ಪ್ರಚಲಿತ

ಭಾರತದಲ್ಲಿ “ದೇವ ಮಾನವ” ಚರ್ಚು ಪಾದ್ರಿಗಳು ಸ್ಪರ್ಶ ಮಾತ್ರದಿಂದಲೆ ಎಲ್ಲರ ಖಾಯಿಲೆ ಗುಣಪಡಿಸುತ್ತಿದ್ದರೂ ಮೇಡಮ್ ಜಿ ಸುಶ್ರೂಷೆಗೆ ಅಮೇರಿಕಾಕ್ಕೆ ಏಕೆ ಹೋಗುತ್ತಾರೆ?

ಇದು ಭಾರತೀಯರನ್ನು ಕಾಡುವ ಕಟ್ಟಕಡೆಯ ಪ್ರಶ್ನೆ. ಅಷ್ಟಕ್ಕೂ ಮೇಡಮ್ ಜಿ ಗೆ ಇರುವ ರೋಗವಾದರೂ ಏನು? ಭಾರತದಲ್ಲಿ ಚರ್ಚು ಪಾದ್ರಿಗಳು, ತಥಾಕಥಿತ ದೇವ ಮಾನವರುಗಳು ತಮ್ಮ ಸ್ಪರ್ಶ ಮಾತ್ರದಿಂದಲೆ ಸರ್ವ ರೋಗಗಳನ್ನೂ ಗುಣ ಪಡಿಸುತ್ತೇವೆ ಎಂದು ಬೊಂಬಡಾ ಬಜಾಯಿಸುತ್ತಾರೆ. ಹಿಂದೂಗಳಿಗೆ ಮಂಕು ಬೂದಿ ಎರಚಲು ತರತರದ ನಾಟಕವಾಡುತ್ತಾರೆ. ಮುಗ್ದ ಹಿಂದೂಗಳು ಇವರ ಮೋಸದಾಟಕ್ಕೆ ಬಲಿಯಾಗಿ ಮತಾಂತರವೂ ಹೊಂದುತ್ತಾರೆ. ತಮ್ಮ ಸ್ಪರ್ಶ ಮಾತ್ರದಿಂದಲೆ ಕ್ಯಾನ್ಸರ್ ಅಂತಹ ಮಾರಕ ರೋಗವನ್ನೆ ಗುಣಪಡಿಸುವ “ದೇವ ಪುರುಷರು” ಭಾರತದಲ್ಲೆ ಇದ್ದರೂ ಮೇಡಮ್ ಜಿ ಮಾತ್ರ ಕೋಟ್ಯಂತರ ರುಪಾಯಿ ಖರ್ಚು ಮಾಡಿ ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಾರೆ!! ಏಕೆ? ಏಕೆ?

ಮೇಡಮ್ ಜಿ ಗೆ ತಮ್ಮ ಮತದ “ಪವಾಡ ಪುರುಷರ ದೈವಿಕ ಶಕ್ತಿಯ” ಮೇಲೆ ನಂಬಿಕೆ ಇಲ್ಲವೆ? ಅಥವಾ ಈ ಪವಾಡ ಪುರುಷರಿಗೆ ಕೇವಲ “ಬಡ ಹಿಂದೂಗಳ” ರೋಗ ರುಜಿನಗಳನ್ನು ಗುಣ ಪಡಿಸುವ ತಾಕತ್ತಿರುವುದೆ? ಹಿಂದೂಗಳ ಮೇಲೆ ಪ್ರಯೋಗಿಸುವ ಪವಾಡಗಳು ಮೇಡಮ್ ಜಿ ಮೇಲೆ ನಡೆಯುವುದಿಲ್ಲವೆ? ಭಾರತದ ಪವಾಡ ಪುರುಷರ ಮೇಲೆ ನಂಬಿಕೆ ಇಲ್ಲದಿದ್ದರೆ ಹೋಗಲಿ ಬಿಡಿ, ಸ್ವತಃ ಇವರ ಅಮೇರಿಕಾದಲ್ಲಿ ಬೆನ್ನಿಹಿನ್ ನಂತಹ ಪವಾಡ ಪುರುಷರಿಲ್ಲವೆ? ಭಾರತೀಯರ ರೋಗ ಗುಣಪಡಿಸುವ ಬೆನ್ನಿಹಿನ್ ಗೆ ಮೇಡಮ್ ಜಿಯ ರೋಗವನ್ನು ಗುಣ ಪಡಿಸುವ ಸಾಮರ್ಥ್ಯವಿಲ್ಲವೆ? ಹಾಗಾದರೆ ದೇಶಾದ್ಯಂತ ಜನರ ವಿರೋಧವಿದ್ದರೂ ಬೆನ್ನಿಹಿನ್ ಎಂಬ ಕಪಟಿಯನ್ನು ಭಾರತಕ್ಕೆ ಕರೆಸಿಕೊಂಡಿದ್ದು ಯಾಕೆ? ನೇಶನ್ ವಾಂಟ್ಸ್ ಟು ನೋ….

120 ಸೆಕೆಂಡುಗಳಲ್ಲಿ ಹಾಳಾದ ಎರಡೂ ಕಿಡ್ನಿಗಳು ಸರಿಯಾಗುವ ಪರಿ ನೋಡಿ!! ಅಲಲೂಯಾ ರಾ ರಾ ರಾ

ಭಾರತದಲ್ಲಿ ಜನರ ನೆನಪಿನ ಶಕ್ತಿ ತುಂಬಾ ಕಡಿಮೆ. 2005 ರ ಯೂಪಿಎ ಆಡಳಿತದ ಅವಧಿಯಲ್ಲಿ ಜನರ ವಿರೋಧವನ್ನೂ ಲೆಕ್ಕಿಸದೆ ಧರ್ಮಸಿಂಗ್ ಸರಕಾರ ಬೆನ್ನಿಹಿನ್ ಗೆ ಕರ್ನಾಟಕಕ್ಕೆ ಬರಲು ಅನುವು ಮಾಡಿಕೊಟ್ಟಿತ್ತು. ಆತ ಭಾರತಕ್ಕೆ ಬಂದಿದ್ದು ಪ್ರವಾಸಿ ವೀಸಾದ ಮೇಲೆ ಆತ ಇಲ್ಲಿ ಉಪದೇಶ-ಭಾಷಣ ಮಾಡುವಂತಿರಲಿಲ್ಲ. ಆದರೆ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ ಆತನಿಗೆ ಇಲ್ಲಿ ಉಪದೇಶ ನೀಡಲು ಅನುವು ಮಾಡಲಾಗಿತ್ತು. ನಿಮ್ಮ ನೆನಪಿನ ಶಕ್ತಿ ಸರಿಯಿದ್ದರೆ ಆ ಸಮಯದಲ್ಲಿ ಭಾರತದಲ್ಲಿ ಹಿಂದೂ ಸಂಘಟನೆಗಳು ಬೆನ್ನಿಹಿನ್ ಭೇಟಿಯ ವಿರುದ್ದ ಹೇಗೆ ಪ್ರತಿಭಟನೆ ನಡೆಸಿದ್ದವು ಎಂದು ಒಮ್ಮೆ ನೆನಪು ಮಾಡಿಕೊಳ್ಳಿ.

ವಿದೇಶಗಳಲ್ಲೆ ಕಪಟಿ ಎಂದು ಘೋಷಿಸಲಾದ ಬೆನ್ನಿಹಿನ್ 2005ರ ಜನವರಿ ತಿಂಗಳಲ್ಲಿ ಬೆಂಗಳೂರಿನ ಜಕ್ಕೂರು ವಾಯುನೆಲೆ ಮೈದಾನದಲ್ಲಿ ‘ಇಂಡಿಯಾಕ್ಕಾಗಿ ಪ್ರಾರ್ಥಿಸಿ’ ಎನ್ನುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ. ಆಗಲೆ ಆತನ ಬಳಿ ತನ್ನ ರೋಗವನ್ನು ಗುಣಪಡಿಸಿಕೊಳ್ಳಬಹುದಿತ್ತಲ್ಲ ಮೇಡಮ್ ಜಿ? ಭಾರತಕ್ಕಾಗಿ ಪ್ರಾರ್ಥಿಸುವವನಲ್ಲಿ ಮೇಡಮ್ ಜಿ ಗಾಗಿ ಪ್ರಾರ್ಥಿಸಲು ತಾಕತ್ತಿಲ್ಲವೆ? ಆತನ ಪ್ರಾರ್ಥನೆಯಿಂದ ಆಕೆಯ ರೋಗ ಗುಣ ಆಗುವುದಿಲ್ಲವೆ? ಹಾಗಾದರೆ ಕೆಂಪು ಚಾದರ ಹಾಸಿ ಅವನನ್ನು ಭಾರತಕ್ಕೆ ಕರೆಸಿಕೊಂಡು ಇಲ್ಲಿಯವರಿಗಾಗಿ ಪ್ರಾರ್ಥಿಸುವಂತೆ ಕೇಳಿಕೊಂಡಿದ್ದು ಯಾಕೆ? ಪ್ರಾರ್ಥನೆಯಿಂದಲೆ ರೋಗಗಳು ಗುಣವಾಗುತ್ತಿದ್ದರೆ ವಿಶ್ವದ ವೈದ್ಯರುಗಳೆಲ್ಲ ರಸ್ತೆ ಬದಿ ಕಳ್ಳೆ ಕಾಯಿ ಮಾರುತ್ತ ಕೂರುತ್ತಿದ್ದರು!

ವೆಟಿಕನ್ ಏಜೆಂಟ್ ಸೋನಿಯಾ ಭಾರತವನ್ನು ಕೈಸ್ತೀಕರಣ ಮಾಡುವ ಉದ್ದೇಶದಿಂದ ಆತನನ್ನು ಕರೆಸಿಕೊಂಡದ್ದು ಎನ್ನುವುದು ಗುಟ್ಟಾಗಿ ಉಳಿದಿಲ್ಲ. 2014 ರಲ್ಲಿ ಕರ್ನಾಟಕದಲ್ಲಿ ಸದಾ ಸಿದ್ದ ಸರಕಾರದ ಆಡಳಿತದಲ್ಲಿ ಮತ್ತೊಮ್ಮೆ ಬೆನ್ನಿಹಿನ್ ನನ್ನು ಕರೆಸುವ ತಯಾರಿ ನಡೆಸಿದ್ದೂ ನಿಮಗೆ ನೆನಪಿರಬಹುದು. ಆತ ಅಷ್ಟು ಪವಾಡ ಪುರುಷನಾಗಿದ್ದರೆ ಮೇಡಮ್ ಜಿ ಆತನ ಬಳಿಯೆ ಚಿಕಿತ್ಸೆ ಪಡೆಯಬಹುದಲ್ಲ? ಯಾವ ಮತದವರೆ ಆಗಿರಲಿ ಜನರನ್ನು ಯಾಮಾರಿಸಿ ಮಂಕುಬೂದಿ ಎರಚಿ ಅವರನ್ನು ಮೋಸ ಮಾಡುವುದು ತರವಲ್ಲ. ಇದನ್ನು ಹಿಂದೂಗಳು ಮಾಡಿದರೂ ತಪ್ಪೆ, ಇಲ್ಲ ಕ್ರೈಸ್ತರು-ಮುಸಲ್ಮಾನರು ಮಾಡಿದರೂ ತಪ್ಪೆ.

ಜನರ ರೋಗ ಗುಣಪಡಿಸುತ್ತೇವೆಂದು ಹೇಳಿ ಸುಳ್ಳು ಹೇಳಿ, ಅಲಲೂಯಾ….ರಾ….ರಾ… ಎನ್ನುತ್ತಾ, ಮಂಗ ಕೋಲ ಕಟ್ಟಿ ಅವರನ್ನು ಮತಾಂತರಕ್ಕೆ ಪ್ರೇರೇಪಿಸುವುದು ಬಹು ದೊಡ್ಡ ಅಪರಾಧ. ಸ್ವತಃ ಏಸು ಕೂಡಾ ಇಂತಹ ಅಪರಾಧವನ್ನು ಮೆಚ್ಚಲಾರ. ಅಹಿಂಸಾ ಪ್ರತಿಪಾದಕ ಏಸುವಿನ ಹೆಸರಿನಲ್ಲಿ ಇಂತಹ ಕೆಟ್ಟ ಕೆಲಸ ಮಾಡಿ ಏಸುವಿನ ಮಾನ ಕಳೆವ ಕಪಟಿಗಳ ಮೇಲೆ ಕಠಿಣ ಕ್ರಮ ಜರುಗಿಸಿ ಜೈಲಿಗೆ ತಳ್ಳಬೇಕು. ಇಲ್ಲವಾದರೆ, ಮೇಡಮ್ ಜಿ ಗೆ ಅಮರಿಕೊಂಡಿರುವ ರೋಗವನ್ನು ಗುಣ ಪಡಿಸಿ ದೇಶದ ಕೋಟ್ಯಂತರ ರುಪಾಯಿ ಉಳಿಸಬೇಕು.

-ಶಾರ್ವರಿ

Tags

Related Articles

Close