ಪ್ರಚಲಿತ

ಬಿಗ್ ಬ್ರೇಕಿಂಗ್!! ಚುನಾವಣೆಯ ಕಾಂಚಣದ “ಕೈ” ಗಳಿಗೆ ಬಿಗ್ ಶಾಕ್ ನೀಡಿದ ಐಟಿ !! ತತ್ತರಿಸಿದ ಕಾಂಗ್ರೆಸ್!!

ಮೊನ್ನೆ ತಾನೇ ರಾಜ್ಯ ಕಾಂಗ್ರೆಸ್ ಸರ್ಕಾರದ ಪ್ರಭಾವಿ ಸಚಿವ ಕೆ.ಜೆ.ಜಾರ್ಜ್ ಗೆ ಐಟಿ ಸರಿಯಾಗಿಯೇ ಶಾಕ್ ನೀಡಿತ್ತು… ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ಕಾಂಗ್ರೆಸ್‍ನ ಸಚಿವರು ಹಾಗೂ ಶಾಸಕರ ನಿಜ ಮುಖ ಅನಾವರಣವಾಗುತ್ತಿದ್ದು, ಒಂದೊಂದೇ ಪ್ರಕರಣಗಳು ಬಯಲಾಗುತ್ತಿದೆ. ಈಗ ರಾಜ್ಯದಲ್ಲಿ ಮುಖ್ಯ ಮಂತ್ರಿಗಳಿಗಿಂತಲೂ ಪ್ರಭಾವವನ್ನು ಬೆಳೆಸಿಕೊಂಡಿರುವ ಕೆ.ಜೆ.ಜಾರ್ಜ್‍ಗೆ ಐಟಿ ಶಾಕ್ ನೀಡಿದ ಬೆನ್ನಲ್ಲೇ ಡಿವೈಎಸ್‍ಪಿ ಗಣಪತಿ ಹತ್ಯೆ ಪ್ರಕರಣ ಮತ್ತೆ ಮರುಕಳಿಸಿರುವುದು ಎಲ್ಲರಿಗೂ ತಿಳಿದ ವಿಷಯ!! ಇದೀಗ ಮತ್ತೊಂದು ಸ್ಫೋಟಕ ಮಾಹಿತಿ ಹೊರ ಬಿದ್ದಿದೆ!! ಈ ಸುದ್ದಿ ಕೇಳುತ್ತಿದ್ದಂತೆಯೇ ಸಿ.ಎಂ ಸಿದ್ದರಾಮಯ್ಯನವರು ಚಿಂತಾಕ್ರಾಂತರಾಗಿದ್ದಾರೆ.. ಅಸೆಂಬ್ಲಿ ಎಲೆಕ್ಷನ್ ಅಧಿವೇಶನ ಹೊತ್ತಲ್ಲೇ ಸಿಎಂ ಸಿದ್ದರಾಮಯ್ಯನರಿಗೆ ಬರ ಸಿಡಿಲು ಬಡಿದಂತಾದೆ!!

ಕೈಗೆ ಐಟಿ ಶಾಕ್ ಟ್ರೀಟ್‍ಮೆಂಟ್!!

ಈಗಾಗಲೇ ಕಾಂಗ್ರೆಸ್ಸಿಗರು ಅವನತಿ ಹಂತದಲ್ಲಿದೆ!! ಇದೀಗ ಮತ್ತೆ ಐಟಿ ಮತ್ತೊಂದು ಶಾಕ್ ನೀಡಿದೆ… ಚುನಾವಣೆಗೆ ಹಣ ಪೂರೈಕೆ ಮಾಡುವವರನ್ನು ಮಟ್ಟ ಹಾಕಲು 200 ಅಧಿಕಾರಿಗಳ ತಂಡ ರೆಡಿಯಾಗಿ ಸಜ್ಜಾಗಿ ನಿಂತಿದೆ….ಕಾಂಗ್ರೆಸ್ ಉದ್ಯಮಿಗಳು, ಕಾಂಗ್ರೆಸ್ ಬೆಂಬಲಿಸುವ ಅಧಿಕಾರಿಗಳ ಮೇಲೂ ಕಣ್ಣು ಹಾಯಿಸಿದ್ದು ಈ ಬಾರಿ ಮಾತ್ರ ಕಾಂಗ್ರೆಸ್ಸಿಸಗರು ತುಂಬಾನೇ ತತ್ತರಿಸಿ ಹೋಗಿದ್ದಾರೆ….

ಕೈ ಬಚ್ಚಿಟ್ಟಿರುವ ಹಣಕ್ಕಾಗಿ ನಡೆದಿದೆ ಹುಡುಕಾಟ!!

ಸಿಎಂ ಆಪ್ತ ಸಚಿವ ಜಾರ್ಜ್‍ಗೆ ಡಬಲ್ ಶಾಕ್ ನೀಡಲು ತಯಾರಾಗಿದೆ ಐಟಿ ತನಿಖಾ ತಂಡಗಳು… ಅದಲ್ಲದೆ ಐಎಎಸ್ ಅಧಿಕಾರಿಗಳ ಚಲನ ವಲನದ ಬಗ್ಗೆ ಪೂರ್ಣ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.. ಕಾಂಗ್ರೆಸ್ ನಾಯಕರು, ಆಪ್ತರ ಫೋನ್‍ಗಳ ಚಲನ ವಲನಗಳ ಮೇಲೆ ಸಂಪೂರ್ಣವಾಗಿ ಕಣ್ಣಿಟ್ಟಿದ್ದಾರೆ ತನಿಖಾ ಅಧಿಕಾರಿಗಳು.. ಈ ವಿಷಯ ತಿಳಿಯುತ್ತಿದ್ದಂತೆಯೇ ಕಾಂಗ್ರೆಸ್ ನಾಯಕರು ಸಂಪೂರ್ಣವಾಗಿ ಹೈ ಅಲರ್ಟ್ ಆಗಿ ತನ್ನ ಎಲ್ಲಾ ಆಪ್ತರಿಗೂ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಳ್ಳುತ್ತಿದೆ ಎಂಬ ಮಾಹಿತಿ ಕೂಡಾ ಹೊರ ಬಿದ್ದಿದೆ ಅಂತಾನೆ ಹೇಳಬಹುದು… ಈ ವಿಷಯ ತಿಳಿಯುತ್ತಿದ್ದಂತೆಯೇ ತಮ್ಮ ಎಲ್ಲಾ ಮೊಬೈಲ್‍ಗಳನ್ನು ಸ್ವಿಚ್ ಮಾಡಿ ಕುಳಿತು ಕೊಂಡಿದ್ದಾರೆ.. ಅಂತವರನ್ನೇ ಕಂಡುಹಿಡಿದು ತನಿಖಾ ಅಧಿಕಾರಿಗಳು ತನಿಖೆ ಮಾಡಲು ತಯಾರು ಮಾಡುತ್ತಿದ್ದಾರೆ… ಕಾಂಗ್ರೆಸ್ ಸರಕಾರ ಮಾಡುತ್ತಿರುವ ಹಗರಣಗಳು ಒಂದಾ ಎರಡಾ? ಒಂದರ ಮೇಲೊಂದು ಹಗರಣಗಳನ್ನು ಮಾಡುತ್ತಿರುವವರಿಗೆ ಈ ಬಾರಿ ಏಕ ಕಾಲದಲ್ಲಿ ಮುಗಿ ಬೀಳಲಿದೆ ಕೇಂದ್ರ ತನಿಖಾ ತಂಡಗಳು!!.. ಚುನಾವಣಾ ವೆಚ್ಚಕ್ಕಾಗಿ ಕಾಂಗ್ರೆಸ್ ಬಚ್ಚಿಟ್ಟಿರುವ ಹಣ ಈ ಬಾಯಿ ತನಿಖಾ ಅಧಿಕಾರಿಗಳ ಕಯ ಸೇರುವ ದಿನ ಹತ್ತಿರವಾಗುತ್ತಿದೆ ಎಂದನಿಸುತ್ತಿದೆ…

ಸಿಎಂ ಆಪ್ತರ ಮೇಲೆ ಐಟಿ ಕಣ್ಣು!!

ಈ ಬಾರಿ ಐಟಿ ಇಲಾಖೆ ಪಕ್ಕಾ ರೆಡಿಯಾಗಿದ್ದು ಐಟಿ ಇಲಾಖೆ ಸಿಎಂ ಆಪ್ತರ ಮೇಲೇನೇ ಹೆಚ್ಚು ಕಣ್ಣು ಹಾಯಿಸಿದೆ ಅಂತಾನೆ ಹೇಳಬಹುದು…

ಸಚಿವ ಜಾರ್ಜ್‍ಗೆ ಡಬಲ್ ಶಾಕ್ ಟ್ರೀಟ್ ಮೆಂಟ್!!

ಉಪ್ಪು ತಿಂದವನು ನೀರು ಕುಡಿಯಲೇ ಬೇಕು ಎನ್ನುವ ಮಾತಿನಂತೆ ಈ ಬಾರಿ ಮಾತ್ರ ಗ್ರಹಣ ಕಳೆದ ನಂತರ ಕೆ.ಜೆ ಜಾರ್ಜ್‍ಗೆ ಗ್ರಹಣ ಹಿಡಿದಂತಾಗಿದೆ… ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಒಂದು ಕಡೆಯಲ್ಲಿ ಕೆ.ಜೆ ಜಾರ್ಜ್‍ಗೆ ಐಟಿ ಶಾಕ್!! ಇನ್ನೊಂದು ಕಡೆಯಲ್ಲಿ ಡಿವೈಎಸ್‍ಪಿ ಗಣಪತಿ ಹತ್ಯೆ ಪ್ರಕರಣ..!! ಈ ಎರಡೂ ವಿಷಗಳಿಂದ ತತ್ತರಿಸಿ ಹೋಗಿದ್ದಾರೆ ಸಚಿವ ಕೆ.ಜೆ ಜಾರ್ಜ್!! ಸಿಎಂ ಸಿದ್ದರಾಮಯ್ಯನವರಿಗೆ ಮಾತ್ರ ಒಂದರ ಮೇಲೆ ಒಂದರಂತೆ ತನ್ನ ಆಪ್ತರಿಗೆ ಈ ರೀತಿಯಾಗಿರುವುದು ನಿಜವಾಗಿಯೂ ತಲೆ ಮೇಲೆ ಬಂಡೆ ಬಿದ್ದಂತಾಗಿದೆ…. ಸಚಿವ ಕೆ.ಜೆ ಜಾರ್ಜ್ ಆಪ್ತರ ಮನೆಗೂ ಐಟಿ ದಾಳಿ ಮಾಡುವ ಮೂಲಕ ಸದ್ಯದಲ್ಲೇ ಸಿಎಂ ಆಪ್ತ ಜಾರ್ಜ್‍ಗೆ ಡಬಲ್ ಶಾಕ್ ನೀಡಲು ತಯಾರಾಗಿದೆ ತನಿಖಾ ತಂಡಗಳು!!

ಡಿವೈಎಸ್‍ಪಿ ಗಣಪತಿ ಅನುಮಾನಾಸ್ಪದ ಸಾವು ಪ್ರಕರಣದಲ್ಲಿ ರಾಜ್ಯ ಕಾಂಗ್ರೆಸ್‍ನ ಪ್ರಭಾವಿ ಸಚಿವ ಕೆ.ಜೆ.ಜಾರ್ಜ್ ಕೈವಾಡ ಬಲವಾಗಿ ಕಾಣುತ್ತಿದ್ದು, ಯಾವುದೇ ಕ್ಷಣದಲ್ಲೂ ಬಂಧನವಾಗುವ ಸಾಧ್ಯತೆ ಇದೆ. ಈಗಾಗಲೇ ಅನೇಕ ವಿಚಾರಣೆಯನ್ನು ಎದುರಿಸಿರುವ ಸಿಬಿಐ ಸಚಿವ ಕೆ.ಜೆ.ಜಾರ್ಜ್‍ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು… ಅದೇ ರೀತಿ ರಾಜ್ಯದಲ್ಲಿ ವಿಧಾನ ಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಂಕಷ್ಟವನ್ನು ಎದುರಿಸುತ್ತಿರುವ ರಾಜ್ಯ ಕಾಂಗ್ರೆಸ್ ಸಚಿವ ಕೆ.ಜೆ.ಜಾರ್ಜ್ ಯಥಾ ಶೀಘ್ರ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ನಿನ್ನೆ ಮತ್ತೆ ಡಿ ವೈಎಸ್‍ಪಿ ಗಣಪತಿ ಹತ್ಯೆ ಪ್ರಕರಣವನ್ನು ಕೈಗೆತ್ತಿಕೊಂಡು ಸಿಬಿಐ ತನಿಖೆಯಿಂದ ಕೆ.ಜೆ ಜಾರ್ಜ್ ಬೆವರಿಳಿಸಿದ್ದು ಹೇಗೆ ಗೊತ್ತಾ?! ಸಂಜೆ 4 ಗಂಟೆಯಿಂದ 8 ಗಂಟೆಯವರಿಗೆ ಡಿವೈಎಸ್‍ಪಿ ಗಣಪತಿ ಹತ್ಯೆಯ ವಿಚಾರವಾಗಿ ಕೆ.ಜೆ ಜಾಜ್‍ಗೆ ಪ್ರಶ್ನೆಗಳ ಸುರಿ ಮಳೆಯೇ ಸುರಿದಿದ್ದಾರೆ… ಡಿವೈಎಸ್‍ಪಿ ಹತ್ಯೆ ಪ್ರಕರಣದಲ್ಲಿ ಕೇವಲ ಕೆ.ಜೆ ಜಾರ್ಜ್‍ರನ್ನು ಮಾತ್ರ ವಿಚಾರಣೆ ಮಾಡೆ ತನ್ನ ಆಪ್ತನಿಗೂ ಈ ಹತ್ಯೆ ಪ್ರಕರಣದಲ್ಲಿ ಕಗ್ಗಂಟಾಗಿದೆ…ತನ್ನ ಆಪ್ತ ಕಾರ್ಯದರ್ಶಿ ಶಿವಶಂಕರ್‍ರನ್ನು ಕೂರಿಸಿ ಸಿಬಿಐ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದರು.. ಹಾಗಾಗಿ ಸಿಬಿಐ ನೋಟೀಸು ಜಾರಿ ಮಾಡಲು ಸಿದ್ಧತೆಯ ಹಂತದಲ್ಲಿದೆ…

ಅಂತೂ ಇಂತೂ ಈ ಬಾರಿ ಮಾತ್ರ ಸಣ್ಣಗೆ ಹಚ್ಚಿದ್ದ ಐಟಿ ಬಿಸಿ ಈಗ ಉರಿಯಲು ಆರಂಭಿಸಿದೆ…. ಯಾವತ್ತೂ ಸತ್ಯಕ್ಕೆ ಜಯವಿರುತ್ತದೆ ಎಮಬ ಮಾತನ್ನು ಗಮನದಲ್ಲಿಟ್ಟರೆ ಸಾಕು!! ಕಾಂಗ್ರೆಸ್ಸಿಗರು ಅಂದಿನಿಂದ ಇಂದಿನವರೆಗೆ ಮಾಡಿದ ಹಗರಣ ಭ್ರಷ್ಟಾಚಾರಗಳಿಗೆ ಒಂದೊಂದಾಗಿಯೇ ಹೊರ ಬೀಳಲಿರುವ ದಿನ ಸನ್ನಿಹಿತವಾಗಿದೆ..

 

ಪವಿತ್ರ

 

Tags

Related Articles

Close