ಪ್ರಚಲಿತ

ಓವೈಸಿಯ ಒಡೆದಾಳುವ ದ್ವೇಷ ರಾಜಕಾರಣಕ್ಕೆ ಸಡ್ಡು ಹೊಡೆದ ಮುಸ್ಲಿಮರು!! ಸುನ್ನಿಗಳಿಂದ ದೂರವಾಗುತ್ತಾ ಭಾರತದ ಮೊತ್ತ ಮೊದಲ ರಾಜಕೀಯ ಪಕ್ಷ ಸ್ಥಾಪಿಸಿದ ಶಿಯಾಗಳು!!

ಮುಸಲ್ಮಾನರಲ್ಲೂ ಹಿಂದೂಗಳಂತೆಯೆ ಜಾತಿ-ಉಪಜಾತಿಗಳಿವೆ. ಮೇಲುನೋಟಕ್ಕೆ ಇವರೆಲ್ಲರೂ ಒಗ್ಗಟ್ಟಾಗಿರುವಂತೆ ಕಂಡರೂ ನಿಜವಾಗಿ ಇವರಲ್ಲಿ ಸಾಸಿವೆ ಕಾಳಿನಷ್ಟೂ ಒಗ್ಗಟ್ಟಿಲ್ಲ. ಜಗತ್ತಿನಲ್ಲೆ ಅತಿ ಹೆಚ್ಚು ಬಾರಿ ಕಾದಾಡಿಕೊಂಡವರು ಶಿಯಾ ಮತ್ತು ಸುನ್ನಿಗಳು. ಇವರಿಬ್ಬರ ಜಾಗತಿಕ ಕದನದ ಬಿಸಿ ಭಾರತದಲ್ಲೂ ತಟ್ಟಿದೆ ಮತ್ತು ಈಗಲೂ ಶಿಯಾ ಮತ್ತು ಸುನ್ನಿಗಳಲ್ಲಿ ಹಲವಾರು ವಿಷಯಗಳಲ್ಲಿ ಏಕಮತವಿಲ್ಲ. ಶಿಯಾಗಳು ಉದಾರವಾದಿ ಇಸ್ಲಾಮಿನ ಪ್ರತಿಪಾದಕರಾದರೆ, ಸುನ್ನಿಗಳು ಕಟ್ಟರ್ ಇಸ್ಲಾಮಿನ ಪ್ರತಿಪಾದಕರು. ಭಾರತದಲ್ಲೂ ಶಿಯಾ ಮತ್ತು ಸುನ್ನಿಗಳಲ್ಲಿ ಅನಾದಿಕಾಲದಿಂದಲೂ ಶೀತಲ ಸಮರ ನಡೆದುಕೊಂಡೆ ಬಂದಿದೆ. ಇವರಿಬ್ಬರ ನಡುವಿನ ಶೀತಲ ಸಮರ ಈಗ ಬಹಿರಂಗವಾಗಿ ಸ್ಪೋಟಗೊಂಡಿದೆ!!

ಕಟ್ಟರವಾದಿ ಸುನ್ನಿಗಳಿಂದ ದೂರಾಗುವ ಮೊದಲ ಪ್ರಯತ್ನದಲ್ಲಿ ಉತ್ತರ ಪ್ರದೇಶದ ಶಿಯಾ ಸೆಂಟ್ರಲ್ ವಕ್ಫ್ ಬೋರ್ಡ್ ಅಧ್ಯಕ್ಷರಾದ, ಸೈಯದ್ ವಸೀಮ್ ರಿಜ್ವಿ, ಭಾರತದ ಮೊದಲ ಶಿಯಾ ರಾಜಕೀಯ ಪಕ್ಷವನ್ನು ಪ್ರಾರಂಭಿಸಿದ್ದಾರೆ. ಈ ಪಕ್ಷಕ್ಕೆ ‘ಇಂಡಿಯನ್ ಶಿಯಾ ಆವಾಮಿ ಲೀಗ್’ ಎಂದು ಹೆಸರಿಸಲಾಗಿದೆ. ತಮ್ಮ ಪಕ್ಷದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಾ ಸೈಯದ್ ವಸೀಮ್ ರಿಜ್ವಿ ಅವರು “ಉಗ್ರಗಾಮಿ ಸುನ್ನಿ” ಗಳಿಂದ “ಇಸ್ಲಾಂ ಮತ್ತು ಸಮಾಜವನ್ನು ರಕ್ಷಿಸಬೇಕಾಗಿದೆ” ಎಂದು ಪ್ರತಿಪಾದಿಸಿದರು. ‘ದ ಪ್ರಿಂಟ್’ ಜೊತೆ ಮಾತನಾಡುತ್ತಾ ಭಾರತದಲ್ಲಿ 80% ಸುನ್ನಿ ಮುಸ್ಲಿಮರಿದ್ದಾರೆ ಮತ್ತು ಕೇವಲ 20% ಶಿಯಾಗಳಿದ್ದಾರೆ. ಭಾರತದಲ್ಲಿ ಶಿಯಾಗಳು ಅಲ್ಪಸಂಖ್ಯಾತರು ಆದರೆ ಸರಕಾರದ ಎಲ್ಲಾ “ಭಾಗ್ಯ”ಗಳು ಕೇವಲ ಸುನ್ನಿಗಳಿಗೆ ಲಭ್ಯವಾಗುತ್ತಿವೆ ಎನ್ನುವ ಸತ್ಯ ಬಿಚ್ಚಿಟ್ಟರು.

ದೇಶದಲ್ಲಿ ಹೆಚ್ಚುತ್ತಿರುವ ಉಗ್ರಗಾಮಿ ಹಿಂಸಾಚಾರಕ್ಕೆ ಸುನ್ನಿಗಳನ್ನು ಹೊಣೆಯಾಗಿಸುತ್ತಾ “ಸಾಂಪ್ರದಾಯಿಕವಾಗಿ, ಭಾರತದಲ್ಲಿ ಮತ ಬ್ಯಾಂಕ್ ರಾಜಕೀಯವು ಕೇವಲ ಸುನ್ನಿಗಳಿಗೆ ಮಾತ್ರ ಒದಗಿಸಿಕೊಂಡಿದೆ. ನಿಜವಾಗಿ ನಾವು ಅಲ್ಪಸಂಖ್ಯಾತರಾಗಿರುವುದರಿಂದ ನಮಗೆ ಇದರ ಯಾವ ಪ್ರಯೊಜನಗಳೂ ಲಭಿಸುವುದಿಲ್ಲ. ಆದರೆ ಸುನ್ನಿ ಉಗ್ರಗಾಮಿತ್ವದಿಂದ ದೇಶದಲ್ಲಿ ಗಲಭೆಗಳು ಉಂಟಾದಾಗ ಮುಸ್ಲಿಂ ಗುರುತಿನಿಂದಾಗಿ ನಾವೂ ಗುರಿಯಾಗಿಸಿಕೊಳ್ಳುತ್ತೇವೆ” ಎಂದರು. ವಾಸ್ತವವಾಗಿ ಶಿಯಾಗಳು ಗಲಭೆಗಳಲ್ಲಿ ನಿರತರಾಗಿರದಿದ್ದರೂ ಸುನ್ನಿಗಳಿಂದಾಗಿ ಅವರೂ ಕೂಡಾ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ ಎನ್ನುವುದನ್ನು ಅವರು ವಿವರಿಸಿದರು. ” ಶಿಯಾ-ಸುನ್ನಿ ಸಂಘರ್ಷ ಸರಿಪಡಿಸಲಾಗದ್ದು. ಅವರು (ಸುನ್ನಿಗಳು) ನಮ್ಮನ್ನು ಮುಸ್ಲಿಮರೆಂದು ಪರಿಗಣಿಸುವುದಿಲ್ಲ, ಅವರ ಕಾರಣದಿಂದಾಗಿ ನಮ್ಮ ಅಸ್ತಿತ್ವ ಅಪಾಯದಲ್ಲಿದೆ.” ಎಂದು ತಮ್ಮ ನೋವು ತೋಡಿಕೊಂಡರು.

ಶಿಯಾಗಳ ಈ ನಿರ್ಧಾರ ಓವೈಸಿಯ ದ್ವೇಷ ರಾಜಕಾರಣಕ್ಕೆ ಬಿದ್ದ ಬಾರೀ ಹೊಡೆತ:

ಹಿಂದೂಗಳ ಮೇಲೆ ದ್ವೇಷ ಕಾರುವ ಓವೈಸಿಯಂತಹ ಕಟ್ಟರ್ ಮುಸಲ್ಮಾನರಿಗೆ ಶಿಯಾಗಳ ಈ ನಿರ್ಧಾರದಿಂದ ಭಾರೀ ಹೊಡೆತ ಬೀಳಲಿದೆ. ಅಖಿಲ ಭಾರತ ಮಟ್ಟದಲ್ಲಿ ತನ್ನ ಛಾಪು ಸ್ಥಾಪಿಸಿ, ಮುಸ್ಲಿಮರನ್ನು ಒಗ್ಗೂಡಿಸಿ ಹಿಂದೂಗಳ ಮಾರಣ ಹೋಮ ಮಾಡಬೇಕೆಂದಿರುವ ಓವೈಸಿಯ ಕುತಂತ್ರಕ್ಕೆ ಇದರಿಂದ ಭಾರೀ ಪ್ರಮಾಣದ ನಷ್ಟವಾಗಲಿದೆ. ಓವೈಸಿಯ AIMIM ಗೆ ಸಡ್ಡು ಹೊಡೆದು ISAL ಪಕ್ಷ ಸ್ಥಾಪನೆಯಾಗುವುದರಿಂದ ಉದಾರವಾದಿ ಮುಸ್ಲಿಮರು ಓವೈಸಿ ಪರ ನಿಲ್ಲುವುದಿಲ್ಲ. ಇಷ್ಟು ದಿನ ಹಿಂದೂಗಳ ಮಧ್ಯೆ ತಂದಿಟ್ಟು ಚಂದ ನೋಡುತ್ತಿದ್ದ ಒಡೆದಾಳುವ ನೀತಿಯವರ ಬುಡಕ್ಕೆ ಬೆಂಕಿ ಬಿದ್ದಿದೆ!! ಕರ್ಮ ಕಾಲು ಕಟ್ಟುವುದು ಎಂದರೆ ಇದುವೆ. ಸನಾತನ ಧರ್ಮವನ್ನು ಒಡೆಯಲು ಬಂದವರು ತಾವೇ ಒಡೆದು ಚೂರಾಗುತ್ತಾರೆ ಎನ್ನುವುದಕ್ಕೆ ಮತ್ತೆ ಮತ್ತೆ ನಿದರ್ಶನಗಳು ಸಿಗುತ್ತಿವೆ.

ಜಾಗತಿಕವಾಗಿಯೂ ಇವತ್ತು ಶಿಯಾಗಳು ಉದಾರವಾದಿ ಇಸ್ಲಾಂ ಅನ್ನು ಪ್ರತಿಪಾದಿಸುತ್ತಿದ್ದಾರೆ. ಸೈಯದ್ ರಿಜ್ವಿ ಕೂಡಾ ಉದಾರವಾದವನ್ನು ಪ್ರತಿಪಾದಿಸುತ್ತಲೆ ಬಂದಿದ್ದಾರೆ. ಉತ್ತರ ಪ್ರದೇಶದ ಮನೆಯ ಮಹಡಿಗಳಲ್ಲಿ ಪಾಕಿಸ್ತಾನದ ಬಾವುಟವನ್ನು ಹೋಲುವಂತಹ ಚಿನ್ಹೆಗಳಿದ್ದ ಬಾವುಟಗಳನ್ನು ತೆರವುಗೊಳಿಸಲು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು ರಿಜ್ವಿ! ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ವಿರೋಧಿಸುವ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಬೇಕು ಎಂದು ಬಹಿರಂಗವಾಗಿ ಹೇಳಿದ್ದಾರೆ. ವಿವಾದಿತ ಸ್ಥಳದಲ್ಲಿ ಮಸೀದಿ ನಿರ್ಮಿಸಬೇಕೆಂದು ಬಯಸುವವರು ಐಸಿಸ್ ಮುಖ್ಯಸ್ಥ ಅಬು ಬಕ್ರ್ ಬಾಗ್ದಾದಿಗೆ ಜೊತೆ ಸೇರಿಕೊಳ್ಳಿ ಎಂದೂ ಝಾಡಿಸಿದ್ದಾರೆ ಮಾತ್ರವಲ್ಲ ದೇಶದಲ್ಲಿ ಭಯೋತ್ಪಾದಕರಿಗೆ ನೆಲೆಯಾಗುತ್ತಿರುವಂತಹ ಮದ್ರಸಾಗಳನ್ನು ಮುಚ್ಚಬೇಕೆಂದು ಪ್ರಧಾನ ಮಂತ್ರಿ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಪತ್ರ ಕೂಡಾ ಬರೆದಿದ್ದಾರೆ.

ಶಿಯಾ ಸಮುದಾಯದ ಪ್ರಭಾವಿ ನಾಯಕ, ಮೌಲಾನಾ ಸೈಯದ್ ಕಲ್ಬೆ ಜವಾದ್ ನಖ್ವಿ ಮೋದಿ-ಯೋಗಿಯನ್ನು ಕೊಂಡಾಡುತ್ತಾ ಇವರಿಬ್ಬರ ಆಳ್ವಿಕೆಯಲ್ಲಿ ಮುಸ್ಲಿಮರು ಅತ್ಯಂತ ಸುರಕ್ಷಿತರು ಎಂದು ಹೇಳಿದ್ದಾರೆ!! ಆಲ್ ಇಂಡಿಯಾ ಶಿಯಾ ಪರ್ಸನಲ್ ಲಾ ಬೋರ್ಡ್ ದೇಶದಲ್ಲಿ ಗೋಹತ್ಯೆ ಮತ್ತು ತ್ರಿವಳಿ ತಲಾಖ್ ಅನ್ನು ನಿಷೇಧಿಸಬೇಕು ಎಂದು ಪ್ರತಿಪಾದಿಸುತ್ತಲೆ ಬಂದಿದೆ. ಈಗ ಗೊತ್ತಾಯ್ತೆ ಮೋದಿ ಯಾಕೆ ಅರಬ್ ದೇಶಗಳಿಗೆ ಭೇಟಿ ನೀಡುತ್ತಾರೆ ಎಂದು? ಜಾಗತಿಕವಾಗಿ ಶಿಯಾ-ಸುನ್ನಿಗಳನಡುವೆ ಹೆಚ್ಚುತ್ತಿರುವ ಬಿರುಕು ಭಾರತದಲ್ಲಿಯೂ ಪರಿಣಾಮ ಬೀರಲಿದೆ. ಸುನ್ನಿಗಳಿಂದ ಶಿಯಾಗಳು ಹೆಚ್ಚು ಹೆಚ್ಚು ದೂರಾದಷ್ಟು ಮುಸ್ಲಿಮರ ಒಗ್ಗಟ್ಟು ನುಚ್ಚು ನೂರಾಗುತ್ತದೆ. ಮೋದಿ ಮುಸ್ಲಿಮರನ್ನು ಓಲೈಕೆ ಮಾಡುತ್ತಿದ್ದಾರೆ,ಹಿಂದೂಗಳನ್ನು ಕಡೆಗಣಿಸುತ್ತಿದ್ದಾರೆ ಎನ್ನುವುದು ಭ್ರಮೆ. ಮೋದಿ ಏನೇ ಮಾಡಿದರೂ ಅದರಲ್ಲಿ ದೇಶ ಹಿತ ಅಡಗಿರುತ್ತದೆ ಎನ್ನುವುದು ನಿಶ್ಚಿತ. ನೀರಿನಲ್ಲಿ ಮೀನಿನ ನಡೆ ಹೇಗೆ ಕಾಣುವುದು ಸಾಧ್ಯವಿಲ್ಲವೋ ಹಾಗೆಯೆ ಮೋದಿಯವರ ಮನಸ್ಸಿನಲ್ಲೇನಿದೆ ಎನ್ನುವುದು ಯಾರಿಗೂ ತಿಳಿಯುವುದಿಲ್ಲ.

-ಶಾರ್ವರಿ

Source
Opindia
Tags

Related Articles

Close