ಅಂಕಣಪ್ರಚಲಿತ

ಈಗಲಾದರೂ ಸುಪ್ರೀಮ್ ಕೋರ್ಟ್ ಎಂಬ ಮಹಾ ನ್ಯಾಯಾಲಯವೊಂದು ಎಚ್ಚೆತ್ತು ಸೋನಿಯಾ ಗಾಂಧಿಯನ್ನು ಬಂಧಿಸುವ ಧೈರ್ಯ ತೋರಬೇಕಿದೆ! ಯಾಕೆ ಗೊತ್ತೇನು?⁠⁠⁠⁠

ಈ ಪಕ್ಷವೆಂಬುದು ಹಗರಣಗಳ ಪಿತಾಮಹ!! ಇಷ್ಟು ವರ್ಷ ನಡೆಸಿದ ಯಾವ ಹಗರಣಗಳೂ ಕೂಡ ಈ ಹಗರಣಗಳಿಗೆ ಸಮನಾದುದೇ ಅಲ್ಲ! ಎಪ್ಪತ್ತು ವರ್ಷಗಳಿಂದಲೂ ಹಗರಣಗಳಲ್ಲೇ ಜೀವನ ನಡೆಸಿದ ಕಾಂಗ್ರೆಸ್ ಗೆ ‘ಕೇಸರೀ ಭಯೋತ್ಪಾದನೆ’ ಎಂಬ ಹೊಸ ಆಲೋಚನೆ ಬಂದಿದ್ದೇ ಭಾರತೀಯರನ್ನು ಸಂಪೂರ್ಣವಾಗಿ ಮಾನಸಿಕವಾಗಿ ಕೊಲೆಗೈಯ್ಯಲು!!!

ಸಂಝೋತಾ ಸ್ಫೋಟದ ಪ್ರಕರಣದಲ್ಲಿ ಕಾಂಗ್ರೆಸ್ ಎಂಬ ‘ಅತಿ ಬುದ್ಧಿವಂತರ’ ಪಕ್ಷವೊಂದು ನೇರವಾಗಿ ಭಾಗಿಯಾಗಿದ್ದ ಉಗ್ರರನ್ನು ಕೈ ಬಿಟ್ಟು, ಕ್ಷುಲ್ಲಕ ಕಾರಣಗಳನ್ನು ಕೊಟ್ಟು ಭಾರತೀಯರನ್ನೇ ಗುರಿಯಾಗಿಸಿಕೊಂಡು ಸ್ಫೋಟದ ಹೆಸರಿನಲ್ಲಿ ಜೈಲಿಗಟ್ಟಿತು! ಗುಪ್ತಚರ ಇಲಾಖೆಯವರ ಸಾಕ್ಷ್ಯಾಧಾರಗಳನ್ನೂ ತಿರಸ್ಕರಿಸಿದ ಕಾಂಗ್ರೆಸ್ ‘ಹಿಂದೂ’ ನಾಯಕರನ್ನೇ ಗುರಿಯಾಗಿಸಿತು! ಅಲ್ಲಿಗೆ, ಮತ್ತೊಮ್ಮೆ ಸಾಬೀತಾಗಿತ್ತು! ಕಾಂಗ್ರೆಸ್ ಉಗ್ರರನ್ನು ಭಾರತದಲ್ಲಿ ರಕ್ಷಿಸುವ ಮೂಲಕ ಹೊಸ ಉಗ್ರವಾದಕ್ಕೆ ನಾಂದಿ ಹಾಡಿತ್ತು.

ಸಾಧ್ವಿ ಪ್ರಜ್ಞಾ ಸಿಂಗ್ ಹಾಗೂ ಪುರೋಹಿತ್ ಅವರ ಬದುಕನ್ನ ಮತ್ತೆ ಹಿಂತಿರುಗಿ ಕೊಡುವಷ್ಟು ಶಕ್ತರಿದ್ದಾರೆಯೇ?!

‘ Times Now’ ಬಿಡುಗಡೆಗೊಳಿಸಿದ ನಾರ್ಕೊ ಅನಾಲಿಸಿಸ್ ಸಾಕ್ಷಿಯೊಂದು ಕಾಂಗ್ರೆಸ್ ನನ್ನು ಬೀದಿಗೆ ತಂದು ನಿಲ್ಲಿಸಿತು! ಉಗ್ರತ್ವದ ಹೆಸರಿನಲ್ಲಿ ಹಿಂದೂ ನಾಯಕರನ್ನು ಗುರಿ ಮಾಡಿದ ಅದ್ಭುತ ಚಾಣಾಕ್ಷತನವೊಂದು ಗೊತ್ತಾಗಿ ಹೋಯಿತು. ಮಾಲೇಗಾವ್ ಸ್ಫೋಟದ ಹೆಸರಿನಲ್ಲಿ ಮತ್ತದೇ ಉಗ್ರರನ್ನು ಕೈ ಬಿಟ್ಟು ಸಾಧ್ವಿ ಪ್ರಜ್ಞಾ ಸಿಂಗ್ ನನ್ನು ಒಳಗಟ್ಟಿತು ಕಾಂಗ್ರೆಸ್! ಆಕೆ ಬೆಂಕಿಯ ಚೆಂಡು! ವಿಚಾರಣೆಯ ನೆಪದಲ್ಲಿ ಆಕೆಯನ್ನದೆಷ್ಟು ಹಿಂಸಿಸಿತೆಂದರೆ ಕೊನೆಗೆ ಆಕೆಗೆ ಸ್ವಂತ ಕಾಲಿನ ಮೇಲೂ ನಿಲ್ಲಲಾಗಲಿಲ್ಲ! ಆಕೆಯನ್ನು ಆಹಾರ ನೀರು ಕೊಡದೇ 24 ದಿನ ಕೊಳೆ ಹಾಕಿದ್ದರು! ಚರ್ಮದ ಬೆಲ್ಟಿನಿಂದ ಬಡಿಯಲಾಗಿತ್ತು! ಆಕೆ ಸಾಧ್ವಿ! ಅಶ್ಲೀಲ ಭಾಷೆಗಳಿಂದ ಮಾನಸಿಕವಾಗಿಯೂ ಕುಗ್ಗಿಸಿದರು. ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಆಕೆಗೆ ಸರಿಯಾದ ವೈದ್ಯಕೀಯ ತಪಾಸಣೆಯೂ ಆಗಲಿಲ್ಲ! ಚಾರ್ಜ್ ಶೀಟ್ ಇಲ್ಲದೆಯೇ ಆಕೆಯನ್ನ ಒಂಭತ್ತು ವರ್ಷ ಕೂಡಿ ಹಾಕಿದ ಕಾಂಗ್ರೆಸ್ ಗೆ ‘ಇಶ್ರತ್ ಜಹಾನ್’ ಎಂಬ ಆತ್ಮಾಹುತಿ ಬಾಂಬ್ ರ್ ಳನ್ನು ಮಾತ್ರ ‘ಸಹೋದರಿ’ ಎಂದು ಕರೆದು ಸತ್ಕರಿಸಿತು!!!

ಕಾಲೋನೆಲ್ ಶ್ರೀಕಾಂತ್ ಪುರೋಹಿತ್ ಅಪ್ಪಟ ದೇಶಭಕ್ತ! ಎಲ್ಲಿ ತನ್ನ ಕುತಂತ್ರವೊಂದು ಸಮಾಜಕ್ಕೆ ಗೊತ್ತಾಗುವುದೋ ಎಂಬ ಭಯದಿಂದ ಕಾಂಗ್ರೆಸ್ ಅವರನ್ನೂ ‘ಉಗ್ರ’ನೆಂಬ ಪಟ್ಟಕಟ್ಟಿ ಜೈಲಿಗೆ ಕಳುಹಿಸಿತು. ಬಿಡಿ! ಪಾಕಿಸ್ಥಾನದ ಮಾನ ಮರ್ಯಾದೆಯ ಗುತ್ತಿಗೆಯನ್ನೂ ಕಾಂಗ್ರೆಸ್ ತೆಗೆದುಕೊಂಡಂತೆ ವರ್ತಿಸಿತು.

ತನ್ನದೇ ಸೇನೆಯ ತಂಡದವನೊಬ್ಬ ‘ಉಗ್ರ’ ಎಂಬ ಹಣೆಪಟ್ಟಿ ಹೊತ್ತಾಗ ಉಳಿದ ಸೈನಿಕರ ಮನಃಸ್ಥಿತಿ ಹೇಗಾಗಿರಬೇಡ?! ಪತ್ನಿಯೊಬ್ಬಳು ಸಮಾಜದೆದುರಿಗೆ ಅದೆಷ್ಟು ಬೆಂದಳು ಗೊತ್ತೇನು?! ಕಾಂಗ್ರೆಸ್ ಈ ಎಲ್ಲ ಕಳೆದು ಹೋದ ಮಾನಗಳನ್ನು ಮರ್ಯಾದೆಗಳನ್ನು ತಿರುಗಿ ಕೊಡಲು ಸಾಧ್ಯವಿದೆಯೇ?! ಮಾನಸಿಕವಾಗಿ ಕುಗ್ಗಿಸಿದ ಅವರೆಲ್ಲರ ದಿನಗಳನ್ನೂ ಮರಳಿ ಕೊಡಲು ಸಾಧ್ಯವಾಗದ ಕಾಂಗ್ರೆಸ್ ‘ಪಾಕಿಸ್ಥಾನೀ ಉಗ್ರ’ ರ ಶಿಕ್ಷೆಯನ್ನು ಕಡಿಮೆ ಮಾಡುವಂತೆ ಆಗ್ರಿಹಿಸಿತು!!!

ಕಾಂಗ್ರೆಸ್ ಪಕ್ಷವನ್ನೇ ನಿಷೇಧಿಸಬೇಕಿತ್ತು ಚುನಾವಣೆ ಆಯೋಗ!

ಚುನಾವಣೆ ಆಯೋಗಕ್ಕೆ ಒಂದು ಪಕ್ಷವನ್ನು ನಿಷೇಧಿಸುವ ಹಕ್ಕಿದ್ದರೂ ಏನೂ ಮಾಡಲಾಗದೇ ಕುಳಿತುಕೊಂಡಿತು. ತನ್ನ ಕುತಂತ್ರವನ್ನಡಗಿಸುವ ಸಲುವಾಗ ‘ಇಟಲಿ’ ತಲೆಯೊಂದು ಕೇಸರೀ ಭಯೋತ್ಪಾದನೆಯ ಹೆಸರಿನಲ್ಲಿ ಹಿಂದೂಗಳನ್ನು ಮಾನಸಿಕವಾಗಿ ಕೊಲೆಗೈದ ಪಾಪಕ್ಕೂ ಅದಕ್ಕೆ ಶಿಕ್ಷೆಯಾಗಲೇ ಇಲ್ಲ! ಒಬ್ಬ ಗೌರವಾನ್ವಿತ ಸೇನೆಯ ಅಧಿಕಾರಿಯನ್ನೂ ‘ಉಗ್ರ’ನೆಂದು ಪಟ್ಟ
ಕಟ್ಟಿದ ಕಾಂಗ್ರೆಸ್ ನನ್ನು ಆಯೋಗ ಸುಮ್ಮನೆ ನೋಡುತ್ತಾ ಕುಳಿತಿತೇ ವಿನಃ ನಿಷೇಧಿಸುವ ಧೈರ್ಯವನ್ನೂ ತೋರಲಿಲ್ಲ.

ಅದೂ ಹೋಗಲಿ, ಸುಪ್ರೀಮ್ ಕೋರ್ಟೂ ಕೂಡ ಈ ಕಾಂಗ್ರೆಸ್ ನಾಯಕರನ್ನು ಬಂಧಿಸುವ ಪ್ರಯತ್ನ ಮಾಡಲಿಲ್ಲ. ‘ಯುವ ನಾಯಕ’ ಎಂದು ಬಿಂಬಿಸಿಕೊಂಡವನೂ ಕೂಡ ‘ನಾಯಕ’ನಾಗಿಯೇ ಉಳಿದು ಹೋಗುವ ದುರಂತಕ್ಕೆ ಇನ್ನ್ಯಾವ ಬೇರೆ ಹಾದಿಯಿರಬಹುದು?!

ಸಾಧ್ವಿಯ ತರಹ ಸೋನಿಯಾ ಗಾಂಧಿ ಕಳೆಯಬಹುದೇ ಜೈಲಿನಲ್ಲಿ ತನ್ನ ಬದುಕನ್ನು?!

ಸಾಧ್ಯವೇ ಇಲ್ಲ!!! ತನ್ನದೇ ಮಗಳಾದ ಪ್ರಿಯಾಂಕಾ ಗಾಂಧಿ ಹಾಗೂ ಆಕೆಯ ಪತಿರಾಯನನ್ನೂ ಬಂಧಿಸದೇ ಕೈ ಕಟ್ಟಿ ಕೂತ ನ್ಯಾಯಾಲಯವೊಂದು, ಕೋಟಿ ಗಟ್ಟಲೇ ಹಗರಣಗಳ ಧಣಿಯಾದ ಅವರಿಬ್ಬರನ್ನೂ ‘ತಿರುಗಲಿಕ್ಕೆ’ ಅವಕಾಶ ಮಾಡಿಕೊಟ್ಟಿದೆ! ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತೇವೆಂದ ಕಾಂಗ್ರೆಸ್ ಕುಳಗಳೇ ಭ್ರಷ್ಟರಾಗಿರುವಾಗ ಇನ್ನೆಲ್ಲಿಯ ಅವಕಾಶ?!

ಕಾಂಗ್ರೆಸ್ ನಾಯಕರ ಹೇಳಿಕೆಯನ್ನು ಬೆಂಬಲಿಸಿ ಶಿಕ್ಷೆ ಕೊಟ್ಟಿದ್ದ ಸುಪ್ರೀಮ್ ಕೋರ್ಟೆಂಬ ಮಹಾ ನ್ಯಾಯಾಲಯವೊಂದು ಕಾಂಗ್ರೆಸ್ ನಾಯಕರನ್ನು ಸಾಕ್ಷ್ಯಾಧಾರವಿದ್ದರೂ ಬಂಧಿಸದಿರುವಷ್ಟು ದುರ್ಬಲವಾಯಿತೇ?!

‘ನಾನೊಬ್ಬಳು ಸನ್ಯಾಸಿ! ನನ್ನಲ್ಲಿರುವ ಮಹಾಭಾರತ ರಾಮಾಯಣಗಳ ಗ್ರಂಥಗಳನ್ನು ಬೆಂಕಿಗೆಸೆದರು! ಲೈಂಗಿಕ ಪ್ರಚೋದನೆಗಳುಳ್ಳ ನೀಲಿ ಚಿತ್ರಗಳನ್ನು ನೋಡುವಂತೆ ಒತ್ತಡ ಹೇರಲಾಗಿತ್ತು. ನನ್ನ ತಾಯಿಯನ್ನೂ ನನಗೆ ಭೇಟಿ ಮಾಡಲು ಅವಕಾಶ ನೀಡಿರಲಿಲ್ಲ.! ಸಾಧ್ವಿಯ ಹೇಳಿಕೆಗಳಿವು!

ಸಾಧ್ವಿ ಬಗ್ಗುವ ಹೆಣ್ಣಲ್ಲ!!!!

ಆಕೆಗದೆಷ್ಟೇ ಹಿಂಸೆ ನೀಡಿ ‘ಕೇಸರೀ ಭಯೋತ್ಪಾದನೆ’ ಎಂಬುದನ್ನು ಒಪ್ಪಿಕೋ ಎಂದರೂ ಆಕೆ ಬಗ್ಗಲೇ ಇಲ್ಲ! ಆಕೆ ಪಾರ್ಶ್ವ ಪೀಡಿತವಾದರೂ ಮೊನ್ನೆ ಮೊನ್ನೆಯಷ್ಟೇ ಜಾಮೀನು ದಕ್ಕಿಸಿಕೊಂಡು ಹೊರಬಂದ ಸಾಧ್ವಿ ಹೇಳಿದ್ದೇನು ಗೊತ್ತಿದೆಯೇ?!
‘ಪ್ರತಿಕ್ಷಣದ ನರಕದಲ್ಲಿ ನನಗೆ ಹಿಂದುತ್ವ ವೆಂಬುದು ಜ್ವಾಲೆಯಾಗಿ ಹೊರಹೊಮ್ಮುತ್ತಿತ್ತು! ಬದುಕಿನುದ್ದಕ್ಕೂ ಹಿಂದುತ್ವದ ಪರ ಕಾರ್ಯ ಮಾಡುತ್ತೇನೆ!”

ಕಾಲೊನೆಲ್ ಪುರೋಹಿತ್ ಕೂಡ ತಿರಸ್ಕರಿಸಿಬಿಟ್ಟರು! ಅಕಸ್ಮಾತ್, ಕೇಸರೀ ಭಯೋತ್ಪಾದನೆಯೆಂಬುದು ಒಪ್ಪಿಬಿಟ್ಟಿದ್ದರೆ, ಇವತ್ತು ಪ್ರತಿಯೊಬ್ಬ ಹಿಂದುವನ್ನೂ ಕೂಡ ‘ಭಯೋತ್ಪಾದಕ’ನೆಂದೇ ಬಿಂಬಿಸಲಾಗುತ್ತಿತ್ತು!

“ಮುಂಬೈ ಭಯೋತ್ಪಾದಕ ನಿಗ್ರಹ ದಳ ನನಗೆ ರಾಷ್ಟ್ರೀಯ ಸ್ವಯಂ ಸೇವಕರ ನಾಯಕರ ಹೆಸರನ್ನು ಸುಖಾ ಸುಮ್ಮನೆ ಬಳಸಿ ಹೇಳಿಕೆ ಕೊಡುವಂತೆ ಹಿಂಸಿಸಿತು. ನಾನು 24 ದಿನಗಳ ಕಾಲ ಆಹಾರವಿಲ್ಲದೆಯೇ ಜೀವ ಹಿಡಿದುಕೊಂಡಿರಬೇಕಾಯಿತು.ಪ್ರತಿದಿನದ ಹೊಡೆತದಿಂದ ನನ್ನ ದೇಹ ಜರ್ಝರಿತವಾಗಿ ಬಹಳಷ್ಟು ಭಾಗಗಳಲ್ಲಿ ಊದಿಕೊಂಡಿತು. ಕೈ ಗಂಟುಗಳ ಮೇಲೆ ಬಿದ್ದ ಹೊಡೆತದ ನೋವಿಗೂ ನಾನು ಸುಳ್ಳು ಹೇಳಲು ತಯಾರಿರಲಿಲ್ಲ.”
ದಿಗ್ವಿಜಯ್ ಸಿಂಗ್ ಎಂಬುವವನ ಬೆಂಬಲವೊಂದು ಒಬ್ಬ ಸಾಧ್ವಿಯನ್ನು ಅದೆಷ್ಟು ಮಟ್ಟಿಗೆ ಹಿಂಸಿಸಿತೆಂದರೆ ಭಾರತ ಕೂಡ ಆಕೆ ಜೀವಂತವಾಗಿ ಹೊರಬಹುದೆಂಬ ಆಸೆಯನ್ನೇ ಕೈಬಿಟ್ಟಿತು!

ಈಗ ಹೇಳಿ!

ದಿಗ್ವಿಜಯ್ ಸಿಂಗ್ ಗೆ ಯಾವ ಶಿಕ್ಷೆಯನ್ನು ನೀಡಬಹುದು?!
ಕಾಂಗ್ರೆಸ್ ನಾಯಕರುಗಳೆಲ್ಲ ಶಿಕ್ಷೆಯಿಲ್ಲದೇ ಸ್ವಚ್ಛಂಧವಾಗಿ ತಿರುಗುವಾಗ ಯಾವ ನ್ಯಾಯಾಲಯವೂ ಧೈರ್ಯ ತೋರಲೇ ಇಲ್ಲ!
ಇಷ್ಟು ವರ್ಷಗಳ ಹಗರಣಗಳಿಗೆ ಶಿಕ್ಷೆಯೇ ಇಲ್ಲದಿರುವ ನ್ಯಾಯಾಲಯಗಳ ದುರ್ಬಲತನವೊಂದು ಭಾರತದ ದುರಂತ!

 

https://www.youtube.com/watch?v=X43CZjAKwU0&feature=youtu.be

 

– ಪೃಥು

Tags

Related Articles

Close