ಪ್ರಚಲಿತ

ಭಾರತೀಯ ಸೇನೆಯ ವಿರುದ್ಧ ಮಕ್ಕಳನ್ನು ಛೂ ಬಿಟ್ಟ ಉಗ್ರರು!! ಬಯಲಾಯಿತು ಉಗ್ರ ಸಂಘಟನೆಯ ರಾಕ್ಷಸೀಯ ಪ್ರವೃತ್ತಿ!!

ಕಾಶ್ಮೀರದಲ್ಲಿ ಭಾರತೀಯ ಸೇನಾ ಪಡೆ ಉಗ್ರರನ್ನು ಹುಡುಕಿ ಹುಡುಕಿ ಹತ್ಯೆ ಮಾಡುತ್ತಿರುವ ವಿಚಾರವು ಉಗ್ರ ಸಂಘಟನೆಗಳಿಗೆ ಭಯ ಮೂಡಿಸಿದ್ದಂತೂ ಅಕ್ಷರಶಃ ನಿಜ. ಯಾಕೆಂದರೆ ಈಗಾಗಲೇ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಾಗೂ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಕಾಶ್ಮೀರದಲ್ಲಿ ಹಿಂಸಾಚಾರಕ್ಕೆ ಕರೆ ನೀಡಿರುವ ಬೆನ್ನಲ್ಲೇ ಇದೀಗ ಜೈಶೇ ಇ ಮೊಹಮ್ಮದ್, ಹಿಜ್ಬುಲ್ ಮುಜಾಹಿದ್ದೀನ್ ನಂತಹ ಪಾಕಿಸ್ತಾನದ ನಿಷೇಧಿತ ಭಯೋತ್ಪಾದನಾ ಸಂಘಟನೆಗಳು ಕಾಶ್ಮೀರದಲ್ಲಿ ಗಲಭೆ ಎಬ್ಬಿಸಲು ಮಕ್ಕಳನ್ನು ಬಳಕೆ ಮಾಡುತ್ತಿದೆ ಎನ್ನುವ ಆಘಾತಕಾರಿ ಮಾಹಿತಿ ಬಹಿರಂಗಗೊಂಡಿದೆ.

ಹೌದು… ಕಾಶ್ಮೀರದಲ್ಲಿ ಉಗ್ರರ ಉಪಟಳ ಮುಂದುವರೆದಿದ್ದು, ಕಣಿವೆಯಲ್ಲಿ ಭಯೋತ್ಪಾದಕರು ಮತ್ತು ಪ್ರತ್ಯೇಕತವಾದಿಗಳ ಹುಟ್ಟಡಗಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ದಿಟ್ಟ ನಿಲುವುಗಳನ್ನು ಕೈಗೊಂಡಿರುವ ಬೆನ್ನಲ್ಲೇ ಕಾಶ್ಮೀರದಲ್ಲಿ ಕಲ್ಲು ತೂರಾಟಗಾರರ ಹುನ್ನಾರವೊಂದು ಬಯಲಾಗಿದೆ. ಭಯೋತ್ಪಾದಕರು ತಾವು ಮಾನವೀಯತೆಯನ್ನು ಮರೆತ ರಾಕ್ಷಸರು ಎಂಬುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದು, ತಮ್ಮ ದುಷ್ಟ ಕಾರ್ಯಗಳಿಗೆ ಎಳೆಯ ಮಕ್ಕಳನ್ನು ಬಳಸಿಕೊಂಡು ಅವರ ಸುಂದರ ಭವಿಷ್ಯವನ್ನು ನರಕಕ್ಕೆ ದೂಡುತ್ತಿರುವ ವಿಚಾರ ಇದೀಗ ಬಹಿರಂಗಗೊಂಡಿದೆ!!

ಇತ್ತೀಚೆಗಷ್ಟೇ, ಲಾಹೋರ್ ನಲ್ಲಿ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿರುವ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್, ಹೊಸದೊಂದು ಯುಗ ಪ್ರಾರಂಭವಾಗಿದ್ದು ದೇವರ ಆಶೀರ್ವಾದದಂತೆ ಕಾಶ್ಮೀರ ಸ್ವಾತಂತ್ರ್ಯ ಪಡೆಯಲಿದೆ. ಕಾಶ್ಮೀರದಲ್ಲಿ ರಕ್ತಪಾತವಾಗಿದ್ದು, ಇವೆಲ್ಲವನ್ನೂ ಗಮನಿಸುತ್ತಿರುವ ದೇವರು ತೀರ್ಪು ನೀಡಲಿದ್ದಾನೆ. ಏಕೆಂದರೆ ಎಲ್ಲಾ ನಿರ್ಧಾರವಾಗುವುದು ಸ್ವರ್ಗದಲ್ಲಿ ವಾಷಿಂಗ್ ಟನ್ ನಲ್ಲಿ ಅಲ್ಲ, ಆದ್ದರಿಂದ ಕಾಶ್ಮೀರ ಶೀಘ್ರವೇ ಸ್ವಾತಂತ್ರ್ಯ ಪಡೆಯಲಿದೆ ಎಂದು ಹೇಳಿದ್ದಾನೆ.

Image via Shutterstock

ಅಷ್ಟೇ ಅಲ್ಲದೇ, ಕಾಶ್ಮೀರ ಕಣಿವೆಯಲ್ಲಿ ಲಷ್ಕರ್ ಉಗ್ರ ಸಂಘಟನೆ ಹೆಚ್ಚಿನ ಪ್ರಮಾಣದಲ್ಲಿ ಭಯೋತ್ಪಾದನೆಯಲ್ಲಿ ತೊಡಗಿದ್ದು, ಸೇನಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಲು ಯುವಕರಿಗೆ ಉತ್ತೇಜನ ನೀಡುತ್ತಿದ್ದಾನೆ. ಕಾಶ್ಮೀರದಲ್ಲಿ ಸೇನೆ ವಿರುದ್ಧ ಹೋರಾಡುತ್ತಿದ್ದ ಹಲವರು ಜೀವ ಕಳೆದುಕೊಂಡಿದ್ದಾರೆ. ಸಾಯುವ ವೇಳೆಯಲ್ಲಿಯೂ ಸಹ ಅವರು ಪಾಕಿಸ್ತಾನದ ಸಮಗ್ರತೆ ಹಾಗೂ ಕಾಶ್ಮೀರದ ಬಗ್ಗೆ ಮಾತನಾಡುತ್ತಾರೆ. ಕಾಶ್ಮೀರದ ಸ್ವಾತಂತ್ರ್ಯ ದೇವರ ನಿರ್ಣಯವಾಗಿದ್ದು ಅದನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಸಹ ತಡೆಯಲು ಸಾಧ್ಯವಿಲ್ಲ ಎಂದು ಸಯೀದ್ ಹೇಳಿರುವ ಬೆನ್ನಲ್ಲೇ ಕಾಶ್ಮೀರದಲ್ಲಿ ಗಲಭೆಯೆಬ್ಬಿಸುವ ಸಂದರ್ಭಗಳಲ್ಲಿ ಉಗ್ರರು ಮಕ್ಕಳನ್ನು ಗುಪ್ತಚರರನ್ನಾಗಿ ಬಳಕೆ ಮಾಡುತ್ತಾರೆ ಎಂಬ ಆಘಾತಕಾರಿ ಮಾಹಿತಿ ಬಹಿರಂಗಗೊಂಡಿದೆ.

ಹೌದು… ಜೈಶೇ ಇ ಮೊಹಮ್ಮದ್, ಹಿಜ್ಬುಲ್ ಮುಜಾಹಿದ್ದೀನ್ ನಂತಹ ಪಾಕಿಸ್ತಾನದ ನಿಷೇಧಿತ ಭಯೋತ್ಪಾದನಾ ಸಂಘಟನೆಗಳು, ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಮತ್ತು ಪ್ರತ್ಯೇಕವಾದಿಗಳ ನಡುವೆ ಕಳೆದ ವರ್ಷ ಗಲಭೆ ನಡೆದ ಸಂದರ್ಭ ಮಕ್ಕಳನ್ನು ಗುಪ್ತಚರರಾಗಿ ಬಳಸಿಕೊಂಡಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ!! ಮಕ್ಕಳ ಮತ್ತು ಸಶಸ್ತ್ರ ಸಂಘರ್ಷದ ವಿಶ್ವಸಂಸ್ಥೆ ಕಾರ್ಯದರ್ಶಿಯ ವಾರ್ಷಿಕ ವರದಿ ಪ್ರಕಾರ, 2017ರ ಜನವರಿ-ಡಿಸೆಂಬರ್ ಅವಧಿಯಲ್ಲಿ ಜಗತ್ತಿನಾದ್ಯಂತ 10 ಸಾವಿರ ಮಕ್ಕಳನ್ನು ಕೊಲ್ಲಲಾಯಿತು. ಕಳೆದ ವರ್ಷ 8 ಸಾವಿರಕ್ಕೂ ಹೆಚ್ಚು ಮಂದಿಯನ್ನು ಉಗ್ರ ಸಂಘಟನೆಗಳು ನೇಮಕ ಮಾಡಿಕೊಂಡಿದ್ದು ಅವರನ್ನು ವಿದ್ವಂಸಕ ಕೃತ್ಯಗಳಿಗೆ ಬಳಸಲಾಗುತ್ತಿದೆ ಎಂದು ಹೇಳಿದೆ.

ಸಿರಿಯಾ, ಆಫ್ಘಾನಿಸ್ತಾನ ಮತ್ತು ಯಮೆನ್, ಪಿಲಿಫೈನ್ಸ್ ಮತ್ತು ನೈಜಿರಿಯಾ ಸೇರಿದಂತೆ ಜಗತ್ತಿನ 20 ರಾಷ್ಟ್ರಗಳಲ್ಲಿ ಉಗ್ರ ಸಂಘಟನೆಗಳು ಮಕ್ಕಳನ್ನು ಬಳಸಿಕೊಳ್ಳುತ್ತಿದೆ ಎಂದು ವರದಿಯಲ್ಲಿ ತಿಳಿಸಿದೆ. ಅಷ್ಟೇ ಅಲ್ಲದೇ, ಜಮ್ಮು ಮತ್ತು ಕಾಶ್ಮೀರದಲ್ಲಿ ಗಲಭೆ ಸೃಷ್ಟಿಸುವ ಹಾಗೂ ಭಾರತೀಯ ಸೇನೆ ವಿರುದ್ಧ ಹೋರಾಡಲು ಈ ಎರಡು ಉಗ್ರ ಸಂಘಟನೆಗಳು ಮಕ್ಕಳನ್ನು ನೇಮಕ ಮಾಡಿಕೊಂಡಿದೆ ಎಂದು ವರದಿಯಾಗಿದೆ.

ಆದರೆ ಇತ್ತೀಚೆಗಷ್ಟೇ, ಪೆÇಲೀಸ್ ನಿರ್ದೇಶಕ ಒ.ಪಿ.ಸಿಂಗ್ ಅವರು, ಉತ್ತರ ಪ್ರದೇಶದ ಭಾಗ್ಪತ್ ಹಾಗೂ ಸಹರಾನ್ಪುರ ಜಿಲ್ಲೆಯಿಂದ ಕಾಶ್ಮೀರಕ್ಕೆ ಉದ್ಯೋಗಕ್ಕೆಂದು ಅರಸಿ ಬಂದಿದ್ದ ಆರು ಯುವಕರು ಈಗ ಕಲ್ಲು ತೂರಾಟಗಾರರಾಗಿ ಮಾರ್ಪಾಡಾಗಿದ್ದಾರೆ ಎಂದು ಮಾಹಿತಿ ನೀಡಿದ್ದರು!! ಸುಮಾರು 20 ಸಾವಿರ ಸಂಬಳ ಸಿಗುತ್ತದೆ ಎಂದು ತಿಳಿದ ಯುವಕರು ಪುಲ್ವಾಮಾದಲ್ಲಿ ಕೆಲಸಕ್ಕೆ ಸೇರಿದ್ದಾರೆ. ಆದರೆ ಅಲ್ಲಿ ಇವರಿಗೆ ವಾಹನ ತೊಳೆಯಲು ಸೇರಿ ಹಲವು ಕೌಶಲವೇ ಬೇಕಾದ ಕೆಲಸ ಹಚ್ಚಿದ್ದಾಲ್ಲದೆ ಕಲ್ಲು ತೂರಾಟ ಮಾಡುವ ಕುರಿತು ತರಬೇತಿ ನೀಡಲಾಗಿದೆ ಎಂದು ಡಿಜಿಪಿ ತಿಳಿಸುವ ಮೂಲಕ ಉಗ್ರರ ಸಂಚೊಂದು ಬಯಲು ಮಾಡಿದ್ದರು!!

ಆದರೆ ಇದೀಗ ಪಾಕಿಸ್ತಾನ ಮೂಲದ ನಿಷೇಧ ಉಗ್ರ ಸಂಘಟನೆಗಳಾದ ಜೈಶ್ ಇ ಮೊಹಮ್ಮದ್ ಹಾಗೂ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಘರ್ಷಣೆಗೆ ಮಕ್ಕಳನ್ನು ಬಳಸಿಕೊಳ್ಳುತ್ತಿದೆ ಎಂದು ಯು ಎನ್ ಎಸ್ ಜಿ ವರದಿಯಲ್ಲಿ ತಿಳಿಸಿದೆ!! ಈ ಮೂಲಕ ಭಯೋತ್ಪಾದಕರು ತಾವು ಮಾನವೀಯತೆಯನ್ನು ಮರೆತ ರಾಕ್ಷಸರು ಎಂಬುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಂತೂ ಅಕ್ಷರಶಃ ನಿಜ.

ಮೂಲ: https://www.business-standard.com/article/current-affairs/pakistan-based-terrorist-groups-used-children-in-kashmir-clashes-un-report-118062800213_1.html

– ಅಲೋಖಾ

Tags

Related Articles

Close