ಪ್ರಚಲಿತರಾಜ್ಯ

ಸ್ಪೋಟಕ ಸುದ್ಧಿ : ನಲಪಾಡ್ ಮೇಲೆ ಕೇಸ್ ದಾಖಲಿಸಲು ಡಾ.ರಾಜ್ ಕುಟುಂಬವೇ ಕಾರಣನಾ?! ಆಸ್ಪತ್ರೆಗೆ ಭೇಟಿ ನೀಡಿದ್ದ ಪವರ್ ಸ್ಟಾರ್ ಕಣ್ಣೀರಿಟ್ಟಿದ್ದೇಕೆ..?! ರಾಘಣ್ಣ ಊಟ ತಂದಿದ್ದೇಕೆ?

ಮಹಮ್ಮದ್ ನಲಪಾಡ್ ಎಂಬ ಕಾಂಗ್ರೆಸ್ ಗೂಂಡಾನ ಬಗ್ಗೆ ಕಳೆದ 2 ದಿನಗಳಿಂದ ಭಾರೀ ಸ್ಪೋಟಕ ಸುದ್ಧಿಗಳನ್ನೇ ಕೇಳುತ್ತಿದ್ದೇವೆ. ಒಂದಲ್ಲಾ ಒಂದು ಪ್ರಕರಣಗಳ ವಿಚಾರಗಳು ಈಗ ಬೆಳಕಿಗೆ ಬರುತ್ತಿವೆ. ಕಾಂಗ್ರೆಸ್ ಶಾಸಕ ಹ್ಯಾರಿಸ್ ನ ಮಗ ಗೂಂಡಾ ಮಹಮ್ಮದ್ ನಲಪಾಡ್ ಸಹಿತ ಆತನ 7 ಜನ ಗೂಂಡಾ ಸ್ನೇಹಿತರು ಸೇರಿ ಅಮಾಯಕ ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆಯನ್ನು ನಡೆಸಿದ್ದು ಈಗ ಈ ಪ್ರಕರಣ ರಾಜ್ಯ ಮಾತ್ರವಲ್ಲದೆ ರಾಷ್ಟ್ರೀಯ ಮಟ್ಟದಲ್ಲಿಯೂ ಭಾರೀ ಸುದ್ಧಿಯಾಗುತ್ತಿದೆ.

ನಲಪಾಡ್ ಮೇಲೆ ಕೇಸ್ ದಾಖಲಿಸಲು ಡಾ.ರಾಜ್ ಕುಟುಂಬವೇ ಕಾರಣನಾ?

ಮಹಮ್ಮದ್ ನಲಪಾಡ್ ಹಾಗೂ ಕನ್ನಡದ ಖ್ಯಾತ ಚಲನ ಚಿತ್ರ ನಟರಾಗಿದ್ದ, ನಟ ಸಾರ್ವಭೌಮ, ದಿವಂಗತ ಡಾ.ರಾಜ್ ಕುಮಾರ್ ಕುಟುಂಬಕ್ಕೂ ಏನು ಸಂಬಂಧ ಎಂಬ ಪ್ರಶ್ನೆಗಳು ಕಾಡಬಹುದು. ಆದರೆ ಮೇಲ್ನೋಟಕ್ಕೆ ರೆಸ್ಟೋರೆಂಟ್ ಒಂದರಲ್ಲಿ ಹಲ್ಲೆಗೊಳಗಾದ ವಿದ್ವತ್ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದರೂ ಕೂಡಾ ಅದರ ಹಿಂದಿರುವ ಶಕ್ತಿಗಳು ಡಾ.ರಾಜ್ ಕುಮಾರ್ ಕುಟುಂಬ. ಪ್ರಕರಣ ಈ ರೀತಿ ಬಿಗಿಯಾಗಲೂ ಕಾರಣ ಇದೇ ಕುಟುಂಬ.

ನಿಜವಾಗಿಯೂ ಇಲ್ಲಿ ಕಾಂಗ್ರೆಸ್ ಗೂಂಡಾ ನಲಪಾಡ್‍ಗೂ ಡಾ.ರಾಜ್ ಕುಟುಂಬಕ್ಕೂ ಯಾವುದೇ ಸಂಬಂಧವೂ ಇಲ್ಲ. ಆದರೆ ಹಲ್ಲೆಗೊಳಗಾದ ವಿದ್ವತ್ ಹಾಗೂ ಡಾ.ರಾಜ್ ಕುಟುಂಬಕ್ಕೂ ಸಂಬಂಧವಿದೆ. ಕಾಂಗ್ರೆಸ್ ಗೂಂಡ ಮಹಮ್ಮದ್ ನಲಪಾಡ್‍ನಿಂದ ಹಲ್ಲೆಗೊಳಗಾದ ವಿದ್ವತ್ ಎಂಬಾತ ಡಾ.ರಾಜ್ ಕುಮಾರ್ ಕುಟುಂಬದ ಫ್ಯಾಮಿಲಿ ಫ್ರೆಂಡ್. ಹೀಗಾಗಿ ಆತ ಸದಾ ರಾಜ್ ಕುಟುಂಬದ ಸದಸ್ಯರೊಂದಿಗೇ ಸಾಮಾನ್ಯವಾಗಿ ಇರುತ್ತಿದ್ದ. ಅದರಲ್ಲೂ ಡಾ. ರಾಜ್ ಕುಮಾರ್ ಅವರ ಮೊಮ್ಮಗ ಅಂದರೆ, ರಾಘವೇಂದ್ರ ರಾಜ್ ಕುಮಾರ್ ಅವರ ಮಗನ ಆಪ್ತ ಸ್ನೇಹಿತ. ರಾಘವೇಂದ್ರ ರಾಜ್ ಕುಮಾರ್ ಅವರ ಪುತ್ರ ಗುರು ರಾಜ್ ಕುಮಾರೆಲ್ಲೇ ಹೋದರೂ ಒಟ್ಟಾಗಿಯೇ ಇರುತ್ತಾರೆ.

ಹೀಗಾಗಿಯೇ ಮೊನ್ನೆ ನಡೆದ ಘಟನೆಯ ದಿನವೂ ಒಟ್ಟಾಗಿಯೇ ಇದ್ದರು. ಗುರು ರಾಜ್ ಕುಮಾರ್ ಕೂಡಾ ಓರ್ವ ಚಿಗುರೊಡೆವ ನಟರಾಗಿದ್ದಾರೆ. ಅವರಿಬ್ಬರೂ ಒಂದು ರೆಸ್ಟೋರೆಂಟ್‍ನಲ್ಲಿ ಊಟ ಮಾಡುತ್ತಿದ್ದರು. ಈ ವೇಳೆ ಕಾಂಗ್ರೆಸ್ ಶಾಸಕ ಹ್ಯಾರಿಸ್ ಮಗ ಗೂಂಡಾ ನಲಪಾಡ್ ಹಾಗೂ ವಿದ್ವತ್ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ. ನಲಪಾಡ್ ಊಟ ಮಾಡುತ್ತಿರುವಾಗ ವಿದ್ವತ್ ನೋಡಿದ್ದಾನೆ ಎನ್ನುವ ಏಕೈಕ ಕಾರಣಕ್ಕಾಗಿ ವಿದ್ವತ್ ಮೇಲೆ ಮನಬಂದಂತೆ ಭಾರಿಸಿದ್ದಾನೆ. ನಲಪಾಡ್ ಹಾಗೂ ಆತನ ಸ್ನೇಹಿತರು ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸುವಾಗ ಮಧ್ಯಪ್ರವೇಶಿಸಿದ ರಾಘವೇಂದ್ರ ರಾಜ್ ಕುಮಾರ್ ಅವರ ಮಗ ಗುರು ರಾಜ್ ಕುಮಾರ್ ವಿದ್ವತ್ ಮೇಲಿನ ಹಲ್ಲೆಯನ್ನು ತಡೆಯಲು ಮುಂದಾಗುತ್ತಾರೆ.

ಗುರು ಮೇಲೆಯೂ ಹಲ್ಲೆ ಮಾಡಿದ್ದ ಕಿರಾತಕ..!

ರೌಡಿ ನಲಪಾಟ್ ಹಾಗೂ ಆತನ ಗ್ಯಾಂಗ್ ಅಮಾಯಕ ವಿದ್ವತ್ ಮೇಲೆ ಹಲ್ಲೆ ನಡೆಯುತ್ತಿರುವಾಗ ಮಧ್ಯಪ್ರವೇಶಿಸಿದ ರಾಘವೇಂದ್ರ ರಾಜ್ ಕುಮಾರ್ ಅವರ ಮಗ ಗುರು ರಾಜ್ ಕುಮಾರ್ ಅವರ ಮೇಲೆಯೂ ನಲಪಾಡ್ ಸಹಚರರು ಹಲ್ಲೆ ನಡೆಸಿದ್ದಾರೆ. ಆದರೆ ಗುರು ರಾಜ್ ಕುಮಾರ್ ಅವರ ಮೇಲೆ ಅತಿಯಾದ ಹಲ್ಲೆ ಆಗೋಕ್ಕೂ ಮುನ್ನ ಗುರು ರಾಜ್ ಕುಮಾರ್ ತಾನು ಯಾರೆಂಬ ವಿಚಾರವನ್ನು ಹೇಳಿ ಬಿಟ್ಟಿದ್ದಾರೆ. ನಾನು ಡಾ.ರಾಜ್ ಕುಮಾರ್ ಅವರ ಮೊಮ್ಮಗ. ರಾಘವೇಂದ್ರ ರಾಜ್ ಕುಮಾರ್ ಅವರ ಮಗ ಎಂದು ಹೇಳಿದ್ದಾರೆ. ಈ ವಿಷಯವನ್ನು ಕೇಳಿದ ನಲಪಾಡ್ ಹಾಗೂ ಆತನ ಗೂಂಡಾ ಗ್ಯಾಂಗ್ ಹಿಂದೇಟು ಹಾಕಿದೆ.

ಕಣ್ಣೀರು ಹಾಕಿದ ಪವರ್ ಸ್ಟಾರ್…

ಇಂದು ಮಧ್ಯಾಹ್ನದ ವೇಳೆ ರೌಡಿ ನಲಪಾಡ್‍ನಿಂದ ತೀವ್ರ ಹಲ್ಲೆಗೆ ಒಳಗಾಗಿದ್ದ ವಿದ್ವತ್‍ನ ಆರೋಗ್ಯ ವಿಚಾರಿಸಲು ಬೆಂಗಳೂರಿನ ಮಲ್ಯ ಆಸ್ಪತ್ರೆಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆಗಮಿಸಿದ್ದರು. ಮುಖ, ಕೈಕಾಲು ಸಹಿತ ಭಾರೀ ಹಲ್ಲೆಗೊಳಗಾಗಿದ್ದ ವಿದ್ವತ್‍ನನ್ನು ಕಂಡ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಣ್ಣೀರಿಟ್ಟಿದ್ದಾರೆ. ವಿದ್ವತ್‍ನ ಆರೋಗ್ಯ ವಿಚಾರಿಸಿ ಹೊರಬಂದ ಪವರ್ ಸ್ಟಾರ್ ವಿದ್ವತ್‍ನ ಒಡನಾಟವನ್ನು ಬಿಚ್ಚಿಟ್ಟಿದ್ದಾರೆ. “ವಿದ್ವತ್ ನಮ್ಮ ಕುಟುಂಬದ ಓರ್ವ ಸದಸ್ಯನಾಗಿದ್ದಾನೆ. ನಾನು ಚಿಕ್ಕಂದಿನಿಂದ ಆತನನ್ನು ನೋಡುತ್ತಿದ್ದೇನೆ. ಆತ ನನಗೆ ಕಿರಿಯ ಸಹೋದರನಿದ್ದ ಹಾಗೆ. ನನ್ನ ಹಾಗೂ ನಮ್ಮ ಕುಟುಂಬದ ಓರ್ವ ಸದಸ್ಯನಾಗಿಯೂ ಇದ್ದ. ಈ ರೀತಿಯ ಕ್ರೌರ್ಯ ಕ್ಷಮಿಸುವಂತದ್ದಲ್ಲ. ಇದು ಅಮಾನವೀಯ ಘಟನೆ. ಈ ರೀತಿ ಮಾಡಿದವರಿಗೆ ತಕ್ಕ ಶಿಕ್ಷೆಯಾಗಬೇಕು” ಎಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೇಳಿದ್ದಾರೆ.

ಊಟ ಹಿಡಿದುಕೊಂಡು ಬಂದ ರಾಘವೇಂದ್ರ ರಾಜ್‍ಕುಮಾರ್…

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮಲ್ಯ ಆಸ್ಪತ್ರೆಗೆ ಭೇಟಿ ನೀಡಿ ಹಿಂತಿರುಗಿದ ತಕ್ಷಣವೇ ವಿದ್ವತ್ ನ ಆಪ್ತ ಸ್ನೇಹಿತ ಗುರು ರಾಜ್ ಅವರ ತಂದೆ ರಾಘವೇಂದ್ರ ರಾಜ್ ಕುಮಾರ್ ಬುತ್ತಿಯಲ್ಲಿ ಊಟ ಹಿಡಿದುಕೊಂಡು ಬಂದಿದ್ದಾರೆ. ಈ ಮೂಲಕ ರಾಜ್ ಕುಟುಂಬಕ್ಕೆ ಆತನ ಸ್ನೇಹವನ್ನು ಮರೆಯದೆ ಆತನನ್ನು ಸಲಹಿದ್ದಾರೆ.

ಪ್ರಕರಣ ಸ್ಟ್ರಾಂಗ್ ಆಗಲೂ ಇವರೇ ಕಾರಣನಾ..?

ಗೂಂಡಾ ನಲಪಾಡ್ ವಿರುದ್ಧ ಕೇಸ್ ಇಷ್ಟೊಂದ ಸ್ಟ್ರಾಂಗ್ ಆಗಲು ರಾಘವೇಂದ್ರ ರಾಜ್ ಕುಮಾರ್ ಅವರೇ ಕಾರಣನಾ ಎನ್ನುವ ಮಾತುಗಳೂ ಕೇಳಿ ಬಂದಿವೆ. ಆರಂಭದಲ್ಲಿ ವಿದ್ವತ್ ಕೇಸ್ ದಾಖಲಿಸಲು ಹಿಂದೇಟು ಹಾಕಿದ್ದರೂ ಕೂಡಾ ರಾಘವೇಂದ್ರ ರಾಜ್ ಕುಮಾರ್ ಈ ಬಗ್ಗೆ ಹರಂ ಆಗಿದ್ದರು. ಯಾವುದೇ ಕಾರಣಕ್ಕೂ ಈ ಕೇಸ್‍ನಿಂದ ಹಿಂದೇಟು ಹಾಕಲು ಸಾಧ್ಯವೇ ಇಲ್ಲ. ಮಾತ್ರವಲ್ಲದೆ ತನ್ನ ಮಗನ ಮೇಲೂ ಆತ ಹಲ್ಲೆ ಮಾಡಿದ್ದಾನೆ. ಈ ಪ್ರಕರಣವನ್ನು ಸುಮ್ಮನೆ ಬಿಡಲೇ ಬಾರದು ಎನ್ನುವ ಉದ್ಧೇಶದಿಂದ ಮತ್ತಷ್ಟು ಕಠಿಣಗೊಳಿಸಿದ್ದಾರೆ ಎನ್ನಲಾಗಿದೆ.

ಕನ್ನಡ ವಿರೋಧಿ ನಲಪಾಡ್ ಯಾವ ರಾಜ್ಯದವನು ಗೊತ್ತಾ..?

ಕನ್ನಡ ಕನ್ನಡ ಎಂದು ಬೊಬ್ಬೆ ಬಿಡುವ ಕನ್ನಡ ಸಂಘಟನೆಗಳು ಈ ಸ್ಟೋರಿಯನ್ನು ನೋಡಲೇ ಬೇಕು. ಕಾಂಗ್ರೆಸ್ ಶಾಸಕ ಹ್ಯಾರಿಸ್ ಹಾಗೂ ಆತನ ಮಗ ಮಹಮ್ಮದ್ ನಲಪಾಡ್ ಇಬ್ಬರೂ ಕರ್ನಾಟಕದವರು ಅಲ್ವೇ ಅಲ್ಲ. ಬದಲಾಗಿ ಈ ಇಬ್ಬರೂ ಕಾಂಗ್ರೆಸ್ ಗೂಂಡಗಳು ಕೇರಳ ರಾಜ್ಯದವರು. ಕೇರಳದ ನಲಪಾಡ್ ಎಂಬ ಪ್ರದೇಶಕ್ಕೆ ಸೇರಿದ ಇವರು ರಾಜ್ಯಕ್ಕೆ ಬಂದು ಕಾಂಗ್ರೆಸ್ ಪಕ್ಷದ ಮುಖಾಂತರ ರಾಜಕೀಯ ಬೇಳೆಯನ್ನು ಬೇಯಿಸುತ್ತಿದ್ದಾರೆ. ಗೂಂಡಗಳನ್ನೇ ಬೆಳೆಸುತ್ತಿರುವ ಕೇರಳ ರಾಜ್ಯ, ಈಗ ಅಲ್ಲಿನ ಕೆಲ ಗೂಂಡಾಗಳು ಕರ್ನಾಟಕಕ್ಕೆ ಲಗ್ಗೆ ಇಟ್ಟು ಈ ರಾಜ್ಯವನ್ನೇ ಹಾಳುಗೆಡಿವಿದ್ದಾರೆ.

ಕೇರಳದಿಂದ ರಾಜ್ಯಕ್ಕೆ ಆಗಮಿಸಿ ಕಾಂಗ್ರೆಸ್ ಕೃಪಾ ಕಟಾಕ್ಷದಿಂದ ಇಲ್ಲಿನ ಕೆಲ ಗೂಂಡಾಗಳನ್ನು ಬೆಳೆಸಲು ಬಿಟ್ಟು ರಾಜಾರೋಷವಾಗಿ ಅನ್ಯಾಯ ಮಾಡಿಕೊಂಡೇ ಬಂದಿರುವ ಈ ಹ್ಯಾರಿಸ್ ಹಾಗೂ ಆತನ ಮಗ ಮಹಮ್ಮದ್ ನಲಪಾಡ್ ಈಗ ತಮ್ಮ ಪಾಪದ ಕೊಡ ತುಂಬಿದ ನಂತರ ಸಿಕ್ಕಿಬಿದ್ದಿದ್ದಾರೆ. ಈ ಪಾಪಿಗಳ ನಾಡದ್ರೋಹಿ ಚಟುವಟಿಕೆಗಳು ಈಗ ನೈಜ ಕನ್ನಡ ಪ್ರೇಮಿಗಳ ಕಣ್ಣು ಕುಕ್ಕುವಂತೆ ಮಾಡಿದೆ. ಸದಾ ಕನ್ನಡ ವಿರೋಧಿ ಚಟುವಟಿಕೆಗಳನ್ನೇ ನಡೆಸಿಕೊಂಡು ಬರುತ್ತಿದ್ದ ಇವರ ಕರಾಳ ಮುಖ ಇದೀಗ ಅನಾವರಣಗೊಂಡಿದೆ.

ಸಾ.ರಾ.ಗೋವಿಂದು ಹಾಗೂ ಕನ್ನಡ ಸಂಘಟನೆಗಳು ಗಪ್ ಚುಪ್!

ಈ ರೌಡಿ ಕನ್ನಡಿಗನೇ ಅಲ್ಲ, ಅದಕ್ಕಿಂತಲೂ ಮುಖ್ಯವಾಗಿ ಆ ರೌಡಿ ಹಲ್ಲೆ ಮಾಡಿರೋದು ಕನ್ನಡ ಚಿತ್ರ ರಂಗಕ್ಕೆ ಭಾರೀ ಕೊಡುಗೆಯನ್ನು ನೀಡಿದ್ದ ಅಣ್ಣಾವ್ರ ಕುಟುಂಬದ ಓರ್ವ ಸದಸ್ಯನ ಮೇಲೆ. ಆದರೆ ಈ ಬಗ್ಗೆ ಕನ್ನಡಿಗ ಕನ್ನಡಿಗ ಎಂದು ಬೊಬ್ಬೆ ಬಿಡುವ ಸಾರಾ ಗೋವಿಂದು ಮಾತೇ ಆಡೋದಿಲ್ಲ. ತಮಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವೇ ಇಲ್ಲ ಎನ್ನುವ ರೀತಿಯಲ್ಲಿ ಸುಮ್ಮನಿದ್ದಾರೆ ಸಾರಾ ಗೋವಿಂದು.

ಮಾತ್ರವಲ್ಲದೆ ಕನ್ನಡ ಪರ ಸಂಘಟನೆಗಳು ಎನ್ನುತ್ತಿರುವ ಸಂಘಟನೆಗಳು ಕೂಡಾ ಮಾತೇ ಎತ್ತುತ್ತಿಲ್ಲ. ಯಾಕೆ? ಕಾಂಗ್ರೆಸ್ ಪಕ್ಷದ ಮುಖಂಡ ಎನ್ನುವ ಭಯವೋ ಅಥವಾ ನಲಪಾಡ್ ರೌಡಿ ಎನ್ನುವ ಹೆದರಿಕೆಯೋ..? ಕಾಂಗ್ರೆಸ್‍ನ ವಿರೋಧಿ ಪಕ್ಷಗಳು ಏನಾದರು ಮಾತನಾಡಿದರೆ ಅವಮಾನ ಎಂದು ಬೊಬ್ಬೆ ಬಿಡುವ ಈ ನಾಯಕರು ಕನ್ನಡಕ್ಕೆ ಅವಮಾನ ಮಾಡಿರುವ ಈ ಕಾಂಗ್ರೆಸ್ ಗೂಂಡಾಗಳ ಬಗ್ಗೆ ಯಾಕೆ ಮಾತನಾಡೋದಿಲ್ಲ..?

ಒಟ್ಟಿನಲ್ಲಿ ವಿದ್ವತ್ ಮೇಲಿನ ಹಲ್ಲೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿರುವುದು ಹಾಗೂ ಈ ಪ್ರಕರಣದ ಗಟ್ಟಿತನದ ಹಿಂದೆ ರಾಜ್ ಕುಮಾರ್ ಕುಟುಂಬದ ಹಿಡಿತವಿರುವುದೂ ಈ ಪ್ರಕರಣ ಮತ್ತಷ್ಟು ಬಿಗಿಯಾಗಲು ಕಾರಣ ಎಂದು ತಿಳಿದುಬಂದಿದೆ. ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಬೇಕಷ್ಟೆ…

-ಸುನಿಲ್ ಪಣಪಿಲ

Tags

Related Articles

Close