ಪ್ರಚಲಿತ

ಮೋದಿಯನ್ನು ಡೈನಾಮಿಕ್ ಎಂದ ಅಪ್ಪು! ಪ್ರಧಾನಿಯನ್ನು ಭೇಟಿಯಾದ ಪವರ್ ಸ್ಟಾರ್ ದಂಪತಿಗಳ ಹಿಂದಿನ ರಹಸ್ಯವೇನು..?  

ಪ್ರಧಾನಿ ನರೇಂದ್ರ ಮೋದಿಯೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅವರೋರ್ವ ವಿಶ್ವನಾಯಕ, ವಿಶ್ವವನ್ನೇ ಭಾತರದತ್ತ ಮುಖ ಮಾಡಿ ನೋಡುವಂತೆ ಮಾಡಿದ ಅಭಿನವ ಸ್ವಾಮಿ ವಿವೇಕಾನಂದ ನಮ್ಮ ಪ್ರಧಾನಿ ನರೇಂದ್ರ ಮೋದಿ. ಕ್ರೀಡಾ ಪಟುಗಳು, ಸಿನಿ ದಿಗ್ಗಜರು, ಉಧ್ಯಮಿಗಳು, ಶಿಕ್ಷಕರು, ವೈಧ್ಯರು, ಕೂಲಿ ಕಾರ್ಮಿಕರು ಸಹಿತ ಎಲ್ಲರೂ ಪ್ರಧಾನಿ ನರೇಂದ್ರ ಮೋದಿ ಎಂದರೆ ನಮೋ ಎಂದು ಬಿಡುತ್ತಾರೆ. ಪ್ರತಿ ಮನೆಯ ಕನಿಷ್ಟ ಒಬ್ಬ ವ್ಯಕ್ತಿಯಾದರೂ ಮೋದಿ ಜಪ ಮಾಡದೇ ಇರೋದಿಲ್ಲ. ನಮೋ ಉಧ್ಘೋಷ ಪ್ರತಿ ಮನೆಯಲ್ಲೂ ಕೇಳಿ ಬರುತ್ತೆ. ಯಾಕೆಂದರೆ ಮೋದಿ ಯೋಜನೆಗಳು ಮನೆ ಮನೆ ಮುಟ್ಟುತ್ತಿದೆ, ಪ್ರತಿ ಮನೆಯ ಬಾಗಿಲನ್ನೂ ತಟ್ಟುತ್ತಿದೆ.

ಪ್ರಧಾನಿಗೆ ನಮೋ ಎಂದ ಪವರ್ ಸ್ಟಾರ್ ದಂಪತಿ..!

ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ಇಡಿಯ ಕರ್ನಾಟಕವನ್ನೇ ರಂಗು ರಂಗೇರಿಸಿದೆ. ರಾಷ್ಟ್ರೀಯ ನಾಯಕರು ಪ್ರಚಾರದ ಅಬ್ಬರದಿಂದ ಕರ್ನಾಟಕಕ್ಕೆ ಹೊಸ ಕಳೆ ಬಂದಂತಾಗಿದೆ. ಅದರಲ್ಲೂ ಪ್ರಧಾನಿ ಮೋದಿಯವರ ಕ್ಯಾಂಪೇನ್ ಮಾತ್ರ ವಿರೋಧ ಪಕ್ಷಗಳಿಗೆ ನಡುಕ ಹುಟ್ಟಿಸಿದೆ. ಈ ಬಾರಿ ತಮ್ಮ ಪಕ್ಷ ವಿಧಾನ ಸಭಾ ಚುನಾವಣೆಯನ್ನು ಗೆಲ್ಲಲೇ ಬೇಕು ಎಂಬ ಹಠಕ್ಕೆ ಬಿದ್ದು ಕೆಲಸ ಮಾಡುತ್ತಿದ್ದಾರೆ ಪ್ರಧಾನಿ ಮೋದಿ ಹಾಗೂ ಟೀಂ.

ಈ ನಿಮಿತ್ತ ಗುರುವಾರ ಕರ್ನಾಟಕದಲ್ಲಿ 3 ಜಾಥಾಗಳನ್ನು ಉದ್ಧೇಶಿಸಿ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಗುರುವಾರದ ಕೊನೆಯ ಜಾಥಾ ಬೆಂಗಳೂರಿನ ಕೆಂಗೇರಿಯಲ್ಲಿ ನಡೆದಿತ್ತು. ಲಕ್ಷಾಂತರ ಜನರು ಸೇರಿದ್ದ ಬೃಹತ್ ಜನಸ್ತೋಮವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದ್ದಾರೆ.

ಬೆಂಗಳೂರಿನ ಕೆಂಗೇರಿಯ ಬೃಹತ್ ಸಮಾವೇಶವನ್ನು ಮುಗಿಸಿಕೊಂಡು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಲೇ ಕನ್ನಡದ ಪವರ್ ಸ್ಟಾರ್, ವರನಟ ಡಾ.ರಾಜ್ ಕುಮಾರ್ ಅವರ ಪುತ್ರ ಪುನಿತ್ ರಾಜ್ ಕುಮಾರ್ ಮೋದಿಗಾಗಿ ಕಾಯುತ್ತಿದ್ದರು. ಎಲ್ಲರಿಗೂ ಅಚ್ಚರಿ ಮೂಡುವಂತೆ ಮಾಡಿದ್ದ ಪವರ್ ಸ್ಟಾರ್ ನಡೆ ಸ್ವತಃ ಭಾರತೀಯ ಜನತಾ ಪಕ್ಷದ ನಾಯಕರನ್ನೂ ಮೂಗಿನ ಮೇಲೆ ಬೆರಳಿಡುವಂತೆ ಆಗಿತ್ತು.

ಪ್ರಧಾನಿ ಮೋದಿಯನ್ನು ಭೇಟಿಯಾದ ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಹಾಗೂ ಅವರ ಪತ್ನಿ ಅಶ್ವಿನಿ ಪುನಿತ್ ರಾಜ್ ಕುಮಾರ್ ಕೆಲ ಹೊತ್ತು ಮಾತುಕತೆಯಲ್ಲಿ ತೊಡಗಿದ್ದರು. ಪ್ರಚಾರಕ್ಕೆಂದು ಆಗಮಿಸಿದ್ದ ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಎಲ್ಲರೂ ಹುಬ್ಬೇರುವಂತೆ ಮಾಡಿತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ದಂಪತಿಗಳ ನಡೆ.

ಡಾ.ರಾಜ್ ಬುಕ್ ಗಿಫ್ಟ್…

ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದ ಪುನಿತ್ ರಾಜ್ ಕುಮಾರ್ ಹಾಗೂ ಅವರ ಪತ್ನಿ ಅಶ್ವಿನಿ ಮೋದಿಯವರಿಗೆ ಸನ್ಮಾನ ಮಾಡಿದ್ದಾರೆ. ಮೈಸೂರು ಪೇಟ, ರೇಷ್ಮೆ ಶಾಲು ಹಾಗೂ ಹೂವಿನ ಹಾರವನ್ನು ತೊಡಿಸಿ ಸನ್ಮಾನ ಮಾಡಿದ್ದಾರೆ. ಈ ವೇಳೆ ಸ್ವತಃ ಪುನಿತ್ ರಾಜ್ ಕುಮಾರ್ ಅವರೇ ಬರೆದಿದ್ದ ತನ್ನ ತಂದೆ ವರನಟ ಡಾ.ರಾಜ್ ಕುಮಾರ್ ಅವರ ಬಗೆಗಿನ ಪುಸ್ತಕವನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಗಿಫ್ಟ್ ಆಗಿ ನೀಡಿದ್ದಾರೆ. ಪ್ರಧಾನಿ ಮೋದಿ ಕೂಡಾ ಪವರ್ ಸ್ಟಾರ್ ದಂಪತಿಗಳ ಸ್ವಾಗತವನ್ನು ಪ್ರೀತಿಯಿಂದ ಸ್ವೀಕರಿಸಿದ್ದು, ಅವರಿಗೆ ಶುಭ ಹಾರೈಸಿದ್ದಾರೆ.

Image result for modi with punith raj kumar

ಪುನಿತ್ ರಾಜ್‍ಕುಮಾರ್ ಫುಲ್ ಖುಷ್…

ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯಿಂದ ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಅವರು ಫುಲ್ ಖುಷ್ ಆಗಿದ್ದಾರೆ. ಈ ಬಗ್ಗೆ ತನ್ನ ಫೇಸ್ ಬುಕ್‍ನಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಪ್ರಧಾನಿ ಮೋದಿಯವರ ಕಾರ್ಯಚಟುವಟಿಕೆಗಳನ್ನು ಮೆಚ್ಚಿಕೊಂಡಿದ್ದ ಅಪ್ಪು ಮೋದಿಯವರನ್ನು ಡೈನಾಮಿಕ್ ಪ್ರಧಾನಿ ಎಂದು ಕೊಂಡಾಡಿದ್ದಾರೆ. “ವೈಭವಪೂರಿತ ಸಮಯದಲ್ಲಿ ನಮ್ಮ ಡೈನಾಮಿಕ್ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗುವ ಅಮೋಘ ಅವಕಾಶವು ನಮಗೆ ಸಿಕ್ಕಿದೆ. ನಾನು ಮತ್ತು ನನ್ನ ಪತ್ನಿ ಅಶ್ವಿನಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದೇವೆ. ಈ ವೇಳೆ ನಾವು ನೀಡಿದ ಪ್ರೀತಿಯ ಪುಸ್ತಕವನ್ನು ಅವರು ಆತ್ಮೀಯವಾಗಿಯೇ ಸ್ವೀಕರಿಸಿದ್ದಾರೆ. ನಾನು ನನ್ನ ತಂದೆಯ ಕುರಿತಾದ `ಡಾ.ರಾಜ್ ಕುಮಾರ್ ದಿ ಪರ್ಸನ್ ಬಿಹೈಂಡ್ ದಿ ಪರ್ಸನಾಲಿಟಿ’ ಎಂಬ ಪುಸ್ತಕವನ್ನು ಪ್ರಧಾನಿ ಮೋದಿಯವರಿಗೆ ನೀಡಿದ್ದೇವೆ. ಪ್ರಧಾನಿ ಮೋದಿಯವರು ನಮ್ಮ ಕುಟುಂಬಕ್ಕೆ ಶುಭ ಹಾರೈಸಿದ್ದಾರೆ” ಎಂದು ಸಂತಸವನ್ನು ಹಂಚಿಕೊಂಡಿದ್ದಾರೆ.

ಚುನಾವಣಾ ರಾಯಭಾರಿ ಪುನಿತ್…

ಈ ಬಾರಿಯ ಕರ್ನಾಟಕ ವಿಧಾನ ಸಭಾ ಚುನಾವಣೆಯ ರಾಯಬಾರಿಯನ್ನಾಗಿ ಚುನಾವಣಾ ಆಯೋಗ ನಟ ಪುನಿತ್ ರಾಜ್ ಕುಮಾರ್ ಅವರನ್ನೂ ಆಯ್ಕೆ ಮಾಡಿತ್ತು. ಹೀಗಾಗಿ ಪ್ರಧಾನಿ ಅವರ ಭೇಟಿ ಮತ್ತಷ್ಟು ಅರ್ಥವನ್ನು ಕಂಡುಕೊಂಡಿದೆ.

ರಾಜ್ ಹೊಗಳಿ ನಲಪಾಡ್‍ನ್ನು ತೆಗಳಿದ್ದ ನಮೋ…!

ಬೆಂಗಳೂರಿನ ಕೆಂಗೇರಿ ಬಳಿ ನಡೆದಿದ್ದ ಬೃಹತ್ ಚುನಾವಣಾ ಪ್ರಚಾರದಲ್ಲಿ ಅಬ್ಬರದ ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ವರನಟ ಡಾ.ರಾಜ್ ಕುಮಾರ್ ಅವರನ್ನು ಸ್ಮರಿಸಿದ್ದರು. ಮಾತ್ರವಲ್ಲದೆ ಡಾ.ರಾಜ್ ಕುಮಾರ್ ಅವರ ಕುಟುಂಬ ಸ್ನೇಹಿತ ವಿದ್ವತ್ ಎಂಬಾತನ ಮೇಲೆ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಗೂಂಡಾ ನಲಪಾಡ್ ಗೂಂಡಾಗಿರಿ ಮೆರೆದು ಮಾರಣಾಂತಿಕ ಹಲ್ಲೆ ಮಾಡಿದ್ದ. ಇದನ್ನು ಪ್ರಧಾನಿ ಮೋದಿ ಖಂಡಿಸಿದ್ದರು. ತಮ್ಮ ಭಾಷಣದ ವೇಳೆ ಈ ಕೃತ್ಯದ ವಿರುದ್ಧ ಹರಿಹಾಯ್ದಿದ್ದರು. ಇದು ಡಾ.ರಾಜ್ ಕುಟುಂಬಕ್ಕೆ ತುಂಬಾನೆ ಸಂತಸವಾಗಿತ್ತು. ಈ ಕಾರಣಕ್ಕಾಗಿಯೇ ಪುನಿತ್ ರಾಜ್ ಕುಮಾರ್ ಧಿಡೀರ್ ಭೇಟಿ ನೀಡಿದ್ದಾರೆ ಎನ್ನುವ ಮಾತುಗಳೂ ಕೇಳಿ ಬರುತ್ತಿದೆ.

ಏನೇ ಇರಲಿ, ಪುನಿತ್ ರಾಜ್‍ಕುಮಾರ್ ಅವರ ಪ್ರಧಾನಿ ಮೋದಿ ಭೇಟಿಯಿಂದ ರಾಜ್ಯದಲ್ಲೇ ಹೊಸ ಸಂಚಲನ ಆರಂಭವಾಗಿದ್ದು, ಭಾರತೀಯ ಜನತಾ ಪಕ್ಷಕ್ಕೆ ಸ್ವಲ್ಪ ಮಟ್ಟಿನ ಬಲ ಬಂದಿದೆ ಎಂದು ಎನ್ನಲಾಗಿದೆ. ಇದು ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಭಾರೀ ಪರಿಣಾಮ ಬೀಳೋ ಲಕ್ಷಣಗಳೂ ಗೋಚರಿಸುತ್ತಿದೆ.

-ಸುನಿಲ್ ಪಣಪಿಲ

Tags

Related Articles

Close