ಭಾರತದ ಶತ್ರು ರಾಷ್ಟ್ರಕ್ಕೆ ಅದೆಷ್ಟು ಬಾರಿ ನಮ್ಮ ಸಾಮಥ್ರ್ಯವನ್ನು ತೋರಿಸಿದರೂ ಒಳಗಿಂದೊಳಗೆ ಒಂದೊಂದೊಂದೇ ಕುತಂತ್ರವನ್ನು ಮಾಡುತ್ತಲೇ ಬಂದಿದೆ!! ಅದಕ್ಕೆ ಪ್ರತೀಕಾರ ತೀರಿಸಲು ನಮ್ಮ ಮೋದಿ ಸರಕಾರ ಸೈನಿಕರಿಗೆ ಬೇಕಾದ ಎಲ್ಲಾ ಸವಲತ್ತುಗಳನ್ನೂ ನೀಡುತ್ತಲೇ ಬಂದಿದೆ!!
ಪ್ರಧಾನಿ ನರೇಂದ್ರ ಮೋದಿಯವರು ಯಾವಾಗ ಅಧಿಕಾರದ ಚುಕ್ಕಾಣಿಯನ್ನು ಹಿಡಿದರೋ ಅಂದಿನಿಂದ ಯಾವಾಗಲೂ ದೇಶದ ಗಡಿ ಕಾಯುವ ಯೋಧರ ಬಗ್ಗೆ ನೆನಪಿಸುತ್ತಾ ಅವರ ಅಭಿವೃದ್ಧಿ ಕಾರ್ಯಗಳ ಬಗ್ಗೆಯೇ ಯಾವಾಗಲೂ ಶ್ರಮಿಸುತ್ತಿರುತ್ತಾರೆ!! ಒಂದಲ್ಲ ಒಂದು ವಿಷಯಗಳಲ್ಲಿ ಸೈನಿಕರ ಬಗ್ಗೆ ಕಾಳಜಿ ವಹಿಸಿ ಅವರಿಗೆ ಅವಶ್ಯ ವಸ್ತುಗಳನ್ನು ಪೂರೈಸುವಲ್ಲಿ ಶ್ರಮಿಸುತ್ತಿರುತ್ತಾರೆ!!
ಪದೇ ಪದೇ ಭಾರತೀಯ ಸೇನೆ ತನ್ನ ನೆರೆ ರಾಷ್ಟ್ರದ ಉಪಟಳದಿಂದ ಅದೆಷ್ಟೋ ಬಾರಿ ಶತ್ರುರಾಷ್ಟ್ರವನ್ನು ಹೀನಾಯವಾಗಿ ಸೋಲಿಸಿದರೂ ಕೂಡ ತಮ್ಮ ನರಿ ಬುದ್ದಿಯನ್ನು ಬಿಡುವಲ್ಲಿ ಮಾತ್ರ ತಯಾರಾಗಿಲ್ಲ ಎನ್ನುವುದು ವಿಪರ್ಯಾಸ!! ಆದರೆ ಈಗಾಗಲೇ ವಿಶ್ವದಲ್ಲೇ ಎರಡನೇ ಅತಿದೊಡ್ಡ ಸೇನಾಪಡೆಯನ್ನು ಹೊಂದಿರುವ ಭಾರತ ಇನ್ನಷ್ಟು ಬಲಿಷ್ಠ ರಾಷ್ಟ್ರವಾಗಲು ಸಿದ್ಧತೆಗಳನ್ನು ನಡೆಸುತ್ತಿದೆ!!
ಪ್ರಧಾನಿ ನರೇಂದ್ರ ಮೋದಿ ಸರಕಾರ ತನ್ನ ಅಧಿಕಾರದ ಗದ್ದುಗೆಯನ್ನು ಹಿಡಿದ ನಂತರದಿಂದ ಭಾರತೀಯ ಸೇನೆ ನಾನಾ ರೀತಿಯಲ್ಲಿ ಮುಂದುವರೆದಿದೆ!! ಈಗಾಗಲೇ ಮೋದಿ ಸರಕಾರ ಭಾರತೀಯ ಸೈನಿಕರಿಗೆ ಬುಲೆಟ್ ಫ್ರೂಫ್ ಜಾಕೆಟ್, ಬುಲೆಟ್ ಫ್ರೂಫ್ ಹೆಲ್ಮೆಟ್, ಸಿಆರ್ಫಿಎಫ್ ಸೈನ್ಯಕ್ಕೆ 100 ನೂತನ ಬುಲೆಟ್ ಫ್ರೂಫ್ ವಾಹನಗಳನ್ನು ನೀಡಲು ನಿರ್ಧರಿಸಿದ ವಿಷಯ ಎಲ್ಲರಿಗೂ ತಿಳಿದ ವಿಷಯ.!!! ಇದೀಗ ಮತ್ತೆ ಸೈನ್ಯಕ್ಕೆ ಕೇಂದ್ರ ಸರಕಾರ ಹೊಸ ಸೌಲಭ್ಯವನ್ನು ಒದಗಿಸಲು ತಯಾರಾಗಿ ನಿಂತಿವೆ!! ಶತ್ರುಗಳನ್ನು ಎದುರಿಸಲು ಭಾರತೀಯ ಸೇನೆ ಸಮರ್ಥವಾಗಿದ್ದಲ್ಲದೇ, ಶತ್ರುರಾಷ್ಟ್ರವನ್ನು ಯುದ್ದಕ್ಕಾಗಿ ಆಹ್ವಾನ ನೀಡುವಷ್ಟರ ಮಟ್ಟಿಗೆ ಇದೀಗ ಭಾರತೀಯ ಸೇನೆ ಬೆಳೆದಿದೆ ಎಂದರೆ ಅದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ ಸರಕಾರ!!
ಸೈನ್ಯದ ಕೈ ಸೇರಲಿವೆ 5,366 ಕೋಟಿ ಮೌಲ್ಯದ ಆಯುಧಗಳು!!
ಚೀನಾ, ಪಾಕಿಸ್ತಾನ, ಬಾಂಗ್ಲಾ ಹೀಗೆ ಸುತ್ತಲು ಶತ್ರು ರಾಷ್ಟ್ರಗಳ ನಿರಂತರ ಕಿರಿಕಿರಿ, ದಾಳಿಯ ಭೀತಿಯಲ್ಲೇ ದಿನ ದೂಡುತ್ತಿರುವುದು ಭಾರತ, ಶಕ್ತಿಯುತ ಸೈನ್ಯವನ್ನು ಹೊಂದಿದ್ದರು ಸಹ ಶತ್ರುಗಳು ನಿರಂತರವಾಗಿ ಭಾರತದ ಮೇಲೆ ದಾಳಿ ನಡೆಸುತ್ತಿದ್ದಾರೆ. ಈ ದಾಳಿಗೆ ಪ್ರತ್ಯುತ್ತರ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ತೀರ್ಮಾನಿಸಿದ್ದು, ಶೀಘ್ರದಲ್ಲಿ ಸೈನ್ಯಕ್ಕೆ 5,366 ಕೋಟಿ ರೂಪಾಯಿ ಮೌಲ್ಯದ ಆಯುದ್ಧಗಳನ್ನು ನೀಡಲು ನಿರ್ಧರಿಸಿದೆ.
ವಿಶೇಷವಾಗಿ ಪಾಕಿಸ್ತಾನ ಮತ್ತು ಚೀನಾ ಗಡಿಯಲ್ಲಿ ತ್ವರಿತ ಗತಿಯಲ್ಲಿ ಪ್ರತಿಕ್ರಿಯೆ ನೀಡಲು ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ರೈಫಲ್ಸ್, ಲೈಟ್ ಮಷಿನ್ ಗನ್, ಬ್ಯಾಟಲ್ ಕಾರ್ಬಿನ್ಸ್ ಸೇರಿ ನಾನಾ ವಿಧದ ಆಯುಧಗಳನ್ನು ಸೈನ್ಯಕ್ಕೆ ನೀಡುವ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಶೀಘ್ರದಲ್ಲಿ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಅಸ್ತು ಎನ್ನಲ್ಲಿದೆ ಎಂದು ಸೈನ್ಯದ ಮೂಲಗಳು ತಿಳಿಸಿವೆ.
ರಕ್ಷಣಾ ಇಲಾಖೆ 72,400 ಅಸಾಲ್ಟ್ ರೈಫಲ್ಸ್, 93,895 ಸಿಕ್ಯೂಬಿ ಕಾರ್ಬಿನ್ಸ್ ಮತ್ತು 16,479 ಲೈಟ್ ಮಷಿನ್ ಗನ್ಸ್ ಒದಗಿಸಲು ಪ್ರಸ್ತಾವನೆ ಸಲ್ಲಿಸಿದ್ದು, ಇವುಗಳ ಒಟ್ಟು ಮೊತ್ತ 5,366 ಕೋಟಿ ರೂಪಾಯಿ ಆಗಲಿದೆ. ರಕ್ಷಣಾ ಇಲಾಖೆ ಸಚಿವೆ ನಿರ್ಮಲಾ ಸೀತಾರಾಮನ್ ಅವರ ವಿಶೇಷ ಆಸಕ್ತಿ ಈ ನಿಟ್ಟಿನಲ್ಲಿ ಕೈಗೊಂಡಿದ್ದು, ಎಲ್ಲ ಆಯುದ್ಧಗಳು ಶೀಘ್ರದಲ್ಲಿ ಸೈನ್ಯದ ಕೈಸೇರಲಿವೆ.
ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಮ್ಮು ಕಾಶ್ಮೀರ ಸೇರಿ ದೇಶಾದ್ಯಂತ ಉಗ್ರ ಕೃತ್ಯಗಳನ್ನು ಸದೆ ಬಡೆಯಲು ಹಲವು ಮಹತ್ತರ ನಿರ್ಧಾರಗಳನ್ನು ಕೈಗೊಳ್ಳುತ್ತಾ ಬಂದಿದೆ. ಅಲ್ಲದೇ ಸೈನಿಕರಿಗೆ ಬೇಕಾದ ಪೂರಕ ಸೌಲಭ್ಯಗಳನ್ನು ಅತಿ ಹೆಚ್ಚಿನ ಕಾಳಜಿ ವಹಿಸಿ, ಪೂರೈಸುತ್ತಿದೆ. ಅದಲ್ಲದೆ ಕೇಂದ್ರ ಸರ್ಕಾರ ಮಹತ್ತರ ನಿರ್ಧಾರ ಕೈಗೊಂಡಿದ್ದು ಸಿಆರ್ ಫಿಎಫ್ ಸೈನ್ಯಕ್ಕೆ 100 ನೂತನ ಬುಲೆಟ್ ಫ್ರೂಫ್ ವಾಹನಗಳನ್ನು ನೀಡಲು ನಿರ್ಧರಿಸಿದೆ. ಕೇಂದ್ರ ಸರ್ಕಾರ ಭಯೋತ್ಪಾದಕರು ಸೈನಿಕರ ಮೇಲೆ ದಾಳಿ ನಡೆಸಿದಾಗ ಸೈನಿಕರ ರಕ್ಷಣೆಗಾಗಿ ಈ ನಿರ್ಧಾರ ಕೈಗೊಂಡಿದ್ದು, ವಿಶೇಷವಾಗಿ ಕಾಶ್ಮೀರದಲ್ಲಿ ಉಗ್ರರ ಉಪಟಳದಿಂದ ಸೈನಿಕರಿಗೆ ರಕ್ಷಣೆ ನೀಡಲಿದೆ. ಕೇಂದ್ರ ಸರ್ಕಾರ 141 ಬುಲೆಟ್ ಫ್ರೂಫ್ ವಾಹನಗಳನ್ನು ನೀಡುವ ಪ್ರಸ್ತಾವನೆ ನೀಡಿದ್ದು, ಇನ್ನು ಎರಡು ತಿಂಗಳಲ್ಲಿ ಮೊದಲ ಹಂತದಲ್ಲಿ 20 ವಾಹನಗಳು ಸೈನ್ಯದ ಕೈಸೇರಲಿವೆ.
ಛತ್ತಿಸ್ಗಢ್ ಭಾರತ-ಟಿಬೆಟ್ ಗಡಿಯಲ್ಲಿ 20, ಜಮ್ಮು ಕಾಶ್ಮೀರದ ಸಶಸ್ತ್ರ ಸೀಮಾ ದಳಕ್ಕೆ 15 ಆರಂಭಿಕ ಹಂತದಲ್ಲಿ ವಿತರಿಸಲು ನಿರ್ಧರಿಸಲಾಗಿದೆ. ನೂತನ ಬುಲೆಟ್ ಫ್ರೂಫ್ ವಾಹನಗಳು ಎಕೆ ಸಿರೀಸ್ ಸಂಖ್ಯೆಯ ಗನ್ ಗಳ ಬುಲೆಟ್ ಗಳಿಂದ ರಕ್ಷಣೆ ನೀಡುತ್ತವೆ. ವಿಶೇಷವಾಗಿ ಭಯೋತ್ಪಾದಕ ಸಂಘಟನೆಗಳಾದ ಹಿಜ್ಬುಲ್ ಮುಜಾಹಿದ್ದೀನ್, ಲಷ್ಕರ್ ಈ ತಯ್ಯಬಾ, ಜೈಷ್ ಎ ಮಹಮ್ಮದ್ ಸಂಘಟನೆಗಳು ಬಳಸುವ ಗನ್ ಗಳನ್ನು ಗಮನದಲ್ಲಿಟ್ಟುಕೊಂಡು ಈ ವಾಹನಗಳನ್ನು ಖರೀದಿಸಲಾಗಿದೆ. ಪ್ರತಿ ವಾಹನ 10 ರಿಂದ 12 ಯೋಧರನ್ನು ಸಾಗಿಸುವ ಸಾಮಥ್ರ್ಯವನ್ನು ಹೊಂದಿವೆ.!! ಸೈನಿಕರಿಗೆ ಬೇಕಾಗುವ ಸಕಲ ಸೌಲಭ್ಯಗಳನ್ನೂ ಮೋದಿ ಸರಕಾರ ನೀಡುತ್ತಾ ಬರುತ್ತಿದೆ!!
ಈಗಾಗಲೇ ಶತ್ರುರಾಷ್ಟ್ರಗಳನ್ನು ಎದುರಿಸಲು ಭಾರತೀಯ ಸೇನೆ ಹಳೆಯ ಶಸ್ತ್ರಾಸ್ತ್ರಗಳಿಗೆ ವಿದಾಯ ಹೇಳಲು ಬಯಸಿದ್ದಲ್ಲದೇ, ಅದಕ್ಕಾಗಿ 40 ಸಾವಿರ ಕೋಟಿ ರೂಪಾಯಿ ಮೊತ್ತದ ಶಸ್ತ್ರಾಸ್ತ್ರ ಖರೀದಿ ಪ್ರಸ್ತಾವನೆಗೆ ಕೇಂದ್ರ ಸರಕಾರ ಒಪ್ಪಿಗೆ ನೀಡಿದೆ!! ಅಲ್ಲದೇ, ಅತ್ಯಾಧುನಿಕ ಮಾದರಿಯ ಹಗುರ ಮಷಿನ್ ಗನ್ ಗಳು, ಕಾರ್ಬೆನ್ ಗಳು, ರೈಫಲ್ ಮತ್ತು ಮದ್ದುಗುಂಡುಗಳನ್ನು ಸೇನೆ ಖರೀದಿಸಲಿದೆ. ಪ್ರಸ್ತಾವನೆಯ ಪ್ರಕಾರ, ಸೇನೆ 7 ಲಕ್ಷ ರೈಫಲ್, 44,000 ಹಗುರ ಮಷಿನ್ ಗನ್ ಮತ್ತು 44,600 ಕಾರ್ಬೆನ್ಗಳನ್ನು ಖರೀದಿಸಲಿದೆ. ಈ ಬಗ್ಗೆ ಖರೀದಿ ಪ್ರಕ್ರಿಯೆ ಆರಂಭವಾಗಿದೆ ಎಂದು ರಕ್ಷಣಾ ಸಚಿವಾಲಯ ಈಗಾಗಲೇ ಹೇಳಿಕೆಯನ್ನು ಸಹ ನೀಡಿದೆ!!
ಈ ಹಿಂದೆ ಪಾಕಿಸ್ತಾನದ ಪ್ರಧಾನಿ ಶಾಹಿದ್ ಖಾಕನ್ ಅಬ್ಬಾಸಿಯ ಬೆದರಿಕೆಗೆ ತಕ್ಕ ರೀತಿಯಲ್ಲಿ ಪ್ರತಿಕ್ರಿಯಿಸಿರುವ ಮೋದಿ ಸರಕಾರ ಸೇನೆಗೆ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಲ್ಲ ಅತ್ಯಾಧುನಿಕ ಪಿನಾಕಾ ರಾಕೆಟ್ ಗಳನ್ನು ನಿಯೋಜಿಸುವ ಮೂಲಕ ತಕ್ಕ ಪ್ರತ್ಯುತ್ತರ ನೀಡಿದ್ದರು!! ಅಬ್ಬಾಸಿ ಭಾರತೀಯ ಸೇನೆಯನ್ನು ಎದುರಿಸಲು ಸಣ್ಣ ವ್ಯಾಪ್ತಿಯ ಪರಮಾಣು ಶಸ್ತ್ರಾಸ್ತ್ರಗಳನ್ನು ನಿಯೋಜಿಸುವುದಾಗಿ ಎಚ್ಚರಿಸಿದ್ದರು, ಮೋದಿ ಸರಕಾರ ಅತ್ಯಾಧುನಿಕ ಪಿನಾಕಾ ರಾಕೆಟ್ ಗಳನ್ನು ನಿಯೋಜಿಸುವ ಮೂಲಕ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದರು!!.
ಭಾರತವನ್ನು ಎದುರಿಸಲು ಚೀನಾದ ಸಹಾಯದಿಂದ ಯುದ್ಧತಂತ್ರದ ನ್ಯೂಕ್ ಗಳನ್ನು ಪಾಕಿಸ್ತಾನ ಅಭಿವೃದ್ಧಿ ಪಡಿಸುತ್ತಿದೆ ಎಂದು ಸರಕಾರದ ಮೂಲಗಳು ತಿಳಿಸಿತ್ತು!! ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿ.ಆರ್.ಡಿ.ಓ) ಭಾರತದಲ್ಲಿ ನಿರ್ಮಾಣ ಮಾಡಿದ ಪಿನಾಕಾ ಬಹು-ಬ್ಯಾರೆಲ್ ರಾಕೆಟ್ ಲಾಂಚರ್ ಅನ್ನು ಭಾರತೀಯ ಸೇನೆ ಪಡೆಯಲಿದೆ, ಭಾರತದಲ್ಲಿಯೇ ನಿರ್ಮಾಣಗೊಂಡ ಈ ರಾಕೆಟ್ ಗಳು ಪರಮಾಣು ಶಸ್ತ್ರಾಸ್ತ್ರಗಳನ್ನು ಸುಲಭವಾಗಿ ಹೊತ್ತೊಯ್ಯುವ ಸಾಮಥ್ರ್ಯವನ್ನು ಹೊಂದಿದೆ.
ಇಷ್ಟೇ ಅಲ್ಲದೇ, ಅಮೆರಿಕಾದ ವಿಜ್ಞಾನಿಗಳ ತಜ್ಞರ ಪ್ರಕಾರ, ಪಾಕಿಸ್ತಾನ ತನ್ನ ಯುದ್ಧತಂತ್ರದ ನ್ಯೂಕ್ ಗಳನ್ನು ದೇಶದ ಒಂಭತ್ತು ವಿಭಿನ್ನ ಸ್ಥಳಗಳಲ್ಲಿ ಸಂಗ್ರಹಿಸಿದೆ ಎಂದು ಹೇಳಲಾಗಿದೆ. ಭಾರತವನ್ನು ನೇರ ಯುದ್ದದಿಂದ ಎದುರಿಸಲು ಸಾಧ್ಯವಾಗದ ಪಾಕಿಸ್ತಾನ ಈ ನ್ಯೂಕ್ ಗಳನ್ನು ಭಾರತವನ್ನು ಗುರಿಯಾಗಿಸಿ ಅಭಿವೃದ್ಧಿ ಪಡಿಸಿದೆ ಎನ್ನುವುದು ಈಗಾಗಲೇ ಸ್ಪಷ್ಟವಾಗಿದೆ!!
ಇದೀಗ ಹಳೆಯ ಶಸ್ತ್ರಾಸ್ತ್ರಗಳಿಗೆ ವಿದಾಯ ಹೇಳಲು ಮುಂದಾಗಿರುವ ಭಾರತೀಯ ಸೇನೆ, ಶೀಘ್ರದಲ್ಲೇ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಲಿದೆ!! ಜತೆಗೆ ಪಾಕಿಸ್ತಾನ ಮತ್ತು ಚೀನಾದಿಂದ ಪದೇಪದೆ ಗಡಿ ಸಮಸ್ಯೆ ಉಂಟಾಗುತ್ತಿದ್ದು, ಉಗ್ರರ ಉಪಟಳ ತಡೆಯಲು ಸೇನೆಗೆ ಶಸ್ತ್ರಾಸ್ತ್ರಗಳ ಅಗತ್ಯವಿದೆ. ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಶಸ್ತ್ರಾಸ್ತ್ರ ಖರೀದಿ ಪ್ರಕ್ರಿಯೆ ಈಗ ಚುರುಕಾಗಿದೆ. ಅಲ್ಲದೆ ಲೈಟ್ ಮಷಿನ್ ಗನ್ (ಎಲ್.ಎಂ.ಜಿ) ಸಹಿತ ಹಗುರ ಮತ್ತು ಹೆಚ್ಚಿನ ಸಾಮಥ್ರ್ಯದ ಸಣ್ಣ ಶಸ್ತ್ರಾಸ್ತ್ರಗಳ ತಯಾರಿ ಬಗ್ಗೆಯೂ ಹೆಚ್ಚು ಗಮನ ಹರಿಸುವಂತೆ ರಕ್ಷಣಾ ತಂತ್ರಜ್ಞಾನ ಮತ್ತು ಅಭಿವೃದ್ಧಿ ಸಂಸ್ಥೆ (ಡಿ.ಆರ್.ಡಿ.ಒ)ಗೆ ಸರಕಾರ ಸೂಚನೆ ನೀಡಿತ್ತು.
ಹಾಗಾಗಿ ಡಿಫೆನ್ಸ್ ಅಕ್ವಿಸಿಷನ್ ಸಮಿತಿ ಶಸ್ತ್ರಾಸ್ತ್ರ ಖರೀದಿ ಕುರಿತು ನಿರ್ಧರಿಸುತ್ತದೆಯಾದರೂ, ಅದಕ್ಕೂ ಮೊದಲು ಶಸ್ತ್ರಾಸ್ತ್ರಗಳ ಪರೀಕ್ಷೆ ನಡೆಯಲಿದೆ. ಈ ಹಿಂದೆ ಸರಕಾರಿ ಸ್ವಾಮ್ಯದ ಇಶಾಪೆÇರ್ ರೈಫಲ್ ಕಾರ್ಖಾನೆ ತಯಾರಿಸಿದ್ದ ರೈಫಲ್ ಪರೀಕ್ಷೆಯಲ್ಲಿ ವಿಫಲವಾದ ಕಾರಣ ಖರೀದಿ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಸದ್ಯ ಸೇನೆಯು ಹಳೆಯ ಇನ್ಸಾಸ್ ರೈಫಲ್ ಬಳಸುತ್ತಿದ್ದು, ಅದಕ್ಕೆ ವಿದಾಯ ಹೇಳಿ ಸುಮಾರು 7 ಲಕ್ಷ 7.6251 ಎಂಎಂ ರೈಫಲ್ ಖರೀದಿಸಲು ಚಿಂತನೆ ನಡೆಸಿದೆ. ರಕ್ಷಣಾ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದ ನಿರ್ಮಲಾ ಸೀತಾರಾಮನ್, ಸೇನೆಯ ಆಧುನೀಕರಣ ಮತ್ತು ಯೋಧರ ಸುರಕ್ಷತೆಗೆ ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಳ್ಳಲು ಸರಕಾರ ಬದ್ಧವಾಗಿದೆ ಮತ್ತು ಅದಕ್ಕೆ ಮೊದಲ ಆದ್ಯತೆ ಕಲ್ಪಿಸಲಾಗುತ್ತದೆ ಎಂದಿದ್ದರು.
ಈ ಹಿಂದೆ ಸರಕಾರ 20 ಸಾವಿರ ಕೋಟಿ ರೂಪಾಯಿಗಳಲ್ಲಿ ಅತ್ಯಾಧುನಿಕ ಟ್ಯಾಂಕರ್, ಪದಾತಿ ದಳದ ಶಸ್ತ್ರಾಸ್ತ್ರಗಳು, ಪರಿಕರಗಳು, ಸಮರ ನೌಕೆಗಳು ಹಾಗೂ ಸಮರ ವಿಮಾನಗಳನ್ನು ಖರೀದಿಸಿದೆ. ಒಂದು ವೇಳೆ ಯುದ್ಧ ಸಂಭವಿಸಿದರೆ ಯಾವುದೇ ಶಸ್ತ್ರಾಸ್ತ್ರ ಅಥವಾ ಇತರ ಪೂರಕ ಸೌಲಭ್ಯಗಳ ಕೊರತೆ ಇಲ್ಲದೇ, ಯುದ್ಧ ಮುಂದುವರಿಸಲು ಭಾರತೀಯ ಸೇನೆಗೆ ಸಾಧ್ಯವಾಗುವ ರೀತಿಯಲ್ಲಿ ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡಲಾಗಿದೆ ಎಂದು ಈ ಹಿಂದೆ ವರದಿಯಲ್ಲಿ ತಿಳಿಸಲಾಗಿದೆ!!
ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡುವಲ್ಲಿ ಕೇಂದ್ರ ಸರಕಾರವು ಒಪ್ಪಿಗೆಯನ್ನು ನೀಡಿರುವುದು ಸಂತಸದ ವಿಚಾರವಾಗಿದ್ದು.. ಅದಲ್ಲದೆ ಈಗಾಗಲೇ ಬುಲೆಟ್ ಪ್ರೂಫ್ ಜಾಕೆಟ್, ಬುಲೆಟ್ ಪ್ರೂಫ್ ಹೆಲ್ಮೆಟ್, ಸಿಆರ್ಪಿಎಫ್ ಯೋಧರಿಗೆ 100 ಬುಲೆಟ್ ಪ್ರೂಫ್ ವಾಹನಗಳನ್ನು ನೀಡಲು ಗ್ರೀನ್ ತೋರಿಸಿದ ಬೆನ್ನಲ್ಲೇ ಇದೀಗ ಸೈನ್ಯಕ್ಕೆ 5,366 ಕೋಟಿ ಮೊತ್ತದ ಆಯುಧಗಳನ್ನು ನೀಡಲು ಮುಂದಾಗಿದೆ!! ಈಗ ಮತ್ತೊಂದು ಹೊಸ ಕಾರ್ಯಕ್ಕೆ ಕೇಂದ್ರ ಸರ್ಕಾರ ಚಾಲನೆಯನ್ನು ನೀಡುವ ಮೂಲಕ ನರೇಂದ್ರ ಮೋದಿ ಸರಕಾರ ಸೈನಿಕರಿಗೆ ಮಾನಸಿಕ ಸ್ಥೈರ್ಯವನ್ನು ನೀಡುತ್ತಿದೆ!! ಅಂತೂ ಭಾರತೀಯ ಸೇನೆ ಶತ್ರುರಾಷ್ಟ್ರವನ್ನು ಹಿಮ್ಮೆಟ್ಟಿಸುವಲ್ಲಿ ಇನ್ನಷ್ಟು ಬಲಿಷ್ಠವಾಗಲಿದ್ದು, ಶತ್ರುರಾಷ್ಟ್ರಗಳು ಈ ಬಗ್ಗೆ ಭಯಭೀತರಾಗಲಿರುವುದೂ ಮಾತ್ರ ಖಚಿತ!!!
ಪವಿತ್ರ