ಪ್ರಚಲಿತ

ರಾಹುಲ್ ಸಮಾವೇಶಕ್ಕೆ ಮಗುವನ್ನೇ ಬಲಿಕೊಡಲು ಹೊರಟ ಕಾಂಗ್ರೆಸಿಗರು.! ಡಿಯರ್ ಪಪ್ಪು ಇನ್ನೇನೆಲ್ಲಾ ನೋಡಬೇಕು?

ರಾಜ್ಯ ವಿಧಾನಸಭಾ ಚುನಾವಣೆಗೆ ದಿನ ಸಮೀಪಿಸುತ್ತಿದ್ದಂತೆ ಭರ್ಜರಿ ಪ್ರಚಾರ ಕಾರ್ಯ ಆರಂಭಿಸಿರುವ ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಸದ್ಯ ಕರ್ನಾಟಕದಲ್ಲೇ ಬೀಡು ಬಿಟ್ಟಿದ್ದಾರೆ. ಆದರೆ ತಮ್ಮ ಪ್ರಚಾರದ ಅಬ್ಬರದಲ್ಲಿ ಜನಸಾಮಾನ್ಯರನ್ನು ಬಲಿಕೊಡಲು ಹೊರಟ ಈ ಕಾಂಗ್ರೆಸ್ ನವರ ಮಂದ ಬುದ್ದಿಗೆ ಏನನ್ನಬೇಕೋ ತಿಳಿಯುತ್ತಿಲ್ಲ. ಯಾಕೆಂದರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇದೀಗ ಕರ್ನಾಟಕದಲ್ಲಿ ಕಾಂಗ್ರೆಸ್ ಪರ ಪ್ರಚಾರಕ್ಕೆಂದು ಆಗಮಿಸಿದ್ದಾರೆ. ಪ್ರತೀ ಬಾರಿಯೂ ಕರ್ನಾಟಕ ಭೇಟಿಯ ವೇಳೆ ಏನಾದರೊಂದು ಎಡವಟ್ಟು ಮಾಡಿಕೊಳ್ಳುವ ರಾಹುಲ್ ಇದೀಗ ಭಾರೀ ಅಪಘಾತಕ್ಕೆ ಕಾರಣರಾಗುತ್ತಿದ್ದರು.!

ರಾಹುಲ್ ರೋಡ್ ಶೋ – ರೋಗಿಗಳ ಪರದಾಟ..!

ಇಂದು ಕರ್ನಾಟಕದಲ್ಲಿ ಪ್ರಚಾರಕ್ಕೆ ಬಂದಿಳಿದ ರಾಹುಲ್ ಗಾಂಧಿ ಉತ್ತರ ಕನ್ನಡದಿಂದ ಭಾರೀ ರೋಡ್ ಶೋ ಮಾಡಲು ತಯಾರಿ ನಡೆಸಿದ್ದರು. ಪಕ್ಷದ ಕಾರ್ಯಕರ್ತರು , ಮುಖಂಡರ ಜೊತೆ ರೋಡ್ ಶೋ ಆರಂಭಿಸಿದ ರಾಹುಲ್ ಗಾಂಧಿ ಸಾಗುವ ರಸ್ತೆಯನ್ನೆಲ್ಲಾ ಬಂದ್ ಮಾಡಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಮಾಡಿದ ರಾಜ್ಯ ಸರಕಾರ , ತುರ್ತಾಗಿ ಹೋಗಬೇಕಾಗಿದ್ದ ಆಂಬುಲೆನ್ಸ್ ನ್ನು ಕೂಡ ತಡೆ ಹಿಡಿದ ಘಟನೆ ಇಂದು ನಡೆಯಿತು. ರಸ್ತೆ ಮಧ್ಯೆಯೇ ರೋಡ್ ಶೋ ನಡೆಸುತ್ತಾ ಆರಾಮವಾಗಿ ಸಾಗುತ್ತಿದ್ದ ವೇಳೆ ಮಣಿಪಾಲದ ಕಡೆ ಹೋಗುತ್ತಿದ್ದ ಆಂಬುಲೆನ್ಸ್ ಒಂದು ನಡು ರಸ್ತೆಯಲ್ಲೇ ಸಿಲುಕಿಕೊಂಡು ಆಂಬುಲೆನ್ಸ್ ನಲ್ಲಿ ಇದ್ದ ಚಿಕ್ಕ ಮಗು ಕೂಡಾ ನರಳಾಡುವಂತಾಯಿತು.

Related image

ರಾಹುಲ್ ರೋಡ್ ಶೋ- ಮೋದಿಗೆ ಜೈಕಾರ..!

ಕುಮಟದಲ್ಲಿ ರಾಹುಲ್ ಗಾಂಧಿ ಪಕ್ಷದ ಪ್ರಚಾರಕ್ಕಾಗಿ ರೋಡ್ ಶೋ ನಡೆಸುತ್ತಿದ್ದರೆ , ಇತ್ತ ಸೇರಿದ್ದ ಕಾರ್ಯಕರ್ತರ ಪೈಕಿ ಕೆಲವರು ಪ್ರಧಾನಿ ಮೋದಿಗೆ ಜೈಕಾರ ಹಾಕಿ, ಕಾಂಗ್ರೆಸ್ ಗೆ ಧಿಕ್ಕಾರ ಕೂಗಿದ್ದಾರೆ. ರಾಹುಲ್ ಗಾಂಧಿ ಇಂತಹ ಅವಮಾನ ಎದುರಿಸುತ್ತಿರುವುದು ಇದೇ ಮೊದಲೇನಲ್ಲಾ . ಯಾಕೆಂದರೆ ಪ್ರತೀ ಬಾರಿ ರಾಹುಲ್ ಪಾಲ್ಗೊಂಡ ಸಮಾರಂಭಗಳಲ್ಲಿ ಏನಾದರೊಂದು ಮುಜುಗರ ಅನುಭವಿಸುತ್ತಲೇ ಬಂದಿರುವುದರಿಂದ ಉತ್ತರ ಕನ್ನಡದಲ್ಲೂ ಮತ್ತೆ ತಲೆ ತಗ್ಗಿಸುವಂತಾಯಿತು.

ಅದೇನೇ ಆದರೂ , ತಮ್ಮ ರಾಜಕೀಯ ಲಾಭಕ್ಕಾಗಿ ಸಾಮಾನ್ಯ ಜನರಿಗೆ ಅದರಲ್ಲೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುತ್ತಿದ್ದ ಮಗು ಇದ್ದ ಆಂಬುಲೆನ್ಸ್ ನ್ನೇ ಈ ಕಾಂಗ್ರೆಸಿಗರು ತಡೆಹಿಡಿಯುತ್ತಾರೆ ಎಂದರೆ ಇವರ ಬುದ್ದಿಮಟ್ಟ ಯಾವ ರೀತಿಯಲ್ಲಿದೆ ಎಂಬುದು ಅರಿವಾಗುತ್ತದೆ..!

–ಅರ್ಜುನ್

Tags

Related Articles

Close