ಪ್ರಚಲಿತ

ಬಯಲಾಯ್ತು ಮತ್ತೊಬ್ಬ ಕಾಂಗ್ರೆಸ್ ಶಾಸಕನ ಸೀರೆ ರಹಸ್ಯ!! ಕಾಂಗ್ರೆಸ್ ಸೋಲಿಗೆ ಇಂತಹ ಪ್ರಚಾರಗಳೇ ಕಾರಣವಾಗುತ್ತಾ.?!

ಕಾಂಗ್ರೆಸ್ ನಿಂದ ಇಂತಹ ಅವಾಂತರಗಳನ್ನೇ ನಿರೀಕ್ಷಿಸಬಹುದೇ ವಿನಃ ಮತ್ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಊಹಿಸುವುದೂ ಅಸಾಧ್ಯ. ಯಾಕೆಂದರೆ ಕಾಂಗ್ರೆಸ್ ಈವರೆಗೂ ಮಾಡಿದ್ದು ಇದನ್ನೇ , ಇನ್ನು ಮುಂದೆ ಮಾಡುವುದು ಇದನ್ನೇ. ಯಾಕೆಂದರೆ ಇದೀಗ ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಅದ್ಯಾವ ಮಟ್ಟಕ್ಕೆ ಇಳಿದಿದೆ ಎಂದರೆ ಈ ಬಾರಿಯ ಚುನಾವಣೆಯಲ್ಲಿ ಹೇಗಾದರೂ ತಾವೇ ಮತ್ತೆ ಅಧಿಕಾರ ಹಿಡಿಯಬೇಕೆಂಬ ಹಠಕ್ಕೆ ಬಿದ್ದು, ಕೀಳುಮಟ್ಟದ ರಾಜಕಾರಣಕ್ಕೆ ಇಳಿದಿದ್ದಾರೆ. ಕರ್ನಾಟಕದಲ್ಲಿ ಸಿದ್ದರಾಮಯ್ಯನವರ ಆಡಳಿತಕ್ಕೆ ಬೇಸತ್ತ ರಾಜ್ಯದ ಜನತೆ ಈಗಾಗಲೇ ಹೊಸ ಪಕ್ಷದ ಆಡಳಿತಕ್ಕೆ ಕಾಯುತ್ತಿದ್ದಾರೆ. ಆಡಳಿತ ವಿರೋಧಿ ಅಲೆ ಎದ್ದು ಕಾಣುತ್ತಿರುವುದರಿಂದ ಮತದಾರರನ್ನು ತಮ್ಮತ್ತ ಸೆಳೆಯುವ ಪ್ರಯತ್ನಕ್ಕೆ ಕಾಂಗ್ರೆಸ್ ನಾಯಕರು ತಯಾರಿ ನಡೆಸಿದ್ದಾರೆ.!

ಮತದಾರರಿಗೆ ಕಾಂಗ್ರೆಸ್ ನಾಯಕನಿಂದ ಆಮಿಷ..!

ಚುನಾವಣೆ ಹತ್ತಿರ ಬರುತ್ತಿದ್ದಂತೆ ಮತದಾರರ ಬಳಿ ತೆರಳಿ ಕಾಂಗ್ರೆಸ್ ನತ್ತ ಸೆಳೆಯುವ ಪ್ರಯತ್ನಕ್ಕೆ‌ ನಾಯಕರು ತಯಾರಿ ನಡೆಸಿದ್ದು, ಹೊಸ ಹೊಸ ಉಪಾಯಗಳನ್ನು ಕಂಡುಕೊಂಡಿದ್ದಾರೆ. ಬೆಳಗಾವಿಯ ರಾಮದುರ್ಗದ ಕಾಂಗ್ರೆಸ್ ಶಾಸಕ ಅಶೋಕ್ ಪಟ್ಟಣ್ ತನ್ನ ಕ್ಷೇತ್ರದಲ್ಲಿ ಮತದಾರರಿಗೆ ಸೀರೆ , ಗಡಿಯಾರ ನೀಡುವ ಮೂಲಕ ಈ ಬಾರಿ ತನಗೇ ಮತ ನೀಡಬೇಕೆಂದು ಹೇಳಿದ್ದಾರೆ. ತನ್ನ ಕ್ಷೇತ್ರದ ಪ್ರತೀ ಮನೆಗೆ ತೆರಳಿ ಪ್ರಚಾರ ಮಾಡುತ್ತಿರುವ ಅಶೋಕ್ , ಊರಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆ ಜನರ ಬಳಿ‌ ತೆರಳಿ ಹೊಸ ಹೊಸ ಆಮಿಷ ಒಡ್ಡಿ ತಮ್ಮತ್ತ ಸೆಳೆಯುತ್ತಿದ್ದಾರೆ. ತನ್ನದೇ ಚಿತ್ರ ಇರುವ ಗಡಿಯಾರಗಳನ್ನು ಜನರಿಗೆ ಹಂಚುತ್ತಿರುವ ಶಾಸಕನ ಈ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಇದೇ ಮೊದಲೇನಲ್ಲಾ..!

ಕಾಂಗ್ರೆಸ್ ನಾಯಕರು ಜನರನ್ನು ಮೋಸಗೊಳಿಸುತ್ತಿರುವುದು ಇದೇ ಮೊದಲೇನಲ್ಲಾ. ಸರಕಾರದ ಹಣದಿಂದ ತಮ್ಮ ಖಜಾನೆಯನ್ನೇ ತುಂಬಿಸಿಕೊಂಡು ಕೇವಲ‌ ನಾಟಕೀಯ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ನಾಯಕರು ಕೇವಲ ವೋಟ್ ಗಾಗಿ ಭಾರೀ ತಯಾರಿ ನಡೆಸುತ್ತಿದ್ದಾರೆ. ಯಾಕೆಂದರೆ ಇತ್ತೀಚೆಗೆ ಮಂಗಳೂರಿನ ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಮೊಯಿದ್ದೀನ್ ಬಾವಾ ಕೂಡ ತನ್ನ ಕ್ಷೇತ್ರದಲ್ಲಿ ಮಹಿಳೆಯರಿಗೆ ಸೀರೆ ಹಂಚುವ ಮೂಲಕ ಮತದಾರರನ್ನು ಸೆಳೆಯುವ ತಂತ್ರ ಹೂಡಿದ್ದರು. ಹಿಂದೂ ವಿರೋಧಿ ಶಾಸಕರು ಚುನಾವಣೆ ಸಮೀಪಿಸುತ್ತಿದ್ದಂತೆ ತಾನು ಹಿಂದೂ ಧರ್ಮವನ್ನು ಗೌರವಿಸುತ್ತೇನೆ ಎಂದು ಹೇಳಿ‌ ಹಿಂದೂಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕೇಸರಿ ಶಾಲು ಹಾಕಿಕೊಂಡು ಕಾಣಸಿಗುತ್ತಿದ್ದಾರೆ.

ಗಡಿಯಾರದಲ್ಲಿ ಸಿದ್ದರಾಮಯ್ಯ..!

ಸಿದ್ದರಾಮಯ್ಯನವರ ಆಡಳಿತಕ್ಕೆ ಬೇಸತ್ತ ಜನರಿಗೆ ಇದೀಗ ತೇಪೆ ಹಚ್ಚುವ ಮೂಲಕ ಮೋಸಗೊಳಿಸಲು ತಂತ್ರ ರೂಪಿಸಿರುವ ಕಾಂಗ್ರೆಸ್ ನಾಯಕರು, ಕೇಂದ್ರ ಸರಕಾರದ ಯೋಜನೆಗಳನ್ನು ರಾಜ್ಯ ಸರಕಾರದ ಯೋಜನೆ ಎಂಬಂತೆ ಬಿಂಬಿಸಿ ಪ್ರಚಾರ ಮಾಡುತ್ತಿದ್ದಾರೆ. ಅದಕ್ಕಾಗಿಯೇ ಪ್ರಚಾರ ಮಾಡುವ ವಿಧಾನಗಳಲ್ಲಿ ಸಿದ್ದರಾಮಯ್ಯನವರನ್ನು ಹೆಚ್ಚು ಆಕರ್ಷಣೆ ಮಾಡಿ ಜನರ ಬಳಿಗೆ ತೆರಳುವ ಕಾಂಗ್ರೆಸ್, ತಾವು ಜನರಿಗೆ ನೀಡುವ ಸೀರೆ , ಗಡಿಯಾರಗಳಲ್ಲೂ ಸಿದ್ದರಾಮಯ್ಯನವರ ಚಿತ್ರ ಹಾಕಿ ಜನರನ್ನು ಚುನಾವಣಾ ಆಮಿಷ ಒಡ್ಡಿ ಮೋಸಗೊಳಿಸುತ್ತಿದ್ದಾರೆ.!

ಏನೇ ಆದರೂ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸೋಲು ಖಚಿತ ಎಂದು ಸ್ವತಃ ಕಾಂಗ್ರೆಸ್ ನಾಯಕರೇ ಒಪ್ಪಿಕೊಂಡು , ಈ ರೀತಿಯ ಪ್ರಚಾರ ಕಾರ್ಯ ಆರಂಭಿಸಿದ್ದಾರೆ ಎಂಬ ಮಾತು ರಾಜ್ಯದ ಜನರ ಬಾಯಲ್ಲಿ ಕೇಳಿಬರುತ್ತಿದೆ. ಹೇಳಿಕೊಂಡು ತಿರುಗುವಂತಹ ಯಾವುದೇ ಅಭಿವೃದ್ಧಿ ಕಾರ್ಯಗಳು ಕಾಂಗ್ರೆಸ್ ಸರಕಾರದಿಂದ ನಡೆದಿಲ್ಲ. ಆದ್ದರಿಂದ ಈ ರೀತಿಯಾಗಿ ಜನರಿಗೆ ಆಮಿಷ ಒಡ್ಡಿ ತಮ್ಮತ್ತ ಸೆಳೆಯುವ ತಂತ್ರ ರೂಪಿಸಿದ್ದಾರೆ.!

source : suvarna news

–ಅರ್ಜುನ್

 

Tags

Related Articles

Close