ಪ್ರಚಲಿತ

ಡಿಕೆಶಿ ವಿರುದ್ಧ ಮತ್ತೆ ರೆಬೆಲ್ ಆದ ಅಂಬರೀಶ್!! ಪರ್ಸ್‍ನಲ್ ವಿಷಯಕ್ಕೆ ಬಂದರೆ ಸುಮ್ಮನಿರೋಲ್ಲ ಅಂದಿದ್ಯಾಕೆ ಗೊತ್ತಾ?! ಬಹಿರಂಗವಾಯಿತು ಕಾಂಗ್ರೆಸ್ ಜಗಳ!!

ಡಿ.ಕೆ ಶಿವಕುಮಾರ್‍ಗೆ ಈ ಬಾರಿ ಮತ್ತೆ ಗ್ರಹಣ ಹಿಡಿದಂತೆ ಭಾಸವಾಗುತ್ತಿದೆ…. ಡಿ.ಕೆ ಶಿವಕುಮಾರ್ ತನ್ನ ದರ್ಪ,ಹಣ, ಹಾಗೂ ಗೂಂಡಾಗಿರಿಯಿಂದಲೇ ಹೆಸರಾಗಿರುವ ಕಾಂಗ್ರೆಸ್ ನಾಯಕ. ತಾನು ಅಕ್ರಮವಾಗಿ ಸಂಪಾದಿಸಿರುವ ಹಣದಿಂದಲೇ ಕಾಂಗ್ರೆಸ್ ಪಕ್ಷವನ್ನು ಅಧಿಕಾದ ಗದ್ದುಗೆಗೆ ಏರಿಸಿದ್ದ ಕರ್ನಾಟಕ ಕಾಂಗ್ರೆಸ್ಸಿನ ಮಾಸ್ಟರ್ ಪೀಸ್.!! ಕಳೆದ ಬಾರಿ ಐಟಿ ದಾಳಿ ನಡೆದು ಡಿಕೆಶಿ ಯ ಅಕ್ರಮ ಆಸ್ತಿಗಳನ್ನೆಲ್ಲಾ ಜಪ್ತಿ ಮಾಡಿ ಪವರ್ ಮಿನಿಸ್ಟರ್ ಗೆ ಬಿಗ್ ಶಾಕ್ ನೀಡಿತ್ತು!! ಅದಾದ ನಂತರ ಡಿಕೆಶಿಗೆ ಪಿತ್ತ ನೆತ್ತಿಗೇರಿದಂತೆ ಮಾಡುತ್ತಿದ್ದಾರೆ…. ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಕಾಂಗ್ರೆಸ್ ಸರಕಾರದ ನಡುವೆ ಸಣ್ಣಗೆ ಬಿರುಕಿನ ಗಾಳಿ ಬೀಸುತ್ತಿದೆ..

ತಾನು ಅಕ್ರಮವಾಗಿ ಸಂಪಾದಿಸಿದ ಆಸ್ತಿಗಳ ಸಾಮ್ರಾಜ್ಯದ ಮೇಲೆ ಐಟಿ ದಾಳಿ ಆಗಿದೆ ಎಂಬ ಸ್ಪೋಟಕ ಮಾಹಿತಿ ಅಂದು ಡಿಕೆಶಿ ಮಾತ್ರವಲ್ಲದೇ ಕಾಂಗ್ರೆಸ್ ಸರಕಾರವನ್ನೇ ಬೆಚ್ಚಿಬೀಳಿಸಿತ್ತು. ತಾಕತ್ತಿದ್ದರೆ ನನ್ನ ಸಾಮ್ರಾಜ್ಯದ ಮೇಲೆ ದಾಳಿ ಮಾಡಿ ಎಂದು ಛಾಲೆಂಜ್ ಹಾಕಿದ್ದ ಡಿಕೆಶಿ ಅಂದು ಮಾತ್ರ ಒಂದು ವಾರಗಳ ಕಾಲ ನಿದ್ದೆಯಿಲ್ಲದೆ ಐಟಿ ಅಧಿಕಾರಿಗಳ ಹಿಂದೆಯೇ ವಿಲವಿಲ ಒದ್ದಾಡಬೇಕಾದ ಅನಿವಾರ್ಯತೆಗೆ ಒಳಗಾಗಿದ್ದರು. ಡಿಕೆಶಿ ಸಾಮ್ರಾಜ್ಯ ಅಕ್ಷರಷಃ ಕಂಗೆಟ್ಟು ಹೋಗಿತ್ತು. ಇದೀಗ ಮತ್ತೆ ಕಾಂಗ್ರೆಸ್ ಪಕ್ಷದಲ್ಲಿ ಬಿರುಕು ಮೂಡಿದೆ!!  ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಈ ಕಾಂಗ್ರೆಸ್ ಸರಕಾರಕ್ಕೆ ಏನಾಗಿದೋ ತಿಳಿಯುತ್ತಿಲ್ಲ…

ಡಿ.ಕೆ ಶಿವಕುಮಾರ್ ವಿರುದ್ಧ ಕಿಡಿ ಕಾರಿದ ಅಂಬರೀಶ್!!

ಕೆಪಿಸಿಸಿ ಪ್ರಚಾರ ಸಮಿತಿಯ ಸಭೆಗೆ ಅಂಬರೀ ಶ್ ಹಾಜರಾಗರಿರಲಿಲ್ಲ!! ಅದಕ್ಕಾಗಿ ಮಾಧ್ಯಮದವರು ಈ ಬಗ್ಗೆ ಡಿ.ಕೆ ಶಿವಕುಮಾರ್‍ರನ್ನು ಅಂಬರೀಶ್ ಯಾತಕ್ಕಾಗಿ ಹಾಜರಾಗಿಲ್ಲ ಕೇಳಿದಾಗ ಅವರು ಆರೋಗ್ಯ ಸರಿ ಇಲ್ಲ ಎಂದು ಉತ್ತರಿಸುತ್ತಾರೆ.. ಅದನ್ನು ಕೇಳಿದ ಅಂಬರಿಶ್ ರೆಬಲ್ ಆಗಿ ಬಿಡುತ್ತಾರೆ!!.. ನನ್ನ ಪರ್ಸನಲ್ ವಿಷಯಕ್ಕೆ ಬಂದರೆ ಹುಷರ್!! ನನ್ನ ಆರೋಗ್ಯ ಸರಿ ಇಲ್ಲ ಎಂದು ಹೇಳಿದವರು ಯಾರು? ನನ್ನ ಆರೋಗ್ಯದ ಬಗ್ಗೆ ನೀವು ಹೇಳುವ ಅಗತ್ಯವಿಲ್ಲ ಇಡೀ ಕನ್ನಡ ಜನತೆಗೆ, ಅಭಿಮಾನಿಗಳಿಗೆ ನನ್ನ ಆರೋಗ್ಯದ ಬಗ್ಗೆ ತಿಳಿದಿದೆ ಎಂದು ಡಿಕಿಶಿ ವಿರುದ್ಧ ಅಂಬರೀಶ್ ಕಿಡಿ ಕಾರಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ತಮ್ಮ ಪಕ್ಷದಲ್ಲಿಯೇ ಬಿರುಕು ಮೂಡಿರುವುದು ನಿಜವಾಗಿಯೂ ಆಶ್ಚರ್ಯಕರವಾಗಿದೆ…

ಈ ಬಾರಿ ಪವರ್ ಮಿನಿಸ್ಟರ್‍ಗೆ ಸಂಕಷ್ಟದ ಮೇಲೆ ಸಂಕಷ್ಟದ ಕಾದಿದೆ ಅಂತಾನೇ ಹೇಳಬಹುದು..ಅದಲ್ಲದೆ ಇಂದು ಈ ಪವರ್ ಮಿನಿಸ್ಟರ್ ಡಿಕೆ ಶಿವಕುಮಾರ್  ಮತ್ತೊಂದು ಎಡವಟ್ಟನ್ನು ಮಾಡಿದ್ದಾರೆ   ಇಂದು ಬಳ್ಳಾರಿಯಲ್ಲಿ ರಾಹುಲ್ ಗಾಂಧಿಯ ಸಮಾವೇಶದ ಸಿದ್ಧತೆ ತೊಡಗಿದ್ದ ಸಮಯದಲ್ಲಿ ಪಾಪ ತನ್ನ ಪಕ್ಷದ ಅಭಿಮಾನಿಯೊಬ್ಬ ಸೆಲ್ಫಿ ತೆಗೆಯಲು ಮುಂದಾದರು… ಆದರೆ ಡಿಕೆ ಶಿವಕುಮಾರ್ ಮಾತ್ರ ಸಾಮಾನ್ಯ ಜನರನ್ನು ಕಂಡರೆ ಅದೆಲ್ಲಿಂದ ಬರುತ್ತೋ ಕೋಪ ಅಂತಾ ಗೊತ್ತಾಗಲ್ಲ…

ಪಾಪ ಹತ್ತಿರ ಬಂದು ಒಬ್ಬಾತ ಸೆಲ್ಫಿ ತೆಗೆಯಲು ಮುಂದಾದ… ಅದೇ ಸಮಯದಲ್ಲಿ ಡಿಕೆಶಿಗೆ ಎಲ್ಲಿಂದ ಪಿತ್ತ ನೆತ್ತಿಗೇರಿತೋ ಗೊತ್ತಿಲ್ಲ… ಪಟಕ್ಕನೇ ಹೊಡೆದೇ ಬಿಟ್ಟರು… ಇಷ್ಟೋ ಅಹಂ ಹೊಂದಿರುವವವರು ಪವರ್ ಮಿನಿಸ್ಟರ್ ಆಗುವಂತಹ ಯಾವುದೇ ಅರ್ಹತೆ ಹೊಂದಿಲ್ಲ!! ಡಿಕೆ ಶಿವಕುಮಾರ್ ದರ್ಪ ಇದೇ ಮೊದಲಲ್ಲ ಈ ಮೊದಲು ಕೂಡಾ ಸೆಲ್ಫಿ ತೆಗೆಯಲು ಬಂದವರಿಗೆ ಈ ರೀತಿಯಾಗಿ ಮಾಡಿದ್ದಾರೆ..

ಈ ರೀತಿಯಾಗಿ ದರ್ಪ ತೋರಿಸಿರುವುದು ಇದೇ ಮೊದಲ್ಲ ಡಿಕೆ ಶಿವಕುಮಾರ್‍ರವರು.. ಅದೇ ಏನೇ ಆಗಲಿ ಇತರ ಪಕ್ಷಗಳ ಜೊತೆ ಕಚ್ಚಾಡುವುದು ಬೇರೆ..ತನ್ನ ಪಕ್ಷದದವರೊಂದಿಗಿಯೇ ಈ ರೀತಿಯಾಗಿ ಕಚ್ಚಾಟ ನೋಡಿದರೆ ಮುಂದೆ ಕಾಂಗ್ರೆಸ್ಸಿನ ಅವನತಿ ತುಂಬಾ ಹತ್ತಿರದಲ್ಲಿದೆ ಎಂಬುವುದಕ್ಕೆ ಇದೇ ಸಾಕ್ಷಿ ಅಂತಾನೇ ಹೇಳಬಹುದು.. ಈ ರೀತಿಯಾಗಿ ಪಕ್ಷದಲ್ಲಿಯೇ ಬಿರುಕು ಮೂಡಿದರೆ ಮುಂದೆ ಇಂತವರಿಗೆ ದೇಶವನ್ನು ಆಳಲು ಕೊಟ್ಟರೆ ದೇಶದ ಜನರನ್ನು ಯಾವ ರೀತಿಯಾಗಿ ಕಾಣಬಹುದು ಎಂಬುವುದೇ ಎಲ್ಲರ ಪ್ರಶ್ನೆ!!

 

ಪವಿತ್ರ

Tags

Related Articles

Close