ಪ್ರಚಲಿತ

ಬ್ರೇಕಿಂಗ್! ಕಾಂಗ್ರೆಸ್‌ ಮುಖಂಡನ ಬಂಧನ.! ಚುನಾವಣಾ ಹೊಸ್ತಿಲಲ್ಲೇ ಕೈ ಕಳೆದುಕೊಂಡ ಕಾಂಗ್ರೆಸ್..!

ಚುನಾವಣಾ ಹಿನ್ನೆಲೆಯಲ್ಲಿ ಭರ್ಜರಿ ತಯಾರಿ ನಡೆಸುತ್ತಿರುವ ಕಾಂಗ್ರೆಸ್ ಗೆ ಚುನಾವಣೆಗೆ ಕೇವಲ ಮೂರೇ ದಿನಗಳು ಬಾಕಿ ಇರುವಾಗಲೇ ಭಾರೀ ಹೊಡೆತ ಬಿದ್ದಿದೆ. ಕಾಂಗ್ರೆಸ್ ಗೆ ಚುನಾವಣೆಯಲ್ಲಿ ಸೋಲಿನ ಭೀತಿ ಹೆಚ್ಚುತ್ತಿದ್ದು, ಹೇಗಾದರೂ ಗೆಲ್ಲಲೇಬೇಕೆಂಬ ನಿಟ್ಟಿನಲ್ಲಿ ವಾಮಾಮಾರ್ಗದ ಮೂಲಕ ಸಾಗಿದೆ. ನಕಲಿ ಮತದಾರರನ್ನು ಸೃಷ್ಟಿಸಿ, ನಕಲಿ ವೋಟರ್ ಐಡಿ ತಯಾರಿಸಿ ಬಿಜೆಪಿ ಮತ್ತು ಇತರ ಪಕ್ಷಗಳನ್ನು ಸೋಲಿಸಲು ತಯಾರಿ ನಡೆಸಿರುವ ಕಾಂಗ್ರೆಸ್ ಈಗಾಗಲೇ ಬೆಂಗಳೂರು ಮತ್ತು ಮಂಗಳೂರಿನಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದೆ. ಚುನಾವಣಾ ಅಧಿಕಾರಿಗಳು ಈ ಬಗ್ಗೆ ಈಗಾಗಲೇ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದೆ.

ಗೂಂಡಾ ಕಾರ್ಪೋರೆಟರ್ ಬಂಧನ..!

ನಕಲಿ ವೋಟರ್ ಐಡಿ ತಯಾರಿಸಿ ಸಿಕ್ಕಿಬಿದ್ದ ಕಾಂಗ್ರೆಸ್, ಪ್ರಕರಣದಿಂದ ತಪ್ಪಿಸಿಕೊಳ್ಳಲು ನಾನಾ ರೀತಿಯ ಪ್ರಯತ್ನ ಪಡುತ್ತಲೇ ಇದೆ. ನಿನ್ನೆ ಜಾಲಹಳ್ಳಿ ಎಸ್‌ಎಲ್‌ವಿ ಅಪಾರ್ಟ್‌ಮೆಂಟ್ ಎದುರು ಕಾಂಗ್ರೆಸ್ ಕಾರ್ಪೋರೆಟರ್ ಜಿ.ಕೆ.ವೆಂಕಟೇಶ್ ಅವರು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದರು. ಇದರಿಂದ ರೊಚ್ಚಿಗೆದ್ದ ಬಿಜೆಪಿ ಕಾರ್ಯಕರ್ತರೂ ಕೂಡಾ ಕೈಕೈ ಮಿಲಾಯಿಸಿಕೊಂಡಿದ್ದು , ಪರಿಸ್ಥಿತಿ ಹದಗೆಡುವಂತಿತ್ತು. ಚುನಾವಣೆಯ ಹೊಸ್ತಿಲಲ್ಲೇ ಕಾಂಗ್ರೆಸ್ ಮುಖಂಡರು ಈ ರೀತಿ ಗೂಂಡಾಗಿರಿ ಪ್ರದರ್ಶಿಸುತ್ತಿದ್ದು, ರಾಜ್ಯದಲ್ಲಿ ಅಶಾಂತಿ ಸೃಷ್ಟಿಸುವುದನ್ನೇ ಕಾಯುತ್ತಿದ್ದಾರೆ..!

ಕಾಂಗ್ರೆಸ್ ಗೆ ಭಾರೀ ಹೊಡೆತ..

ಕಾಂಗ್ರೆಸ್ ಈಗಾಗಲೇ ಚುನಾವಣೆಯ ಗೇಮ್ ಪ್ಲಾನ್ ನಡೆಸಿದ್ದು, ಸಮೀಕ್ಷೆಯ ಪ್ರಕಾರವೂ ಸೋಲು ಖಚಿತವಾಗಿದೆ. ಆದ್ದರಿಂದಲೇ ಮೋಸದ ದಾರಿ ಹಿಡಿದು, ನಕಲಿ ವೋಟರ್ ಐಡಿ ತಯಾರಿಸಿ, ಸುಲಭ ಜಯ ಗಳಿಸಬಹುದು ಎಂಬ ಉಪಾಯ ಹೂಡಿದ್ದರು. ಆದರೆ ಈಗಾಗಲೇ ಇವೆಲ್ಲವೂ ಪತ್ತೆಯಾಗಿದ್ದು, ಕಾಂಗ್ರೆಸ್ ಗೆ ಸೋಲಿನ ನೆರಳು ಕಣ್ಣ ಮುಂದೆ ಬಂತು ನಿಂತಿದೆ..! ಇದೀಗ ಕಾರ್ಪೊರೇಟರ್ ಬಂಧನದಿಂದಾಗಿ ಕಾಂಗ್ರೆಸ್ ಗೆ ಮತ್ತಷ್ಟು ಹಿನ್ನಡೆಯಾಗಿದೆ.

ಕಾಂಗ್ರೆಸ್ ಮುಖಂಡರು ಗೂಂಡಾಗಿರಿ ಪ್ರದರ್ಶಿಸುತ್ತಿರುವುದು ಇದೇ ಮೊದಲೇನಲ್ಲಾ. ರಾಜ್ಯ ಸರಕಾರವೇ ಇಂತಹ ಗೂಂಡಾಗಳನ್ನು ಸಾಕುತ್ತಿರುವುದರಿಂದ ಪೊಲೀಸ್ ಇಲಾಖೆ ಕೂಡಾ ಏನೂ ಮಾಡಲಾಗದ ಸ್ಥಿತಿಯಲ್ಲಿತ್ತು. ಆದರೆ ಇದೀಗ ಈ ವಿಚಾರ ಮಾಧ್ಯಮಗಳಲ್ಲಿ ಬರುತ್ತಿದ್ದಂತೆ ಪೊಲೀಸರು ಕೂಡಾ ಎಚ್ಚೆತ್ತುಕೊಂಡಿದ್ದು, ಕಾಂಗ್ರೆಸ್ ಕಾರ್ಪೊರೇಟರ್‌ನನ್ನು ಬಂಧಿಸಿದ್ದಾರೆ..!

–ಅರ್ಜುನ್

Tags

Related Articles

Close