ಅಂಕಣ

ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್ ಎಂಬ ನರ ಪಿಪಾಸು “ಇನ್ಕ್ವಿಸಿಶನ್” ಕಾನೂನಿನಡಿ ಗೋವಾದಲ್ಲಿ ಹಿಂದೂ ನರ ಸಂಹಾರ ಮಾಡಿರುವ ಅಮಾನವೀಯ ಘಟನೆಯ ಬಗ್ಗೆ ಯಾರೂ ಸೊಲ್ಲೆತ್ತುವುದಿಲ್ಲ!!

ಪ್ರಪಂಚದಲ್ಲಿ ಅನ್ಯ ಮತದವರಿಂದ ಹಿಂದೂಗಳ ಮೇಲೆ ಬರ್ಬರತೆ ಮತ್ತು ಅತ್ಯಾಚಾರ ನಡೆದಷ್ಟು ಬೇರಾವುದೇ ಧರ್ಮದವರ ಮೇಲೆ ನಡೆದಿರಲು ಸಾಧವಿಲ್ಲ. ಹಿಂದೂಗಳು ಸಾಯಲೆಂದೇ ಹುಟ್ಟಿದವರೆಂದು ಭಾವಿಸಿ ಶತಮಾನಗಳಿಂದಲೂ ಹಿಂದೂಗಳ ಮಾರಣಹೋಮ ನಡೆಸುತ್ತಲೇ ಬಂದಿದ್ದಾರೆ ಮತಾಂಧರು. ಮೊದಲು ಮೊಘಲರು, ಮತ್ತೆ ಪೋರ್ಚುಗೀಸರು, ಮತ್ತೆ ಬ್ರಿಟಿಷರು, ತದನಂತರ ಕಾಂಗ್ರೆಸ್ ಮತ್ತು ಕಮ್ಯೂನಿಷ್ಟರು.

ಹೀಗೆ ಪಟ್ಟಿ ಬೆಳೆಯುತ್ತಲೇ ಹೋಯಿತೇ ವಿನಹ ಹಿಂದೂಗಳ ಕಗ್ಗೊಲೆ ನಿಲ್ಲಲಿಲ್ಲ. ಭಾರತಕ್ಕೆ ದಂಡೆತ್ತಿ ಬಂದವರೆಲ್ಲಾ ಭಾರತವನ್ನು ಕೊಳ್ಳೆ ಹೊಡೆದದ್ದು ಮಾತ್ರವಲ್ಲ, ಭಾರತದ ಹಿಂದೂಗಳನ್ನು ಮತಾಂತರ ಮಾಡುವ ಕೈಂಕರ್ಯವನ್ನೂ ಕೈಗೊಂಡರು. ಹೀಗೆ ಮತಾಂತರ ಮಾಡಿಸಿದ ನರಾಧಮರಿಗೆ ಭಾರತೀಯರೇ “ಸಂತ”, “ಮಹಾನಾಯಕ” ಪದವಿಯನ್ನು ಕೊಟ್ಟು ಸನ್ಮಾನಿಸಿದರು!

ಇಂಥಹುದೇ ಒಬ್ಬ “ಸಂತ” ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್. ಗೋವಾ ದಲ್ಲಿ 463 ವರ್ಷ ಹಿಂದಿನ ಕೊಳೆತ ಕಳೇಬರವನ್ನು ಗಾಜಿನ ಪೆಟ್ಟಿಗೆಯಲ್ಲಿ ಇರಿಸಲಾಗಿದೆ. ಈ ಕಳೇಬರವನ್ನ ಹತ್ತು ವರ್ಷಕ್ಕೊಮ್ಮೆ “ಭಕ್ತರ” ದರುಶನಕ್ಕಾಗಿ ತೆರೆದಿಡಲಾಗುತ್ತದೆ. ತಮ್ಮ ಪೂರ್ವಜರನ್ನು ಬರ್ಬರವಾಗಿ ಕೊಂದ ನರಾಧಮನೆನ್ನುವ ಪರಿಜ್ಞಾನವೂ ಇಲ್ಲದೆ ಹಿಂದೂಗಳು ನಾ ಮುಂದು ತಾ ಮುಂದು ಎಂದು ಈ ಕಳೇಬರದ ದರ್ಶನಗೈದು ಪಾವನರಾಗುತ್ತಾರೆ!! ಹಿಂದೂ ನರಹಂತಕನ ಕಳೇಬರದ ಮುಂದೆ ಅಡ್ಡಡ್ಡ ಉದ್ದುದ್ದ ಬೀಳುತ್ತಾರೆ. ಆತ ಗೋವಾದ ಹಿಂದುಗಳಿಗೆ ಕೊಟ್ಟ ನರಕ ಯಾತನಯ ಬಗ್ಗೆ ಕೇಳಿದರೆ ಆತನಿಗೆ ನಮಸ್ಕಾರ ಮಾಡುವುದು ಬಿಡಿ, ನೀವು ವಾಂತಿ ಮಾಡಿಕೊಳ್ಳುತ್ತೀರ ಇದು ಖಂಡಿತ.

ಫ್ರಾನ್ಸಿಸ್ ನನ್ನು ರೋಮ್ ಭಾರತಕ್ಕೆಕಳುಹಿಸಿದ್ದೇ ಮತಾಂತರ ಮಾಡುವುದಕ್ಕಾಗಿ. ಆತ ಗೋವಾಕ್ಕೆ ಬಂದಿಳಿದಾಗ ಕ್ರೈಸ್ತ ಧರ್ಮಕ್ಕೆ ಮತಾಂತರ ಗೊಂಡ ಇಲ್ಲಿಯ ಬ್ರಾಹ್ಮಣ ಪರಿವಾರಗಳು ಕದ್ದು ಮುಚ್ಚಿ ವೇದ-ಮಂತ್ರಗಳ ಪಠಣ ಮಾಡುತ್ತಿದ್ದರು. ತಮ್ಮ ಮಾತೃಧರ್ಮವನ್ನು ಬಿಡಲಾಗದೆ ಸನಾತನ ಧರ್ಮದ ಆಚಾರ ವಿಚಾರಗಳನ್ನು ಪರಿ ಪಾಲಿಸುತ್ತಿದ್ದರು. ಈ ವಿಷಯ ಫ್ರಾನ್ಸಿಸ್ ನ ಕಿವಿಗೆ ಬಿದ್ದದ್ದೇ ತಡ, ಆತ ಕೆಂಡಾಮಂಡಲನಾದ ಮತ್ತು ಬ್ರಾಹ್ಮಣರ ಪಾಲಿಗೆ ಸಾಕ್ಷಾತ್ ರಾಕ್ಷಸನಾಗಿ ಬಿಟ್ಟ. ಆತ ಬ್ರಾಹ್ಮಣರಿಗೆ ಕೊಡುತ್ತಿದ್ದ ಚಿತ್ರ ಹಿಂಸೆ ಹೇಗಿರುತ್ತಿತ್ತು ಗೊತ್ತೇ?

1.ಯಾವ ವ್ಯಕ್ತಿಯು ಮಂತೋಚ್ಚಾರಣೆ ಮಾಡುತ್ತಿದ್ದನೋ ಆತನ ನಾಲಗೆಯನ್ನು ತುಂಡರಿಸಲಾಗುತ್ತಿತ್ತು.

2.ಹಿಂದೂ ದರ್ಮಗ್ರಂಥಗಳನ್ನು ಪೂಜಿಸುವ ಅಥವಾ ಓದುವ ವ್ಯಕ್ತಿಯ ಕಣ್ಣುಗಳಿಗೆ ಕಬ್ಬಿಣದ ಬಿಸಿ ಸಲಾಖೆಗಳಿಂದ ಚುಚ್ಚಿ ಆತನ ಕಣ್ಣುಗಳನ್ನು ಕೀಳಲಾಗುತ್ತಿತ್ತು.

3.ಯಾರು ಹಿಂದೂ ಪೂಜಾ ವಿಧಾನಗಳನ್ನು ಕೈಗೊಳ್ಳುತ್ತಿದ್ದರೋ ಅಂತವರ ಉಗುರುಗಳನ್ನು ಕೀಳಲಾಗುತ್ತಿತ್ತು ಮತ್ತು ಮೆಣಸಿನ ಪುಡಿಯನ್ನು ಉಗುರುಗಳಿಗೆ ಹಚ್ಚಲಾಗುತ್ತಿತ್ತು.

4.ಹಿಂದೂಗಳು ತಮ್ಮ ಮನೆಯ ಮುಂದೆ ತುಳಸಿ ಗಿಡಗಳನ್ನು ನಡೆವಂತಿರಲಿಲ್ಲ. ದೇವರಿಗೆ ದೀಪ-ಧೂಪ ಹಚ್ಚುವಂತಿರಲಿಲ್ಲ.

5.ಬ್ರಾಹ್ಮಣರು ದೇಹದ ಯಾವ ಭಾಗಕ್ಕೆ, ಕುಂಕುಮ, ಗಂಧ, ಲೇಪನಗಳನ್ನು ಹಚ್ಚುತ್ತಿದ್ದರೋ ಆ ಭಾಗದ ಚರ್ಮ ಸುಲಿಯಲಾಗುತ್ತಿತ್ತು.

6.ಯಾವ ಹಿಂದೂ ಪರಿವಾರ ಕ್ರೈಸ್ತ ಮತಕ್ಕೆ ಮತಾಂತರ ಹೊಂದುತ್ತಿರಲಿಲ್ಲವೋ ಅವರ ಮುಂದೆಯೇ ಅವರ ಮಕ್ಕಳ ದೇಹದ ಅಂಗಾಂಗಳನ್ನು ತುಂಡರಿಸಲಾಗುತ್ತಿತ್ತು. ಅವರು ಕ್ರೈಸ್ತ ಮತಕ್ಕೆ ಮತಾಂತರಗೊಳ್ಳುವೆನೆಂದು ಒಪ್ಪುವವರೆಗೂ ಈ ಹಿಂಸೆ ಮುಂದುವರಿಯುತ್ತಿತ್ತು.

7.ಕಬ್ಬಿಣದ ಮೊಳೆ ಅಥವಾ ಚೂಪಾದ ಮೊನಚುಳ್ಳ ಸಲಾಕೆಗಳಿಂದ ಮಹಿಳೆಯರ ಎದೆ ಭಾಗಕ್ಕೆ ಚುಚ್ಚಲಾಗುತ್ತಿತ್ತು. ಕಬ್ಬಿಣದ ಸಲಾಕೆಗಳನ್ನು ಅವರ ಮಲಾಶಯ ಮತ್ತು ಪ್ರಜನಾಂಗ ನಳಿಕೆಯೊಳಗೆ ತೂರಲಾಗುತ್ತಿತ್ತು.

8.ಸ್ವತಃ ಫ್ರಾನ್ಸಿಸ್ ಕ್ಸೇವಿಯರನೇ ಕಬ್ಬಿಣದ ಮೊಳೆ ಹೊಡೆದ ಬೂಟುಗಳನ್ನು ತೊಟ್ಟು ಅಮಾಯಕ ಹಿಂದೂಗಳನ್ನು ಮನಬಂದತೆ ತುಳಿಯುತ್ತಿದ್ದ.

9.ನರಾಧಮ ಫ್ರಾನ್ಸಿಸ್ ಹಿಂದೂಗಳ ಕೇಶಕ್ಕೆ ಮದ್ಯ ಸುರಿದು ಅದಕ್ಕೆ ಬೆಂಕಿ ಇಟ್ಟು, ಕೇಕೆ ಹಾಕಿ ನಗುತ್ತಿದ್ದನೆನ್ನಲಾಗುತ್ತದೆ. ಈ ರೀತಿ ಮಾಡುವುದರಿಂದ ಆತನಿಗೆ ವಿಕೃತ ಆನಂದ ಸಿಗುತ್ತಿತ್ತು.

10.ಸ್ಪೇನ್ ಮತ್ತು ಪೋರ್ಚುಗಲ್ ನಿಂದ ಇನ್ಕ್ವಿಸಿಶನ್ ಎಂಬ ಪ್ರತ್ಯಕ್ಷ ನರಕದಿಂದ ಪಾರಾಗಿ ಬಂದು ಭಾರತದಲ್ಲಿ ಅಡಗಿ ಕುಳಿತಿದ್ದ ಯಹೂದಿಗಳ ಮೇಲೆ ಮತ್ತೊಮ್ಮೆ ಅತ್ಯಾಚಾರ ನಡೆಸಲಾಯಿತು. ಹೋದೆಯಾ ಪಿಶಾಚಿ ಎಂದರೆ ತಿರುಗಿ ಬಂದೆ ಗವಾಕ್ಷೀಲಿ ಎಂಬ ಪರಿಸ್ಥಿತಿ ಯಹೂದಿಯರಿಗಾಯಿತು.

ಇನ್ಕ್ವಿಸಿಶನ್ ನ ಭಯಾನಕತೆಯಿಂದ ತಪ್ಪಿಸಿಕೊಳ್ಳಲು ಗೋವಾ ಬ್ರಾಹ್ಮಣರು ಗೋವಾ ತೊರೆದು ಕೊಂಕಣ ಕರಾವಳಿಯಲ್ಲಿ ನೆಲೆಸಲಾರಂಭಿಸಿದರು. ಬರೋಬ್ಬರಿ 252 ವರ್ಷದ ಪೋರ್ಚುಗೀಸ್ ಆಡಳಿತದಲ್ಲಿ ಹಿಂದೂಗಳು ಅನುಭವಿಸಿದ ಚಿತ್ರಹಿಂಸೆ ಒಂದೆರಡಲ್ಲ. ಯಾವುದೇ ಹೊತ್ತಿಗೂ ಯಾರನ್ನೇ ಆಗಲಿ ಎತ್ತಿಹಾಕಿಕೊಂಡು ಹೋಗಿ ಅವರಿಗೆ ಪರಿ ಪರಿಯಾಗಿ ಚಿತ್ರಹಿಂಸೆ ಕೊಡಲಾಗುತ್ತಿತ್ತು. ಇಂತಹ ಹಿಂದೂ ನರಸಂಹಾರಕ್ಕೆ ಕಾರಣನಾದ ಮತಾಂಧನ ಕಳೇಬರಕ್ಕೆ ಮುತ್ತಿಕ್ಕುತ್ತಾರೆ ನಮ್ಮ ಜನ!

ಫ್ರಾನ್ಸಿಸ್ ನ ಈ ಬರ್ಬರ ಕೃತ್ಯಗಳಲ್ಲಿ ಆತನಿಗೆ ಸಹಾಯ ಮಾಡಿದ್ದು ಯಾರು ಗೊತ್ತೇ? ಬಿಜಾಪುರದ ಆದಿಲ್ ಶಾ ಎಂಬ ಮತ್ತೊಬ್ಬ ನರ ಪಿಶಾಚಿ. ಗೋವಾದಿಂದ ತಪ್ಪಿಸಿಕೊಂಡು ಬಂದು ಆತನಲ್ಲಿ ಆಶ್ರಯ ಪಡೆದ ಹಿಂದೂಗಳಿಗೆ ಅಮಾನವೀಯ ಹಿಂಸೆ ಕೊಡುತ್ತಿದ್ದ. ಈತನ ಮಹಲಿನಲ್ಲಿ ಹಿಂದೂಗಳಿಗೆ ಯಾತನೆ ಕೊಡಲೆಂದೇ “ಯಾತನಾ” ಕೊಠಡಿಗಳನ್ನು ಕಟ್ಟಿದ್ದ. ಇದನ್ನು ‘ದಹಶತ್ ಮಹಲ್’ ಎನ್ನಲಾಗುತ್ತಿತ್ತು. ಇತಿಹಾಸದಲ್ಲಿ ಇಷ್ಟೆಲ್ಲಾ ನಡೆದಿದ್ದರೂ ನಾವು ಮಾತ್ರ ಕೆಪ್ಪ-ಮೂಗರಂತೆ ಕುಳಿತಿದ್ದೇವೆ.

ಇಲ್ಲಿ ಹೇಳಿರುವ ವಿಷಯಗಳು ಕಾಲ್ಪನಿಕ ಕಥೆಯಲ್ಲ. ನಮ್ಮದೇ ಭೂಮಿಯಲ್ಲಿ ನಡೆದಂತ ನೈಜ ಘಟನೆಗಳು. ಲಿಸ್ಬನ್ ನ ಪತ್ರಾಗಾರದಲ್ಲಿರುವ ‘The Agents Of Portugues Diplomacy In India’ ಎಂಬ ಪುಸ್ತಕದಲ್ಲಿ ಈ ಎಲ್ಲಾ ವಿಷಯಗಳನ್ನು ಯಥಾವತ್ ಉಲ್ಲೇಖಿಸಲಾಗಿದೆ. ಡಾ ಫ್ರಾನ್ಸೆಕಾ ಎಂಬ ಇತಿಹಾಸಕಾರರು ಗೋವಾ ಇನ್ಕ್ವಿಸಿಶನ್ ಬಗ್ಗೆ ಅಭಿಲೇಖವನ್ನೂ ಬರೆದಿರುತ್ತಾರೆ. ಸತ್ಯ ಪರಿಶೋಧನೆ ಮಾಡಬೇಕಿಂದಿದ್ದವರು ಈ ದಾಖಲೆಗಳನ್ನು ಓದಬಹುದು, ಇಲ್ಲವೇ ಗೋವಾದಿಂದ ತಪ್ಪಿಸಿಕೊಂಡು ಬಂದ ಬ್ರಾಹ್ಮಣರ ಪರಿವಾರ ಅಥವಾ ಸ್ಪೇನ್ ನಿಂದ ಜೀವ ಉಳಿಸಿಕೊಂಡು ಬಂದ ಯಹೂದಿಗಳನ್ನೊಮ್ಮೆ ಕೇಳಿ ನೋಡಿ. ನಿಮ್ಮ “ಜಾತ್ಯಾತೀತ”ದ ಬುರುಡೆ ಒಡೆಯದ್ದಿದ್ದರೆ ಮತ್ತೆ ಹೇಳಿ.

ನೆನಪಿಡಿ ಈಗಲೂ ಭಾರತದಲ್ಲಿ ಕ್ರೈಸ್ತ ಮಿಶ ‘ನರಿ’ಗಳು “ಜೋಶುವಾ ಪೊಜೆಕ್ಟ್” ಎಂಬ ಮತಾಂತರ ದಂಧೆಯನ್ನು ನಡೆಸಿಕೊಂಡು ಬರುತ್ತಿವೆ. ಸಮಸ್ತ ಭಾರತವನ್ನು ಕ್ರೈಸ್ತ ದೇಶವನ್ನಾಗಿಸುವ ಹುನ್ನಾರವೇ ಜೋಶುವಾ ಪೊಜೆಕ್ಟ್. ಇಸ್ಲಾಂ ನ ಜಿಹಾದ್ ಕಣ್ಣಿಗೆ ಕಾಣುತ್ತದೆ. ಆದರೆ ಕೈಸ್ತ ಮಿಶನರಿಗಳ ಈ ಜಿಹಾದ್ ಕಣ್ಣಿಗೆ ಕಾಣುವುದಿಲ್ಲ. ಅದಕ್ಕೆಂದೇ ಅವರನ್ನು “ನರಿ” ಗಳೆನ್ನುವುದು. ಎರಡೆರಡು ಜಿಹಾದಿನಿಂದ ಇವತ್ತು ಸನಾತನ ಧರ್ಮವನ್ನು ರಕ್ಷಿಸಬೇಕಾಗಿದೆ, ಎಚ್ಚರ ಹಿಂದೂಗಳೇ ಎಚ್ಚರ.

ಶನ್ನು

Tags

Related Articles

Close