ಪ್ರಚಲಿತ

ಶೃಂಗಸಭೆಯಂದು ಪಾಕ್‍ನ ಸೊಕ್ಕು ಮುರಿಯಲು ಮೋದಿಯಿಂದ ಮಾಸ್ಟರ್ ಪ್ಲಾನ್!! ಮೋದಿಯ ಪ್ಲಾನ್‍ಗೆ ಛಿದ್ರವಾಗುತ್ತಾ ಪಾಕಿಸ್ತಾನ?!

ಪಾಪಿ ಪಾಕಿಸ್ತಾನಕ್ಕೆ ಎಲ್ಲಾ ರಾಷ್ಟ್ರಗಳು ದೂರವಿಟ್ಟರೂ ಬುದ್ಧಿ ಬರುವ ಹಾಗೆ ಕಾಣುತ್ತಿಲ್ಲ!! ಮೊನ್ನೆ ತಾನೇ ಗಡಿಯಲ್ಲಿ ಗುಂಡಿನ ದಾಳಿಯಾದ ಸಂದರ್ಭದಲ್ಲಿ ಭಾರತೀಯರು ಇಬ್ಬರು ಯೋಧರು ಹುತಾತ್ಮರಾದ ಕಾರಣ ಅದಕ್ಕೆ ಪ್ರತ್ಯುತ್ತರ ತೀರಿಸದೆ ಬಿಡಲ್ಲ ಎಂದು ಭಾರತೀಯ ಸೈನಿಕರು ಪಾಕಿಸ್ತಾನದ 10 ಬಂಕರ್‍ಗಳನ್ನು ಛಿದ್ರ ಛಿದ್ರ ಮಾಡಿದ್ದರು!! ಅದಲ್ಲದೆ ಇದೇ ರೀತಿ ಮುಂದುವರಿದರೆ ಮುಂಬರುವ ದಿನಗಳಲ್ಲಿ ಭಯಂಕರ ಕದನ ಮುಂದುವರಿಯುತ್ತದೆ ಎಂದು ಎಚ್ಚರಿಕೆ ನೀಡಿದ ಭಾರತೀಯ ಅಧಿಕಾರಿಗಳಿಂದ ಬೆವೆತು ಹೋದ ಪಾಕಿಸ್ತಾನಿಗಳು ಗಢ ಗಢ ನಡುಗಿ ಶಾಂತಿ ಮತುಕತೆಗೆ ಮುಂದಾಗಿದ್ದರು!!

ಭಾರತೀಯ ಸೈನಿಕರು ತಾನಾಗಿಯೇ ಯಾರನ್ನೂ ಕೆಣಕಲು ಹೋಗಲ್ಲ!! ಯಾರಿಗೂ ತೊಂದರೇನೂ ಮಾಡಲ್ಲ.. ಒಂದು ವೇಳೆ ಕೆಣಕಿದರೆ ತನ್ನ ಪ್ರಾಣವನ್ನೂ ಲೆಕ್ಕಿಸದೆ ದೇಶ ರಕ್ಷಣೆಗೆ ಮುನ್ನುಗ್ಗುವ ವೀರರು ನಮ್ಮ ವೀರ ಯೋಧರು!! ಪಾಕಿಸ್ತಾನಕ್ಕೆ ನೇರ ಎಚ್ಚರಿಕೆ ನೀಡಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಂ ಅವರು, ನಮ್ಮ ಸೈನಿಕರ ವಿಚಾರದಲ್ಲಿ ಯಾವುದೇ ದೇಶ ಆಟವಾಡಿದ್ದೇ ಆದಲ್ಲಿ ಅಂತವರನ್ನು ಹೊಡೆದು ಹಾಕಲು ನಮ್ಮ ಸೈನಿಕರು ತಯಾರಾಗಿದ್ದಾರೆ ಎಂದಿದ್ದಾರೆ. ಗಡಿ ಪ್ರದೇಶದಲ್ಲಿ ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡಿ, ಭಾರತೀಯ ಸೈನಿಕರತ್ತ ಗುಂಡಿನ ದಾಳಿ ನಡೆಸುತ್ತಿದ್ದು, ಇತ್ತೀಚೆಗೆ ಕೆಲವು ಸೈನಿಕರು ಹುತಾತ್ಮರಾಗಿದ್ದರು. ಆದ್ದರಿಂದ ಇದೀಗ ಮತ್ತೆ ಗುಡುಗಿದ ರಕ್ಷಣಾ ಸಚಿವೆ, ಪಾಕಿಸ್ತಾನಿ ಸೈನಿಕರು ಇನ್ನು ಮುಂದೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ . ನಮ್ಮ ಸೈನಿಕರಿಗೆ ಒಂದು ಏಟು ಬಿದ್ದರೆ ಪಾಕಿಸ್ತಾನಿ ಸೈನಿಕರ ತಲೆ ಉರುಳಿಸುತ್ತೇವೆ ಎಂದು ನೇರವಾಗಿ ಎಚ್ಚರಿಕೆ ನೀಡಿದ ಬೆನ್ನಲ್ಲೇ ಇತ್ತ ಮೋದಿ ಪಾಕ್‍ನ್ನು ಸಂಪೂರ್ಣವಾಗಿ ಮಣಿಸಲು ಮತ್ತೊಂದು ಮಾಸ್ಟರ್ ಪ್ಲಾನ್ ಮಾಡಿದ್ದಾರೆ!!

Image result for modi

ಪಾಕ್ ಸೊಕ್ಕು ಮುರಿಯಲು ಮೋದಿಯಿಂದ ಮಾಸ್ಟರ್ ಪ್ಲಾನ್!! 

ಮೋದಿಜೀ ಅಧಿಕಾರ ವಹಿಸಿದಾಗಿನಿಂದ ನಮ್ಮ ದೇಶದ ಸೈನಿಕರು ಹುತಾತ್ಮರಾಗುವುದು ಕಡಿಮೆಯಾಗಿದೆ!! ಯಾಕೆಂದರೆ ಯುಪಿಎ ಸರಕಾರ ಅಧಿಕಾರವಹಿಸಿದ್ದ ಸಮಯದಲ್ಲಿ ಒಂದು ಗುಂಡು ಹಾರಿಸಬೇಕೆಂದರೂ ಕಾಂಗ್ರೆಸ್ ಸರಕಾರದ ಅನುಮತಿ ಪಡೆದು ಗುಂಡುಹಾರಿಸಬೇಕಿತ್ತು!! ಆದರೆ ಮೋದಿಜೀ ಹಾಗಲ್ಲ ನಮ್ಮ ಸೈನಿಕರಿಗೆ ಸಂಪೂರ್ಣವಾದ ಅಧಿಕಾರವನ್ನು ನೀಡಿ ಅವರಿಗೆ ಮಾನಸಿಕ ಸ್ಥೈರ್ಯವನ್ನು ನೀಡುತ್ತಾ ಬಂದಿದ್ದಾರೆ!! ಅದಲ್ಲದೆ ಸೈನ್ಯಕ್ಕೆ ಬೇಕಾದ ಎಲ್ಲಾ ಸವಲತ್ತುಗಳನ್ನು ಕೂಡಾ ನೀಡುತ್ತಾ ಬರುತ್ತಿದ್ದಾರೆ!! ಇದೀಗ ಭಾರತದ ಜೊತೆ ನರಿ ಬುದ್ಧಿ ತೋರಿಸುವ ಪಾಕ್‍ಗೆ ತೀವ್ರ ಮುಖಭಂಗ ಮಾಡುವ ಮತ್ತೊಂದು ಮಾಸ್ಟರ್ ಪ್ಲಾನ್ ಅನ್ನೇ ಮಾಡುತ್ತಿದ್ದಾರೆ!! ಬರುವ ತಿಂಗಳು ಜೂನ್ 9, 10ರಂದು ಚೀನಾದಲ್ಲಿ ನಡೆಯುವ ಶಾಂಘೈ ಸಹಕಾರ ಸಂಸ್ಥೆ (ಎಸ್ಸಿಒ) ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದು, ಜಮ್ಮು-ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನ ಮಾಡುತ್ತಿರುವ ಉದ್ಧಟತನ ಹಾಗೂ ಉಗ್ರರ  ಪೋಷಣೆಯನ್ನು ಮಾಡುವ ಮೂಲಕ ಅಂತಾರಾಷ್ಟ್ರೀಯ ಸಭೆಯಲ್ಲಿ ಪಾಕಿಸ್ತಾನದ ಮರ್ಯಾದೆ ಹರಾಜು ಹಾಕಲು ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿದು ಬಂದಿದೆ!!

ಅಲ್ಲದೆ ಈ ಬಾರಿಯ ಶಾಂಘೈ ಶೃಂಗಸಭೆಯಲ್ಲಿ ಜಾಗತಿಕ ಭಯೋತ್ಪಾದನೆ ನಿಗ್ರಹ, ಪಾಕಿಸ್ತಾನ ಹೇಗೆ ಭಯೋತ್ಪಾದನಾ ಸಂಘಟನೆಗಳಿಗೆ ಹಣ ನೀಡುತ್ತಿದೆ, ಉಗ್ರರನ್ನು ತನ್ನಲ್ಲೇ ಇಟ್ಟುಕೊಂಡು ಪೋಷಣೆ ಮಾಡುತ್ತಿದೆ ಹಾಗೂ ಅವರನ್ನು ಭಾರತದ ವಿರುದ್ಧ ಛೂ ಬಿಟ್ಟು ಹೇಗೆ ತನ್ನ ಕಪಟತನ ಹೊರಹಾಕುತ್ತಿದೆ ಎಂಬುದರ ಕುರಿತು ಮೋದಿ ಅವರು ಜಾಗತಿಕ ನಾಯಕರಿಗೆ ಮನವರಿಕೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಅದಲ್ಲದೆ ಈ ಬಾರಿಯ ಶೃಂಗಸಭೆಯಲ್ಲಿ ಜಾಗತಿಕ ಭಯೋತ್ಪಾದನೆ ನಿಗ್ರಹ, ಆರ್ಥಿಕ ಸಹಭಾಗಿತ್ವ ಸೇರಿ ಹಲವು ವಿಷಯಗಳ ಕುರಿತು ಚರ್ಚೆಯಾಗಲಿವೆ. ಈ ಹಿಂದೆಯೂ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನದ ಭಯೋತ್ಪಾದನೆಯ ಕರಾಳ ಮುಖವನ್ನು ವಿಶ್ವಸಂಸ್ಥೆಯ ಎದುರೇ ಪಾಕ್‍ಗೆ ಮುಖಭಂಗ ಮಾಡಿದ್ದರು ಇದೀಗ ಮತ್ತೊಂದು ಸವಾಲನ್ನು ಸ್ವೀಕರಿಗೆ ಭಯೋತ್ಪಾದನೆಯ ತಾಣವಾಗಿರುವ ಪಾಕಿಸ್ತಾನವನ್ನು ಇಡೀ ರಾಷ್ಟ್ರದಿಂದ ಮೂಲೆಗುಂಪು ಮಾಡುವ ಮೂಲಕ ಹೊಸ ಸಾಹಸದ ಕೆಲಸಕ್ಕೆ ಮೋದೀಜೀ ಕೈ ಹಾಕಿದ್ದಾರೆ!! ಈಗಾಗಲೇ ಪಾಕಿಸ್ತಾನದ ಹಣೆಬರಹ ಇಡೀ ರಾಷ್ಟ್ರಕ್ಕೆ ತಿಳಿದಿದ್ದು ವಿಶ್ವದ ದೊಡ್ಡಣ್ಣ ಸೇರಿದಂತೆ ಪಾಕಿಸ್ತಾನದ ಮಿತ್ರ ರಾಷ್ಟ್ರವಾದ ಚೀನಾ ಕೂಡಾ ಪಾಕ್‍ನಿಂದ ದೂರಸರಿಯುತ್ತಿರುವ ನೋಡುತ್ತಿದ್ದರೆ ಕ್ರಮೇಣ ಮೂಲೆಗುಂಪಾಗಿರುವ ಪಾಕ್ ಮುಂದೊಂದು ದಿನ ಯಾರಿಗೂ ಬೇಡವಾಗದ ರಾಷ್ಟ್ರವಾಗುತ್ತದೆ ತುಂಬಾ ಸನಿಹದಲ್ಲಿದೆ ಎಂದನಿಸುತ್ತದೆ!!

ಪವಿತ್ರ

Tags

Related Articles

Close