳಿಗೆ ಅವಕಾಶ ಪ್ರವೇಶ ಇಲ್ಲ ; ಧರ್ಮ ಬದಲಾಯಿಸುವುದು ಒಂದೇ ತಾಯಿಯನ್ನೇ ಬದಲಾಯಿಸುವುದು ಒಂದೇ ಜೈ ಶ್ರೀ ರಾಮ್” ಎಂಬ ಬೋರ್ಡ್ ನ್ನು ತೂಗು ಹಾಕಿದ್ದಾರೆ!!

ಅಂದು ಆ ಬೋರ್ಡು ತೂಗು ಹಾಕಿದ ಪರಿಣಾಮ, ಆ ಜನ ಸಿಡಿದೆದ್ದ ಪರಿಣಾಮ ಆ ಹಳ್ಳಿಯಲ್ಲಿ ಇಲ್ಲಿಯವರೆಗೂ ಒಂದೇ ಒಂದು ಮತಾಂತರವಾಗಿಲ್ಲ. ಅಷ್ಟೇ ಅಲ್ಲದೇ ಈ ಹಳ್ಳಿಯಲ್ಲಿ ಕೇವಲ ಪುರುಷರಷ್ಟೇ ಮತಾಂಧರ ವಿರುದ್ದ ಸಿಡಿದೆದ್ದಿಲ್ಲ. ಮಹಿಳೆಯರೂ ವೀರಾಂಗಿಣಿಯರ ಅವತಾರ ತಾಳಿ ಮತಾಂತರ ನಡೆಸಲು ಯಾರಾದರೂ ಯತ್ನಿಸಿದರೆ ಪೊರಕೆ ಹಿಡಿದು ಮೆರವಣಿಗೆಯಲ್ಲಿ ಕರೆದೊಯ್ಯುವುದನ್ನೂ ರೂಢಿಸಿ ಕೊಂಡಿದ್ದಾರೆ. ಅದರ ಪರಿಣಾಮವೇ ಆ ಊರಿನಲ್ಲಿ ಮತಾಂತರ ಸಂಪೂರ್ಣವಾಗಿ ಇಲ್ಲವಾಗಿದೆ. ಇದೇ ರೀತಿ ಭಾರತದ ಎಲ್ಲಾ ಭಾಗಗಳಲ್ಲೂ ಆದರೆ ಮತಾಂತರವೇ ಇರುವುದಿಲ್ಲ. ಅಷ್ಟೇ ಅಲ್ಲದೇ ಹಿಂದೂ ಧರ್ಮವನ್ನು ಯಾರಿಂದಲೂ ಕದಡಿಸಲು ಆಗದು!!

ಭಾರತ 200 ವರ್ಷಗಳ ಕಾಲ ಆಂಗ್ಲರ(ಬ್ರಿಟಿಷರ) ಆಳ್ವಿಕೆಗೆ ಒಳಗಾಯಿತು. ಬ್ರಿಟಿಷ್ ಎಂಬ ಮುಖವಾಡ ಹೊತ್ತು ಬಂದ ಕ್ರೈಸ್ತರು ಮೊದಲು ವ್ಯಾಪಾರದ ಸೋಗಿನಲ್ಲಿ ಬಂದರು ತದನಂತರ ನಮ್ಮ ಸನಾತನ ಸಂಸ್ಕೃತಿಯ ಬುಡಕ್ಕೆ ಕೈ ಹಾಕಿ ಅಲುಗಾಡಿಸಿ ಬಿಟ್ಟರು. ಅಷ್ಟೇ ಯಾಕೆ, ನಮ್ಮ ಭಾಷೆಯಾದ ಸಂಸ್ಕೃತವನ್ನು ಮರೆಸಿ ಬಿಟ್ಟರು. ಅದರ ಉದ್ದೇಶವಿಷ್ಟೇ ಸಂಸ್ಕೃತಿಯನ್ನು ಮರೆಯುವವರು ಧರ್ಮವನ್ನು ಮರೆಯುತ್ತಾರೆಂಬ ಉದ್ದೇಶ!! ಹೀಗಾಗಿಯೇ ಇಂದು ಇಡೀ ಭಾರತದ ತುಂಬಾ ಇಂಗ್ಲೀಷ್ ಭಾಷೆಯನ್ನು ಬಳಸುವಂತೆ ಮಾಡಿದ್ದು!!!

ಹೀಗೆ ಭಾರತದಿಂದ ಸಂಪೂರ್ಣವಾಗಿ ಹಿಂದೂ ಧರ್ಮವನ್ನು ಕಿತ್ತೊಗೆಯಲು ನಾನಾ ಸರ್ಕಸ್ ಗಳನ್ನು ಮಾಡುತ್ತಿರುವ ಅನ್ಯ ಧರ್ಮಿಯರು ಆಂಧ್ರಪ್ರದೇಶದ ಕಡಪ ಜಿಲ್ಲೆಯ ಕೆಸಲಿಂಗಯಪಲ್ಲಿ ಹಳ್ಳಿಗೆ ಮಾತ್ರ ಕಾಲಿಡುವ ಸಾಹಸವನ್ನು ಯಾವತ್ತೂ ಮಾಡಲಾರರು!! ಅಷ್ಟೇ ಅಲ್ಲದೇ ಇನ್ನು ಮುಂದೆ ಆ ಹಳ್ಳಿಗೆ ಯಾವುದೇ ಮತಾಂತರ ಎನ್ನುವ ರೋಗ ಅಂಟಿಕೊಳ್ಳವುದು ಅಸಾಧ್ಯ ಎಂದೆನಿಸುತ್ತದೆ!! ಆದರೆ ಒಂದಂತೂ ನಿಜ… ದೇಶದ ಪ್ರತಿ ಮೂಲೆ ಮೂಲೆಯಲ್ಲಿಯೂ ಹಿಂದೂಗಳು ಸಿಡಿದೆದ್ದರೆ ತಮ್ಮ ಧರ್ಮ, ಆಚಾರ-ವಿಚಾರಗಳನ್ನು ಉಳಿಸಿಕೊಳ್ಳಲು ಸಾಧ್ಯ ಎನ್ನುವುದು ಮಾತ್ರ ಅಕ್ಷರಶಃ ನಿಜ.

ಮೂಲ:  https://www.hindustantimes.com/india-news/andhra-pradesh-village-set-to-celebrate-first-year-of-hindus-only/story-w0RtNtwQz584ziQOBj36WO.html

https://www.thenewsminute.com/article/ground-report-hindus-only-andhra-village-saffron-flags-and-caution-boards-79103

– ಅಲೋಖಾ

Tags

Related Articles

Close