ರಾಜ್ಯ ವಿಧಾನಸಭಾ ಚುನಾವಣೆ ಮುಗಿದು ಇನ್ನೂ ಎರಡು ದಿನ ಕಳೆದಿಲ್ಲ, ಅದಾಗಲೇ ದೇಶಾದ್ಯಂತ ಫಲಿತಾಂಶದ ವಿಚಾರವಾಗಿ ಚರ್ಚೆಗಳು ನಡೆಯುತ್ತಿದ್ದರೆ, ಇತ್ತ ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್ ತಮ್ಮ ಸರಕಾರ ರಚನೆ ಮಾಡುವ ಬಗ್ಗೆ ಭಾರೀ ಚರ್ಚೆ ನಡೆಸುತ್ತಿದ್ದಾರೆ. ಸಮೀಕ್ಷೆಗಳ ಪ್ರಕಾರ ಭಾರತೀಯ ಜನತಾ ಪಕ್ಷ ಅತೀ ದೊಡ್ಡ ಪಜ್ಷವಾಗಿ ಹೊರಹೊಮ್ಮಲಿದ್ದು, ಕಾಂಗ್ರೆಸ್ ಕೂಡಾ ತಮ್ಮದೇ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ನಂಬಿಕೆಯೊಂದಿಗೆ ಕಾಯುತ್ತಿದೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಈ ಬಾರಿ ಶಾಂತವಾಗಿ ನಡೆದಿದ್ದು , ಮಮತಾ ಬ್ಯಾನರ್ಜಿಯವರ ಪಶ್ಮಿಮ ಬಂಗಾಳದಲ್ಲಿ ನಡೆದ ಪಂಚಾಯತ್ ಚುನಾವಣೆಯಲ್ಲೇ ಮಾರಾಮಾರಿ ನಡೆದಿದ್ದು ಪಕ್ಷದ ಅಭ್ಯರ್ಥಿಯ ಸಾವು ಸಂಭವಿಸಿದೆ..!
The extreme Violation of democracy under @MamataOfficial Govt in West Bengal during Panchayat elections.After barring during the nominations now TMC workers barring voters from entering Booth No. 14/79 in Birpara. Shameful!#PanchayatElection#BengalPanchayatPolls pic.twitter.com/07F2w43Dv7
— Geetika Swami (@SwamiGeetika) May 14, 2018
ಸಿಪಿಎಂ ಕಾರ್ಯಕರ್ತರಿಂದ ಘರ್ಷಣೆ..!
ಪಶ್ಚಿಮ ಬಂಗಾಳದಲ್ಲಿ ಇಂದು ಗ್ರಾಮ ಪಂಚಾಯತ್ ಚುನಾವಣೆ ನಡೆಯುತ್ತಿದ್ದು ಚುನಾವಣಾ ಸ್ಥಳದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಮಮತಾ ಬ್ಯಾನರ್ಜಿಯವರ ಸರಕಾರ ಆಡಳಿತ ನಡೆಸಿದಾಗಿನಿಂದ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ನಡೆಯುತ್ತಲೇ ಇದೆ. ಈ ಬಗ್ಗೆ ಸರಕಾರ ಯಾವುದೇ ಕ್ರಮ ಕೈಗೊಳ್ಳದೆ ಸ್ವತಃ ತಮ್ಮ ಪಕ್ಷದ ಕಾರ್ಯಕರ್ತರನ್ನೇ ಬಳಸಿಕೊಂಡು ಗಲಭೆಗಳನ್ನು ಸೃಷ್ಟಿಸಿ ಅಶಾಂತಿ ಉಂಟಾಗುವಂತೆ ಮಾಡುತ್ತಿದ್ದಾರೆ. ಅದೇ ರೀತಿ ಇಂದು ಕೂಡಾ ಚುನಾವಣೆ ನಡೆಯುತ್ತಿರುವ ವೇಳೆಯೇ ಹಿಂಸಾಚಾರ ಉಂಟಾಗಿದ್ದು , ಸಿಪಿಎಂ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಜಗಳ ಉಂಟಾಗಿದೆ.
West Bengal: Voting booth vandalised allegedly by TMC workers in North Dinajpur's Sonadangi during #PanchayatPolls pic.twitter.com/I9epqPreXR
— ANI (@ANI) May 14, 2018
ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು ಐದು ಮಂದಿ ಕಾರ್ಯಕರ್ತರು ಸಾವನ್ನಪ್ಪಿದ್ದು , ಐದು ಮಂದಿ ಪತ್ರಕರ್ತರು ಸೇರಿ ಹಲವಾರು ಕಾರ್ಯಕರ್ತರಿಗೆ ಗಾಯಗಳಾಗಿವೆ. ಚುನಾವಣೆ ನಡೆಯುತ್ತಿದ್ದ ವೇಳೆಯೇ ಸ್ಥಳಕ್ಕೆ ಸಿಪಿಎಂ ಕಾರ್ಯಕರ್ತರು ಖಚ್ಚಾ ಬಾಂಬ್ ಎಸೆದಿರುವುದರಿಂದ ಬಿಜೆಪಿ ಕಾರ್ಯಕರ್ತರು ಕೂಡಾ ಸಾವನ್ನಪ್ಪಿದ್ದಾರೆ..!
See how State election commission conducted #PanchayatElection in WB
BJP candidate Tapan Mandal killed in a crude bomb explosion at a poll booth in Murshidabad..?
A complete failure of Law & order, President's rule is needed to save Democracy.#MamataSupariKillerOfDemocracy pic.twitter.com/XTdUFhOcD3
— Sanjib Ghosh?সঞ্জীব (@sampadscales) May 14, 2018
ಬಿಜೆಪಿ ಅಭ್ಯರ್ಥಿ ಸಾವು..!
ಚುನಾವಣೆ ವೇಳೆ ನಡೆದ ಘರ್ಷಣೆ ಹಿಂಸಾಚಾರಕ್ಕೆ ತಿರುಗುತ್ತಿದ್ದಂತೆ ಸ್ಥಳದಲ್ಲಿ ನೂರಾರು ಕಾರ್ಯಕರ್ತರು ಜಮಾಯಿಸಿದ್ದರು. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕಾಗಮಿಸಿದರು ಘರ್ಷಣೆ ಮಾತ್ರ ಶಾಂತವಾಗಲಿಲ್ಲ. ಇದರಿಂದಾಗಿ ಸಿಪಿಎಂ ಕಾರ್ಯಕರ್ತರ ಅಟ್ಟಹಾಸಕ್ಕೆ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಸಾವನ್ನಪ್ಪಿದ್ದಾರೆ. ಘರ್ಷಣೆಯಲ್ಲಿ ಸಿಪಿಎಂ ಕಾರ್ಯಕರ್ತರು ಕೂಡಾ ಸಾವನ್ನಪ್ಪಿದ್ದು, ಸ್ಥಿತಿ ಬಹಳ ಗಂಭೀರವಾಗುತ್ತಿದೆ. ಆದರೂ ಕೂಡ ಮಮತಾ ಬ್ಯಾನರ್ಜಿಯವರು ಮಾತ್ರ ಯಾವುದೇ ನಿರ್ಧಾರ ಕೈಗೊಳ್ಳದೆ ಉಡಾಫೆ ತೋರುತ್ತಲೇ ಇದ್ದಾರೆ..!
ಪಶ್ಚಿಮ ಬಂಗಾಳ ಇತ್ತೀಚಿಗೆ ಹಿಂಸಾಚಾರದಿಂದಲೇ ಸುದ್ದಿಯಾಗುತ್ತಿದ್ದು, ಬಿಜೆಪಿ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ಹಲ್ಲೆ , ಕೊಲೆ ಮಾಡಲಾಗುತ್ತಿದೆ. ಆದ್ದರಿಂದಲೇ ಚುನಾವಣೆಯ ವೇಳೆಯೂ ಘರ್ಷಣೆ ಉಂಟಾಗಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಪಶ್ಚಿಮ ಬಂಗಾಳ ಬೂದಿ ಮುಚ್ಚಿದ ಕೆಂಡದಂತಾಗಿದೆ..!
–ಅರ್ಜುನ್