ನಿಮಗೆ ನೆನಪಿದೆಯೋ ಇಲ್ಲವೋ… ಒಬ್ಬಳು ಹುಡುಗಿಯನ್ನು ಕೊಂದು ಸೂಟ್ಕೇಸ್ನಲ್ಲಿ ಪ್ಯಾಕ್ ಮಾಡಿ ಕಳಿಸಿದ ಫೋಟೋವೊಂದು ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು.. ಇದ್ಯಾವುದೋ ಕಿಡಿಗೇಡಿಗಳ ಕೆಲಸವಿರಬಹುದೆಂದು ಆ ಚಿತ್ರದ ಗಂಭೀರತೆಯನ್ನರಿಯದೆ ಸುಮ್ಮನಾಗಿದ್ದೆವು.. ಆದರೆ ಈ ಭೀಭತ್ಸ ಚಿತ್ರದ ಬೆನ್ನ ಹಿಂದೆ ಬಿದ್ದಾಗ ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಯನ್ನು ಕೊಂದು ಪ್ಯಾಕ್ ಮಾಡಿ ಕಳಿಸಿದ ಕ್ರೂರ ಕಥೆಯೊಂದು ಬೆಳಕಿಗೆ ಬಂದಿತು…
ಹಿಂದೂ ಹುಡುಗಿ ಇಸ್ಲಾಂ ಒಪ್ಪದ ಕಾರಣಕ್ಕಾಗಿಯೇ ಮುಸ್ಲಿಂ ಯುವಕ ಆಕೆಯನ್ನು ಕೊಂದು ಸೂಟ್ಕೇಸ್ನಲ್ಲಿ ತುಂಬಿಸಿ ಪ್ಯಾಕ್ ಮಾಡಿ ಕಳಿಸಿದ ಎನ್ನುವ ವಿಚಾರವನ್ನು ಯಾವುದೇ ಮಾಧ್ಯಮಗಳು ಪ್ರಚಾರ ಮಾಡದೆ ಕುರುಡಾಗಿ ವರ್ತಿಸಿತು… ಈ ಕಥೆಯನ್ನು ಓದಿದಾಗ ಖಂಡಿತಾ ನಿಮ್ಮ ಕಣ್ಣುಗಳು ಮಂಜಾಗಬಹುದು. ಲವ್ಜಿಹಾದ್ ಎನ್ನುವುದು ಎಷ್ಟೊಂದು ಕ್ರೂರ ಎನ್ನುವುದು ಅರ್ಥ ಮಾಡಿಕೊಳ್ಳಬಹುದು.
ಆಕೆ ಎಷ್ಟೊಂದು ಸುಂದರಿ ಎಂದರೆ ಸಾಕ್ಷಾತ್ ಅಪ್ಸರೆಯಂತಿದ್ದಳು. ನಸುಗೆಂಪು ಬಣ್ಣದ ಮೈ ಬಣ್ಣ ಹೊಂದಿರುವ ಆಕೆಯ ಬಟ್ಟಲು ಗಣ್ಣುಗಳು, ಮಂದಸ್ಮಿತ ನೋಟ
ಯಾರೇ ಆದರೂ ಒಂದು ಕ್ಷಣ ಅವಕ್ಕಾಗಿ ಆಕೆಯನ್ನೇ ಎವೆಯಿಕ್ಕದೆ ನೋಡಬೇಕೆನ್ನುವ ಕುತೂಹಲ ಉಂಟಾಗುತ್ತದೆ.
ಆಕೆಯ ಹೆಸರು ಛಾಯನಿಕಾ ಕುಮಾರಿ!! ಆದರೆ, ಇದೇ ಹುಡುಗಿ ಮುಂದೊಂದು ದಿನ ನೀಲಿ ಬಣ್ಣದ ಸೂಟ್ಕೇಸ್ನಲ್ಲಿ ಹೆಣವಾಗಿ ಪಾರ್ಸೆಲ್ ಆಗಿ ಬೀದಿಹೆಣವಾಗುತ್ತಾಳೆ ಎನ್ನುವುದೇ ವಿಪರ್ಯಾಸ. ಈಕೆಯ ಬೆನ್ನು ಬಿದ್ದು, ತನ್ನನ್ನು ಮದುವೆಯಾಗುವಂತೆ ದುಂಬಾಲು ಬಿದ್ದು, ಇಸ್ಲಾಂಗೆ ಮತಾಂತರ ಹೊಂದುವಂತೆ ಮಾಡಲು ವಿಫಲನಾಗಿ ಕೊನೆಗೆ ಕೊಂದೇ ಹಾಕಿದ್ದು ಮಾತ್ರ ಒಬ್ಬ ಮುಸ್ಲಿಂ ಕಿರಾತಕ.
ಆತನ ಹೆಸರು ಮಿರ್ಝಾ ರಫೀಕುಲ್ ಹಖ್! ಒಂದು ಆಸ್ಪತ್ರೆಯ ಡಾಕ್ಟರ್ ಆಗಿ, ಜೀವವನ್ನು ಬದುಕಿಸಬೇಕಾಗಿದ್ದವ ಮನಸಲ್ಲಿ ಮತಾಂಧತೆಯನ್ನೇ ತುಂಬಿಕೊಂಡು
ತನ್ನ ಧರ್ಮದ ಅಮಲಿನಲ್ಲಿ ಮುಗ್ಧ ಹುಡುಗಿಯ ರಕ್ತವನ್ನು ಹೀರಿಯೇ ಬಿಟ್ಟಿದ್ದ ಹಂತಕ.
ಅದು ನವೆಂಬರ್ ಆರಂಭವಾಗಿದೆಯಷ್ಟೇ.. ಜಾರ್ಖಂಡ್ನ ಜೇಮ್ಶೆಡ್ಪುರ ಎಂಬಲ್ಲಿ ಈ ಘಟನೆ ನಡೆಯಿತು. ಟಾಟಾ ನಗರ ರೈಲ್ವೆ ಸ್ಟೇಷನ್ ಬಲಿ ಒಂದು ನೀಲಿಬಣ್ಣದ ಸೂಟ್ಕೇಸ್ ಪತ್ತೆಯಾಗಿತ್ತು. ಜನರು ಕುತೂಹಲದಿಂದ ತೆರೆದು ನೋಡಿದಾಗ ಬಿಳಿ ಬಣ್ಣದ ಲೆಗಿನ್ಸ್, ನೀಲಿ ಬಣ್ಣದ ಚೂಡಿದಾರ್ ಧರಿಸಿದ್ದ ಹುಡುಗಿಯೊಬ್ಬಳ ಹೆಣವೊಂದು ಸಿಗಡಿಯಂತೆ ಮದುಡಿ ಬಿದ್ದಿತ್ತು. ಈ ದೃಶ್ಯವನ್ನು ಕಂಡು ಇಡೀ ಜೆಮ್ಶೆಡ್ಪುರದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗಿತ್ತು. ಜೆಮ್ಶೆಡ್ಪುರದ ಪೊಲೀಸರಿಗೂ ಕರೆಹೋಯಿತು. ಪೊಲೀಸರು ಆಗಮಿಸಿ ಹುಡುಗಿಯ ಹೆಣವನ್ನು ಪೋಸ್ಟ್ಮಾರ್ಟಮ್ಗೆ ಕಳಿಸಿಬಿಟ್ಟರು.
ಇಷ್ಟೆಲ್ಲಾ ಆದರೂ ಇದು ಯಾರ ಹೆಣ, ಯಾರು ಕೊಂದಿದ್ದಾರೆ ಎಂಬ ವಿಷಯ ನಿಗೂಢವಾಗಿ ಉಳಿದಿತ್ತು. ಈಕೆಯ ಫೋಟೋವನ್ನು ತೆಗೆದು ಕೆಲವರು ವಾಟ್ಸಾಪ್ನಲ್ಲಿ ಕಳುಹಿಸಿಬಿಟ್ಟರು. ಇದು ಭಾರೀ ವೈರಲ್ ಆಯಿತು.
ಕೊನೆಗೆ ತನ್ನ ಮಗಳ ಫೋಟೋವನ್ನು ಕಂಡು ಛಾಯಾನಿಕಾಳ ಪೋಷಕರು ಬಂದು ನೋಡಿ ತನ್ನದೇ ಮಗಳು ಎಂದು ಪತ್ತೆ ಹಚ್ಚಿಬಿಟ್ಟರು… ಈ ಕೊಲೆಯ ಬಗ್ಗೆ
ಪೊಲೀಸರು ನಿಖರ ತನಿಖೆ ನಡೆಸಿದಾಗ ಲವ್ಜಿಹಾದ್ ಪ್ರಕರಣವೊಂದು ಬೆಳಕಿಗೆ ಬಂದಿತು.
ಡಾ. ಮಿರ್ಝಾ ರಫಿಕುಲ್ ಹಖ್ ಕೋಲ್ಕತ್ತಾ ಬಿರ್ಲಾ ಆಸ್ಪತ್ರೆಯ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದ. ಈತ ಛಾಯನಿಕಾಳ ಸೌಂದರ್ಯಕ್ಕೆ ಮಾರುಹೋಗಿ ಕಳೆದ ಮೂರು ವರ್ಷಗಳಿಂದ ಹದ್ದಿನಂತೆ ಹಿಂದೆ ಬಿದ್ದಿದ್ದ. ಅಲ್ಲದೇ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದೇ ಅಲ್ಲದೆ ಇಸ್ಲಾಂಗೆ ಮತಾಂತರ ಆಗುವಂತೆ ಪೀಡಿಸುತ್ತಲೇ ಇದ್ದ. ಆದರೆ ಅದಕ್ಕೆ ಛಾಯನಿಕಾ ಒಪ್ಪಿರಲಿಲ್ಲ. ಯಾಕೆಂದರೆ ಆಕೆ ಬೇರೆ ಒಬ್ಬ ಯುವಕನನ್ನು ಪ್ರೀತಿಸುತ್ತಿದ್ದಳು. ಇದರಿಂದ ಕ್ರುದ್ಧಗೊಂಡ ಖತರ್ನಾಕ್ ಹಖ್ ಒಂದು ಉಪಾಯ ಮಾಡಿದ.
ಜೆಮ್ಶೆಡ್ಪುರದ ಹೋಟೆಲೊಂದರಲ್ಲಿ ರೂಂ ಬುಕಿಂಗ್ ಮಾಡಿ ಛಾಯನಿಕಾಳನ್ನು ಬರುವಂತೆ ಆಹ್ವಾನಿಸಿದ. ಪಾಪಾ ಛಾಯನಿಕಾಳಿಗೆ ಹಖ್ನ ಖತರ್ನಾಕ್ ಬುದ್ಧಿ
ಗೊತ್ತೇ ಇರಲಿಲ್ಲ. ಯಾಕೆಂದರೆ ಈಕೆಯ ಪ್ರೇಮಿ ಕೂಡಾ ಹಖ್ನ ಗೆಳೆಯನಾಗಿದ್ದ. ಇದೇ ನಂಬಿಕೆಯಲ್ಲಿ ಛಾಯನಿಕಾ ಅವನಿದ್ದಲ್ಲಿಗೆ ಹೋಗಿದ್ದಳು.
ಛಾಯನಿಕಾ ಬಂದಂತೆ ಆಕೆಯನ್ನು ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿ ಇಸ್ಲಾಂಗೆ ಮತಾಂತರಗೊಳ್ಳುವಂತೆ ಪೀಡಿಸಿದ. ಆದರೆ ಛಾಯನಿಕಾ ಇದಕ್ಕೆ ಒಪ್ಪಲೇ ಇಲ್ಲ. ಇದರಿಂದ ಕ್ರುದ್ಧನಾದ ಹಖ್ ಛಾಯನಿಕಾಳನ್ನು ಒಂದೇ ಏಟಿಗೆ ಕೊಂದೇ ಬಿಟ್ಟ. ಇಷ್ಟು ಮಾತ್ರವಲ್ಲದೆ ಆಕೆಯ ಮೃತದೇಹವನ್ನು ನೀಲಿ ಬಣ್ಣದ ಸೂಟ್ಕೇಸ್ನಲ್ಲಿ ತುಂಬಿಸಿ ಅದನ್ನು ಟಾಟಾನಗರದ ರೈಲ್ವೆ ಸ್ಟೇಷನ್ ಬಳಿ ಬಿಸಾಡಿ ಹೋಗಿದ್ದ..
ಈ ಸೂಟ್ಕೇಸನ್ನು ಅಲ್ಲಿನವರು ಕುತೂಹಲದಿಂದ ತೆರೆದು ನೋಡಿದಾಗ ಛಾಯನಿಕಾಳ ಹೆಣ ಪತ್ತೆಯಾಯಿತು. ಮೃತದೇಹವನ್ನು ಪೋಷಕರೇ ಪತ್ತೆಹಚ್ಚಿ ಕೊನೆಗೆ
ಪೊಲೀಸರಿಗೆ ದೂರು ನೀಡಿದ್ದಾರೆ. ಹಖ್ ತನ್ನ ಮಗಳನ್ನು ಮದುವೆಯಾಗುವಂತೆ ಒತ್ತಾಯಿಸಿ ವಿಫಲನಾಗಿ ಕೊಂದಿದ್ದಾನೆ. ಇದು ಲವ್ ಜಿಹಾದ್ ಎಂದು
ಆರೋಪಿಸಿದ್ದಾರೆ. ಜೆಮ್ಶೆಡ್ಪುರ ಪೊಲೀಸ್ ಠಾಣ್ ಎಸ್ಎಸ್ಪಿ ಅನೂಪ್ ಟಿ. ಮಾಥ್ಯೂ ಅವರು ಈ ಪ್ರಕರಣದ ತನಿಖೆ ಕೈಗೊಂಡು ಮತಾಂಧ ಹಖ್ನನ್ನು
ಜೈಲಿಗಟ್ಟಿದ್ದಾರೆ.
ಇದು ಇಷ್ಟು ಗಂಭೀರ ಪ್ರಕರಣವಾಗಿದ್ದರೂ ಯಾವುದೇ ಮಾಧ್ಯಮಗಳೂ ಕೂಡಾ ಒಂದು ಲೈನ್ ಸುದ್ದಿ ಕೂಡಾ ಮಾಡದೆ ಎಂದಿನಂತೆ ಜಾಣ ಕುರುಡು ಮೆರೆದವು.
ಮುಸ್ಲಿಮರಿಗೆ ಒಂದು ಸೂಜಿ ಚುಚ್ಚಿ ಗಾಯವಾದರೂ ಒಂದುವಾರಗಳ ಕಾಲ ಎಪಿಸೋಡ್ಗಳ ಎಪಿಸೋಡ್ ಮಾಡಿ ತೋರಿಸುವ ದೃಶ್ಯವಾಹಿನಿಗಳಿಗೆ ಈ ಸುದ್ದಿಯನ್ನು ಮಾಡಲು ಪುರ್ಸೊತ್ತೇ ಸಿಗಲಿಲ್ಲ.
ಚೇಕಿತಾನ