ಪ್ರಚಲಿತ

ಬಿಗ್ ಬ್ರೇಕಿಂಗ್!! ನಲಪಾಡ್ ವಿರುದ್ಧ ಸಿಡಿದೆದ್ದ ಜನತೆಯಿಂದ ಛೀಮಾರಿ! ಕಿತ್ತೆಸೆದಿದ್ದರೂ ಕಾಂಗ್ರೆಸ್ ಮಾಡಿದ ಕರಾಮತ್ತು ಏನು ಗೊತ್ತಾ?

ವಿದ್ವತ್ ಮೇಲೆ ಹಲ್ಲೆ ಮಾಡಿ ಜೈಲು ಪಾಲಾದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಗೂಂಡಾ ನಲಪಾಡ್ ಕರ್ಮಕಾಂಡ ಅದೆಷ್ಟು ಹೇಳಿದರೂ ಮುಗಿಯುತ್ತಿಲ್ಲ. ಅದೆಷ್ಟೇ ಪ್ರಕರಣಗಳನ್ನು ಬಯಲಿಗೆಳೆದರೂ ಮತ್ತಷ್ಟು ಪ್ರಕರಣಗಳು ಗೂಂಡಾ ನಲಪಾಡ್‍ನನ್ನು ಸುತ್ತುವರೆಯುತ್ತಲೇ ಇದೆ. ತನ್ನ ಅಪ್ಪನ ಅಧಿಕಾರದ ಮದದಿಂದ ಇಷ್ಟು ವರ್ಷಗಳ ಕಾಲ ಮಾಡಿದ ಅವಾಂತರಗಳನ್ನು, ಗೂಂಡಾಗಿರಿಯ ದರ್ಪವನ್ನು ಈಗ ಅನುಭವಿಸುತ್ತಿರುವ ನಲಪಾಡ್ ಈಗ ಜೈಲುಪಾಡಾಗಿದ್ದಾನೆ. ಜೈಲಿನಲ್ಲಿ ತಾನು ಮಾಡಿದ ಅಷ್ಟೂ ಅನ್ಯಾಯಗಳನ್ನು ಒಂದೊಂದಾಗಿಯೇ ಅನುಭವಿಸುತ್ತಿದ್ದಾನೆ.

ಕಿತ್ತೆಸೆದಿತ್ತು ಕಾಂಗ್ರೆಸ್…

ನಲಪಾಡ್‍ನ ಗೂಂಡಾಗಿರಿ ಪ್ರಕರಣ ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿದ್ದಂತೆ ಕಾಂಗ್ರೆಸ್ ಪಕ್ಷ ತೀವ್ರ ಮುಜುಗರವನ್ನು ಅನುಭವಿಸಿತ್ತು. ಮಾಧ್ಯಮಗಳು ಕಾಂಗ್ರೆಸ್ ಶಾಸಕ ಹ್ಯಾರಿಸ್ ಹಾಗೂ ಗೂಂಡಾ ನಲಪಾಡ್ ನ ಈ ಪ್ರಕರಣವನ್ನು ಪರಿಣಾಮಕಾರಿ ಬಿಂಬಿಸಿದ್ದರಿಂದ ಕಾಂಗ್ರೆಸ್‍ನ ಯೂತ್ ಕಾಂಗ್ರೆಸ್ ಸ್ಥಾನದಿಂದ ಹಾಗೂ ಕಾಂಗ್ರೆಸ್‍ನ ಪ್ರಾಥಮಿಕ ಸದಸ್ಯತ್ವದಿಂದ ಕಿತ್ತೊಗೆದಿತ್ತು. ಹೀಗಾಗಿ ನಂತರ ಗೂಂಡಾ ನಲಪಾಡ್ ಕಾಂಗ್ರೆಸ್ ಪಕ್ಷದ ಸದಸ್ಯನಲ್ಲ ಎಂಬುವುದು ಸಾಭೀತಾಗಿತ್ತು. ನಲಪಾಡ್‍ನನ್ನು ಕೈ ಬಿಡುವ ಮೂಲಕ ನಮ್ಮ ಕಾಂಗ್ರೆಸ್ ಕ್ಲೀನ್ ಎಂದು ಪೋಸ್ ಕೊಡಲು ಆರಂಭಿಸಿತ್ತು.

ಬೆಂಬಲಕ್ಕೆ ನಿಂತಿದೆ ಕಾಂಗ್ರೆಸ್..!

ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಶಾಂತಿನಗರದ ಕಾಂಗ್ರೆಸ್ ತಂಡ ಗೂಂಡಾ ನಲಪಾಡ್‍ನ ಬೆಂಬಲಕ್ಕೆ ನಿಂತಿದೆ. ತನ್ನ ಅಧಿಕೃತ ಫೇಸ್ ಬುಕ್ ಹಾಗೂ ಟ್ವಿಟರ್‍ನ ಅಧಿಕೃತ ಅಕೌಂಟ್‍ನಲ್ಲಿ ನಲಪಾಡ್ ಪರವಾದ ಸಂದೇಶವನ್ನು ಹಾಕಿದ್ದಾರೆ. ಮಾತ್ರವಲ್ಲದೆ “ಜಸ್ಟಿಸ್ ಫಾರ್ ನಲಪಾಡ್” ಎಂಬ ಹ್ಯಾಶ್ ಟ್ಯಾಗ್‍ನ್ನೂ ಆಂದೋಲನದ ರೀತಿಯಲ್ಲಿ ಹಾಕಲಾಗಿದ್ದು, ಗೂಂಡಾನನ್ನು ಹೀರೋ ಆಗಿ ಬಿಂಬಿಸಲಾಗಿದೆ. ಸ್ವತಃ ಕಾಂಗ್ರೆಸ್ ಪಕ್ಷವೇ ಆತ ಗೂಂಡಾ ಎಂದು ತನ್ನ ಪಕ್ಷದಿಂದಲೇ ಕಿತ್ತೆಸೆದಿದ್ದರೂ ಕೂಡಾ ಈಗ ಆತನನ್ನು ಹೀರೋ ಮಾಡಿ ಎತ್ತರದಲ್ಲಿ ನಿಲ್ಲಿಸುವ ಪ್ರಯತ್ನವು ನಡೆಯುತ್ತಿದೆ.

ಇಂಡಿಯನ್ ಯೂತ್ ಕಾಂಗ್ರೆಸ್ ಎಂಬ ಫೇಸ್ ಬುಕ್ ಪೇಜ್‍ನಲ್ಲಿ ನಲಪಾಡ್ ಪರ ನಿಂತ ಕಾಂಗ್ರೆಸ್ ನಲಪಾಡ್ ಪರ ಪೋಸ್ಟ್‍ಗಳನ್ನು ಹಾಕಿಕೊಂಡಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೊಸ ಕ್ಯಾಂಪೇನ್ ಅನ್ನೇ ಆರಂಭಿಸಿರುವ ನಲಪಾಡ್ ಪರ ಕಾಂಗ್ರೆಸ್ ನಾಯಕರು ಜಸ್ಟಿಸ್ ಫಾರ್ ನಲಪಾಡ್ ಎಂದು ಹ್ಯಾಶ್ ಟ್ಯಾಗ್ ಮಾಡಿದೆ. ಕಾಂಗ್ರೆಸ್ ಪಕ್ಷದಿಂದ ಆತನನ್ನು ಉಚ್ಛಾಟನೆ ಮಾಡಿದ್ದರೂ ಇಂತಹ ಕೆಲಸಗಳು ಯಾಕೆ ಎಂಬ ಪ್ರಶ್ನೆಯೂ ಸ್ವತಃ ಕಾಂಗ್ರೆಸ್ ಪಕ್ಷದಲ್ಲೂ ಮೂಡಿದೆ.

ಪೇಜ್‍ನಲ್ಲೇ ಕ್ಯಾಕರಿಸಿ ಉಗಿದ ಜನತೆ..!

ಇಂಡಿಯನ್ ಯೂತ್ ಕಾಂಗ್ರೆಸ್ ಎಂಬ ಫೇಸ್ ಬುಕ್ ಪೇಜ್‍ನಲ್ಲಿ ಯಾವಾಗ ಇಂತಹ ಪೋಸ್ಟರ್‍ಗಳನ್ನು ಹಾಕಿದ್ರೋ ಆವಾಗಲೇ ಕಾಂಗ್ರೆಸ್ ಹಾಗೂ ಗೂಂಡಾ ನಲಪಾಡ್ ವಿರುದ್ಧ ಜನ ಸಿಡಿದೆದ್ದಿದ್ದಾರೆ. “ವಿದ್ವತ್ ಎಂಬಾತನ ಮೇಲೆ ಹೆಣ್ಣಿನ ಚಪಲಕ್ಕಾಗಿ ಗೂಂಡಾಗಿರಿ ಮೆರೆದ ಈ ನಲಪಾಡ್ ಎಂಬ ಗೂಂಡಾನನ್ನು ಕಾಂಗ್ರೆಸ್ ಪಕ್ಷ ಉಚ್ಚಾಟಿಸಿದ್ದರೂ ಈಗಲೂ ಆತನ ಪರವಾಗಿ ಕ್ಯಾಂಪೇನ್ ಮಾಡುತ್ತಿದ್ದೀರಲ್ವಾ ನಿಮಗೆ ನಾಚಿಕೆ ಆಗೋದಿಲ್ವಾ..? ಕಾಂಗ್ರೆಸ್ ಪಕ್ಷ ಇನ್ನೂ
ಇಲ್ಲಿ ಗೆಲ್ಲೋದಿಲ್ಲ. ಇನ್ನೂ ಒಂಚೂರಾದ್ರೂ ಕಾಂಗ್ರೆಸ್ ಪರವಾದ ಅಲೆ ಇದೆ ಎಂದಾದರೆ ಇಂತಹ ಕೆಲಸವನ್ನು ಮಾಡಬೇಡಿ. ಕಾಂಗ್ರೆಸ್ ಪಕ್ಷದ ಮರ್ಯಾದೆ ಮಾತ್ರವಲ್ಲ, ಇಡೀ ಶಾಂತಿನಗರದ ಜನತೆಯ ಮರ್ಯಾದೆಯನ್ನು ಆತ ಕಳೆದಿದ್ದಾನೆ. ಆತನನ್ನು ಮತ್ತೊಮ್ಮೆ ಸಮರ್ಥಿಸಿದರೆ ಪರಿಸ್ಥಿತಿ ಚೆನ್ನಾಗಿರೋಲ್ಲ” ಎಂದು ಶಾಂತಿ ನಗರದ ಜನತೆ ಉಗಿದಿದ್ದಾರೆ.

ಇನ್ನೂ ಹಲವಾರು ಕಾಮೆಂಟ್‍ಗಳು ಇಂಡಿಯನ್ ಯೂತ್ ಕಾಂಗ್ರೆಸ್ ಫೇಸ್ ಬುಕ್ ಪೇಜ್‍ಗೆ ಬಂದಿದ್ದು ನಲಪಾಡ್ ರೌದ್ರಾವತಾರವನ್ನು ಬಹಳ
ಚೆನ್ನಾಗಿಯೇ ಬಣ್ಣಿಸಿದೆ. ಮಾತ್ರವಲ್ಲದೆ ಇದು ಮುಂದಿನ ಶಾಂತಿನಗರದ ವಿಧಾನ ಸಭಾ ಚುನಾವಣೆಗೆ ಶಾಂತಿಪ್ರಿಯರನ್ನು ಮನೆಗೆ ಕಳಿಸುವ ಎಲ್ಲಾ ಪ್ರಯತ್ನಗಳೂ ಗೋಚರಿಸುತ್ತಿದೆ. ನಲಪಾಡ್ ಗೂಂಡಾಗಿರಿಯನ್ನು ಜಗತ್ತೇ ನೇರವಾಗಿ ಕಂಡಿದ್ದರೂ ಆತನ ಪರ ಬ್ಯಟಿಂಗ್ ಮಾಡುತ್ತಿರುವ ಕಾಂಗ್ರೆಸ್ ಟೀಂಗೆ ಏನನ್ನಬೇಕು ಎಂಬ ಪ್ರಶ್ನೆ ಮೂಡುವುದಂತು ಸುಳ್ಳಲ್ಲ.

-ಸುನಿಲ್ ಪಣಪಿಲ

Tags

Related Articles

Close