ಪ್ರಚಲಿತ

ವಿಶ್ವದ ಅತೀ ದೊಡ್ಡ ಮುಸ್ಲಿಮ್ ರಾಷ್ಟ್ರದ ನೋಟಿನಲ್ಲೂ ಗಣಪತಿ ಚಿತ್ರ!! ಹಿಂದೂ ರಾಷ್ಟ್ರವಾಗುತ್ತಿದೆಯಾ ಇಂಡೋನೇಷ್ಯಾ?!

ಇಂಡೋನೇಷ್ಯಾದ ವಿಶ್ವದ ಅತೀ ದೊಡ್ಡ ಮುಸ್ಲಿಮ್ ಜನಸಂಖ್ಯೆ ಹೊಂದಿದ ದೇಶವಾಗಿದೆ. ಸುಮಾರು 800 ವರ್ಷಗಳ ಹಿಂದೆ ಮುಸ್ಮಿಮ್ ರಾಜರುಗಳು ಇಂಡೋನೇಷಿಯಾದ ರಾಜ ಮಜಪಾಹಿತ್ ಅವರನ್ನು ಸೋಲಿಸಿ ಇಂಡೊನೇಷಿಯಾವನ್ನು ಇಸ್ಲಾಮ್ ಧರ್ಮಕ್ಕೆ ಪರಿವರ್ತಿಸಿದ್ದರು!!.. ಇಸ್ಲಾಮ್ ಧರ್ಮವಾಗಿ ಪರವರ್ತನೆಗೊಂಡಿತಾದರೂ ಹಿಂದೂಗಳ ಸಂಸ್ಕøತಿ, ಆಚಾರ-ವಿಚಾರ ಮಾತ್ರ ಬದಲಾಗಿಲ್ಲ!! ನಾವು ಹಿಂದೂಗಳಾಗಿ ಭಾರತೀಯ ಸಂಸ್ಕøತಿ ಆಚಾರ ವಿಚಾರವನ್ನು ಮರೆತಿದ್ದೇವೆ ಆದರೆ ಇಂಡೋನೇಷಿಯಾ!!

23 ಕೋಟಿ ಮುಸ್ಲಿಂ ಜನಸಂಖ್ಯೆ ಹೊಂದಿರುವ ಇಂಡೋನೇಷ್ಯಾ ಜಗತ್ತಿನ ದೊಡ್ಡ ಮುಸ್ಲಿಂ ರಾಷ್ಟ್ರವಾಗಿದೆ!! ಇಂಡೋನೇಷ್ಯಾ ಮೊದಲು ಹಿಂದೂ ರಾಷ್ಟ್ರವಾಗಿತ್ತು!! 12ನೇ ಶತಮಾನದ ನಂತರ ಮುಸ್ಲಿಂ ರಾಷ್ಟ್ರವಾಯಿತು!! ಆದರೂ ಕೂಡಾ ಇಂಡೋನೇಷ್ಯಾದ ಜನ ಹಿಂದೂ ಸಂಸ್ಕøತಿಯನ್ನು ಇಂದಿಗೂ ಪಾಲನೆ ಮಾಡುತ್ತಾರೆ!! ಹಿಂದೂ ದೇವರುಗಳ ಆರಾಧನೆಯನ್ನು ಸಾಮಾನ್ಯವಾಗಿ ಕಾಣಬಹುದು!! ಇಂಡೋನೇಷ್ಯಾ ಜಗತ್ತಿನ 4 ನೇ ದೊಡ್ಡ ಹಿಂದೂ ರಾಷ್ಟ್ರ ಕೂಡ!! ಅದಲ್ಲದೆ ಇಂಡೋನೇಷ್ಯಾದ ಮೊದಲ ಪ್ರಧಾನಮಂತ್ರಿ ಸುಕರ್ಣೋ ಆಗಿದ್ದು ಮಹಾಭಾರತದ ಕರ್ಣನ ಹೆಸರಾಗಿದೆ !!

ಇಂಡೋನೇಷಿಯಾದಲ್ಲಿ ನೋಟಿನಲ್ಲೂ ಗಣಪತಿ ಚಿತ್ರ!!

ಇಂಡೋನೇಷ್ಯಾದ ನೋಟಿನ ಮೇಲೆ ಗಣಪತಿಯ ಚಿತ್ರವಿದೆ. ಇಲ್ಲಿ ಗಣಪತಿಯನ್ನು ವಿದ್ಯೆ ನೀಡುವ ದೇವರು ಎಂದು ಪೂಜಿಸುತ್ತಾರೆ!! ಇಲ್ಲಿನ ಶಿಕ್ಷಣ ವ್ಯವಸ್ಥೆ ಸುಧಾರಣೆ ಮಾಡಿದ ಹಜರ ದೇವಂತರ ಹುಟ್ಟಿದ ದಿನವನ್ನು ರಾಷ್ಟ್ರೀಯ ಶಿಕ್ಷಣ ದಿನವಾಗಿ ಆಚರಿಸುತ್ತಾರೆ!! ಹಜರ ದೇವಂತರ ಚಿತ್ರದ ಜೊತೆಗೆ ಗಣಪತಿಯ ಚಿತ್ರವನ್ನು ಕೂಡಾ ನೋಟಿನ ಮೇಲೆ ಕಾಣಬಹುದು!!

ಆದರೆ ಭಾರತೀಯರಾದ ನಾವು ಹಿಂದೂ ಸಂಸ್ಕøತಿಯನ್ನು ಎಷ್ಟರ ಮಟ್ಟಿಗೆ ಅಳವಡಿಸಿಕೊಂಡಿದ್ದೇವೆ? ಮಾರ್ಕಾಂಡೇಯ, ಭರಧ್ವಾಜ ಮತ್ತು ಅಗಸ್ತ್ಯರ ಹೆಸರನ್ನು ದಿನಾ ಇಂಡೋನೇಷಿಯಾದ ಶಾಲೆಗಳಲ್ಲಿ ಬೋಧಿಸಲಾಗುತ್ತದೆ!! ಆದರೆ ಭಾರತದಲ್ಲಿ ಯಾವ ಪಠ್ಯಪುಸ್ತಕದಲ್ಲಿ ಇವರುಗಳ ಹೆಸರನ್ನು ಕಾಣಬಹುದು? ಒಂದು ಸಲ ಯೋಚಿಸಿ ಎಷ್ಟು ಜನ ಋಷಿಗಳು ನಮಗೆ ಗೊತ್ತು? 402 ಋಷಿ ಮುನಿಗಳು ಅಂದರೆ ಪುರುಷ ಮತ್ತು ಮಹಿಳೆ ಋಗ್ವೇದದ (ಹಿಂದೂ ಧರ್ಮದ ಅತ್ಯಂತ ಪುರಾತನ ಮತ್ತು ಅತ್ಯಂತ ಪವಿತ್ರ ಪಠ್ಯ) ಋಷಿವರ್ಯರಲ್ಲಿ ನಮಗೆ ಒಬ್ಬರ ಹೆಸರಾದರೂ ನೆನಪಿದೆಯೇ?

* ಮಹಿಳೆಯರು, ಪುರುಷರು, ಹುಡುಗಿಯರು ಮತ್ತು ಹುಡುಗರ ರಾಷ್ಟ್ರೀಯ ಉಡುಪು ಎಂದರೆ ಧೋತಿ.!! ಯಾರೇ ಆದರೂ ಧೋತಿ ಧರಿಸದೆ ದೇವಸ್ಥಾನದ ಒಳಗೆ ಪ್ರವೇಶಿಸುವಂತಿಲ್ಲ.!! ದಕ್ಷಿಣ ಭಾರತವನ್ನು ಹೊತರುಪಡಿಸಿ ಕೆಲವೊಂದು ಕಡೆ ಧೋತಿ ಹಾಕುವುದು ಎಂದರೆ ಕೆಲವರು ನಾಚಿಕೆ ಪಡುತ್ತಾರೆ.. ಕೆಲವರಿಗೆ ಈ ಧೋತಿಯ ಮಹತ್ವವೇ ಇನ್ನೂ ತಿಳಿದಿಲ್ಲ ಎಂದನಿಸುತ್ತದೆ. ನಮ್ಮ ಪರಂಪರೆಯನ್ನು ಉಳಿಸುವುದರಲ್ಲಿ ಅದರಲ್ಲಿ ಯಾವುದೇ ಸಂಗತಿ ಇಲ್ಲ. ಇದರಿಂದಾಗಿ ಹಲವಾರು ಪುರೋಹಿತರು ತಮ್ಮ ಆರಾಧನೆಯೊಂದಿಗೆ ತಮ್ಮ ಉಡುಗೆಯನ್ನೂ ಬದಲಾಯಿಸಿಕೊಂಡಿದ್ದಾರೆ.

* ದಿನಕ್ಕೆ ಮೂರು ಬಾರಿ ಸೂರ್ಯನ ಪೂಜೆ ಪ್ರತೀ ಇಂಡೋನೇಷಿಯಾದ ಶಾಲೆಗಳಲ್ಲಿ ಅಭ್ಯಾಸ ಮಾಡಲಾಗುತ್ತದೆ. ಗಾಯತ್ರೀ ಮಂತ್ರವನ್ನು ಪ್ರತೀ ಮಗು ದಿನಕ್ಕೆ ಮೂರು ಬಾರಿ ಓದಿಸಲಾಗುತ್ತದೆ.!! ಅನೇಕ ಸ್ಥಳೀಯ ರೇಡಿಯೋ ಕೇಂದ್ರಗಳು ತ್ರಿಕಾಲ ಸಂಧ್ಯಾವನ್ನು ದಿನಕ್ಕೆ ಮೂರು ಬಾರಿ ಪ್ರಸಾರ ಮಾಡುತ್ತದೆ.!! ಆದರೆ ಭಾರತೀಯರಾಗಿ ನಾವು ನಮ್ಮ ಶಾಲೆಗಳಲ್ಲಿ ಇದೇ ರೀತಿಯ ಸಂಸ್ಕಾರವನ್ನು ಯಾಕೆ ಹೇಳಿ ಕೊಡಲು ಆಗುತ್ತಿಲ್ಲ? ತ್ರಿಕಾಲ ಸಂಧ್ಯಾದ ಬಗ್ಗೆ ನಮ್ಮ ಭಾರತದಲ್ಲಿ ಎಷ್ಟು ಹಿಂದೂಗಳು ತಿಳಿದುಕೊಂಡಿದ್ದಾರೆ? ಇಂದಿಗೂ ಇಂಡೋನೇಷಿಯಾದಲ್ಲಿ ಇಸ್ಲಾಮ್ ಧರ್ಮದಲ್ಲಿ ದಿನಕ್ಕೆ ಐದು ಬಾರಿ ಮುಸ್ಲಿಮರು ನಮಾಝ್ ಮಾಡುತ್ತಿದ್ದಾರೆ? ನಮ್ಮ ಸಂಸ್ಕøತಿಯನ್ನು ನಾವು ಏಕೆ ಮರೆಯಬೇಕು?

Related image

 

* ಕ್ರಿ.ಶ. 1011ರಲ್ಲಿ ಈಗ ಈ ಸ್ಥಳದ ಹೆಸರು ಪುರಾಸಮಂತಿಗಾ ಎಂದು ಕರೆಯಲ್ಪಡುತ್ತದೆ. ಶಿವಾ ಆಗಮ, ಬುದ್ಧ ಆಗಮ ಮತ್ತು ಬಲಿಯಾಗ ಈ ಮೂರು ಮೂರು ಧರ್ಮಗಳ ನಡುವೆ ಧಾರ್ಮಿಕ ಸಮ್ಮೇಳನವನ್ನು ನಡೆಸಲಾಗಿತ್ತು. ಮೂರೂ ಧರ್ಮಗಳ ವಿದ್ವಾಂಸರುಗಳು ಕುಳಿತು ವ್ಯವಸ್ಥೆಯನ್ನು ರೂಪಿಸುತ್ತಾರೆ. ಎಲ್ಲಾ ಧರ್ಮವು ಒಟ್ಟಿಗೆ ಕುಳಿತು ಕೆಲಸ ಮಾಡಬೇಕು ಮತ್ತು ಪರಸ್ಪರ ವಿನಿಮಯ ಮಾಡಿಕೊಳ್ಳಬೇಕು ಎಂಬುವುದೇ ಉದ್ಧೇಶ.

* ಇಂಡೋನೇಷಿಯಾ “ಭಿನೆಕಾ ತುಂಗಕಲ್ ಇಕಾ” ರಾಷ್ಟ್ರೀಯ ಧ್ಯೇಯವಾಕ್ಯವಾಗಿದೆ. ಇಂಡೋನೆಷಿಯನ್ ಹಿಂದೂ ಧರ್ಮಗ್ರಂಥ ಸೊಟೊಸೊಮಾ ಕಾಕಾವಿನ್‍ನಿಂದ ಸ್ಪೂರ್ತಿಯಾಗಿದೆ. ಬುದ್ಧ ಮತ್ತು ಶಿವ ಇಬ್ಬರೂ ವಿಭಿನ್ನ ಎಂದು ಹೇಳಲಾಗುತ್ತದೆ. ಆದರೆ ಬುದ್ಧ ಮತ್ತು ಶಿವನ ಸತ್ಯ ಒಂದೇ ಆಗಿದೆ. ಇವರ ಸತ್ಯತೆಯಲ್ಲಿ ಯಾವುದೇ ದ್ವಂದ್ವತೆ ಇಲ್ಲ. ಸತ್ಯವು ಒಂದೇ ಆಗಿದೆ ಆದರೆ ಕೆಲವು ಬುದ್ಧಿ ಜೀವಿಗಳು ಅದನ್ನು ವಿವಿಧ ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ. ಋಗ್ವೇದವು ನಮ್ಮ ರಾಷ್ಟ್ರೀಯ ಧ್ಯೇಯವೆಂದು ಯಾಕೆ ಹೇಳಬಾರದು.?

ಇಂಡೋನೇಷಿಯಾದಲ್ಲೇ ನಮ್ಮ ಹಿಂದೂ ಸಂಸ್ಕøತಿಯನ್ನು ಇನ್ನೂ ಮರೆಯದೇ ಪಾಲಿಸುತ್ತಾ ಬರುತ್ತಿದ್ದಾರೆ ಎಂದರೆ ನಾವು ಭಾರತೀಯರಾಗಿ ನಮ್ಮ ತನವನ್ನು ನಾವು ಏಕೆ ಉಳಿಸಿಕೊಂಡಿಲ್ಲ? ನಾವು ನಮ್ಮ ಆಚಾರ ವಿಚಾರವನ್ನು ಏಕೆ ಮರೆತಿದ್ದೇವೆ? ಇಂಡೋನೇಷಿಯಾದಂತಹ ದೇಶವನ್ನು ನೋಡಿಯಾದರೂ ಆಚಾರ-ವಿಚಾರಗಳನ್ನು ನೋಡಿಯಾದರೂ ಕಲಿಯೋಣ

  • ಪವಿತ್ರ
Tags

Related Articles

Close