ಪ್ರಚಲಿತ

ಬ್ರೇಕಿಂಗ್: ತಮಿಳುನಾಡಿನ ಚಿನ್ನಮ್ಮನಿಗೆ ರಾಜಾತಿಥ್ಯ!! ಬಯಲಾಯ್ತು ಸಿದ್ದರಾಮಯ್ಯ ಸರಕಾರದ ಕರಾಳ ಮುಖ!!

ಅಕ್ರಮ ಆಸ್ತಿಗಳಿಕೆಯ ಮೇರೆಗೆ ಶಶಿಕಲಾ ಅವರು ಕಾರಾಗೃಹದಲ್ಲಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.. ಆದರೆ ಅವರು ಅಲ್ಲಿ ಅನುಭವಿಸುತ್ತಿರುವುದು ಶಿಕ್ಷೆಯೇ ಅಥವಾ ರಾಜಾತಿಥ್ಯವೇ? ಓರ್ವ ರಾಜನಿಗೆ ಕೊಡಬಹುದಾದ ಸತ್ಕಾರವನ್ನು ಶಶಿಕಲಾ ಅವರಿಗೆ ಪರಪ್ಪನ ಅಗ್ರಹಾರದಲ್ಲಿ ನೀಡಲಾಗುತ್ತಿದೆ… ಇದೇ ವಿಚಾರವಾಗಿ ಡಿಐಜಿ ರೂಪ ಅವರು ಅಂತಹ ಸಂಗತಿಗಳನ್ನು ಕೆಲವು ಸಮಯದ ಹಿಂದೆಯೇ ಬಯಲಿಗೆಳೆದಿದ್ದರು… ಅದಕ್ಕೆ ಸಿಕ್ಕಿದ ಪ್ರತಿಫಲ ಮಾತ್ರ ರೂಪ ಅವರನ್ನು ಪರಪ್ಪನ ಅಗ್ರಹಾರದಿಂದ ಗಡಿಪಾರು ಮಾಡಿಸಲಾಯಿತು!! ಆದರೆ ಯಾವತ್ತೂ ಸತ್ಯವನ್ನು ಸುಳ್ಳು ಮಾಡಲು ಸಾಧ್ಯವಿಲ್ಲ!! ಅಂದಿನಿಂದ ಇಂದಿನವರೆಗೂ ಸಿದ್ದರಾಮಯ್ಯ ಸರಕಾರ ಮಾಡಿದ ಒಂದೊಂದೇ ಘನಾಂಧಾರಿ ಕೆಲಸಗಳು ಅನಾವರಣವಾಗುತ್ತಿದ್ದಂತೆ ಮತ್ತೊಂದು ಸಿದ್ದರಾಮಯ್ಯನವರ ಅಸಲೀ ಮುಖ ಬಯಲಾಗಿದೆ!!

ಅಂದು ಶಶಿಕಲಾಗೆ ನೀಡಿದ ರಾಜಾಥಿತ್ಯ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ರೂಪ ಅವರನ್ನು ಬೇರೆ ಕಡೆ ವರ್ಗಾಹಿಸಿದ್ದು ಇದೇ ಸಿದ್ದರಾಮಯ್ಯ ಸರಕಾರ!! ಆದರೆ ಈಗ ಅದಕ್ಕೆ ಪೂರ್ಣವಿರಾಮ ಹಾಕುವ ಸಮಯ ಬಂದೊಂದಗಿದೆ ಅಂತಾನೇ ಹೇಳಬಹುದು.. ತಪ್ಪು ಮಾಡಿದ ಮಹಾನುಭವನಿಂದಲೇ ಸತ್ಯ ಹೊರಬಿದ್ದಿದ್ದು ಎಲ್ಲರನ್ನು ಒಂದು ಬಾರಿ ಆಶ್ಚರ್ಯಚಕಿತರನ್ನಾಗಿಸಿದೆ…

ಅಷ್ಟಕ್ಕೂ ರೂಪ ಅವರು ಹೇಳಿದ ಸಂಗತಿಗಳಾವುದೆಂಬುದು ನಿಮಗೂ ಅರಿವಿರಬಹುದು. ಶಶಿಕಲಾರವರಿಗೆ ಸಾಮಾನ್ಯ ಖೈದಿಗೆ ಕೊಡುತ್ತಿರುವ ಊಟ ಸಾಕಾಗದೇ, ವಿಶೇಷ ಅಡುಗೆಮನೆಯನ್ನು ನಿರ್ಮಿಸಲು ತಯಾರಿಯನ್ನು ನಡೆಸುತ್ತಿದ್ದರು. ಅದಕ್ಕಾಗುವ ಕಾರಾಗೃಹದ ಅಧಿಕಾರಿಗೆ ಬರೋಬ್ಬರಿ 2 ಕೋಟಿಯಷ್ಟು ಲಂಚವನ್ನು ಕೊಡಲಾಗಿದೆ ಎಂಬ ಆರೋಪವನ್ನು ರೂಪ ಅವರು ಮಾಡಿದ್ದರು. ಅದಕ್ಕೆ ಅಗತ್ಯವಾದ ಸಾಕ್ಷಿಗಳನ್ನೂ ಸಹ ಸಂಬಂಧಪಟ್ಟ ಅಧಿಕಾರಿಗಳಿಗೆ ಹಸ್ತಾಂತರಿಸಿದರೂ ಇನ್ನೂ ಕ್ರಮ ಕೈಗೊಳ್ಳದೆ ಬದಲಾಗಿ ರೂಪರವರ ವರ್ಗಾವಣೆ ಮಾಡಿದ್ದರು…

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಸೇರಿರುವ ಶಶಿಕಲಾ ಅವರು ಬುರ್ಖಾ ಧರಿಸಿ ಎಂ.ಜೀ ರಸ್ತೆಯಲ್ಲಿ ಓಡಾಡುತ್ತಿದ್ದರು ಎಂಬ ಮಾಹಿತಿ ಕೂಡಾ ಬಿಡುಗಡೆಯಾಗಿತ್ತು… ಡಿಐಜಿ ರೂಪ ಅವರು ಸಲ್ಲಿಸಿದ ವರಿದಿಯಲ್ಲಿ ಇದನ್ನು ನಮೂದಿಸಿದ್ದಾರೆ ಅಷ್ಟೇ ಅಲ್ಲದೇ ಅದಕ್ಕೆ ಪೂರಕವಾದ ಸಾಕ್ಷಿಗಳನ್ನೂ ಎಸಿಬಿ ಪೆÇೀಲಿಸರಿಗೆ ಯವರಿಗೆ ಹಸ್ತಾಂತರಿಸಿದ್ದರು.. ಆದರೆ ಇದಕ್ಕೆಲ್ಲಾ ಕುಮ್ಮಕ್ಕು ನೀಡಿರುವಂತಹದ್ದು ಮಾತ್ರ ಸಿದ್ದರಾಮಯ್ಯ ಸರಕಾರ ಎಂಬುವುದು ಸ್ಫೋಟಕ ಮಾಹಿತಿ ಎಂಬುವುದು ಈಗ ಹೊರಬಿದ್ದಿದೆ. ಇಷ್ಟಾದರೂ ಇದಕ್ಕೆಲ್ಲಾ ಯಾರು ಸಹಾಯಹಸ್ತ ನೀಡುತ್ತಿದ್ದಾರೆ ಎಂಬುವುದೇ ತಿಳಿದಿರಲಿಲ್ಲ.. ಆದರೆ ಈ ಬಗ್ಗೆ ಈಗ ನಿವೃತ್ತ ಡಿಜಿಪಿ ಸತ್ಯನಾರಾಯಣ್ ರಾವ್ ಅವರಿಂದ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ…

ಸಿ.ಎಂ.ಸಿದ್ದರಾಮಯ್ಯ ಸೂಚನೆಯಂತೆ ಶಶಿಕಲಾಗೆ ರಾಜಾತಿಥ್ಯ. ಕನ

ಸಿ.ಎಂ.ಸಿದ್ದರಾಮಯ್ಯ ಸೂಚನೆಯಂತೆ ಶಶಿಕಲಾಗೆ ರಾಜಾತಿಥ್ಯ. ಕನ್ನಡಿಗರಿಗೆ ದ್ರೋಹ ಬಗೆದ ಸಿ.ಎಂ.ಸಿದ್ದರಾಮಯ್ಯ.!#TEAMBSY

تم النشر بواسطة ‏‎ಬಿಜೆಪಿ ಮ೦ಗಳೂರು‎‏ في 6 مارس، 2018

ಸಿಎಂ ಸೂಚನೆಯಂತೆ ಶಶಿಕಲಾಗೆ ರಾಜಾತಿಥ್ಯ!!

ಅಂದು ಡಿಐಜಿ ರೂಪಾ ಹೇಳಿಯನ್ನು ಗಣನೆಗೆ ತೆಗೆದುಕೊಳ್ಳದೆ ಅವರನ್ನು ಬೇರೆ ಕಡೆ ವರ್ಗಾವಣೆ ಮಾಡಿದ್ದಕ್ಕೆ ಇಂದು ತಕ್ಕ ಪ್ರತಿಫಲ ಸಿಕ್ಕಿದೆ ಅಂತಾನೇ ಹೇಳಬಹುದು… ಯಾಕೆಂದರೆ ವಿನಯ್ ಕುಮಾರ್ ಅವರು ಸಮಿತಿ ಮುಂದೆ ಹೋಗಿ ಸ್ಪಷ್ಟನೆಯನ್ನು ನೀಡಿದ್ದಾರೆ… ನನ್ನ ಪಿಎ ಮೂಲಕ ನನ್ನನ್ನು ಕರೆಸಿಕೊಂಡ ಸಿಎಂ ಸಿದ್ದರಾಮಯ್ಯನವರು ಶಶಿಕಲಾ ಅವರಿಗೆ ಯಾವ ರೀತಿ ಜೈಲಿನಲ್ಲಿ ನೋಡಿಕೊಳ್ಳಲಾಗುತ್ತದೆ ಎಂದು ಕೇಳಿದ್ದು ತದ ನಂತರ ಶಶಿಕಲಾಗೆ ದಿಂಬು, ಬೆಡ್ ನೀಡಿ ಎಂಬ ಸೂಚನೆಯನ್ನು ನೀಡಿದ್ದಾರೆ.. ಸಿ.ಎಂ ಸಿದ್ದರಾಮಯ್ಯನವರ ಸೂಚನೆಯಂತೆ ನಾನು ಆ ರೀತಿ ಆತಿಥ್ಯವನ್ನು ನೀಡಿದ್ದೇನೆ.. ಅದಲ್ಲದೆ ಇದಕ್ಕಾಗಿ ನಾನು ಯಾವುದೇ ಲಂಚವನ್ನು ತೆಗೆದುಕೊಂಡಿಲ್ಲ ಬದಲಾಗಿ ಸಿಎಂ ಸಿದ್ದರಾಮಯ್ಯನವರ ಮಾತನ್ನು ಪಾಲಿಸಿದ್ದೇನೆ ಅಷ್ಟೇ ಎಂಬ ಸ್ಪಷ್ಟ ಮಾಹಿತಿಯನ್ನು ಸಮಿತಿಯಲ್ಲಿ ವಿವರಿಸಿದ್ದಾರೆ ವಿನಯ್ ಕುಮಾರ್!! ಈ ಸ್ಫೋಟಕ ಮಾಹಿತಿಯನ್ನು ಹೊರ ಹಾಕಿದ್ದವರು ನಿವೃತ್ತ ಡಿಜಿಪಿ ಸತ್ಯನಾರಾಯಣ್ ರಾವ್ ಸ್ಪಷ್ಟಪಡಿಸಿದ್ದಾರೆ..

ಸಿದ್ದರಾಮಯ್ಯ ಸರಕಾರದ ಆಡಳಿತದ ಬಗ್ಗೆ ನಿಜವಾಗಿಯೂ ವಿವರಿಸಲೂ ಸಾಧ್ಯವಿಲ್ಲದ ಮಟ್ಟಿಗೆ ಬಂದಿಳಿದಿದೆ… ನಿಮ್ಮಂತಹ ಅಧಿಕಾರವು ಮುಂದುವರಿದಲ್ಲಿ ಇನ್ನು ಎಂತೆಂಥಾ ಅವಸ್ಥೆಗಳನ್ನು ನಾವು ಈ ಕಣ್ಣಲ್ಲಿ ನೊಡಿಕೊಳ್ಳಬೇಕೋ ತಿಳಿಯುತ್ತಿಲ್ಲ…. ಜೈಲಿನಲ್ಲಿದ್ದ ಶಶಿಕಲಾಗೆ ಅಕ್ರಮ ಆಸ್ತಿಗಳಿಕೆಯಲ್ಲಿ ಜೈಲು ಸೇರಿದ ಈಕೆಯನ್ನು ರಾಜಾಥಿತ್ಯ ನೀಡುತ್ತಾರೋ ಇಲ್ಲವೆಂದು ವಿಚಾರಣೆ ನಡೆಸಿ ಅವರಿಗೆ ಬೇಕಾದ ಸವಲತ್ತನ್ನು ನೀಡಿ ಎಂಬ ಸೂಚನೆಯನ್ನು ನೀಡಿರುವ ಸಿದ್ದರಾಮಯ್ಯನವರು ನೀವೂ ಒಬ್ಬ ಮುಖ್ಯಂತ್ರಿಯೇ?! ತಪ್ಪು ಮಾಡಿದವರಿಗೆ ಶಿಕ್ಷೆ ನೀಡುವುದು ಬಿಟ್ಟು ಇಂತಹ ರಾಜಾಥಿಯ್ಯ ನೀಡಲು ಸಹಕರಿಸುತ್ತಿದ್ದೇರಲ್ಲವೇ?

ಪವಿತ್ರ

Tags

Related Articles

Close